ಪ್ರಚಲಿತ

ಪ್ರಧಾನಿ ಮೋದಿಯನ್ನು ಮುಗಿಸಲು ಐಎಸ್ಐ ಹುನ್ನಾರ?! ಕೈ ಜೋಡಿಸಿತಾ ಯುಕೆ ಮತ್ತು ನೆದರ್ ಲ್ಯಾಂಡಿನ ಎನ್ ಜಿ ಓ ಗಳು?!

ಅಕಸ್ಮಾತ್, ನೀವೇನಾದರೂ ಒಳ್ಳೆಯದನ್ನು ಮಾಡ ಹೊರಟರೆ, ಅದಕ್ಕೆ ತಕ್ಕನಾಗಿ ಕೆಟ್ಟ ಶಕ್ತಿಗಳೂ ಸಹ ನಿಮ್ಮ ಹತ್ತಿರ ಬರುತ್ತ ಹೋಗುತ್ತವೆ!! ಅದಕ್ಕೆ, ಜ್ವಲಂತ ಉದಾಹರಣೆ ಎಂದರೆ ಬಹುಷಃ ಪ್ರಧಾನಿ ನರೇಂದ್ರ ಮೋದಿ!! ಇದು ಅತಿಶಯೋಕ್ತಿಯಲ್ಲ! ಬದಲಾಗಿ, ವಾಸ್ತವ!! ಯಾಕೆ ಗೊತ್ತಾ?! ಜಗತ್ತೇ ಮೋದಿಯನ್ನು ಹೊಗಳುತ್ತಿದೆ! ಮೋದಿಯ ನಾಯಕತ್ವದ ಬಗ್ಗೆ, ಮೋದಿಯ ಆಡಳಿತದ ಬಗ್ಗೆ , ಮೋದಿಯ ರಾಜಕೀಯ ಸ್ನೇಹ ವಲಯದ ಬಗ್ಗೆ ದಿನೇ ದಿನೇ ಚರ್ಚೆಯಾಗುವಾಗ, ಪಾಕಿಸ್ಥಾನದಲ್ಲಿ ನೆಲೆ ನಿಂತಿರುವ ಭಯೋತ್ಪಾದಕರ ತರಬೇತಿ ಶಿಬಿರವಾದ ಐಎಸ್ಐ ನಿಶ್ಯಬ್ದವಾಗಿಯೇ, ಮೋದಿ ಸರಕಾರದ ಬಗ್ಗೆ ಅಪಪ್ರಾಚಾರ ಮಾಡ ಹೊರಟಿದೆ! ಕೇವಲ ಅಪಪ್ರಚಾರ ಮಾತ್ರವಲ್ಲ, ಭಾರತದ ಭದ್ರತಾ ವ್ಯವಸ್ಥೆಗೆ ಪದೇ ಪದೇ ತೊಂದರೆ ಮಾಡಿ ತನ್ಮೂಲಕ ಭಾರತದ ಭದ್ರತಾ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿ, ನೇರವಾಗಿ ಮೋದಿ ಸರಕಾರವನ್ನು ಕೆಳಗಿಳಿಸುವ ಹುನ್ನಾರ ಹೂಡಿರುವ ಐಎಸ್ ಐ ಈಗಾಗಲೇ ಸಂಬಂಧಪಟ್ಟಂತೆ ಶಿಬಿರದಲ್ಲಿ ತರಬೇತಿ ಪ್ರಾರಂಭಿಸಿದೆ!! ಹಾ! ಇದು ಸಹಜವೇ ಅಲ್ಲವೇ?! ಯಾವಾಗ ಮೋದಿ ಮತ್ತು ಭಾರತವನ್ನು ಜಗತ್ತು ಹೊಗಳಲು ಪ್ರಾರಂಭಿಸಿತೋ, ಅದಕ್ಕೆ ತಕ್ಕನಾಗಿಯೇ ಪಾಕಿಸ್ಥಾನದ ಪ್ರತೀ ಕುತಂತ್ರಗಳೂ ಬಯಲಾಗುತ್ತ ಹೋಯಿತಲ್ಲದೇ “ಭಯೋತ್ಪಾದಕರ ಸ್ಬರ್ಗ” ಎಂದೇ ಉಪನಾಮ ಹೊತ್ತು ನಿಂತ ಪಾಕಿಸ್ಥಾನವೊಂದು ಅತ್ಯಂತ ಹೀನಾಯ ಸ್ಥಿತಿಗಿಳಿದು ಬಿಟ್ಟಿತು!!

