ಮೊನ್ನೆಯಷ್ಟೇ ಮೋದಿ ಹಾಗೂ ಯೋಗಿಯ ವಿರುದ್ಧ ಬಾಯಿಗೆ ಬಂದ ಹಾಗೆ ಮಾತನಾಡಿ ಸಮಾಜದದೆದುರಿಗೆ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಮಾಡಿಕೊಂಡಿದ್ದ ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್ ಇವತ್ತು ತನ್ನ ವರಸೆಯನ್ನೇ ಬದಲಿಸಿದ್ದಾನೆ!
ನೆನ್ನೆಯಷ್ಟೇ ಮಾನಸಿಕ ಸ್ಥಿಮಿತ ದ ಬಗ್ಗೆ ಪ್ರಶ್ನಿಸಿದ್ದೆಯಷ್ಟೇ! ಇವತ್ತು ಅವನಾಗಿಯೇ ಕನ್ಫರ್ಮ್ ಮಾಡಿದ್ದಾನೆ! ಅಷ್ಟೇ! ಮಾಧ್ಯಮದವರ ಪ್ರಶ್ನೆಗೆ ಮತ್ತದೇ ಪೆದ್ದು ಪೆದ್ದಾಗಿ ನಗುತ್ತಾ ‘ನೋಡಿ.. ನಾನೇನು ದಡ್ಡನಲ್ಲ ಪ್ರಶಸ್ತಿ ವಾಪಾಸು ಮಾಡಲಿಕ್ಕೆ’ ಎಂದ ಪ್ರಕಾಶ್ ರೈ ಎಂಬ ಖಳನಿಗೊಂದು ಪ್ರಶ್ನೆ!
ಅಲ್ಲಾ ಗುರು! ಮೊನ್ನೆಯಷ್ಟೇ ಮೋದಿ ಹಾಗೂ ಯೋಗಿ ನನಗಿಂತ ದೊಡ್ಡ ನಟರೆಂದು ಅನ್ನಿಸಿತು! ಅವರು ನನ್ನ ಐದೂ ರಾಷ್ಟ್ರಪ್ರಶಸ್ತಿಗಳಿಗೂ ಅರ್ಹರಾಗಿದ್ದಾರೆ! ನನಗೆ ಅವೆಲ್ಲ ಪ್ರಶಸ್ತಿಗಳನ್ನೂ ಅವರಿಗೇ ಕೊಡೋಣ ಎನ್ನಿಸಿದೆ ಅಂದೆ! ಈಗ. . . . ‘ಪ್ರಶಸ್ತಿ ವಾಪಾಸು ಕೊಡಲು ದಡ್ಡನಲ್ಲ’ ಎಂದೆ!
ಹಾಗಾದರೆ ನಿನ್ನರ್ಥದಲ್ಲಿ ಈಗ ಪ್ರಶಸ್ತಿ ವಾಪಾಸು ಮಾಡಿದವರೆಲ್ಲರೂ ದಡ್ಡರೆಂದಾಯಿತು! ಅಲ್ಲವೇ?! ಅಯ್ಯಯ್ಯೋ! ಸತ್ಯ ಮಾತನಾಡಿದ್ದೀ ನೋಡು ನಿನ್ನ
ಎಡಪಂಥೀಯರ ಬಗ್ಗೆ!
ಇಲ್ಲ, ನಾನು ಎಲ್ಲರೂ ದಡ್ಡರೆಂದು ಹೇಳಲೇ ಇಲ್ಲವೆಂದರೆ, “ಪ್ರಶಸ್ತಿ ವಾಪಾಸು ಮಾಡಲಿಕ್ಕೆ ನನಗ್ಯಾವ ಅಭ್ಯಂತರವೂ ಇಲ್ಲವೆಂದೆ’. . ಹಾಗಾದರೆ, ಈಗ ಎಲ್ಲಿ ವಾಪಾಸು ಕೊಡುವ ಪರಿಸ್ಥಿತಿ ಬರುತ್ತದೆಂದು ಹೆದರಿ ‘ದಡ್ಡನಲ್ಲ’ ಎಂಬ ಹೇಳಿಕೆ ಕೊಟ್ಟೆಯಾ?!
