ಆ ಪಾಪಿ ಪಾಕಿಸ್ತಾನ ತನ್ನ ಕಪಟ ಬುದ್ಧಿಯನ್ನು ಮತ್ತೆ ಮುಂದುವರಿಸುತ್ತನೇ ಬಂದಿದೆ!! ಎಲ್ಲ ರಾಷ್ಟ್ರಗಳು ಪಾಕಿಸ್ತಾನವನ್ನು ದೂರವಿಟ್ಟರೂ ಇನ್ನು ಇದಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ!! ಭಾರತದ ವಿಚಾರದಲ್ಲಿ ಯಾವುದೇ ವಿಚಾರದಲ್ಲೂ ರಾಜಿಮಾಡಿಕೊಳ್ಳದ ಮೋದೀಜೀ ಪಾಕಿಗಳನ್ನು ಗಡಿ ದಾಟದಂತೆ ತಕ್ಕ ಮದ್ದನ್ನೇ ಅರೆಯುತ್ತಿದ್ದಾರೆ!! ಭಾರತದ ಜೊತೆ ಪದೇ ಪದೇ ಉಪಟಳವನ್ನು ಮಾಡುವ ಪಾಕಿಸ್ತಾನಕ್ಕೆ ಭಾರತದ ನಿರ್ಧಾರದಿಂದ ಬೆವತು ಹೋಗಿ ಈಗಾಗಲೇ ಗಡಿ ಶಾಂತಿ ಸೌಹಾರ್ಧತೆಯನ್ನು ಕಾಪಾಡುತ್ತೇವೆ ಎಂದೂ ಹೇಳಿದ ಬೆನ್ನಲ್ಲೇ ಮತ್ತೆ ಮತ್ತೆ ಗಡಿಯಲ್ಲಿ ದಾಳಿಯನ್ನು ಮಾಡುತ್ತನೇ ಬರುತ್ತಿದ್ದಾರೆ!! ಇತ್ತೀಚೆಗೆ ಯೋಧ ಜೌರಂಗಜೇಬನನ್ನು ಅಪಹರಿಸಿ ನಂತರ ಕೊಲೆ ಮಾಡಿದ್ದು ಪಾಕಿಸ್ತಾನದ ಕರಾಳ ಮುಖ ಮತ್ತೊಮ್ಮೆ ಬಯಲಾಗಿದೆ!!
ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಷಿಯಾ ವಕ್ಫ್ ಬೋರ್ಡ್!!
ತನ್ನ ನರಿ ಬುದ್ಧಿಯನ್ನು ಬಿಡದ ಪಾಕಿಸ್ತಾನ ನಮ್ಮ ಭಾರತೀಯ ಯೋಧ ಜೌರಂಗಜೇಬರನ್ನು ಅಪಹರಿಸಿ ಕೊಲೆ ಮಾಡಿದ್ದರು ಆ ಕ್ರೂರಿ ಪಾಕಿಗಳು!! ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ವ್ಯಾಪ್ತಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರ ದಾಳಿಗೆ ಹುತಾತ್ಮರಾಗಿರುವ ಯೋಧ ಔರಂಗಜೇಬ್ ಕೊಲೆಯನ್ನು ಖಂಡಿಸಿ ಉತ್ತರ ಪ್ರದೇಶದ ಷಿಯಾ ವಕ್ಫ್ ಬೋರ್ಡ್ ರಂಜಾನ್ ಆಚರಿಸದಿರಲು ನಿರ್ಧರಿಸಿದೆ!! ಇದೀಗ ಯೋಧ ಔರಂಗಜೇಬನ್ನು ಅಪಹರಿಸಿ ಕೊಲೆ ಮಾಡಿದ ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ!! ಯೋಧ ಔರಂಗಜೇಬ್ ಕೊಲೆ ಖಂಡಿಸಿ, ರಂಜಾನ್ ಆಚರಣೆಯನ್ನು ಕೈ ಬಿಟ್ಟು, ನೆರೆ ರಾಷ್ಟ್ರವಾದ ಪಾಕಿಸ್ತಾದ ಧ್ವಜವನ್ನು ಸುಟ್ಟು ಹೋರಾಟ ಮಾಡಲು ನಿರ್ಧರಿಸಲಾಗಿದೆ. ಯೋಧ ಔರಂಗಜೇಬ್ ಕೊಲೆ ದೇಶಕ್ಕೆ ಮಾರಕವಾದ್ದದ್ದು, ಇಂತಹ ಪಾಕಿಸ್ತಾನದ ಕೃತ್ಯಗಳನ್ನು ಮುಸ್ಲಿಂ ಸಮುದಾಯವೇ ಖಂಡಿಸುತ್ತಿದ್ದು, ಪಾಕಿಸ್ತಾನದ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಷಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ವಾಸಿಂ ರಿಜ್ವಿ ತಿಳಿಸಿದ್ದಾರೆ!!