ತನ್ನ ದೇಶ ಅಭಿವೃದ್ಧಿಯಾಗದಿದ್ದರೂ ಸರಿಯೇ!! ಆದರೆ, ಮೋದಿಯ ಭಾರತವನ್ನು ನಾಶಗೊಳಿಸಲೇಬೇಕೆಂದು ಹಠ ತೊಟ್ಟು ನಿಂತಿರುವ ಪಾಕಿಸ್ಥಾನ ಅನುಸರಿಸುತ್ತಿರುವುದು ಬಿಲ್ ಕ್ಲಿಂಟನ್ ಅನ್ನು!! ಭಾರತದ ಹೆಮ್ಮೆಯ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದ ಮುತ್ಸದ್ದಿ ಪಿ ವಿ ನರಸಿಂಹ ರಾವ್ ರ ಹತ್ತಿರ ಕ್ಲಿಂಟನ್ ನಡೆದಕೊಂಡಿದ್ದನ್ನೇ ಯಥಾವತ್ತು ನಕಲು ಮಾಡುತ್ತಿರುವ ಮತ್ತಿದೇ ಪಾಕಿಸ್ಥಾನಕ್ಕೆ ತಕ್ಕನಾಗಿ, ಕಾಂಗ್ರೆಸ್ ನ ಕೆಲವು ಕಮಂಗಿಗಳು ಮೋದಿಯನ್ನು ಸೋಲಿಸಲು ಅವಕಾಶ ಮಾಡಿಕೊಡಿ ಎಂದು ಪಾಕಿಸ್ಥಾನದ ಕಾಲಿಗೆ ಅಡ್ಡ ಬಿದ್ದಿದ್ದರು ಬೇರೆ!!

ಅಷ್ಟಕ್ಕೂ, ಮೋದಿಯ ಭಾರತವನ್ನು ನಾಶಗೊಳಿಸುವ ಕಾರ್ಯಾಚರಣೆ ಎಂಬ ಹೊಸ ಸೃಷ್ಟಿಯ ಬಗ್ಗೆ ಗೊತ್ತೇ?!

ಮೋದಿಯನ್ನು ಒಬ್ಬ ರಾಜಕಾರಣಿ ಎಂಬಷ್ಟಕ್ಕೆ ಕೆಲವರು ವಿರೋಧಿಸುತ್ತಾರೋ, ಅಥವಾ ದೇಶಭಕ್ತ ಎಂಬ ಕಾರಣಕ್ಕೆ ವಿರೋಧಿಸುತ್ತಾರೋ ಗೊತ್ತಿಲ್ಲ! ಒಟ್ಟಿನಲ್ಲಿ ಪಾಕಿಸ್ಥಾನದ “Operation Smear Modi’s India” ಎಂಬ ಕಾರ್ಯಾಚರಣೆಯೊಂದಿದೆಯಲ್ಲವಾ?! ಅದು ಕೇವಲ, ಪಾಕಿಸ್ಥಾನದ ಉಗ್ರರಿಗೆ ಮಾತ್ರ ಸಂಬಂಧಪಟ್ಟ ವಿಚಾರವಲ್ಲ! ಬದಲಿಗೆ, ಭಾರತದಲ್ಲಿರುವ ಕೆಲ ಪಾಕಿಸ್ಥಾನಿ ಹಿತೈಷಿಗಳೆನ್ನಿಸಿಕೊಂಡವರು, ಟೆರರಿಸ್ಟ್ ಸಿಂಪಥೈಸರ್ಸ್ ಎನ್ನಿಸಿಕೊಂಡವರು ಅಪರೋಕ್ಷವಾಗಿ ಪಾಕಿಸ್ಥಾನದ ಈ ಘನ ಕಾರ್ಯಕ್ಕೆ ಸಹಕರಿಸುತ್ತಿದ್ದಾರೆ!!

ಅಂದ ಹಾಗೆ, ಈ ಕಾರ್ಯಾಚರಣೆಯಿದೆಯೊಂದು ಪ್ರಾರಂಭವಾಗಿದ್ದು ನವೆಂಬರ್ ೨೦೧೪ ರಂದು ಪ್ರಾರಂಭವಾದ ಈ ಕಾರ್ಯಾಚರಣೆ ಯ ಮೂಲ ಉದ್ದೇಶವೇ ಮೋದಿಯ ಭಾರತದ ಕಲ್ಪನೆಯ ಬಗ್ಗೆ ಅಪಪ್ರಚಾರ ಮಾಡುವ ಮೂಲಕ, ಮೋದಿಯ ಆಡಳಿತದಲ್ಲಿ ಭಾರತ ಅಭಿವೃದ್ಧಿಯಾಗುತ್ತಿಲ್ಲ ಎಂಬ ತಪ್ಪು ಸಂದೇಶವನ್ನು ಸಮಾಜಕ್ಕೆ ಹರಿಬಿಡುವುದಷ್ಟೇ!! ಆದರೆ, ಈ ಕಾರ್ಯಾಚರಣೆಗೆ ಪಾಕಿಸ್ಥಾನ ಅದ್ಯಾವುದೋ ಮೂಲೆ ಮೂಲೆಗಳಿಂದ ೨೧೮ ಮಿಲಿಯನ್ ಡಾಲರ್ ಗಳಷ್ಟು ಹಣವನ್ನು ಒಟ್ಟು ಮಾಡಿತು!! ಇದಷ್ಟೂ, ಸಹ ಪಾಕಿಸ್ಥಾನದಲ್ಲಿರುವ ಪ್ರಜೆಗಳು ನೀಡಿದ್ದಲ್ಲ, ಬದಲಾಗಿ ಹೊರ ದೇಶಗಳಲ್ಲಿರುವ ಪಾಕಿಸ್ಥಾನಿಗಳಿಂದ ಬಂದ ಅನುದಾನವಷ್ಟೇ!!