ಚಪ್ಪಾಳೆ ಹೊಡಿಬೇಕು ಬಿಡು ನಿನ್ನ ಆಟಕ್ಕೆ!
ನಿನ್ನ ಈ ‘ರಾಜ್’ ಎಂಬ ಬುಡಬುಡಿಕೆಗೆ ಈಗೊಂದು ಪಟಾಕಿ ಢಂ ಎನ್ನುತ್ತೆ ನೋಡು!
ಹೌದು ಪ್ರಕಾಶ! ನೀನ್ಯಾಕೆ ಇದ್ದಕ್ಕಿದ್ದ ಹಾಗೆ ನಿನ್ನ ರೈ ಎಂಬ ಹೆಸರನ್ನು ರಾಜ್ ಎಂದಾಗಿ ಬದಲಾಯಿಸಿಬಿಟ್ಟೆ ತಂದೆ?! ಎಲ್ಲದರಲ್ಲಿಯೂ ನಾನೊಬ್ಬ ‘ನಟ’ ಎನ್ನುವ ನಿನ್ನ ಹಿಂದಿನ ಸತ್ಯ ಹೇಳಲಾ?!
ಉತ್ತರ ಕೊಡಪ್ಪಾ ಕ್ಯಾಥೋಲಿಕ್ ರಾಜ್!!
ಈ ನಿನ್ನ ಪ್ರಕಾಶ್ ರಾಜ್ ಎಂಬ ಮುಂಚಿನ ಹೆಸರು ಪ್ರಕಾಶ್ ರೈ! ಪಾಪ! ‘ರೈ’ ಅಂತಿದ್ದದ್ದು ನೋಡಿ ನಿನ್ನನ್ನು ಎಲ್ಲರೂ ತುಳುನಾಡಿನ ‘ಬಂಟ’ ಸಮುದಾಯದ ವ್ಯಕ್ತಿಯೆಂದೇ ತಿಳಿದುಕೊಂಡಿದ್ದಾರೆ! ಆದರೆ, ನಿನ್ನ ತಾಯಿಯೊಬ್ಬಳು ಕ್ಯಾಥೋಲಿಕ್ ನರ್ಸು! ಹೀಗಿರುವಾಗ ನೀನೊಬ್ಬ ‘ಅರೆ ಹಿಂದೂ’
ಹೋಗಲಿ ಬಿಡು! ನಿನಗೆ ಎಲ್ಲೂ ಗತಿಯಿಲ್ಲದಿದ್ದಾಗ ಇದೇ ಕ್ರೈಸ್ತ ಮಿಷನರಿಗಳು ನಿನ್ನನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿ ತಮ್ಮ ಪ್ರಭಾವದಿಂದ ನಿನಗೊಂದು ಸ್ಟಾರ್ ಪಟ್ಟ ಕೊಡಿಸಿ ರಾಶಿ ಹಣ ನೋಡಿದಾಗ ನಿನ್ನ ಹೆಸರೂ ರಾಜ್ ಎಂದು ಬದಲಾಗಿತ್ತೆಂಬುದು ಸುಳ್ಳೇನು?!
