ಭೀಮಾ ಕೋರೆಗಾನ್ ಯುದ್ಧ ನಡೆದದ್ದು ಮೊದಲು ಜನವರಿ 1, 1818 ರಂದು! ಅದಕ್ಕೆ ಸರಿಯಾಗಿ,ಈ ಮತಿಗೆಟ್ಟ ಬುದ್ಧಿಜೀವಿಗಳು, ಆ ಯುದ್ಧ ಮೇಲ್ವರ್ಗದವರ ಶೋಷಣೆಯನ್ನು ವಿರೋಧಿಸಲು ನಡೆದದ್ದು ಎಂದು ಬಿಂಬಿಸಿದರು! 200 ವರ್ಷಗಳ ಹಿಂದೆ, ಪೇಶ್ವಾಗಳು ಮತ್ತು ಈಸ್ಟ್ ಇಂಡಿಯಾ ಕಂಪೆನಿಯ ಮಧ್ಯ ನಡೆದ ಈ ಯುದ್ಧ ವಾಸ್ತವದಲ್ಲಿ ಬ್ರಿಟಿಷರನ್ನು ಹತ್ತಿಕ್ಕಲು ನಡೆದುದಾಗಿತ್ತಷ್ಟೇ! ಬ್ರಿಟಿಷ್ ಸೇನೆಯಲ್ಲಿ ಬಹಳಷ್ಟಿದ್ದ ಮಹಾರರು ಮತ್ತು ದಲಿತ ಸೈನಿಕರು, ಪೇಶ್ವರನ್ನು ಸೋಲಿಸಿದ್ದರು!
200 ವರ್ಷಗಳ ಹಿಂದೆ ನಡೆದ ಯುದ್ಧದ ಗೆಲುವನ್ನು ಆಚರಿಸಲು, ಪುಣೆಯ ಭಿಮಾ ಕೋರೆಗಾನ್ ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆದರೆ, ಕಾರ್ಯಕ್ರಮವೊಂದು ಹಿಂಸಾಚಾರಕ್ಕೆ ತಿರುಗಿದೆ! ಎರಡು ಪಂಗಡಗಳ ಮಧ್ಯೆ ಜಗಳ ಶುರುವಾಗುತ್ತಿದ್ದ ಹಾಗೆ, ಪ್ರದೇಶ ರಣರಂಗವಾದ ಪರಿಣಾಮ, ರಾಜ್ಯದುದ್ದಕ್ಕೂ ಬಂದ್ ಘೋಷಿಸಿದೆ!
Is Umar Khalid a dalit leader? He only came to Maharashtra to vitiate the atmosphere: Rajeev Pandey, Leader, BJP #IndiaAgainstHate
— TIMES NOW (@TimesNow) January 2, 2018
ಈ ಗಲಭೆಗೆ ಜಿಗ್ನೇಶ್ ಮೇವಾನಿ ಮತ್ತು ರಾಷ್ಟ್ರದ್ರೋಹಿಯಾಗಿರುವ ಉಮರ್ ಖಲೀದ್ ಕಾರಣರೇ?!