ಈ ಕಾರ್ಯಾಚರಣೆ ಯಶಸ್ವಿಯಾಗುವುದು ಯಾವಾಗ ಗೊತ್ತಾ?! ಯಾವಾಗ, ಇಡೀ ಜಗತ್ತಿನ ಮಾಧ್ಯಮಗಳೆಲ್ಲ ಭಾರತವನ್ನು ಜರಿಯುತ್ತವೋ, ಯಾವಾಗ, ಜಗತ್ತಿನ ಕಣ್ಣಿಗೆ ಮೋದಿ ಮತ್ತು ಮೋದಿಯ ಭಾರತವೆಂಬುದು ತೀರಾ ಹೀನಾಯವಾಗಿ ಜರಿತಕ್ಕೊಳಲ್ಪಡುತ್ತದೆಯೋ, ಅವತ್ತು ಈ ಕಾರ್ಯಾಚರಣೆಯೊಂದು ಯಶಸ್ವಿಯಾಯಿತೆಂದರ್ಥ!! ಹೇಳಬೇಕೆಂದರೆ, ಈಗಾಗಲೇ ಪಾಕಿಸ್ಥಾನದ ಈ ಕಾರ್ಯಾಚರಣೆ ಯಶಸ್ವಿಯಾಗಿದೆಯೆಂದೇ ಹೇಳಬಹುದು!! ಯಾಕೆಂದರೆ, ಮೋದಿ ಅಧಿಕಾರ ಸ್ವೀಕರಿಸಿದಾಗಿನಿಂದ ನೀವು ಗಮನಿಸಿರಬಹುದು!! ವಾಷಿಂಗ್ ಟನ್ ಪೋಸ್ಟ್, ನ್ಯೂ ಯಾರ್ಕ್ ಟೈಮ್ಸ್, ಗಾರ್ಡಿಯನ್ , ದ ಎಕನಾಮಿಸ್ಟ್ ಮತ್ತು ಇತರೆ ಜರ್ಮನಿ ಅಥವಾ ಅರೇಬಿಕ್ ಮಾಧ್ಯಮಗಳಲ್ಲಿ ಮೋದಿಯನ್ನು ತೀರಾ ಎನ್ನುವಷ್ಟು ವಿರೋಧಿಸಿ ಬರೆಯಲಾಯಿತು!! ಇವೆಲ್ಲ ಬೇರೆ ಯಾವುದೂ ಅಲ್ಲ! ಬದಲಿಗೆ, ಪಾಕಿಸ್ಥಾನದ ಐಎಸ್ಐ ಕಾರ್ಯಾಚರಣೆಯ ಪ್ರಭಾವಗಳು!

ಅಚ್ಚರಿಯೆಂದರೆ, ಇವತ್ತು ಭಾರತದ ಸ್ಥಿತಿ ಹೇಗಿದೆಯೆಂದರೆ ಭಾರತದಲ್ಲಿ ಏನೇ ಆಗಲಿ !! ವೈಯುಕ್ತಿಕ ದ್ವೇಷದಿಂದ ಒಬ್ಬ ಕೊಲ್ಲಲ್ಪಡಲಿ!! ಅದಕ್ಕೂ ಮೋದಿಯನ್ನು ಎಳೆದು ತರಲಾಗುತ್ತದೆ!! ಅದರಲ್ಲೂ, ಆತ ದಲಿತ ಅಥವಾ ಅಲ್ಪಸಂಖ್ಯಾತನಾದರೆ ಕಥೆ ಗೋವಿಂದ!! ಮೋದಿಯೇ ಸುಪಾರಿ ಕೊ್ಟು ಕೊಲೆ ಮಾಡಿಸಿದ್ದಾರೆ ಎನ್ನುವಷ್ಟರ ಮಟ್ಟಿಗೆ ಅಲ್ಲೋಲ ಕಲ್ಲೋಲ ಸೃಷ್ಟಿಸಲಾಗುತ್ತದೆ! ಅದೇ, ಒಬ್ಬ ಹಿಂದೂ ಜಿಹಾದಿಗಳ ಕ್ರೌರ್ಯಕ್ಕೆ ಬಲಿಯಾದರೆ ಆತನ
ಬಗ್ಗ್ಎ ಉಸಿರೆತ್ತುವವರು ಯಾರೂ ಇರುವುದೇ ಇಲ್ಲ ಎನ್ನುವಂತಹ ಸ್ಥಿತಿ ಇವತ್ತು ಭಾರತದಲ್ಲಿದೆ! ಯಾವ ದೊಡ್ಡ ದೊಡ್ಡ ರಾಷ್ಟ್ರೀಯ ಮಾಧ್ಯಮಗಳೂ ಸಹ ಉಹು! ಉಸಿರಿಲ್ಲದಂತೆ ಬಿದ್ದಿರುತ್ತವಷ್ಟೇ!

ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಭಾರತ ಅಭಿವೃದ್ಧಿಯಾಗುತ್ತಿದೆ ಎನ್ನುವುದನ್ನು ಸ್ವತಃ ಅಂತರಾಷ್ಟ್ರೀಯ ಸಮೀಕ್ಷೆಗಳೇ ಎತ್ತಿ ತೋರಿಸುತ್ತಿದ್ದರೂ ಸಹ, ಒಂದಷ್ಟು ಭಾರತೀಯ ಮಾಧ್ಯಮಗಳು ಅವೆಲ್ಲವನ್ನೂ ಬಿಟ್ಟು ಕೇವಲ ತೋರಿಸುತ್ತಿರುವುದು ಮಹಿಳೆ ಮೇಲಿನ ದೌರ್ಜನ್ಯ, ಮಕ್ಕಳ ಮೇಲಿನ ದೌರ್ಜನ್ಯ, ದಲಿತರ ಮೇಲಿನ ದೌರ್ಜ್ಯನ್ಯ ಎಂಬುವುದನ್ನೇ ಗುರಿಯಾಗಿಸಿ ಬಿತ್ತರಿಸುವ ಮೂಲಕ , ಭಾರತದಲ್ಲಿ ಹೆಣ್ಣು ಮಕ್ಕಳು ಸುರಕ್ಷಚಿತವಲ್ಲ ಎಂಬಲ್ಲಿವರೆಗೆ, ಅಲ್ಪಸಂಖ್ಯಾತರು ಸುರಕ್ಷಿತವಲ್ಲ ಎಂಬುವಷ್ಟರ ಮಟ್ಟಿಗೆ ಸುಳ್ಳು ಸಂದೇಶವನ್ನು ಬಿತ್ತರಿಸಿರುವ ಇವಿಷ್ಟೂ ಮಾಧ್ಯಮಗಳು ಪರೋಕ್ಷವಾಗಿ ಭಯೋತ್ಪಾದನೆಗೆ ಪರೋಕ್ಷವಾಗಿ ಬೆಂಬಲಿಸಿದವುಗಳೇ!! ಅದಲ್ಲದೇ, ಪ್ರಸ್ತುತ ಸನ್ನಿವೇಶದಲ್ಲೊ ಸಮಾಜ ಹೆಚ್ಚು ಆಸಕ್ತಿ ತೋರುವುದು ವಿವಾದಾತ್ಮಕ ವಿಷಯಗಳ ಬಗ್ಗೆ ಎಂಬುದನ್ನು ಬಹಳಷ್ಟು ಚೆನ್ನಾಗಿಯೇ ಅರ್ಥ ಮಾಡಿಕೊಂಡಿರುವ ಮಾಧ್ಯಮಗಳೂ ಸಹ ಅಂತಹ ವಿಷಯಗಳನ್ನೇ ಹೆಚ್ಚೆಚ್ಚು ಬಿತ್ತರಿಸುತ್ತ ಕಾರ್ಯಾಚರಣೆಗೆ ಅದೆಷ್ಟೋ ರೀತಿಯಲ್ಲಿ ಸಹಾಯ ಮಾಡುತ್ತಿವೆಯಷ್ಟೇ!

