ಪ್ರಚಲಿತ

ಕಳಚಿ ಬಿತ್ತು ಕಾಂಗ್ರೆಸ್ ಸಚಿವನ ಕರಾಳ ಮುಖ.. ಮುಖವಾಡ ಬಯಲು ಮಾಡಿದ ಮೃತ ಇಲಿಯಾಸ್ ಪತ್ನಿ…

“ನನಗೂ ನಟೋರಿಯಸ್ ರೌಡಿ ಇಲಿಯಾಸ್‍ಗೂ ಯಾವುದೇ ಸಂಬಂಧವಿಲ್ಲ. ಅವನೊಬ್ಬ ಹಂತಕ. ನಾನು ಅವನೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ. ಅವನು ನನ್ನ ಜೊತೆ ಫೋಟೋ ತೆಗೆಸಿಕೊಂಡಿರಬಹುದು. ಆದರೆ ನನಗೆ ಆತ ಯಾರೆಂದೇ ತಿಳಿದಿಲ್ಲ. ಆತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೂ ಅಲ್ಲ”…

ಇದು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಆಹಾರ ಸಚಿವ, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ವಿಧಾನ ಸಭಾ ಕ್ಷೇತ್ರದ ಶಾಸಕ ಯುಟಿ ಖಾದರ್ ಅವರ ಹೇಳಿಕೆ. ಕಳೆದೊಂದು ವಾರದ ಹಿಂದೆ ಹತ್ಯೆಯಾಗಿದ್ದ ನಟೋರಿಯಸ್ ರೌಡಿ ಇಲಿಯಾಸ್ ಹಾಗೂ ಕಾಂಗ್ರೆಸ್ ಸಚಿವ ಯುಟಿ ಖಾದರ್ ಅವರ ಬಗೆಗಿನ ವಿಷಯಗಳಲ್ಲಿ ಯುಟಿ ಖಾದರ್ ಅವರ ಹೇಳಿಕೆಗಳು.

ದೀಪಕ್ ರಾವ್ ಹತ್ಯೆಯ ಬೆನ್ನಲ್ಲೇ ಇತ್ತು ಗುಸು ಗುಸು..?

ಹೌದು. ಮಂಗಳೂರಿನ ಸುರತ್ಕಲ್ ಕಾಟಿಪಳ್ಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಎಂಬಾತನನ್ನು ಮತಾಂಧ ದುಷ್ಕರ್ಮಿಗಳು ಹಾಡ ಹಗಲೇ ಬರ್ಬರವಾಗಿ ಹತ್ಯೆ ಮಾಡಿದ್ದರು. ಆದರೆ ಈ ಹತ್ಯೆ ಮಾಡಿದ ಕೆಲವೇ ಕ್ಷಣಗಳಲ್ಲಿ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ಸಫಲರಾಗಿದ್ದರು. ಬಂಧಿತ ಆರೋಪಿಗಳೆಲ್ಲರೂ ನಟೋರಿಯಸ್ ಗ್ಯಾಂಗ್ ಟಾರ್ಗೆಟ್ ಗ್ರೂಪ್‍ನ ಸದಸ್ಯರಾಗಿದ್ದವರು. ಯಾವಾಗ ಈ ಹಂತಕರ ಬಂಧನವಾಗುತ್ತೋ ಅಂದೇ ಸ್ಪೋಟಕ ಮಾಹಿತಿಯೊಂದು ಮಾಧ್ಯಮ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ದೀಪಕ್ ರಾವ್‍ನ ಹತ್ಯೆ ಮಾಡಿದ ನಟೋರಿಯಸ್ ರೌಡಿ ಇಲಿಯಾಸ್, ಖಾದರ್ ಆಪ್ತ ಎಂಬ ಸುದ್ಧಿ ಕಾಡ್ಗಿಚ್ಚಿನಂತೆ ಎಲ್ಲೆಡೆಯೂ ಹಬ್ಬಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಹಾರ ಸಚಿವ ಯುಟಿ ಖಾದರ್ ಮಾತ್ರ “ನನಗೂ ನಟೋರಿಯಸ್ ರೌಡಿ ಇಲಿಯಾಸ್‍ಗೂ ಯಾವುದೇ ಸಂಬಂಧವಿಲ್ಲ. ಅವನೊಬ್ಬ ಹಂತಕ. ನಾನು ಅವನೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ. ಅವನು ನನ್ನ ಜೊತೆ ಫೋಟೋ ತೆಗೆಸಿಕೊಂಡಿರಬಹುದು. ಆದರೆ ನನಗೆ ಆತ ಯಾರೆಂದೇ ತಿಳಿದಿಲ್ಲ. ಆತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೂ ಅಲ್ಲ” ಎಂದಿದ್ದರು.