ಕೆಲವು ಮಾಧ್ಯಮಗಳು ‘ದಲಿತರನ್ನು ತುಳಿಯತೊಡಗಿದ್ದಕ್ಕಾಗಿ’ ಗಲಭೆ ಶುರುವಾಯಿತು ಎಂದು ವರದಿ ಮಾಡುತ್ತಲೇ ಇವೆ! ಆದರೆ, ಇದೇ ಗಲಭೆಗೆ, ಭಯೋತ್ಪಾದಕರ ಹಿತೈಷಿಗಳ ದುಡ್ಡಿನಿಂದ ಗುಜರಾತ್ ಚುನಾವಣೆಗೆ ಸ್ಪರ್ಧಿಸಿದ, ಗೌರೀ ಲಂಕೇಶ್ ದತ್ತು ಪುತ್ರ ನಾದ ಜಿಗ್ನೇಶ್ ಮೇವಾನಿಯ ಪಿತೂರಿಯಿದೆ ಎಂಬುದನ್ನು ಮಾತ್ರ ಹೇಳಲು ಮರೆತಿವೆ! ಹಾ! ಜಗಳವೊಂದು ಹಿಂಸಾಚಾರಕ್ಕೆ ತಿರುಗಲು ಜಿಗ್ನೇಶ್ ಕಾರಣ ಎಂಬ ಗುಮಾನಿಯನ್ನು ವ್ಯಕ್ತಪಡಿಸುತ್ತಿದ್ದಾರೆ ಪೋಲಿಸರು! ಅವನ ಜೊತೆ, ದೇಶದ್ರೋಹಿ ಉಮರ್ ಖಲೀದ್ ಕೂಡಾ ಸಿಕ್ಕಿಬಿದ್ದಿದ್ದಾನೆ! ಅದರಲ್ಲೂ, ಒಂದು ವೀಡಿಯೋದಲ್ಲಿ, ದಲಿತರನ್ನು ಭಯಭೀತರನ್ನಾಗಿಸಿ, ನಂತರ ಹಿಂಸಾಚಾರಕ್ಕೆ ತಿರುಗುವಂತಹ ಪ್ರಚೋದಕ ಭಾಷಣ ಮಾಡುತ್ತಿದ್ದದ್ದು ಕಂಡು ಬಂದಿದೆ! ಇದೇ ಉಮರ್ ಖಲೀದ್, ಜೆಎನ್ ಯು ವಿದ್ಯಾರ್ಥಿಗಳನ್ನು ಭಾರತದ ವಿರುದ್ಧ ಘೋಷಣೆಗಳನ್ನು ಕೂಗುವಂತೆ ಪ್ರಚೋದಿಸಿದ್ದ! ಅಫ್ಜಲ್ ಗುರುವಿನ ಪರಮ ಭಕ್ತನೂ ಆಗಿದ್ದ ಖಲೀದ್!
WATCH | Caste violence in Maharashtra. Ground report by @Aruneel_S #IndiaAgainstHate pic.twitter.com/T91WMOuzpN
— TIMES NOW (@TimesNow) January 2, 2018
ಈ ಗಲಭೆಯೊಂದು ಹಿಂದೂ ವಿರೋಧಿ ಮತ್ತು ಮೋದಿ ವಿರೋಧಿಯ ಪೂರ್ವ ಯೋಜನೆಯೇ?!
Jignesh travel to maharastra, riots, @OfficeOfRG comment on dalit and Bhima-Koregaon all are well planned and linked. SS too played local role.
I warned u after Gujarat election. Near by states to Karnataka will witness more. ĶA will b silent. BJP states should b on alert
— #GauravPradhan ?? (@DrGPradhan) January 2, 2018
ಪ್ರತೀ ವರ್ಷ 15000 ರದಷ್ಟು ಮಂದಿ ಕಾರ್ಯಕ್ರಮಕ್ಕೆ ಸೇರಿದರೆ ಈ ಸಲ 3,00,000 ಲಕ್ಷ ಜನ ಸೇರಿದ್ದರು! ಇದೇ ಅನುಮಾನಕ್ಕೆ ಕಾರಣವಾಗಿದ್ದು!
ಈ ಕೆಳಗಿನ ಟ್ವೀಟ್, ಈ ಮೊದಲೇ ಗಲಭೆಗೆ ಅನುಕೂಲವಾಗುವಂತೆ ಕಲ್ಲುಗಳನ್ನು ದೊಡ್ಡ ಮಟ್ಟದಲ್ಲಿ ಸಂಗ್ರಹಿಸಿಡಲಾಗಿತ್ತು ಎಂಬುದನ್ನು ಬಯಲುಗೊಳಿಸಿದೆ!
