ಮುಸ್ಲಿಮರ ಹಬ್ಬ ಬಕ್ರಿದ್ ಹತ್ತಿರವಾಗುತ್ತಿದ್ದು, ಈ ವೇಳೆ ಸಾವಿರಾರು ಪ್ರಾಣಿಗಳನ್ನು ಬಲಿ ಕೊಡಲಾಗುತ್ತದೆ. ಅಕ್ರಮವಾಗಿ ಹಸು, ಕುರಿ, ಎಮ್ಮೆಗಳನ್ನು ಸಾಗಾಟ ನಡೆಸಿ, ತ್ಯಾಗ, ಬಲಿದಾನದ ಹೆಸರಲ್ಲಿ ಅವುಗಳನ್ನು ಬಲಿ ಪಡೆಯಲಾಗುತ್ತದೆ. ಹೀಗೆ ಬಕ್ರಿದ್ ಹಬ್ಬದಂದು ರಕ್ತದ ಕೋಡಿಯೇ ಹರಿಯುತ್ತದೆ. ಅದೇ ರೀತಿ ಸೆಪ್ಟೆಂಬರ್ 2ರಂದು ನಡೆಯುವ ಬಕ್ರಿದ್ ಹಬ್ಬಕ್ಕೆ 10 ವಿಶೇಷ ಒಂಟೆಗಳನ್ನು ರಾಜಸ್ತಾನದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಸಾಗಿಸಲಾಗಿದೆಯೆಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.ಪ್ರಾಣಿಗಳನ್ನು ಬಲಿ ಕೊಡುವುದು ಕಾನೂನು ಬಾಹಿರ. ಇದರನ್ವಯ ಹಿಂದೂಗಳು ಆಚರಿಸುತ್ತಿದ್ದ ಕುರಿಬಲಿ, ಕೋಳಿಬಲಿಯನ್ನು ತಡೆಯಲಾಗಿದೆ. ಪ್ರಾಣಿಬಲಿ ನಡೆದರೆ ಪ್ರಾಣಿ ದಯಾ ಸಂಘ ಹೋರಾಟ ನಡೆಸುತ್ತದೆ. ಆದರೆ ಇದೆಲ್ಲಾ ಅನ್ವಯಿಸುವುದು ಕೇವಲ ಹಿಂದೂಗಳಿಗೆ ಮಾತ್ರ. ಆದರೆ ಮುಸ್ಲಿಮರು ಮಾತ್ರ ದೇವರ ಹೆಸರಲ್ಲಿ ಒಂಟೆ, ಹಸು, ಕುರಿ, ಎಮ್ಮೆ, ಆಡುಗಳನ್ನು ಬಲಿ ಕೊಡುತ್ತಿದ್ದು, ಈ ಕಾನೂನು ಮುಸ್ಲಿಮರಿಗೆ ಅನ್ವಯಿಸುವುದಿಲ್ಲ ಎನ್ನುವುದೇ ವಿಪರ್ಯಾಸ.
ಮರುಭೂಮಿಯ ಹಡಗು ಎಂದೇ ಕರೆಯಲಾಗುವ ಒಂಟೆಗಳನ್ನು ಬಲಿ ಕೊಟ್ಟರೆ ಆ ದೇವನಿಗೆ ಪ್ರಿಯವಾಗುವುದರಿಂದ ಈ ಬಾರಿ ಕರ್ನಾಟಕದ ಬೆಂಗಳೂರಿನಲ್ಲಿ ರಾಜಸ್ತಾನದಿಂದ ಹತ್ತು ಒಂಟೆಗಳನ್ನು ಅಕ್ರಮವಾಗಿ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ. ಶಿವಾಜಿ ನಗರದಲ್ಲಿ ಇದನ್ನು ಬಲಿಕೊಡಲು ತರಲಾಗಿದೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.ಒಂಟೆಗಳನ್ನು ಅಕ್ರಮವಾಗಿ ಸಾಗಿಸಿರುವುದರ ಬಗ್ಗೆ ಪ್ರಾಣಿ ದಯಾ ಸಂಘದವರು ಪೊಲೀಸರಿಗೆ ದೂರು ನೀಡಿದರೂ ಸಹ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಹಿಂದೆ ಯಾರಿದ್ದಾರೆ, ಯಾವ ಉದ್ದೇಶಕ್ಕೆ ತರಲಾಗಿದೆ ಎಂಬುವುದನ್ನು ಪೊಲೀಸರು ತನಿಖೆ ನಡೆಸಲಿಲ್ಲ. 10 ಒಂಟೆಗಳ ಪೈಕಿ 2 ಒಂಟೆಗಳನ್ನು ಪೊಲೀಸ್ ಕ್ವಾರ್ಟರ್ಸ್ ಆವರಣದಲ್ಲಿ ಇರಿಸಲಾಗಿದೆ. ಉಳಿದ ಒಂಟೆಗಳೇನಾದವು? ಊಹೂಂ ಯಾವುದೇ ಸುದ್ದಿ ಇಲ್ಲ…!