ಅದರಲ್ಲಿಯೂ ಸಹ, ಬೇಕೆಂದೇ ಗೋ ಹತ್ಯೆ ಮಾಡಿ, ತದನಂತರ ಅದನ್ನು ಚಿತ್ರೀಕರಿಸುವ ಭಯೋತ್ಪಾದಕ ಹಿತೈಷಿಗಳು ಇದನ್ನಷ್ಟೂ ಮಾಡುವುದು ಯಾಕಾಗೊ ಗೊತ್ತಾ?! ಹಿಂದೂಗಳನ್ನು ಕೆರಳಿಸಲು! ಅದಕ್ಕೆ ತಕ್ಕನಾಗಿ, ಹಿಂದೂಗಳು ತಿರುಗಿ ಬಡಿದಾಗ ಅದು ಭಯೋತ್ಪಾದನೆಯಾಗಿ ಹೋಗುತ್ತದೆ!
ಬೇಕೆಂದೇ, ಗಲಭೆ ಎಬ್ಬಿಸಿ ಆತ್ಮರಕ್ಷಣೆಗೆ ಮುಂದಾದ ಹಿಂದೂಗಳನ್ನು ಮತ್ತೆ ಚಿತ್ರೀಕರಿಸಿ, ಅದಕ್ಕೊಂದು ಸುಂದರ ಕಥೆ ಕಟ್ಟಿ, ಹಿಂದೂ ಭಯೋತ್ಪಾದನೆಯಿದೆ ಎಂಬುದನ್ನು ತೋರಿಸುವ ಈ ಮಾಧ್ಯಮಗಳು ಕೊನೆಗೆ ಎಳೆದು ತರುವುದು ಮೋದಿಯನ್ನೇ!

ಅದರಲ್ಲೂ, ಗೋಧ್ರಾ ಗಲಭೆ ಎಲ್ಲರಿಗೂ ಗೊತ್ತೇ ಇರುವಂತಹದ್ದು!! ಅದರಲ್ಲೂ, ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ ಕರಸೇವಕರನ್ನು ಸಜೀವವಾಗಿ ಮುಸಲ್ಮಾನರು ಸುಟ್ಟಿದ್ದರು!! ತದನಂತರ, ಮೋದಿ ಅಧಿಕಾರಕ್ಕೆ ಬಂದ ನಂತರ, ಕಾಕತಾಳೀಯವೋ ಎಂಬಂತೆ ಹಿಂದೂಗಳು ಮುಸಲ್ಮಾನರ ವಿರುದ್ಧ ಹರಿಹಾಯ್ದು ಸೇಡು ತೀರಿಸಿಕೊಂಡಿದ್ದರಷ್ಟೇ!! ಅಷ್ಟೇ! ಇದೇ ಮಾಧ್ಯಮಗಳು ಜೀವಂತ ದಹನವಾದ ಕರಸೇವಕರ ಬಗ್ಗೆ ತೋರಿಸಲೇ ಇಲ್ಲ! ಬದಲಾಗಿ, ಮೋದಿ ಅಧಿಕಾರಕ್ಕೆ ಬಂದ ನಂತರ, ಮುಸಲ್ಮಾನರು ಸುರಕ್ಷಿತವಲ್ಲ ಎಂಬಂತಹ ಮನಃಸ್ಥಿತಿಯನ್ನು ಹುಟ್ಟು ಹಾಕಿದ್ದು ಇದೇ ಮಾಧ್ಯಮಗಳು! ಜೊತೆಗೆ, ಹಿಂದೂಗಳು ಭಯೋತ್ಪಾದಕರು ಎಂಬಂತಹ ಮನಃಸ್ಥಿತಿಯನ್ನೂ ಸೃಷ್ಟಿ ಮಾಡಿದ್ದರ ಫಲವಾಗಿ, ಇವತ್ತು ಸ್ವತಃ ಹಿಂದೂಗಳೇ ಹಿಂದೂ ಧರ್ಮಕ್ಕೆ ಮಾರಕವಾಗುತ್ತಿದ್ದಾರೆಂದರೆ ಅತಿಶಯೋಕ್ತಿಯಲ್ಲವೇ?!

ಯುನೈಟೆಡ್ ಕಿಂಗ್ ಡಮ್ಸ್ ಮತ್ತು ನೆದರ್ ಲ್ಯಾಂಡ್ಸಿನ ಎನ್ ಜಿ ಓ ಗಳು ಕೈ ಜೋಡಿಸಿದವಾ?!