ಕಾಂಗ್ರೆಸ್ ಕಾರ್ಯಕರ್ತನೆಂಬುವುದು ಖಾತ್ರಿ…!!!

ಹೆಚ್ಚೇನು ಸಮಯ ಬೇಕಾಗಿರಲಿಲ್ಲ. ಅದಾಗಲೇ ಯುಟಿ ಖಾದರ್ ಹಾಗೂ ಇಲಿಯಾಸ್‍ಗೂ ಇರುವ ಸಂಬಂಧವನ್ನು ಮಾಧ್ಯಮಗಳು ಪತ್ತೆ ಹಚ್ಚಿದ್ದರು. ಮಾತ್ರವಲ್ಲದೆ ಈ ನಟೋರಿಯಸ್ ರೌಡಿ ಈ ಹಿಂದೆ ಕಾಂಗ್ರೆಸ್ ಪಕ್ಷದ ಯುವ ಕಾಂಗ್ರೆಸ್‍ಗೆ ಸ್ಪರ್ಧಿಸಿ ಸೋತಿದ್ದ. 2ನೇ ಸ್ಥಾನಕ್ಕೆ ಕುಸಿದ ಈತ ಯುವ ಕಾಂಗ್ರೆಸ್‍ನ ಉಪಾಧ್ಯಕ್ಷನಾಗಿದ್ದ ಎನ್ನುವ ಸತ್ಯ ಸಂಗತಿ ಹೊರಬೀಳುತ್ತೆ. ಮಾತ್ರವಲ್ಲದೆ ಯುಟಿ ಖಾದರ್ ಜೊತೆಗಿರುವ ಸಂಬಂಧವೂ ಬಯಲಾಗುತ್ತೆ.

ಕೆಲವೇ ದಿನಗಳಲ್ಲಿ ಇಲಿಯಾಸ್ ಮರ್ಡರ್…

ದೀಪಕ್ ರಾವ್ ಹತ್ಯೆ ನಡೆದು ಕೇವಲ 10 ದಿನಗಳಲ್ಲಿ ಇಲಿಯಾಸ್ ಬರ್ಬರವಾಗಿ ಹತ್ಯೆಗೀಡಾಗಿದ್ದ. ಹಿಂದಿನ ದಿನ ತಾನೇ ಜೈಲಿನಿಂದ ಬಿಡುಗಡೆಯಾಗಿದ್ದ ಇಲಿಯಾಸ್ ಬೆಳಗ್ಗೆ ನಿದ್ದೆಯಿಂದ ಏಳುತ್ತಿರುವಾಗಲೇ ಬರ್ಬರವಾಗಿ ಹತ್ಯೆಗೊಳಗಾಗಿದ್ದ. ತನ್ನ ಹೆಂಡತಿ ಹಾಗೂ ಮಗುವಿನ ಮುಂದೆಯೇ ದುಷ್ಕರ್ಮಿಗಳು ಆತನನ್ನು ಕೊಚ್ಚಿ ಕೊಲೆ ಮಾಡಿದ್ದರು.

