ಪ್ರಚಲಿತ

ಅಯ್ಯೋ ಅಯ್ಯೋ!!! ಸಿದ್ಧರಾಮಯ್ಯರ ನಾಲ್ಕು ವರ್ಷದ ಆಡಳಿತದಲ್ಲಿ ಕಾಣೆಯಾದ ಮಹಿಳೆಯರ ಸಂಖ್ಯೆ ಎಷ್ಟು ಗೊತ್ತೇ?!

ಸಿದ್ದರಾಮಯ್ಯನವರ ಆಡಳಿತದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆಯೇ ಇಲ್ಲ!!!

ಸಿದ್ದರಾಮಯ್ಯನವರ ಸರ್ಕಾರದಲ್ಲಿ ಜನಸಾಮಾನ್ಯರು ಸುರಕ್ಷಿತರಿಲ್ಲ, ಪೋಲಿಸ್ ಅಧಿಕಾರಿಗಳು ಸುರಕ್ಷಿತರಿಲ್ಲ, ದಕ್ಷ ಅಧಿಕಾರಿಗಳು ಸುರಕ್ಷಿತರಿಲ್ಲ, ಹಿಂದೂ ಸಂಘಟನೆಯ ಕಾರ್ಯಕರ್ತರು ಸುರಕ್ಷಿತರಿಲ್ಲ, ರೈತರು ಸುರಕ್ಷಿತರಿಲ್ಲ, ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ.

ಇದರ ಜೊತೆ ಜೊತೆಗೆ ಮಹಿಳೆಯರ ಸುರಕ್ಷತೆಯಂತೂ ಹೇಳತೀರಲಾಗದು.

ಮಾತೆತ್ತಿದರೆ ಸಾಕು ಮೋದಿ, ಆರೆಸ್ಸೆಸ್, ಬಿಜೆಪಿ ಅಂತ ಮಾತನಾಡೋ ಸಿದ್ದರಾಮಯ್ಯನವರು, ಕಾಂಗ್ರೆಸ್ಸಿನವರು ತಮ್ಮ ಕೈಯಲ್ಲಿರುವ ಅಧಿಕಾರವನ್ನ ನೆಟ್ಟಗೆ ನಡೆಸಿಕೊಂಡು ಹೋಗಲು ಹೆಣಗಾಡಿತ್ತಿದ್ದಾರೆ.

ಈ ಸರ್ಕಾರದಲ್ಲಿ ಯಾವ ಇಲಾಖೆಗೆ ಯಾರು ಮಂತ್ರಿ ಅನ್ನೋದು ರಾಜ್ಯದ ಬಹುತೇಕ ಜನರಿಗೆ ಇನ್ನೂ ಗೊತ್ತಿಲ್ಲ.

ಕಾರಣ ಆಯಾ ಇಲಾಖೆಯಲ್ಲಿ ಸಮಾಜಪರ ಕೆಲಸಗಳು ನಡೆದರೆ ತಾನೆ ಜನರಿಗೆ ಸರ್ಕಾರದ ಬಗ್ಗೆ ಗೊತ್ತಾಗೋದು.

ದಿನಬೆಳಗಾದರೆ ಹಗರಣ, ದಮನನೀತಿ, ಸೊಕ್ಕು, ದರ್ಪದಿಂದ ಮಾತಾಡೋ ಸಿದ್ದರಾಮಯ್ಯನವರಷ್ಟೇ ಟಿವಿ ಮಾಧ್ಯಮಗಳೆದರು ಬಂದು ಹೇಳಿಕೆ ನೀಡೋದ್ರಿಂದ ಸರ್ಕಾರ ಅಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದರೆ ಸರ್ಕಾರ ಅನ್ನೋ ಹಾಗಾಗಿದೆ ಕರ್ನಾಟಕದ ಪರಿಸ್ಥಿತಿ.

ಹೀಗಿರುವಾಗ ಜನಸಾಮಾನ್ಯರ ಗೋಳು ಕೇಳೋರಾದರೂ ಯಾರು ಹೇಳಿ!!

ರಾಜ್ಯವಾಗಲಿ ರಾಷ್ಟ್ರವಾಗಲಿ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗಬೇಕಾದರೆ ಮೊದಲು ಅಲ್ಲಿನ ಕಾನೂನು ಸುವ್ಯವಸ್ಥೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಆದರೆ ಕರ್ನಾಟಕ ದಲ್ಲಿ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ಹೇಗಿದೆ?