ಶಿವಾಜಿನಗರದ ಮುಸ್ಲಿಂ ವ್ಯಕ್ತಿ ಈ ಬಗ್ಗೆ ಹೇಳುವುದಿಷ್ಟು:
ಪ್ರತೀವರ್ಷವೂ ಇದೇ ರೀತಿ ಒಂಟೆಗಳನ್ನು ಹೈದರಾಬಾದ್ ಮತ್ತು ಇತರ ಸ್ಥಳಗಳಿಂದ ಕರೆತರಲಾಗುತ್ತದೆ. ಅವುಗಳನ್ನು ಬಕ್ರಿದ್ ಹಬ್ಬದಂದು ಬಲಿ ಕೊಡಲಾಗುತ್ತದೆ ಎಂದು ಹೇಳಿದ್ದಾನೆ. ಪ್ರತೀ ವರ್ಷವೂ ಈ ರೀತಿ ಒಂಟೆಗಳನ್ನು ಕರೆತರುವುದು ಪೊಲೀಸರಿಗೆ ಗೊತ್ತಿದ್ದರೂ ಪೊಲೀಸರು ಮತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದಾಗ ಪೊಲೀಸ್ ಇಲಾಖೆಯ ಮೇಲೆ ಅನುಮಾನದ ಹುತ್ತ ಬೆಳೆಯುತ್ತದೆ.
ಕರ್ನಾಟಕದಲ್ಲಿ ಒಂಟೆಗಳಿಗೆ ನಿಷೇಧವಿದೆ…
ಇಲ್ಲೊಂದು ಆಸಕ್ತಿದಾಯಕ ವಿಷಯವಿದೆ. ಅದೇನು ಗೊತ್ತಾ? ಕರ್ನಾಟಕದಲ್ಲಿ ಒಂಟೆಗಳಿಗೆ ನಿಷೇಧ ಹೇರಲಾಗಿದೆ. ಯಾಕೆ ಗೊತ್ತೇ? ಒಂಟೆಗಳು ಮುಖ್ಯವಾಗಿ ಮರುಭೂಮಿಯಲ್ಲಿ ವಾಸವಾಗುವ ಪ್ರಾಣಿಗಳು. ಒಂಟೆಗಳು ಬದುಕಲು ನಿರ್ದಿಷ್ಟವಾದ ಹವಾಮಾನ ಇರಬೇಕು. ಆದರೆ ಕರ್ನಾಟಕದಲ್ಲಿ ಒಂಟೆಗಳಿಗೆ ಬದುಕಲು ನಿರ್ದಿಷ್ಟವಾದ ಹವಾಮಾನ ಸ್ಥಿತಿ ಇಲ್ಲ. ಹೀಗಾಗಿ ಹೈಕೋರ್ಟ್ 2006ರಿಂದ ಕರ್ನಾಟಕದಲ್ಲಿ ಒಂಟೆಗಳನ್ನು ಸಾಕುವುದು, ಸಾಗಿಸುವುದಕ್ಕೆ ನಿಷೇಧ ಹೇರಿದೆ. ಆದರೆ ಈ ನಿಷೇಧ ಮುಸ್ಲಿಮರ ಬಕ್ರಿದ್ ಹಬ್ಬಕ್ಕೆ ಅನ್ವಯವಾಗುವುದಿಲ್ಲ…! ಬಕ್ರಿದ್ ಹಬ್ಬದಂದು ಅವುಗಳನ್ನು ಬಲಿಕೊಟ್ಟು ಆ ಬಳಿಕ ಒಂಟೆ ಚಿಲ್ಲಿ, ಒಂಟೆ ಕೂರ್ಮ, ಒಂಟೆ ಫ್ರೈ, ಒಂಟೆ ಬಿರ್ಯಾನಿ ಪ್ಲೇಟ್ ಮೇಲಿರುತ್ತದೆ.
