ಪ್ರಚಲಿತ

ಆ ಗ್ರಾಮದ ದಲಿತರನ್ನು ಆ ಧರ್ಮವೊಂದು ಪೀಡಿಸುತ್ತಿದೆ!! ಆದರೆ ಜಿಗ್ನೇಶ್ ಮೇವಾನಿ ನಾಪತ್ತೆಯಾಗಿದ್ದಾರೆ!! ಏನಿದು ಸ್ಟೋರಿ…!!?

ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಾತನಾಡುವವರು ಬೇಕಾದಷ್ಟು ಜನರಿದ್ದಾರೆ…!  ಭಾರತದಲ್ಲಿಯೇ ಇದ್ದು ಇಲ್ಲಿಯ ಅನ್ನವನ್ನೇ ತಿಂದು ಭಾರತದ ಶತ್ರು ರಾಷ್ಟ್ರಕ್ಕೆ ಬೆಂಬಲ ನೀಡುತ್ತಾ ಬಂದಿರುವವರ ಸಾಲಿನಲ್ಲಿ ಅದೆಷ್ಟೋ ದೇಶದ್ರೋಹಿಗಳು ಇದ್ದಾರೆ ಎಂದು ನಿಮಗೆ ತಿಳಿದಿದೆ .

ದೇಶನಿಷ್ಟರಿರುವ ಭಾರತದಲ್ಲಿ ಸ್ವಘೋಷಿತ ಬುದ್ದಿ ಜೀವಿಗಳ ಆಟ ನಡೆಯೋದಿಲ್ಲ‌ ಎಂದು ಗೊತ್ತಾದೊಡನೆ ,ದೇಶದಲ್ಲಿರುವ ಮುಗ್ದರಿಗೆ ಬಲೆ ಬೀಸುವ ಇವರು ಆಡಳಿತಾಂಗದ ವಿರುದ್ಧ ಮುಗ್ದರನ್ನು ಎತ್ತಿ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ ಕೆಲವರು.
ಇವರ ಸಾಲಿಗೆ ಸೇರಿದವನು ದಲಿತ ಚಳುವಳಿ ನಾಯಕ, ಗುಜರಾತ್ ಶಾಸಕರಾಗಿ ಆಯ್ಕೆಯಾಗಿರುವ ಜಿಗ್ನೇಶ್ ಮೇವಾನಿ…!!!

ಜಿಗ್ನೇಶ್ ಮೇವಾನಿ ಗುಜರಾತ್ ಶಾಸಕನಾಗಿ ಮತ್ತು ದಲಿತ ಪರ ಮುಖಂಡನಾದ ನಂತರದಲ್ಲಿ ಮೋದಿ ಸರಕಾರವನ್ನು ವಿರೋಧಿಸಿ ಮಾತನಾಡುವ ಮೂಲಕವೇ ತನ್ನ ಹೆಸರನ್ನು ಎಲ್ಲೆಡೆ ಪಸರಿಸುವಂತೆ ಮಾಡಿದ್ದಾನೆ.

ದಲಿತರು ಮತ್ತು ಅಲ್ಪಸಂಖ್ಯಾತರ ಮಧ್ಯೆ ಏಕತೆ ಬಯಸಿ ,ಅವರ ಮೇಲೆ ಮೇಲ್ವರ್ಗದವರು ನಡೆಸುತ್ತಿರುವ ‌ದೌರ್ಜನ್ಯದ ವಿರುದ್ಧ ಹೋರಾಟ ನಡೆಸುತ್ತಲೇ ರಾಷ್ಟ್ರದಲ್ಲಿ ದಲಿತ ನಾಯಕರಾಗಿ ಓಡಾಡುತ್ತಿರುವ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ತನ್ನ ಹರಿಯಾಣದ ಗ್ರಾಮವೊಂದರಲ್ಲಿ ಮತಾಂತರದ ವಿಷಯದಲ್ಲಿ ದಲಿತರ ಮೇಲೆ ಮುಸ್ಲಿಂ ಸಮುದಾಯ ನಡೆಸುತ್ತಿರುವ ದೌರ್ಜನ್ಯ ಗಮನಕ್ಕೆ ಬಾರದೇ ಇರುವುದು ಜಿಗ್ನೇಶ್ ಮೇವಾನಿಯ ಬೇಜವಾಬ್ದಾರಿತನ ಮತ್ತು ಅನುಮಾನ ಮೂಡುವಂತಾಗಿದೆ…!