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟುಹೋಗಿದೆ, ಆದರೆ ನಮ್ಮ ಸಿಎಂ ಸಿದ್ದರಾಮಯ್ಯ ಮಾತ್ರ ಏನೂ ಆಗೇ ಇಲ್ಲ, ನಾನೇ ಅಭಿವೃದ್ಧಿಯ ಹರಿಕಾರ ಅಂತ ಬೀಗುತ್ತ ತಿರಿಗುತ್ತಿದ್ದಾರೆ.

ಸಿದ್ದರಾಮಯ್ಯನವರ ಕಳೆದ 4 ವರ್ಷಗಳ ಆಡಳಿತದಲ್ಲಿ ರಾಜ್ಯದಲ್ಲಿ ಕಾಣೆಯಾದ ಮಹಿಳೆಯರ ಸಂಖ್ಯೆ ನಿಮಗೆ ಗೊತ್ತೆ?

ರಾಜ್ಯದಲ್ಲಿ ಕಳೆದ 4 ವರ್ಷದಲ್ಲಿ ಕಾಣೆಯಾದ ಮಹಿಳೆಯರ/ಯುವತಿಯರ ಸಂಪೂರ್ಣ ಮಾಹಿತಿ ಹೀಗಿದೆ!!

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಬರೋಬರಿ ಇಪ್ಪತ್ತೊಂದು ಸಾವಿರದ ಐವತ್ಮೂರು(21,053) ಮಹಿಳೆಯರು ಕಾಣೆಯಾಗಿದ್ದಾರಂತೆ.

2014 ರ ಅಂಕಿ ಅಂಶ ಹೀಗಿದೆ:

2014 ರಲ್ಲಿ 5,989 ಮಹಿಳೆಯರು ಕಾಣೆಯಾಗಿದ್ದಾರೆ, ಆ ಪೈಕಿ 5,509 ಕಾಣೆಯಾದ ಮಹಿಳೆಯರ ಬಗ್ಗೆ ಸುಳಿವು ಸಿಕ್ಕಿದೆ ಆದರೆ ಇನ್ನುಳಿದ 480 ಮಹಿಳೆಯರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಪೋಲಿಸರಿಗೆ ಸಿಕ್ಕಿಲ್ಲ.

2015 ರ ಅಂಕಿ ಅಂಶ ಹೀಗಿದೆ:

2015 ರಲ್ಲಿ 5,975 ಮಹಿಳೆಯರು ಕಾಣೆಯಾಗಿದ್ದಾರೆ, ಆ ಪೈಕಿ 5,435 ಕಾಣೆಯಾದ ಮಹಿಳೆಯರ ಬಗ್ಗೆ ಸುಳಿವು ಸಿಕ್ಕರೆ ಉಳಿದ 540 ಮಹಿಳೆಯರ
ಬಗ್ಗೆ ಇದುವರೆಗೂ ಯಾವುದೇ ಸುಳಿವು ಪೋಲಿಸರಿಗೆ ಸಿಕ್ಕಿಲ್ಲ.

2016 ರ ಅಂಕಿ ಅಂಶ ಹೀಗಿದೆ:

2016 ರಲ್ಲಿ 6,316 ಮಹಿಳೆಯರು ಕಾಣೆಯಾಗಿದ್ದಾರೆ, ಆ ಪೈಕಿ 5,362 ಮಹಿಳೆಯರು ಕಾಣೆಯಾಗಿರುವ ಬಗ್ಗೆ ಸುಳಿವು ಸಿಕ್ಕಿದೆ ಹಾಗು ಇನ್ನುಳಿದ ಉಳಿದ 954 ಮಹಿಳೆಯರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

2017 ರ ಅಂಕಿ ಅಂಶ ಹೀಗಿದೆ:

2017 ರಲ್ಲಿ 2,773 ಮಹಿಳೆಯರು ಕಾಣೆಯಾಗಿದ್ದಾರೆ, ಆ ಪೈಕಿ 1,471 ಮಹಿಳೆಯರ ಸುಳಿವು ಸಿಕ್ಕಿದ್ದು ಇನ್ನೂ 480 ಮಹಿಳೆಯರ ಬಗ್ಗೆ ಇದುವರೆಗೂ ಪೋಲಿಸರಿಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಅಂದರೆ ಈ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು ಎರಡೂವರೆ ಸಾವಿರ ಹೆಣ್ಣುಮಕ್ಕಳು ಎಲ್ಲಿ ಹೋದರು ಅವರ ಕಥೆ ಏನಾಯ್ತು ಅನ್ನೋದು ನಿಗೂಢ ವಾಗೇ ಉಳಿದಿದೆ.