ಯೋಧನ ಕೊಲೆಯನ್ನು ಖಂಡಿಸಿ ರಂಜಾನ್ ಆಚರಣೆಯನ್ನೇ ಮುಂದಿಟ್ಟ ಷಿಯಾ ವಕ್ಫ್ ಬೋರ್ಡ್!!
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸೈಯದ್ ವಾಸಿಂ ರಿಜ್ವಿ `ಪ್ರತಿಭಟನೆಯಲ್ಲಿ ಭಾರತೀಯ ಯೋಧರ ಮಾರಣಾಂತಿಕ ಕೊಲೆಗಳನ್ನು ಖಂಡಿಸಲಾಗುವುದು ಮತ್ತು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿರುವ ಪಾಕಿಸ್ತಾನದ ಧ್ವಜವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದು ತಿಳಿಸಿದ್ದಾರೆ!! ಷಿಯಾ ಕೇಂದ್ರೀಯ ಕಚೇರಿ ಬಳಿ ಷಿಯಾ ವಕ್ಫ್ ಬೋಡ್ರ್ನ ಎಲ್ಲ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ದೇಶಕ್ಕಾಗಿ ಪ್ರಾಣ ನೀಡುವ ಯೋಧರಿಗಾಗಿ ಪ್ರತಿಭಟನೆ ನಡೆಸಿದ ನಂತರ ರಂಜಾನ್ ಆಚರಿಸಲಾಗುವುದು ಎಂದು ರಿಜ್ವಿ ತಿಳಿಸಿದ್ದಾರೆ.
ಕೊಲೆಯ ಹಿಂದೆ ಪಾಕಿಸ್ತಾನದ ಐಎಸ್ಐ ಭಾಗಿಯಾಗಿರುವ ಅನುಮಾನ!!
ಅದಲ್ಲದೆ ಕೊಲೆಯ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಭಾಗಿಯಾಗಿರುವ ಅನುಮಾನವನ್ನು ಭಾರತದ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ಹೊರಹಾಕಿದ್ದಾರೆ!!. `ಜಿಹಾದ್ ಫಾರ್ ಲಿಬರೇಷನ್ ಆಫ್ ಕಾಶ್ಮೀರ’ ಹೆಸರಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಭಾರತದ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದು ಹಲವು ವಾಮಮಾರ್ಗಗಳ ಮೂಲಕ ದಾಳಿಗಳನ್ನು ಮಾಡಲು ಯತ್ನಿಸುತ್ತಿದೆ. ಇದೀಗ ಯೋಧ ಔರಂಗಜೇಬ್ ಅವರನ್ನು ಅಪಹರಿಸಿ, ಕೊಲೆ ಮಾಡಿರುವುದೂ ಸಹ ಅದರ ಭಾಗ ಮತ್ತು ಭಾರತೀಯ ಸೇನಾ ಪಡೆಗಳಿಗೆ ಒಂದು ಪಾಠವಾಗಬೇಕು ಎಂಬ ಉದ್ದೇಶ ಐಎಸ್ ಐ ಹೊಂದಿದೆ ಎಂಬ ಮಾಹಿತಿ ತಿಳಿದು ಬಂದಿದೆ!! ಈಗಾಗಲೇ ನಮ್ಮ ಭಾರತೀಯ ಸೇನೆ ಭಾರತೀಯ ಯೋಧರಿಗೆ ದಾಳಿ ನಡೆಸಿದ್ದಲ್ಲಿ ಪಾಕಿಸ್ತಾನಕ್ಕೆ ಈಗಾಗಲೇ ಸರಿಯಾಗಿ ಪಾಠ ಕಲಿಸಿದೆ!! ಯೋಧ ಜೌರಂಗಜೇಬರನ್ನು ಕೊಂದದ್ದಕ್ಕೆ ಮುಂದೆ ಪಾಕಿಸ್ತಾನ ಯಾವ ರೀತಿ ಅನುಭವಿಸುತ್ತೆ ಎಂಬುವುದನ್ನು ಕಾದು ನೋಡಿ….ಪಾಕಿಗಳೇ…
ಕಾಶ್ಮೀರ ಕಣಿವೆಯಲ್ಲಿ ಯೋಧ ಔರಂಗಜೇಬ್ ಅವರನ್ನು ಅಮಾನುಷವಾಗಿ ಕೊಲೆ ಮಾಡುವ ಮೂಲಕ ಪಾಕಿಸ್ತಾನ ಭಯೋತ್ಪಾದರ ಜೊತೆಗಿದೆ ಎಂಬ ಬಲಿಷ್ಠ ಸಂದೇಶವನ್ನು ಪಾಕಿಸ್ತಾನದ ಐಎಸ್ಐ ಸಂಸ್ಥೆ ಭಾರತಕ್ಕೆ ರವಾನಿಸಿದೆ. ಅಲ್ಲದೇ ತನ್ನ ಕಾರ್ಯ ಚಟುವಟಿಕೆಗಳು ಕಾಶ್ಮೀರದ ಕಣಿವೆಯಲ್ಲಿ ಜಾರಿಯಿರಲಿವೆ ಎಂಬ ಸಂದೇಶವನ್ನು ಈ ಮೂಲಕ ನೀಡಿದೆ ಎನ್ನಲಾಗಿದೆ. ಹುತಾತ್ಮರಾಗಿರುವ ಯೋಧ ಔರಂಗಜೇಬ್ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ಹತ್ಯೆಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಆದ್ದರಿಂದಲೇ ಗುರುವಾರ ಔರಂಗಜೇಬ್ ಅವರನ್ನು ಸುತ್ತುವರಿದಿದ್ದ ಭಯೋತ್ಪಾದಕರು ಗನ್ ತೋರಿಸಿ ಅವರನ್ನು ಅಪಹರಿಸಿ, ಅಮಾನುಷ ರೀತಿಯಲ್ಲಿ ಕೊಲೆ ಮಾಡಿದ್ದಾರೆ!!