ಬಕ್ರಿದ್ ಹಬ್ಬವನ್ನು ತ್ಯಾಗ ಬಲಿದಾನದ ಹಬ್ಬ ಎಂದು ಮುಸ್ಲಿಮರು ಕರೆಯುತ್ತಾರೆ. ಆದರೆ ಪ್ರಾಣಿಗಳನ್ನು ಬಲಿಕೊಟ್ಟು ಅವುಗಳನ್ನು ಚಿಲ್ಲಿ, ಫ್ರೈ ಮಾಡಿಕೊಂಡು ಚಪ್ಪರಿಸಿಕೊಂಡು ತಿನ್ನುವುದಕ್ಕೆ ತ್ಯಾಗ, ಬಲಿದಾನ ಎಂಬ ಹೆಸರು ನೀಡಲಾಗಿದೆ. ಬಾಯಿ ಚಪಲಕ್ಕೆಂದು ಮಾಡಿದ ಈ ಹಬ್ಬವನ್ನು ಅದ್ಯಾವ ಅರ್ಥದಲ್ಲಿ ತ್ಯಾಗ ಬಲಿದಾನಗಳ ಹಬ್ಬ ಎಂದು ಕರೆಯಲಾಗುತ್ತದೋ ನಾ ಕಾಣೆ.
ಇಲ್ಲಿ ನಾನೊಂದು ಕಥೆ ಹೇಳುತ್ತೇನೆ. ಬಕ್ತಿದ್ ಅನ್ನು ತ್ಯಾಗ ಬಲಿದಾನದ ಹಬ್ಬವೋ ಅಲ್ಲವೋ ಎಂದು ನೀವೇ ನಿಶ್ಚಯಿಸಿ!
ಇಬ್ರಾಹಿಂ ನೆಬಿ ಎಂಬಾತ ಅಲ್ಲಾಹನ ಭಕ್ತ. ಇವರು ಮೂಢನಂಬಿಕೆಯ ವಿರುದ್ಧ ಚಳುವಳಿ ಮಾಡಿ, ಏಕತೆ ಮೂಡಿಸಿದರು ಎಂದು ಮುಸ್ಲಿಮರು ಅಚಲವಾಗಿ ನಂಬುತ್ತಾರೆ. ಇಂಥಾ ವ್ಯಕ್ತಿ ಕ್ರೂರ ಪ್ರಾಣಿ ಬಲಿ ನೀಡುವ ಹಬ್ಬಕ್ಕೆ ಸಾಕ್ಷಿಯಾದ.
ಇಬ್ರಾಹಿಂ ನೆಬಿಗೆ ಮಕ್ಕಳಿರಲಿಲ್ಲ. ಅದಕ್ಕಾಗಿ ಅವರು ಅಲ್ಲಾಹನನ್ನು ಪ್ರಾರ್ಥಿಸಿದಾಗ ಇಸ್ಮಾಯಿಲ್ ಎಂಬ ಪುತ್ರ ಜನಿಸಿದ. ಈತನಿಗೆ ನಿನ್ನ ಪ್ರೀತಿಯ ಪುತ್ರನನ್ನು ಬಲಿಯರ್ಪಿಸು ಎಂಬ ದೇವಾಜ್ಞೆಯಾಗುತ್ತದೆ. ಆರಂಭದಲ್ಲಿ ಇಬ್ರಾಹಿಂ ನೆಬಿ ಇದು ಕನಸಿರಬಹುದೆಂದು ಭಾವಿಸುತ್ತಾರೆ. ಆದರೆ ಇದೇ ರೀತಿಯ ಕನಸು ಮತ್ತೆ ಮತ್ತೆ ಬೀಳುತ್ತದೆ. ಈ ಮಾತನ್ನು ಅವರು ತನ್ನ ಪತ್ನಿಯಲ್ಲಿ ತಿಳಿಸಿದಾಗ ಆಕೆ ದಿಗ್ಭ್ರಮೆಗೊಂಡಳು. ಇದು ಅಲ್ಲಾಹನ ಆಜ್ಞೆ ಎಂದು ತಿಳಿದು ಮಗ ಇಸ್ಮಾಯಿಲ್ನಲ್ಲಿ ಈ
ವಿಷಯವನ್ನು ಪ್ರಸ್ತಾಪಿಸುತ್ತಾರೆ. ಆಗ ಇಸ್ಮಾಯಿಲ್ ಇದಕ್ಕೆ ಸಮ್ಮತಿಸಿ ಷರತ್ತೊಂದನ್ನು ವಿಧಿಸುತ್ತಾನೆ. ಅಪ್ಪಾ ನೀವು ನನ್ನನ್ನು ಬಲಿ ನೀಡುವಾಗ ನನ್ನ ಬಟ್ಟೆಗೆ ರಕ್ತವಾಗದಂತೆ ಜಾಗ್ರತೆವಹಿಸಿರಿ. ಯಾಕೆಂದರೆ ಆ ಬಟ್ಟೆಯನ್ನು ನೋಡಿ ತನ್ನ ತಾಯಿ ಸಂಕಟಪಡುವರು, ನನ್ನ ಮುಖವನ್ನು ನಿಮಗೆ ಕಾಣದಂತೆ ಭೂಮಿಯ ಕೆಳಭಾಗಕ್ಕೆ ಸರಿಸಿ ಮಲಗಿಸಿ. ಯಾಕೆಂದರೆ ನನ್ನ ಮೇಲಿನ ಮಮತೆಯಿಂದ ನನ್ನ ಮುಖ ಕಂಡು ನಿಮಗೆ ನನ್ನನ್ನು ಬಲಿ ಪಡೆಯಲು ಕಷ್ಟವಾಗಬಹುದು ಎಂದು ಹೇಳುತ್ತಾನೆ. ಇಬ್ರಾಹಿಂ ಹರಿತವಾದ ಕತ್ತಿಯಿಂದ ಇಸ್ಮಾಯಿಲ್ನ ಕೊರಳನ್ನು ಕೊಯ್ಯಲಾರಂಭಿಸಿದರು. ಆದರೆ ಕೊಯ್ಯಲಾಗುವುದಿಲ್ಲ. ಕೊನೆಗೆ ಇಬ್ರಾಹಿಂ ನೆಬಿ ತನ್ನೆಲ್ಲಾ ಶಕ್ತಿಯನ್ನು ಪ್ರಯೋಗಿಸಿ ಚೂರಿಯಿಂದ ಸಮೀಪದ ಕಲ್ಲಿನ ಮೇಲೆ ಒಡೆಯುತ್ತಾರೆ. ಕಲ್ಲು ಎರಡು ತುಂಡಾಗುತ್ತದಂತೆ!
ಈ ವೇಳೆ ಅಲ್ಲಿ ಆಡೊಂದು ಪ್ರತ್ಯಕ್ಷ್ಯವಾಗುತ್ತದಂತೆ! ಅಲ್ಲಿ ಅಲ್ಲಾಹನ ದೇವದೂತರು ಪ್ರತ್ಯಕ್ಷರಾಗಿ, ನೀನು ಅಲ್ಲಾಹನ ಪರೀಕ್ಷೆಯಲ್ಲಿ ಉತ್ತೀರ್ಣನಾದೆ ಆದ್ದರಿಂದ ನಿನ್ನ ಮಗನ ಬದಲು ಈ ಆಡನ್ನು ಬಲಿಕೊಡು ಎಂದು ಆಜ್ಞೆಯಾಗುತ್ತದಂತೆ. ಈ ಆಜ್ಞೆಯಂತೆ ಇಬ್ರಾಹಿಂ ಮತ್ತೆ ಚೂರಿಯನ್ನೆತ್ತಿ ಆಡನ್ನು ಕೊಯ್ಯುತ್ತಾರೆ. ಈ ಘಟನೆಯ ಸಂಕೇತವಾಗಿ ಇಂದೂ ಕೂಡಾ ಪ್ರಾಣಿ ಬಲಿ ನೀಡಲಾಗುತ್ತದೆ.
ಇಂಥದೊಂದು ಘಟನೆಯ ಸಂಕೇತವಾಗಿ ಇಂದು ಮುಸ್ಲಿಮರು ಕದ್ದು ತಂದ ಹಸು, ಆಡುಗಳನ್ನು ಬಲಿ ಕೊಡುತ್ತಿದ್ದಾರೆ. ಮೇಲೆ ತಿಳಿಸಿದ ಒಂಟೆಗಳ ಸಾಗಾಟವನ್ನೂ ಮುಸ್ಲಿಮರ ಪವಿತ್ರ ತ್ಯಾಗ, ಬಲಿದಾನದ ಹಬ್ಬ ಆಚರಿಸಲು ಅಕ್ರಮವಾಗಿ ಸಾಗಾಟ ಮಾಡಲಾಗಿದೆ. ಈ ರೀತಿ ಕದ್ದು ತಂದು ಬಕ್ರಿದ್ ಆಚರಿಸಿದರೆ ಅದನ್ನು ದೇವ ಇಷ್ಟಪಡುತ್ತಾನೋ? ತನ್ನ ನಾಲಿಗೆ ಚಪಲಕ್ಕಾಗಿ ಬಕ್ರಿದ್ ಹೆಸರಲ್ಲಿ ಸಾವಿರಾರು ಮೂಖ ಪ್ರಾಣಿಗಳನ್ನು ಕೊಂದು, ಅದಕ್ಕೆ ತ್ಯಾಗ, ಬಲಿದಾನದ ಸರ್ಟಿಫಿಕೆಟ್ ನೀಡುವುದು
ನಿಜವಾಗಿಯೂ ನಾಚಿಕೆಯ ವಿಷಯವಲ್ಲವೇ?
-ಚೇಕಿತಾನ