ಪ್ರಚಲಿತ

ಖ್ಯಾತ ಪತ್ರಕರ್ತ ರವಿ ಬೆಳಗೆರೆಗೆ ಜೈಲೇ ಗತಿ?!

ಇಷ್ಟು ದಿನವೂ ಖ್ಯಾತ ಹಾಯ್ ಬೆಂಗಳೂರಿನ ಪತ್ರಕರ್ತನಾಗಿದ್ದ ರವಿ ಬೆಳಗೆರೆಗೆ.....

ಒಂದನೇ ಎಸಿಎಮ್ ಎಮ್ ನ್ಯಾಯಾಲಯಕ್ಕೆ ಹಾಜರಾದ ರವಿ ಬೆಳಗೆರೆಯವರನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ಜಗದೀಶ್ ರವರು ಅಂತೂ ತೀರ್ಪನ್ನಿತ್ತಿದ್ದಾರೆ!

ಇಷ್ಟು ದಿನವೂ ಖ್ಯಾತ ಹಾಯ್ ಬೆಂಗಳೂರಿನ ಸಂಪಾದಕನಾಗಿದ್ದ ರವಿ ಬೆಳಗೆರೆಗೆ ಜೈಲೇ ಗತಿ ಎನ್ನುವಂತಾಗಿದೆ! ಗೌರೀ ಲಂಕೇಶ್ ರವರ ಹತ್ಯೆಯ ಜಾಡು ಹಿಡಿದ ಪೋಲಿಸರಿಗೆ ಯಾವಾಗ, ಭೀಮಾತೀರದ ಹಂತಕರಿಂದ ‘ರವಿ ಬೆಳಗೆರೆಯೂ ಸಹ ಸಹಪತ್ರಕರ್ತನಾದ ಸುನಿಲ್ ಹೆ‌ಗ್ಗರವಳ್ಳಿಯ ಹತ್ಯೆಗೆ ಸುಪಾರಿ ನೀಡಿದ್ದಾರೆ’ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಸಿಬಿ ಪೋಲಿಸರು, ತಕ್ಷಣವೇ ರವು ಬೆಳಗೆರೆಯನ್ನು ಬಂಧಿಸಿದ್ದರು.

ತೀವ್ರ ವಿಚಾರಣೆಗೊಳಪಡಿಸಿದ ಪೋಲಿಸರಿಗೆ ಒಂದೊಂದು ಬಾರಿಯೂ ವಿಧ ವಿಧ ಹೇಳಿಕೆ ನೀಡುತ್ತಿದ್ದ ರವಿ ಬೆಳಗೆರೆ, ಸರಿಯಾಗಿ ಸ್ಪಂದಿಸಲೂ ಇರಲಿಲ್ಲವೆಂಬುದು ತಿಳಿಯುತ್ತಿದ್ದಂತೆ, ಪೋಲಿಸರಿಗೆ ಪೇಚಾಟಕ್ಕಿಟ್ಟುಕೊಂಡಿತ್ತು. ಕೊನೆ ಕೊನೆಗೆ ಪೋಲಿಸರಿಗೇ ಮರುಪ್ರಶ್ನೆ ಹಾಕಿದ ರವಿ ಬೆಳಗೆರೆ,
‘ಕೊಲೆಗಾರರ ಹತ್ತಿರ ಮಾತನಾಡಿಬಿಟ್ಟರೆ ಕೊಲೆಗಾರನಾ?!’ ಎಂದಿದ್ದಕ್ಕೆ ಉತ್ತರವೇ ಇರಲಿಲ್ಲ ಪೋಲಿಸರಿಗೆ!

ಸಹಪತ್ರಕರ್ತನಾದ ಸುನಿಲ್ ಹೆಗ್ಗರವಳ್ಳಿಗೆ ಸುಪಾರಿ ಕೊಟ್ಟ ಆಪಾದನೆ ಮೇರೆಗೆ ಬಂಧಿಸಿದ ಸಿಸಿಬಿ ಪೋಲಿಸರು ವಿಚಾರಣೆ ನಡೆಸುತ್ತಿರುವಾಗಲೇ, ‘ಫೋನ್ ಕರೆ ಮಾಡಿ, ಸುನಿಲ್ ಹೆಗ್ಗರವಳ್ಳಿಗೆ ಬೆದರಿಕೆ ಹಾಕಿದ್ದೂ ಸೇರಿಕೊಂಡು, ಇನ್ನಷ್ಟು ವಿವಾದ ಸೃಷ್ಟಿಸಿದ ರವಿ ಬೆಳಗೆರೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ, ‘ಡಿಸೆಂಬರ್ 23 ರ ತನಕ ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿರುವ ನ್ಯಾಯಾಧೀಶ ಜಗದೀಶ್, ಹೆಚ್ಚಿನ ವಿಚಾರಣೆ ನಡೆಸಲು ಆದೇಶಿಸಿದ್ದಾರೆ!

ಅಲ್ಲದೇ, ಚಿಕಿತ್ಸೆಯ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಬೇಕು ಎಂದು ಎಚ್ಚರಿಸಿರುವ ನ್ಯಾಯಾಲಯ ಬಹುಷಃ ರವಿ ಬೆಳಗೆರೆಗೆ ಜಾಮೀನು ಕೊಡಲು ನಿರಾಕರಿಸುವುದಲ್ಲದೇ, ಜೈಲು ಶಿಕ್ಷೆ ವಿಧಿಸುವುದು ಬಹುತೇಕ ಖಚಿತವಾಗಿದೆ!

– ಪೃಥು ಅಗ್ನಿಹೋತ್ರಿ

Tags

Related Articles

Close