ಹರಿಯಾಣದ ನಗೀನಾಖಂಡ ಪ್ರಾಂತ್ಯದ ಮೋಲ್ಹಲಕ್ ಗ್ರಾಮದ ದಲಿತ ಕುಟುಂಬವೊಂದರ ಮೇಲೆ‌ ಮುಸ್ಲಿಂ ಕೆಲ ಗೂಂಡಾಗಳು ದಾಳಿ ಮಾಡಿದ್ದು ಬಲವಂತವಾಗಿ ಇಸ್ಲಾಂ ಗೆ ಮತಾಂತರ ಮಾಡಲು ಯತ್ನಿಸಿ ಜಾತಿಯ ಹೆಸರೆತ್ತಿ ನಿಂದಿಸಿದ್ದಾರೆ…!

ಹರಿಯಾಣದ ನಗೀನಾಖಂಡ ಗ್ರಾಮದಲ್ಲಿ ಮೂರು ಸಾವಿರದಷ್ಟು ಜನಸಂಖ್ಯೆ ಇದ್ದು, ಇದರಲ್ಲಿ ಕೇವಲ ಏಳು ದಲಿತ ಕುಟುಂಬಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಕುಟುಂಬಗಳು ಇಸ್ಲಾಂ ಕುಟುಂಬಗಳಾಗಿವೆ.
ಗ್ರಾಮದ ಮುಸ್ಲಿಂ ವ್ಯಕ್ತಿಯೊಬ್ಬ ದಲಿತರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಗೂಂಡಾಗಿರಿ ನಡೆಸಿದ್ದಾನೆ.ಕಳೆದ ಸೋಮವಾರ ಇಸ್ಲಾಂ, ತೌಫಿಕ್ ,ಮೋಸಿಂ ,ಅತಾರು ಮತ್ತು ಆಸ್ಮಿನ ಎಂಬುವರು ದಲಿತ ಕುಟುಂಬದ ಸದಸ್ಯರಿಗೆ ಬೆತ್ತ ಮತ್ತು ಕಬ್ಬಿಣದ ರಾಡಿನಿಂದ ದಾಳಿ ಮಾಡಿದ್ದಾರೆ. ಮುಸ್ಲೀಮರು ನಡೆಸಿದ ಈ ದಾಳಿಯಲ್ಲಿ ದಲಿತ ಯುವಕನಾದ ಕಿಶನ್ ಗೆ ಗಂಭಿರ ಗಾಯಗಳಾಗಿದೆ.

ಈತನಿಗೆ ಸರ್ಕಾರದ ಒಂದು ಯೋಜನೆಯ ಅಡಿಯಲ್ಲಿ ಜಾಗ ಹಂಚಿಕೆಯಾಗಿತ್ತು. ಆದರೆ ಈ ಜಾಗದಲ್ಲಿ ಕಿಶನ್ ಕುಟುಂಬ ವಾಸಿಸಬೇಕಿದ್ದರೆ ಇಸ್ಲಾಂ ಧರ್ಮಕ್ಕೆ ಗೆ ಮತಾಂತರವಾಗಬೇಕು ಎಂದು ಕೆಲ ಮುಸ್ಲಿಂ ಪುಡಾರಿಗಳು ಬೆದರಿಕೆಯೊಡ್ಡಿದ್ದಾನೆ. ಆರೋಪಿ ಇಸ್ಲಾಂ ಬೇರೊಂದು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

ಹರಿಯಾಣದಲ್ಲಿ ನಡೆದ ದಲಿತರ ಮೇಲಿನ ಈ ಹಲ್ಲೆಯನ್ನು ಪೋಲೀಸರು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ.
ದಲಿತರ ಮೇಲಾಗಿರುವ ಹಲ್ಲೆ ಮತ್ತು ಬಲವಂತದ ಮತಾಂತರ ಪ್ರಕರಣವನ್ನು ಪೋಲೀಸರು ಸದ್ದಿಲ್ಲದೇ ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ…!