ಹಿರಿಯ ಪೊಲೀಸ್ ಅಧಿಕಾರಿ ಪ್ರಕಾರ ಇದರಲ್ಲಿ ಕೆಲವರು ಸ್ವಇಚ್ಛೆಯಿಂದ ಮನೆ ಬಿಟ್ಟು ಹೋಗಿದ್ದರೆ ಇನ್ನುಳಿದ ಕಾಣೆಯಾದ ಮಹಿಳೆಯರು Women Trafficking ಅಂದರೆ ಮಹಿಳಾ ಕಳ್ಳಸಾಗಣೆಗೆ ಬಲಿಯಾಗಿದ್ದಾರೆ.

ಹೌದು! ಹೊರದೇಶಗಳಿಗೆ ಮಹಿಳೆರನ್ನ ಮಾರಾಟ ಮಾಡುವುದು, ಕಳ್ಳ ಸಾಗಣೆ ದಂಧೆ ನಮ್ಮ ರಾಜ್ಯದಲ್ಲಿ ತೀವ್ರವಾಗಿ ನಡೀತಿದೆ ಅನ್ನೋ ಸ್ಪೋಟಕ ಮಾಹಿತಿ ಸಿಕ್ಕಿದೆ.

ಮೇಲಿನ ಎಲ್ಲಾ ಅಂಕಿ ಅಂಶಗಳನ್ನ ಸ್ವತಃ ಆಗಿನ ಗೃಹ ಸಚಿವರಾಗಿದ್ದವರೆ ಅವರು ವಿಧಾನ ಸಭೆಯಲ್ಲಿ ಹೇಳಿದ್ದಾರೆ.

ಬಡ ಕುಟುಂಬದ ಹೆಣ್ಣುಮಕ್ಕಳನನ್ನ ಕೆಲಸ ಕೊಡಿಸುವದಾಗಿ ಹೇಳಿ ಅಪಹರಣ ಮಾಡುತ್ತಿದ್ದಾರೆ. ಇನ್ನೂ ಕೆಲವರಿಗೆ ಪ್ರೀತಿ ಪ್ರೇಮದ ಜಾಲಕ್ಕೆ ಬೀಳಿಸಿ ಅಪಹರಣ ಮಾಡಲಾಗುತ್ತಿದೆ.

ಇಷ್ಟೆಲ್ಲಾ ರಾಜ್ಯದಲ್ಲಿ ನಡೆಯಿತ್ತಿದ್ದರೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಇದೆಯಂತೆ!!

ಖಂಡಿತವಾಗಿಯೂ ಇಲ್ಲ, ದಿನಬೆಳಗಾದರೆ ಹಿಂದೂ ಕಾರ್ಯಕರ್ತರ ಹತ್ಯೆ, ಪೋಲಿಸ್ ಅಧಿಕಾರಿಗಳ ನಿಗೂಢ ಸಾವು, ಮಹಿಳೆಯರು ಕಾಣೆಯಾಗಿರುವ ಸುದ್ದಿ, ಗ್ಯಾಂಗ್ ವಾರ್, ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಹೀಗೆ ಸರ್ಕಾರದ ಬೇಜವಾಬ್ದಾರಿತನದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿಕುಸಿದು ಹೋಗಿದೆ.

ಇಷ್ಟೆಲ್ಲ ತಮ್ಮ ಅಧಿಕಾರಾವಧಿಯಲ್ಲಿ ನಡೆಯುತ್ತಿದ್ದರೂ ನಮ್ಮ ಸಿಎಂ ಸಾಹೇಬರು ಮಾತ್ರ ತಮ್ಮನ್ನು ತಾವು ಮೋದಿಗೆ ಹೋಲಿಸಿಕೊಂಡು ಮಾತಾನಡುತ್ತಿದ್ದರೆ ಕಾಂಗ್ರೆಸ್ಸಿನ ಕೆಲ ಜನರು ಸಿದ್ದರಾಮಯ್ಯನವರೇ ನಮ್ಮ ಮುಂದಿನ ಪ್ರಧಾನಮಂತ್ರಿ ಅನ್ನೋ ಹಾಗೆ ಕನಸು ಕಾಣುತ್ತ ಕೂತಿದ್ದಾರೆ.

ಎಲ್ಲಿಯ ಆ ಯೋಗಿ ಮೋದಿ ಎಲ್ಲಿಯ ನಮ್ಮ ಸಿದ್ದರಾಮಯ್ಯ? ಅಷ್ಟಕ್ಕೂ ಪ್ರಧಾನಿ ಮೋದಿಯವರ ಸರ್ಕಾರದ ಬಗ್ಗೆಯಾಗಲಿ ಅವರ ಮಂತ್ರಿಗಳ ಬಗ್ಗೆಯಾಗಲಿ ಒಂದು ಹಗರಣದ ಮಾತೂ ಕೇಳಿಬಂದಿಲ್ಲ.