See this image capture from video. The stones were already stored in large numbers well in advance to injure Buddhist and Dalits visiting #BhimaKoregaon pic.twitter.com/OjZgWkzDFM
— Ravi Ratan (@scribe_it) January 2, 2018
ಇದಕ್ಕಿಂತ ಇನ್ನೂ ಅನುಮಾನಾಸ್ಪದಕ್ಕೆ ಕಾರಣವಾಗಿದ್ದು ರಾಹುಲ್ ಗಾಂಧಿಯ ಹೇಳಿಕೆ!
A central pillar of the RSS/BJP’s fascist vision for India is that Dalits should remain at the bottom of Indian society. Una, Rohith Vemula and now Bhima-Koregaon are potent symbols of the resistance.
— Rahul Gandhi (@RahulGandhi) January 2, 2018
“ಆರ್ ಎಸ್ ಎಸ್ ಮತ್ತು ಬಿಜೆಪಿಯ ಮೂಲೋದ್ದೇಶ ಭಾರತದ ವ್ಯವಸ್ಥೆಯಲ್ಲಿ ಕೊನೆಯವರೆಗೂ ದಲಿತರನ್ನು ಕೆಳ ಮಟ್ಟದಲ್ಲಿಡುವುದೇ ಆಗಿದೆ! ಉನಾ, ರೋಹಿತ್ ವೆಮುಲಾ ಮತ್ತು ಭೀಮಾ ಕೋರೆಗಾವೋನ್ ದಲಿತ ದಮನ ವಿರುದ್ಧ ಸೆಟೆದು ನಿಂತ ಪ್ರತೀಕವಾಗಿದೆ!”
ಆದರೆ,
1. ಯಾವ ಆಧಾರದ ಮೇಲೆ ದಲಿತರಿಗೂ ಆರ್ ಎಸ್ ಎಸ್ ಮತ್ತು ಬಿಜೆಪಿಗೆ ಸಂಪರ್ಕ ಕಲ್ಪಿಸಿದ್ದು?!
2.ಯಾವ ತನಿಖಾ ದಳ ಇಲ್ಲಿಯತನಕ ಆರ್ ಎಸ್ ಎಸ್ / ಬಿಜೆಪಿಯನ್ನು ಈ ಕಾರಣಕ್ಕೆ ಆರೋಪಿಯನ್ನಾಗಿಸಿದೆ?!
3.ಯಾಕೆ ಪದೇ ಪದೇ ಸುಳ್ಳು ಹೇಳುತ್ತಾ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿರುವುದು?!
ಈ ಇಬ್ಬರನ್ನೂ ಜೈಲಿಗಟ್ಟಬೇಕು! ಅಶೋಕ್ ಪಂಡಿತ್ ಎಂಬ ಸಿನಿಮಾ ನಿರ್ದೇಶಕರ ಮಾತು!
“ಅಂದರೆ, ಭಾರತ್ ಕಿ ಬರ್ಬಾದಿ ಗ್ಯಾಂಗ್ ನಾಯಕನಾದ ಉಮರ್ ಖಲೀದ್ ಮಹಾರಾಷ್ಟ್ರದಲ್ಲಿ ತನ್ನ ಕೆಲಸವನ್ನು ಶುರು ಹಚ್ಚಿದ್ದಾನೆ! ಆತನನ್ನು ಜೈಲಿಗಟ್ಟಬೇಕು! ಅವನ ಜೊತೆ, ಅಪರಾಧಿಯೆಂದು ಸಾಬೀತಾದರೆ ಮೇವಾನುಯನ್ನೂ ಜೈಲಿಗಟ್ಡಬೇಕು! ‘ ಎಂದು ಧ್ವನಿ ಎತ್ತಿದ್ದಾರೆ !