ಅದೇನೋ ನೋಡಿ! ಕೆಲವರಿಗೆ, ಭಾರತೀಯರನ್ನು ನೋಡಿದರೆ ಮೈ ಉರಿಯುತ್ತದೆ! ಇನ್ನು ಕೆಲವರಿಗೆ ಹಿಂದೂ ಕಾರ್ಯಕರ್ತನೆಂದರೆ ಮೈ ಉರಿಯುತ್ತದೆ! ಇನ್ನೂ ಕೆಲವರಿಗೆ, ಕೇವಲ ಮೋದಿ ಎಂದು ಬಿಟ್ಟರೆ ಸಾಕು!! ಮೈ ಯೊಳಗೆ ಬೆಂಕಿ ಏಳುತ್ತದೆ! ಅದೇ ರೀತಿ, ಇಂತಹ ಕೆಲ ಎನ್ ಜಿ ಓ ಗಳು ಕೂಡ ಅದನ್ನೇ ಮಾಡುತ್ತಿವೆ!! ಭಾರತದಲ್ಲಿನ ಕ್ಷಣ ಕ್ಷಣ ದ ವಿದ್ಯಮಾನದ ಬಗ್ಗೆ ಗಮನಿಸುತ್ತಲೇ ಇರುವ ಒಂದಷ್ಟು ಎನ್ ಜಿ ಓ ಗಳು, ಅಕಸ್ಮಾತ್ ಭಾರತದಲ್ಲಿ ಒಬ್ಬ ಅಲ್ಪಸಂಖ್ಯಾತನ ಮೇಲೆ ಹಲ್ಲೆಯಾಯಿತೆಂದರೆ ಸಾಕು, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರ್ಯಾರೂ ಸಹ ಸುರಕ್ಷಿತವಲ್ಲ ಎಂದು ಭಾಷಣ ಕುಟ್ಟುವುದಲ್ಲದೇ, ಸಮಾಜದ ಮನವೊಲಿಸಿ ಬಿಡುತ್ತದೆ! ಮತ್ತದೇ ಆಟ ಪ್ರಾರಂಭವಾಗುತ್ತಿದ್ದ ಹಾಗೆ, ಸಮಾಜವೂ ಭಾರತದ ಬಗ್ಗೆ, ಮೋದಿಯ ಸರಕಾರದ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಹೊಂದುತ್ತ ಹೋಗುತ್ತದೆಯಾದರೆ ಅದಕ್ಕಿಂತ ಇನ್ಯತಾವ ಸಾಧನೆ ಇರಬಹುದು ಹೇಳಿ?!

ದುರಂತವೆಂದರೆ, ಇಂತಹ ಎನ್ ಜಿ ಓಗಳ ಅಧ್ಯಕ್ಷತೆ ವಹಿಸಿರುವುದು ನೆದರಲ್ಯಾಂಡಿನ ಕೆಲ ಪ್ರತಿಷ್ಟಿತ ಎನ್ ಜಿ ಓಗಳು! ಅದರಲ್ಲೂ, ಕೆಲವು ಎನ್ ಜಿ ಓಗಳು ಭಾರತದಲ್ಲಿವೆ! ಕೆಲವು ರಾಜಕೀಯ ಪಕ್ಷಕ್ಕೆ ನೇರವಾಗಿ ಸಂಪರ್ಕದಲ್ಲಿರುವ ಈ ಎನ್ ಜಿ ಓ ಗಳು ರೋಮನ್ನಿನ ಪೂರ್ತಿ ಆವರಿಸಿದೆಯಾದರೂ ಸಹ, ವ್ಯಾಟಿಕನ್ನಿನಿಂದ ಬರುವ ಆಜ್ಞೆಗಳನ್ನು ಶಿರಸಾ ವಹಿಸಿ ಪಾಲಿಸುವ ಇವುಗಳು ಐಎಸ್ಐಗಳಂತಹ ಉಗ್ರ ಸಂಘಟನೆಯ ಜೊತೆಯಲ್ಲಿಯೂ ನೇರ ಸಂಪರ್ಕದಲ್ಲಿದೆ!

ಭಾರತದಲ್ಲಿನ, ಕೆಲವು ಸೂಕ್ಷ್ಮ ವಿಚಾರಗಳಾದ ವೇಶ್ಯಾವಾಟಿಕೆ, ಜೀತದಾಳು, ಬಾಲ ಕಾರ್ಮಿಕತ್ವದ ಬಗ್ಗೆ ಗಮನ ಹರಿಸುವ ಈ ಎನ್ ಜಿ ಓಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಹರಾಜು ಹಾಕಿದ್ದಲ್ಲದೆ, ಭಾರತದಲ್ಲಿರುವಂತಹ ಸ್ತ್ರೀ ಸಮಾಜವನ್ನು ಸಂಪೂರ್ಣವಾಗಿ ಬೆತ್ತಲಾಗಿಸುವ ಕಾರ್ಯಕ್ಕಿಳಿದಿದೆಯಷ್ಟೇ! ಅದೂ ಸಹ, ತನ್ನ ನವನವೀನ ಕ್ಯಾಂಪೇನುಗಳ ಮೂಲಕ!!

ಹಿಂದುತ್ವದ ನಾಶವೇ ಪ್ರಮುಖ ಗುರಿಯೇ?!

