ಪ್ರಚಲಿತ

ಪೋಲಿಸರಿಗೇ ಬೆವರಿಳಿಸುತ್ತಿರುವ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ!

ಪೋಲಿಸರಿಗೆ ಪೇಚಾಟ!!

ಮೊನ್ನೆಯಿಂದ ರವಿ ಬೆಳಗೆರೆಯ ವಿಚಾರಣೆಯನ್ನು ಮಾಡುತ್ತಲೇ ಇರುವ ಸಿಸಿಬಿ ಪೋಲಿಸರಿಗೆ ತೀರಾ ಸಂಕಷ್ಟಕ್ಕಿಟ್ಟುಕೊಂಡಿದೆ! ಗೌರಿ ಲಂಕೇಶ್ ಹತ್ಯೆಯ ಜಾಡು ಬೆನ್ನತ್ತಿದ ಪೋಲಿಸರಿಗೆ ರವಿ ಬೆಳಗೆರೆಯ ಹೆಸರು ಥಳುಕು ಹಾಕಿ ಕೊಂಡಿದ್ದೇ, ರವಿ ಬೆಳಗೆರೆಯನ್ನು ಬಂಧಿಸಿರುವ ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ರವಿ ಬೆಳಗೆರೆ, ಸಿಗರೇಟಿನ ಹೊಗೆ ಸೇದುತ್ತಲೇ ಮತ್ತೆ ತಮ್ಮ ಹಳೆಯ ವಾದಸರಣಿಯನ್ನು ಮುಂದಿಟ್ಟ ಪರಿಣಾಮ ಪೋಲಿಸರಿಗೆ ಪೇಚಾಟಕ್ಕಿಟ್ಟುಕೊಂಡಿದೆ!

ವಿಚಾರಣೆ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ರೀತಿಯ ಹೇಳಿಕೆ ನೀಡುತ್ತಿರುವ ರವಿ ಬೆಳಗೆರೆ, ಒಮ್ಮೊಮ್ಮೆ ಯಾರ ಪ್ರಶ್ನೆಗೂ ಉತ್ತರಿಸಿದೇ, ಪೆನ್ನು ಪೇಪರು ಹಿಡಿದು ಬರೆಯುತ್ತ ಕುಳಿತಿದ್ದಲ್ಲದೇ, ಸಿಗರೇಟ್ ಗಾಗಿ ಬೇಡಿಕೆ ಇಡುತ್ತಲೇ, ಈಗ ಮತ್ತೊಂದು ಹೇಳಿಕೆ ನೀಡಿ ಪೋಲಿಸರಿಗೇ ತಿರುಗಿ ಪ್ರಶ್ನಿಸಿದ್ದರ ಫಲವಾಗಿ, ಪೋಲಿಸರು ಕೈಕಟ್ಟಿ ಕೂರುವಂತಾಗಿದೆ!

‘ಕೊಲೆಗಾರರನ್ನು ಭೇಟಿಯಾದರೆ, ನಾನು ಕೊಲೆ ಮಾಡಿಸ್ತೀನಾ?! ಅವರ ಜೊತೆ ಮಾತನಾಡಿಬಿಟ್ಟರೆ ನಾನು ಕೊಲೆ ಮಾಡಿಸುತ್ತೀನಾ?! ಕುಡಿದ ಮತ್ತಿನಲ್ಲಿ ಏನೋ ಹೇಳಿ ಬಿಟ್ಟರೆ, ನಾನು ಕೊಲೆಯೆ ಸುಪಾರಿ ಕೊಟ್ಟವನಾಗುತ್ತೀನಾ?! ಬೇರೆ ಯಾರದೋ ಜೊತೆಗೆ ಹೀಗೆ ಮಾತನಾಡಿದ್ದರೆ, ನಿಮ್ಮ ಅನುಮಾನ ಸರಿ ಇರುತ್ತಿತ್ತು. ಆದರೆ, ನಾನು ನನ್ನ ಮಾಜಿ ಡ್ರೈವರ್ ನೋಡಲು ಹೋಗಿದ್ದೆ. ಅದಲ್ಲದೇ, ನಾನೊಬ್ಬ ಪತ್ರಕರ್ತ. ಯಾವ ಆಧಾರದ ಮೇಲೆ ನಾನು ಸುಪಾರಿ ಕೊಟ್ಟಿದ್ದೇನೆ?! ನಿಮ್ಮ ಪ್ರಶ್ನೆಗಳಿಗೆ ನ್ಯಾಯಾಲಯದಲ್ಲಿಯೇ ಉತ್ತರಿಸುತ್ತೇನೆ!” ಎಂದು ರವಿ ಬೆಳಗೆರೆ ತಿರುಗಿ ಪ್ರಶ್ನಿಸಿದ್ದಾರೆ.

ಜೊತೆ ಜೊತೆಗೆ, ಆಮೆ ಚಿಪ್ಪು ಹಾಗೂ ಜಿಂಕೆ ಚರ್ಮಕ್ಕೆ ಬೇಡಿಕೆ ಇಟ್ಟ ಪರಿಣಾಮ, ಇನ್ನೊಂದು FIR ಆಗಿದ್ದು, ಸುಪಾರಿ ಯ ಮೊಕದ್ದಮೆ ಜೊತೆ ಇನ್ನೊಂದು ಸಂಕಷ್ಟ ಎದುರಾಗಿದೆ! ಅದನ್ನೂ, ನಿರ್ವಹಿಸಬೇಕಾಗಿರುವ ರವಿ ಬೆಳಗೆರೆ, ಸುನಿಲ್ ಹೆಗ್ಗರವಳ್ಳಿಯ ಸುಪಾರಿಗೆ ನಾನು ‘ಕುಡಿದ ಮತ್ತಿನಲ್ಲಿ ಹೇಳಿರಬಹುದು. ಹಾಗಿದ್ದಕ್ಕೆ ನೀವು FIR ಮಾಡಿದರೆ, ಕುಡಿದು ಮಾತನಾಡುವವರ ಮೇಲೆಲ್ಲ ಮೊಕದ್ದಮೆ ಹಾಕುತ್ತೀರಾ?!” ಎಂದು ಪ್ರಶ್ನಿಸುತ್ತಿರುವ ರವಿ ಬೆಳಗೆರೆ ಸಿಸಿಬಿಯವರ ಪ್ರಶ್ನೆಗೆ ಯಾವುದಕ್ಕೂ ಉತ್ತರಿಸದೇ ತಿರುಗಿ ಪ್ರಶ್ನಿಸುತ್ತಿರುವುದರ ಪರಿಣಾಮ, ಪೋಲಿಸರು ಬಾಯಿ ಮುಚ್ಚುವಂತಾಗಿದೆ.

ಸುನಿಲ್ ಹೆಗ್ಗರವಳ್ಳಿ ಸುಪಾರಿ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ, ‘ಶಶಿಧರ್ ಮುಂಡೇವಾಡಿಯನ್ನು ಸಿಸಿಬಿ ಬಂಧಿಸಿದ್ದು, ಸಿಂದಗಿ ಗೆ ಮೂರನೇ ಆರೋಪಿಯಾದ ವಜು ಬಡಿಗೇರನನ್ನು ಬಂಧಿಸಲು ತೆರಳಿದ್ದಾರೆ. ಜೊತೆಗೆ, ಲೋಕೇಶ್ ಕೊಪ್ಪದ್ ನ ವಿಚಾರಣೆ ನಡೆಸುತ್ತಿರುವ ಪೋಲಿಸರು, ಕೊಲೆಗೆ ಸುಪಾರಿ ನೀಡಲು ರವಿ ಬೆಳಗೆರೆ ಕೊಪ್ಪದ್ ರವರ ಫೋನನ್ನು ಬಳಸಿದ್ದರೆಂದು ಹೇಳಲಾಗುತ್ತಿದೆ.

– ಪೃಥು ಅಗ್ನಿಹೋತ್ರಿ

Tags

Related Articles

Close