ಮಹರ್ಷಿ ವಾಲ್ಮೀಕಿ ಒಕ್ಕೂಟ ಈ ವಿಷಯವನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷ, ಪ್ರಧಾನಿ ಮತ್ತು ರಾಷ್ಟ್ರಪತಿಯವರ ಗಮನಕ್ಕೆ ತಂದಿದ್ದರೂ ಇಷ್ಟೆಲ್ಲಾ ಗಂಭೀರವಾದ ಘಟನೆ ತನ್ನ ಕ್ಷೇತ್ರದಲ್ಲಿ ನಡೆದರೂ ಅಸೆಂಬ್ಲಿಗೆ ಚುನಾಯಿತರಾದ ಶಾಸಕ ,ದಲಿತ ಮುಖಂಡ ಜಿಗ್ನೇಶ್ ಮೇವಾನಿಗೆ ಈ ವಿಷಯ ತಿಳಿಯದೇ ಇರುವುದು ಅಥವಾ ಅವರು ಮೌನವಾಗಿರುವುದು ಹಲವಾರು ಅನುಮಾನಗಳಿಗೆ ಮತ್ತು ಅಚ್ಚರಿಗೆ ಕಾರಣವಾಗಿದೆ…!

ಜಿಗ್ನೇಶ್ ಮೇವಾನಿ ಯಂತಹ ಮುಖವಾಡ ಧರಿಸಿದ ಕೆಲ ಹೋರಾಟಗಾರರು ಬುಡಕಟ್ಟು ಜನರ ಬಗ್ಗೆಯಾಗಲಿ ಅಥವಾ ದಲಿತರ ಮೇಲೆ ಅನುಕಂಪ ವಹಿಸುವವರಲ್ಲ,ಬದಲಾಗಿ ಇಂತವರ ಪರ ಹೋರಾಟದಲ್ಲಿ ಭಾಗವಹಿಸಿ ಮುಗ್ದ ಜನರನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಎನ್ನುವುದು ದುರಂತ…!!!

ನೂರಾರು ವರ್ಷದಿಂದ ನಡೆಯುತ್ತಿರುವ ಭೀಮಾ ಕೋರೆಗಾಂವ್ ಉತ್ಸವ ಪ್ರತಿ ವರ್ಷ ಶಾಂತಿಯುತವಾಗಿ ನಡೆಯುತ್ತದೆ.
ಆದರೆ ಈ ಬಾರಿ ಮಾತ್ರ ಜಿಗ್ನೇಶ್ ಮೇವಾನಿ ಮತ್ತು ಉಮರ್ ಖಲೀದ್ ರಂತವರ ಉದ್ರೇಕಕಾರಿ ಭಾಷಣಗಳು ಜನರಲ್ಲಿ ಪ್ರಚೋದನೆ ನೀಡಿ ಮಹಾರಾಷ್ಟ್ರದಲ್ಲಿ ಬೆಂಕಿ ಹಚ್ಚುವಂತೆ ಮಾಡಿದ್ದಾರೆ.
ದಲಿತ ಪರ ಹೋರಾಟಗಾರ ಎಂದು ಬೀದಿಗಿಳಿದ ಜಿಗ್ನೇಶ್ ಮೇವಾನಿ ಇದೀಗ ದಲಿತರ ಮೇಲೆ ನಡೆದ ಈ ಹಲ್ಲೆಯ ವಿಚಾರವಾಗಿ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ…!!!

source: http://spoorti.net

-ಅರ್ಜುನ್

Tags

Related Articles

Close