ಆಶ್ಚರ್ಯವೇನು ಗೊತ್ತಾ?! ಇದೇ ಎನ್ ಜಿ ಓ ಗಳು ಯಹೂದಿಗಳ ಮಾರಣಹೋಮ ನಡೆದಾಗ, ಶಿಯಾಗಳನ್ನು ಕತ್ತರಿಸಿದಾಗ, ಸಿರಿಯಾ ಮತ್ತು ಇರಾಕಿನಲ್ಲಿ ಅದೆಷ್ಟೋ ಮಂದಿಗಳನ್ನು ಐಎಸ್ಐ ಮಾನಹರಣ ಮಾಡಿ, ಸೂತಕದ ಛಾಯೆ ಮೊಳಗಿಸಿದಾಗ, ಉಹೂಂ! ಮಾತನ್ನೇ ಆಡಲಿಲ್ಲ! ವಿರೋಧಿಸುವುದು ಸಾಯಲಿ, ಇರಾಕ್ ಮತ್ತು ಸಿರಿಯಾಗಳಲ್ಲಿನ ವಹಾಬಿ ಸಂಘಟನೆಯ ಜೊತೆ ಮೈತ್ರಿ ಮಾಡಿಕೊಂಡು ಭಾರತದೆಡೆ ಕೆಕ್ಕರಿಸಿ ನೋಡಿದವು!! ಅಲ್ಲಿಗೆ, ಹಿಂದುತ್ಬಕ್ಕೊಂದು ಅಪಾಯ ಬಂದೆರಗಿತ್ತು!!

ಅದರಲ್ಲೂ, ಸಹ ಕಾಶ್ಮೀರದಲ್ಲಿ ನೋಡಿದರೆ ಉಗ್ರರ ನುಸುಳುವಿಕೆ! ಇತ್ತ ಬಾಂಗ್ಲಾ ದೇಶಿಗಳ ಅಕ್ರಮ ವಾಸ! ಇನ್ನೊಂದು ಕಡೆ ರೋಹಿಂಗ್ಯಾಗಳು! ಇತ್ತ ಕ್ರೈಸ್ತ ಮಿಷನರಿಗಳು! ಭಾರತದ ನಾಲ್ಕೂ ದಿಕ್ಕಿನಲ್ಲಿರುವುದು ಇದೇ ಸಮಸ್ಯ:!! ಬೇಕಾದರೆ ಗಮನಿಸಿ! ಕಾಶ್ಮೀರ, ಬಾಂಗ್ಲಾ, ಕನ್ಯಾಕುಮಾರಿ ಮತ್ತು ಪಂಜಾಬ್! ಈ ನಾಲ್ಕೂ ಕಡೆಗಳಲ್ಲಿ ಇರುವುದು ಸಮಸ್ಯೆಗಳೇ! ಎಲ್ಲವೂ ಗುರಿಯಾಗಿಸಿದ್ದು ಹಿಂದುತ್ವ ಮತ್ತು ಭಾರತವನ್ನು!! ಹೇಗಾದರೂ ಮಾಡಿ ಭಾರತವನ್ನು ನಾಶ ಗೊಳಿಸಬೇಕೆಂಬ ಆಸೆಗೆ, ಹಿಂದೂಗಳ ವೇಷ ತೊಟ್ಟ ಮಾಧ್ಯಮಾಧಮರು ಹಿಂದುತ್ವದ ವಿರುದ್ಧ ಭಾಷಣ ಬಿಗಿದು, ಅಂತರಾಷ್ಟ್ರೀಯ ಚಾನೆಲ್ಲುಗಳಲ್ಲಿ ಪ್ರಸಾರ ಮಾಡುವಾಗ, ಸಾರ್ವಜನಿಕವಾಗಿಯೇ ಭಯೋತ್ಪಾದಕರ ಜಯಂತಿ ಆಚರಿಸಬೇಕು ಎನ್ನುವಾಗ, ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುವಾಗ, ಅಜ್ಮಲ್ ಕಸಬ್, ಅಫ್ಜಲ್ ಗುರುವಿಗೆ ಕ್ಷಮಾದಾನ ಕೇಳಿ ಅರ್ಜಿ ಸಲ್ಲಿಸುವಾಗ, ಭಾರತ ವನ್ನು ತುಂಡು ತುಂಡು ಮಾಡುತ್ತೇವೆಂದು ಕುಣಿಯುವವರ ಪರ ನಿಲ್ಲುವಾಗ, ಖಂಡಿತವಾಗಿಯೂ ನಿಮಗಿದು ನೆನಪಿರಲಿ! ಇವೆಲ್ಲ ಪ್ರಾರಂಭವಾಗಿರುವುದು ೨೦೧೪ ರಿಂದ!!