ಪ್ರಧಾನಿ ಮೋದಿ ಇಲ್ಲೀವರೆಗೂ ಒಂದು ಮಹಿಳೆಯರಿಗೋಸ್ಕರ ಯಾವೆಲ್ಲ ಯೋಜನೆಗಳು ತಂದಿದ್ದಾರಂತ ನಿಮಗೆ ಗೊತ್ತೇ??

ಹೆಣ್ಣುಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ “ಬೇಟಿ ಬಚಾವೋ ಬೇಟಿ ಪಡಾವೋ” ಯೋಜನೆಯನ್ನ ತಂದಿದ್ದಾರೆ ಆದರೆ ಸಿದ್ದರಾಮಯ್ಯನವರು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾವೇ ಜಾರಿಗೆ ತಂದ 2 ರೂಪಾಯಿ ಯೋಜನೆಯನ್ನ ಸದ್ದಿಲ್ಲದೆ ಬಂದ್ ಮಾಡಿಸಿಬಿಟ್ಟಿದ್ದಾರೆ.

ಮೋದಿಯವರ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಪೌಷ್ಟಿಕಾಂಶದ ಕೊರತೆ ನೀಗಿಸುವುದು, ಭ್ರೂಣ ಹತ್ಯೆ ತಡೆ ಸೇರಿದಂತೆ ಕೆಲವು ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಮೊದಲ ಹಂತದಲ್ಲಿ ದೇಶದ 100 ಹಿಂದುಳಿದ ಜಿಲ್ಲೆಗಳಲ್ಲಿ ಈ ಯೋಜನೆ ಚಾಲ್ತಿಯಲ್ಲಿದೆ, ಮಹಿಳಾ ಸಬಲೀಕರಣ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡುಕೊಳ್ಳಲಿದೆ.

ಒಲೆ ಊದುತ್ತ ಕಷ್ಟಪಡಿತ್ತಿದ್ದ ದೇಶದ ಕೋಟ್ಯಂತರ ತಾಯಂದಿರುಗಳಿಗೆ ಗ್ಯಾಸ್ ಕನೆಕ್ಷನ್ ಕೊಡಿಸಿ ಅವರ ಬದುಕನ್ನ ಮೋದಿ ಹಸಿನಾಗಿಸಿದ್ದಾರೆ.

ದೇಶದ 18,000+ ಹಳ್ಳಿಗಳು ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿವರೆಗೂ ಕರೆಂಟ್,‌ ಲೈಟ್ ಕಂಡಿರಲಿಲ್ಲ,‌ಅಂಥ ಹದಿನೆಂಟು ಸಾವಿರ ಹಳ್ಳಿಗಳಿಗೆ ಮೋದಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.

ಮಹಿಳಾ ಸ್ವಸಹಾಯ ಗುಂಪುಗಳಿಗೆ ರುಪೇ ಕಾರ್ಡ್ ತಮ್ಮ ಕೈಯಾರೇ ಧರ್ಮಸ್ಥಳ ದಲ್ಲಿ ನೀಡಿ ಅವರನ್ನ ಪ್ರೋತ್ಸಾಹಿಸಿದ್ದಾರೆ.

ಹೀಗೆ ಮೋದಿ ಹಲವು ಯೋಜನೆಗಳ ಮೂಲಕ ಮಹಿಳೆಯರ ಅಭಿವೃದಿಗೆ ಶ್ರಮಿಸುತ್ತಿದ್ದಾರೆ, ಮತ್ತೊಂದು ಕಡೆ ನಮ್ಮ ಸಿಎಂ ಸಾಹೇಬರು ನಾನೇ ಎಲ್ಲಾ ಮಾಡಿದ್ದೇನೆ ಅನ್ನೋ ರೀತಿಯಲ್ಲಿ ಪೋಸ್ ಕೊಡುತ್ತ ತಿರುಗಾಡುತ್ತಿದ್ದಾರೆ.

ರಾಜ್ಯದ ಕಾನೂನು ಸುವ್ಯವಸ್ಥೆ, ಜನಸಾಮಾನ್ಯರ ರಕ್ಷಣೆ, ಮಹಿಳಾ ಸಬಲೀಕರಣ ಮಾಡದೆ ಇರೋ ಸರ್ಕಾರವನ್ನ ಬೆಂಬಲಿಸಿತ್ತೀರಾ ಅನ್ನೋದನ್ನ ಮುಂದಿನ ದಿನಗಳಲ್ಲಿ ರಾಜ್ಯದ ಜನ ತೀರ್ಮಾನ ಮಾಡಬೇಕಿದೆ!!!

– Vinod Hindu Nationalist

Tags

Related Articles

Close