ಯುಟಿ ಖಾದರ್‍ಗೆ ಮತ್ತೆ ಈ ಘಟನೆ ತಲೆನೋವಾಗಿ ಪರಿಣಮಿಸಿತ್ತು. ಇಲಿಯಾಸ್ ಹಾಗೂ ಸಚಿವ ಯುಟಿ ಖಾದರ್ ಜೊತೆಗಿರುವ ಫೋಟೋಗಳು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿತ್ತು. ಖಾದರ್‍ಗೆ ಮಾಧ್ಯಮಗಳು ಮೇಲಿಂದ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಗೈದಿದ್ದರು. ಸಚಿವ ಯುಟಿ ಖಾದರ್ ಬೆಚ್ಚಿ ಬಿದ್ದಿದ್ದರು. ಇಷ್ಟೆಲ್ಲಾ ಆರೋಪಗಳು ಸಾಭೀತಾದರೂ ಯುಟಿ ಖಾದರ್ ಅವರದ್ದು ಒಂದೇ ಉತ್ತರವಾಗಿತ್ತು. “ನನಗೂ ನಟೋರಿಯಸ್ ರೌಡಿ ಇಲಿಯಾಸ್‍ಗೂ ಯಾವುದೇ ಸಂಬಂಧವಿಲ್ಲ. ಅವನೊಬ್ಬ ಹಂತಕ. ನಾನು ಅವನೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ. ಅವನು ನನ್ನ ಜೊತೆ ಫೋಟೋ ತೆಗೆಸಿಕೊಂಡಿರಬಹುದು. ಆದರೆ ನನಗೆ ಆತ ಯಾರೆಂದೇ ತಿಳಿದಿಲ್ಲ. ಆತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೂ ಅಲ್ಲ”. ಮತ್ತದೇ ರಾಗಾ ಅದೇ ಹಾಡು…

ಇಲಿಯಾಸ್ ಪತ್ನಿ ಬಿಚ್ಚಿಟ್ಟಳು ಸ್ಪೋಟಕ ಸುದ್ಧಿ-ಖಾದರ್‍ಗೆ ಕಲಿಸಿದ್ದಳು ಸರಿಯಾದ ಬುದ್ಧಿ..!!!

ಅವನ್ಯಾರು ಗೊತ್ತೇ ಇಲ್ಲ ಎನ್ನುತ್ತಿದ್ದ ಯುಟಿ ಖಾದರ್‍ಗೆ ಇಲಿಯಾಸ್ ಪತ್ನಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾಳೆ. “ಚುನಾವಣೆಯ ಸಂದರ್ಭ ಮನೆ ಮುಂದೆ ಬಂದು ಕಾಯುತ್ತಿದ್ದ ರಾಜ್ಯದ ಆಹಾರ ಸಚಿವ ಯುಟಿ ಖಾದರ್ ಅವರು ನನ್ನ ಗಂಡ ಇಲಿಯಾಸ್ ಹತ್ಯೆಯಾದ ಬಳಿಕ ಇತ್ತ ತಲೆಯೆತ್ತಿಯೂ ನೋಡಿಲ್ಲ. ಚುನಾವಣೆ ವೇಳೆ ತಮ್ಮ ಲಾಭಕ್ಕಾಗಿ ಅವರೆಲ್ಲಾ ಬರುತ್ತಿದ್ದರು. ಆದರೆ ಮನಷ್ಯ ಸತ್ತ ಮೇಲೆ ಬೆಲೆಯೇ ಇಲ್ಲ ಎನ್ನುವುದು ಈಗ ನನಗೆ ಸಂಪೂರ್ಣ ಅರ್ಥವಾಗಿದೆ” ಇದು ಕಾಂಗ್ರೆಸ್ ಸಚಿವ ಯುಟಿ ಖಾದರ್ ವಿರುದ್ಧ ಇಲಿಯಾಸ್ ಪತ್ನಿ ಹರಿಹಾಯ್ದ ಪರಿ. ರಾಜ್ಯದ ಪ್ರಮುಖ ಪತ್ರಿಕೆಯೊಂದಿಗೆ ಮಾತನಾಡಿದ ಇಲಿಯಾಸ್ ಪತ್ನಿ ಫರ್ಝಾನಾ ದುಷ್ಕರ್ಮಿಗಳ ದಾಳಿಯಿಂದ ಹತ್ಯೆಗೀಡಾದ ತನ್ನ ಗಂಡನನ್ನು ಕಳೆದುಕೊಂಡ ತಾನೂ ಹಾಗೂ ತನ್ನ ಮಗುವಿನ ತಬ್ಬಲಿತನವನ್ನು ವಿವರಿಸಿದ್ದಾರೆ.