ಉಗ್ರ ಸಂಘಟನೆಯಾದ ಎಸ್ ಡಿ ಪಿ ಐ, ಪಿ ಎಫ್ ಐ, ಸಿಮಿಗಳಂತಹವು ಇದ್ದಕ್ಕಿದ್ದಂತೆ ಚುರುಕಾಗಿವೆ! ಯಾವತ್ತಿಗೂ ಇಲ್ಲದಿದ್ದ ಅಸಹಿಷ್ಣುತೆ ತಲೆ ಎತ್ತಿದೆ!! ಭಾರತದಲ್ಲಿ ಎಂದೂ ಇಲ್ಲದ ಅಸುರಕ್ಷಿತ ಹೇಳಿಕೆಯ ಸೃಷ್ಟಿಯಾಗಿದೆ! ಯಾಕ ಗೊತ್ತಾ!? ಮೋದಿ ಅಧಿಕಾರ ಸ್ವೀಕರಿಸಿದ್ದಾರೆ! ಭಾರತ ಬಲವಾಗುತ್ತಿದೆ! ಭಾರತದ ಜಿಡಿಪಿ ಹೆಚ್ಚತೊಡಗಿದೆ! ಭಾರತದ ಸ್ನೇಹವಲಯ ಹೆಚ್ಚತೊಡಗಿದೆ! ಭಾರತಕ್ಕೆ ಸಿಗುವ ಬೆಂಬಲ ಹೆಚ್ಚತೊಡಗಿದೆ! ಭಾರತದೆಡೆಗೆ ಹೆಚ್ಚು ಹೆಚ್ಚು ಜನ ಆಕರ್ಷಿತರಾಗುತ್ತಿದ್ದಾರೆ! ಭಾರತದ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ! ತಾವೂ ಹಿಂದೂವಾಗಲು ಬಯಸುತ್ತಿದ್ದಾರೆ! ಮತ್ತೊಮ್ಮೆ ಭಾರತ ಜಗತ್ತನ್ನಾಳಲಿದೆ!

ಇಷ್ಟಕ್ಕೇ ಹೆದರಿ ಪತರುಗುಟ್ಟಿದ ಐಎಸ್ಐ, ಪಾಕಿಸ್ಥಾನ, ಚೀನಾ ಮತ್ತದರ ಮಿತ್ರ ರಾಷ್ಟ್ರಗಳು ಇವತ್ತು ರೂಪಿಸುತ್ತಿರುವ ಹುನ್ನಾರವೊಂದಿದೆಯಲ್ಲವಾ?! ಮೋದಿ ಸ್ವಲ್ಪ ಎಚ್ಚರ ತಪ್ಪಿದರೂ, ಭಾರತವೇ ಮುಗ್ಗರಿಸಿ ಬೀಳುವಷ್ಟು ಸೂಕ್ಷ್ಮ ಪರಿಸ್ಥಿತಿಗೀಡು ಮಾಡಿದೆಯೆಂದರೆ ಆಲೋಚಿಸಿ! ಅದ್ಯಾವ ಮಟ್ಟದಲ್ಲಿ, ಕರ್ತವ್ಯ ನಿರತವಾಗಿರಬಹುದು ಈ ಎಲ್ಲಾ ಎನ್ ಜಿ ಓ ಗಳು!!

ಹಿಂದೂಗಳ ಮಾರಣಹೋಮದ ಬಗ್ಗೆ ಸೊಲ್ಲೆತ್ತದ ಮಾಧ್ಯಮಗಳು, ಹಿಂದೂಗಳ ಹಕ್ಕಿನ ಬಗ್ಗೆ ವಿಷಕಾರುವ ಮಾಧ್ಯಮಗಳು, ಮೋದಿಯನ್ನು ಅಕಾರಣವಾಗಿ ವಿರೋಧಿಸುವ ಮಾಧ್ಯಮಗಳು, ಮತ್ತು ಭಾರತದಲ್ಲಿ, ಹಕ್ಕುಗಳ ಹೆಸರಿನಲ್ಲಿ ಸಂಸ್ಕೃತಿಯನ್ನೇ ನಾಶಗೊಳಿಸುತ್ತಿರುವಂತಹ ಮಾಧ್ಯಮಗಳು ಮತ್ತು ಅವುಗಳು ಪ್ರಮೋಟ್ ಮಾಡುತ್ತಿರುವ ಎನ್ ಜಿ ಓ ಗಳು! ಇದರ ಬಗ್ಗೆ, ಪ್ರತೀ ಭಾರತೀಯನು ಎಚ್ಚರದಿಂದಿರಬೇಕಿದೆ!

According today’s Sunday Guardian in a front page story by Nalapat, ISI has penetrated Hindu fringe out to carry out hateful activities.

I have saying this to the media for the last two years, as I did about the anti-nuclear Kudankulam agitation–foreign driven.

Corollary: Muslim Appeasement implies Hindutva Renaissance. Let idiots therefore live in their fool’s paradise.

Source :http://www.sundayguardianlive.com/news/10083-ghq-isi-s-global-effort-defame-india-falters

– ಪೃಥು ಅಗ್ನಿಹೋತ್ರಿ

Tags

Related Articles

Close