So the leader of d #BharatKibarbadigang #Umarkhalid has started his activity in #Maharashtra. He should be behind bars along with #Mewani if he is also found guilty of inciting people. #MahaCasteClashes
— Ashoke Pandit (@ashokepandit) January 2, 2018
ಆದರೆ, ಒಬ್ಬ ಮನುಷ್ಯ ಸ್ವತಃ ತನಗೆ ತಾನೇ ಪತ್ರಕರ್ತನೆಂದು ಕರೆದುಕೊಂಡಿದ್ದಲ್ಲದೇ, ಮೋದಿ ಸರಕಾರದ ಮೇಲೆ ವಿಷಕಾರುತ್ತ ಹೋದನಷ್ಟೇ! ವಾಸ್ತವವನ್ನೂ ಅರಿಯದೇ!
“ತೀವ್ರವಾದಿಗಳಾದ ಹಿಂದು ಸಂಘಟನೆಗಳು, ಭೀಮಾ ಕೋರೆಗಾವೋನ್ ಆಚರಣೆಗೆ ಭಂಗ ಪಡಿಸಿ ಹಿಂಸಿಸಿದೆ! ಆತ್ಮೀಯ, ಡೇವಿಡ್ ಫಡ್ನಾವಿಸ್! ನಿಮ್ಮ ಪಾಲಿಸಿ ನಿದ್ರಿಸುತ್ತಿದೆಯೇ?! ಯಾಕೆ ಈ ಮುಂಚೆಯೇ ಎಚ್ಚರಿಕೆಯನ್ನು ತೆಗೆದುಕೊಂಡಿಲ್ಲ?!” ಎಂದು ನಿಖಿಲ್ ವಾಗ್ಲೆ ಎಂಹ ಎರಡು ತಲೆ ಹಾವು ವಿಷ ಕಕ್ಕಿದೆ!
ಇಲ್ಲಿಯವರೆಗೆ, ಸೆಕ್ಷನ್ 144 ನನ್ನು ಜಾರಿಗೊಳಿಸಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದರೊಳಗೆ ಮೂರು ತಾಸಾಗಿದೆ ಎಂದು ಮುಂಬೈ ಪೋಲಿಸ್ ಹೇಳಿದೆ!
Don’t believe in rumours. Traffic on Eastern expressway was affected due to protests. It’s moving now. Traffic at Chembur Naka is still affected. There is nothing to panic. Verify facts with police officers and men before posting anything on social media.
— Mumbai Police (@MumbaiPolice) January 2, 2018
ಮಹಾರಾಷ್ಟ್ರ ದ ಮುಖ್ಯ ಮಂತ್ರಿ ಡೇವಿಡ್ ಫಡ್ನಾವಿಸ್ ಪ್ರತಿಕ್ರಿಯಿಸಿದ್ದು ಹೀಗೆ!
“ಪ್ರತೀ ಸಲ ಕಾರ್ಯಕ್ರಮಕ್ಕೆ 15,000 ಸೇರುತ್ತಿದ್ದರು! ಈ ಸಲ 3,00,000 ಜನ ಸೇರಿದ್ದಾರೆ. ಹಿಂಸಾಚಾರಕ್ಕೆ ತಿರುಗುವ ಹಿಂದೆ ಹುನ್ನಾರವಿದೆ! ಆದರೆ, ಪೋಲಿಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ! ” ಎಂದು ಮಹರಾಷ್ಟ್ರ ಸಿಎಮ್ ಹೇಳಿದ್ದಾರೆ!
ಇದು ನಿಜಕ್ಕೂ ಅನುಮಾನಾಸ್ಪದವಲ್ಲವೇ?! ಈಸ್ಟ್ ಇಂಡಿಯ ಕಂಪೆನಿ ಪೇಶ್ವರನ್ನು ಸೋಲಿಸಿದ್ದಕ್ಕೆ ನಡೆಸುವ ಈ ಆಚರಣೆಗೆ ಅಷ್ಟು ದೊಡ್ಡ ಮಟ್ಟದಲ್ಲಿ ಜನ ಸೇರುತ್ತಾರೆಂದರೆ. . . .?
– ಪೃಥು ಅಗ್ನಿಹೋತ್ರಿ