“ನನ್ನ ಗಂಡ ಬದುಕಿದ್ದಾಗ ಅವರನ್ನು ಭೇಟಿಯಾಗಲು ಅನೇಕ ಮಂದಿ ಕಾಂಗ್ರೆಸ್ ಮುಖಂಡರು ನಮ್ಮ ಮನೆಯ ಬಾಗಿಲಿಗೆ ಬರುತ್ತಿದ್ದರು. ಆದರೆ ಹತ್ಯೆಯಾದ ಬಳಿಕ ಬಂದು ಸಾಂತ್ವನ ಹೇಳುವುದಕ್ಕೂ ಬಂದಿಲ್ಲ. ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸುವುದಕ್ಕೆ ಯಾರೂ ಇಲ್ಲ. ಬದಲಿಗೆ ಅಮಾಯಕನಾಗಿದ್ದ ನನ್ನ ಗಂಡನಿಗೆ ಇಲ್ಲದ ಅಪರಾಧಿ ಪಟ್ಟ ಕಟ್ಟುತ್ತಿದ್ದಾರೆ. ಸಚಿವ ಯುಟಿ ಖಾದರ್ ಸಾಂತ್ವನದ ಮಾತುಗಳಿಂದ ನನಗೇನೂ ಸಿಗೋದಿಲ್ಲ ಅನ್ನೋದು ನನಗೆ ಗೊತ್ತಿದೆ. ಆದರೆ ಯಾವತ್ತೂ ನನ್ನ ಗಂಡ ಇಲಿಯಾಸ್‍ನೊಂದಿಗೆ ಇರುತ್ತಿದ್ದ ಈ ಸಚಿವರು ಈಗ ಇಲಿಯಾಸ್ ಎಂದರೆ ಯಾರು ಎಂದೇ ಗೊತ್ತಿಲ್ಲ ಎಂಬಂತೆ ವರ್ತಿಸುತ್ತಾರೆ. ಇದನ್ನೆಲ್ಲಾ ನೋಡುವಾಗ ಆಶ್ಚರ್ಯವಾಗುತ್ತದೆ. ನನ್ನ ಗಂಡನನ್ನು ಹತ್ಯೆ ಮಾಡಿದ್ದಾರೆ. ಈ ಹತ್ಯೆಗೆ ನನಗೆ ನ್ಯಾಯ ಬೇಕಾಗಿದೆ. ಇಲ್ಲವಾದರೆ ನಾನು ನನ್ನ ಮಗುವುನೊಂದಿಗೆ ಆತ್ಮ ಹತ್ಯೆ ಮಾಡಿಕೊಳ್ಳುತ್ತೇನೆ. ಇದಕ್ಕೆ ಕಾಂಗ್ರೆಸ್ ನಾಯಕರೇ ನೇರ ಹೊಣೆಯಾಗಿರುತ್ತಾರೆ” ಎಂದು ಹತ್ಯೆಗೀಡಾದ ಇಲಿಯಾಸ್ ಪತ್ನಿ ಫರ್ಝಾನ ಹೇಳಿಕೆ ನೀಡಿದ್ದರು.

ಒಟ್ಟಾರೆ ಸದಾ ತನಗೂ ಹತ್ಯೆಗೀಡಾದ ನಟೋರಿಯಸ್ ರೌಡಿ ಇಲಿಯಾಸ್‍ಗೂ ಯಾವುದೇ ಸಂಬಂಧವಿಲ್ಲ ಎಂದೇ ಹೇಳಿಕೊಂಡು ತಿರುಗಾಡುತ್ತಿದ್ದ ರಾಜ್ಯ ಆಹಾರ ಸಚಿವ ಯುಟಿ ಖಾದರ್ ಸಹಿತ ಕಾಂಗ್ರೆಸ್ ಮುಖಂಡರ ನಿಜಮುಖ ಬಯಲಾಗಿದೆ. ಹತ್ಯೆಗೀಡಾದ ಇಲಿಯಾಸ್ ಪತ್ನಿಯೇ ಈ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದು ಚುನಾವಣೆ ಸಮೀಪಿಸುತ್ತಿದ್ದಂತೆಯೇ ಯುಟಿ ಖಾದರ್ ಸಹಿತ ಕಾಂಗ್ರೆಸ್ ನಾಯಕರು ಬೆಚ್ಚಿ ಬಿದ್ದಿದ್ದಾರೆ.

-ಹರೀಶ್

Tags

Related Articles

Close