ಈಗಾಗಲೇ ಭಾರತವನ್ನು ಮಣಿಸಬೇಕು ಎನ್ನುವ ಉದ್ಧೇಶದಿಂದ ಗಡಿ ನಿಯಂತ್ರಣ ರೇಖೆ (ಎಲ್ಓಸಿ) ದಾಟಿ ಭಾರತದ ಸೈನಿಕರ ಮೇಲೆ ದಾಳಿ ನಡೆಸಲು ಪಾಕಿಸ್ಥಾನದ ವಿವಿಧ ಕಾರಾಗೃಹಗಳಲ್ಲಿರುವ ಡಕಾಯಿತರು, ಅಪರಾಧಿಗಳಿಗೆ ಐಎಸ್ಐ ತರಬೇತಿ ನೀಡುತ್ತಿದೆ ಎಂಬ ಮಾಹಿತಿ ಕೂಡಾ ಈಗಾಗಲೇ ಬಹಿರಂಗವಾಗಿದೆ. ಭಾರತದ ಸೈನಿಕರ ಮೇಲೆ ದಾಳಿ ಮಾಡಲು ಒಪ್ಪಿಕೊಳ್ಳುವವರ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವುದು, ನಗದು ಬಹುಮಾನ ಸೇರಿ ಹಲವು ಆಮಿಷಗಳನ್ನೂ ಒಡ್ಡಲಾಗುತ್ತದೆ. ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್ಐ)ಇದರ ನೇತೃತ್ವ ವಹಿಸಿಕೊಂಡಿದೆ. ಕಾರಾಗೃಹ ವಾಸಿಗಳಿಗೆ ಉಗ್ರಗಾಮಿತ್ವದ ತರಬೇತಿ ಮುಕ್ತಾಯವಾದ ಬಳಿಕ ಅವರನ್ನು ಬಾರ್ಡರ್ ಆಕ್ಷನ್ ಟೀಮ್ (ಬಿಎಟಿ)ಗೆ ನಿಯೋಜನೆ ಮಾಡಲಾಗುತ್ತದೆ. ಅವರೇ ಎಲ್ಓಸಿಯಾದ್ಯಂತ ದಾಳಿಗಳನ್ನು ನಡೆಸುತ್ತಾರೆ. ಈ ತಂಡದಲ್ಲಿ ಉಗ್ರರೂ ಇದ್ದಾರೆ. ಒಂದು ವೇಳೆ ಭಾರತೀಯ ಸೇನಾಪಡೆಗಳು ಉಗ್ರರನ್ನು ಸೆರೆ ಹಿಡಿದರೆ ಸುಲಭವಾಗಿ ನುಣುಚಿಕೊಳ್ಳಬಹುದು ಎನ್ನುವುದು ಪಾಕ್ ಲೆಕ್ಕಾಚಾರ ಎನ್ನಲಾಗಿದೆ!! ಆದೆ ಒಂದು ಅಂಶವನ್ನು ಪಾಕಿಸ್ತಾನಿಗಳು ಅರ್ಥ ಮಾಡಿಕೊಳ್ಳಬೇಕು.. ಇದು ಮೋದಿ ಯುಗ ಇಲ್ಲಿ ಭಾರತೀಯ ಸೈನಿಕರಿಗೆ ಎಲ್ಲಾ ಸವಲತ್ತುಗಳನ್ನು ನೀಡಿದ್ದಾರೆ!! ಶತ್ರುಗಳು ನಮ್ಮನ್ನು ಕೆಣಕಿದರೆ ಅದಕ್ಕೆ 2 ಪಟ್ಟು ಹೆಚ್ಚು ಹಾನಿಯುಂಟು ಮಾಡುತ್ತಾರೆ ನಮ್ಮ ಸೈನಿಕರು!! ಇಂದು ಔರಂಗಜೇಬ ಎಂಬ ಯೋಧನನ್ನು ಕೊಲೆ ಮಾಡಿದಕ್ಕೆ ಮುಂದೆ ಅವರಿಗಿದೆ ಮಾರಿ ಹಬ್ಬ.. ವೈಟ್ ಆಂಡ್ ವಾಚ್ ಪಾಕ್….
source: www.timesnownews.com
- ಪವಿತ್ರ