ಇವೆಲ್ಲ ಸುಳ್ಳೆಂದು ಬಿಡು ನೋಡೋಣ! ನಿನ್ನ ಹಣೆಬರಹಕ್ಕೆ ಕನ್ನಡಿಗರಿಗೆ ಇದ್ಯಾವುದೂ ಗೊತ್ತಿಲ್ಲದೇ, ಅದ್ಯಾವುದೋ ವಾಹಿನಿಯ ನಿರೂಪಕಿ ಕಾವೇರಿ ವಿಷಯ ಎತ್ತಿದ್ದೇ ನೀನು ಎಗರಾಡಿ ಮುರಕೊಂಡು ಬಿದ್ದೆಯಲ್ಲವಾ, ನಿನಗೆ ಆಗ ‘ನಾನೊಬ್ಬ ನಟ ಮಾತ್ರ’ ಎನ್ನುವುದಕ್ಕಿಂತ ಅದೇ ಕ್ರೈಸ್ತ ಮಿಷನರಿಗಳ, ತಮಿಳುನಾಡಿನ ಋಣ ತೀರಿಸಬೇಕಿತ್ತಷ್ಟೇ! ಸುಳ್ಳಾ?!
ನಿನ್ನ ಮೊದಲ ತಮಿಳು ಭಾಷೆಯ ಸಿನಿಮಾ ‘ಡ್ಯೂಯೆಟ್’ ಎಂಬುದು! 1994 ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕಿಂತ ಮುಂಚೆ ಇದೇ ಕರ್ನಾಟಕದ ಕನ್ನಡ ಚಿತ್ರರಂಗದಲ್ಲಿ ಆಯ್ದುಕೊಂಡು ಬದುಕು ಸಾಗಿಸುತ್ತಿದ್ದದ್ದು ನೀನೇ ತಾನೇ?
ನಿನ್ನ ಐದು ರಾಷ್ಟ್ರ ಪ್ರಶಸ್ತಿಗಳಲ್ಲಿ ನಾಲ್ಕು ಪರಭಾಷೆಗೇ ಬಂದಿರುವುದು! ಅದರಲ್ಲೂ ಮೊದಲ ಬಾರಿಗೆ ಬಂದಿದ್ದು ನಿನ್ನ “ಇರುವಾರ್” ಎಂಬ ತಮಿಳು ಸಿನಿಮಾಕ್ಕೇ ತಾನೆ?! ನಿನ್ನ ಕ್ರೈಸ್ತ ಮಿಷನರಿಗಳ ಕೃಪಾದೃಷ್ಟಿ ನೋಡು ಪ್ರಕಾಶಾ! ಸೂಪರ್ ಅಲ್ವಾ?!
ಇದಕ್ಕೆಲ್ಲ ಏನೆಂಬ ಸಮರ್ಥನೆ ಕೊಡಬಲ್ಲೆ?!
ನಮ್ಮಪ್ಪ ಮಂಜುನಾಥ! ತಾಯಿ ಸ್ವರ್ಣಲತಾ! ಎಂದು ‘ನಾನೊಬ್ಬ ಹಿಂದೂ’ ಎನ್ನುತ್ತೀಯಾ?! ಅಥವಾ ಇರುವ ಸತ್ಯವನ್ನು ಒಪ್ಪುತ್ತೀಯೋ ನೀನೇ ನೋಡು!
ಬೇಡ! ನಿನ್ನ ಮೊದಲನೇ ಹೆಂಡತಿಯನ್ನು ನಡು ನೀರಿನಲ್ಲಿ ಕೈ ಬಿಟ್ಟ ನಿನಗೆ ಮೋದಿಯನ್ನು ಅವಹೇಳನ ಮಾಡುವ ಯಾವ ನೈತಿಕತೆಯಿದೆ?!
‘ಸಾವಿಗೆ ಸಂಭ್ರಮಪಡಬಾರದಾ?!’
ಸರಿಯಪ್ಪಾ! ನೀನು ಗೌರೀ ಲಂಕೇಶರ ಸಾವಿಗೆ ಸಂತಸಪಡಬಾರದೆಂದೆ! ದುಃಖಪಡಲಿಕ್ಕಾಗುವ ಒಂದು ಕಾರಣವನ್ನಾದರೂ ತಿಳಿಸು ನೋಡೇ ಬಿಡೋಣ ಅದನ್ನೂ!
ಅಲ್ಲವೋ! ಗೌರಿ ಲಂಕೇಶರ ಸಾವಿಗೆ ಪ್ರಶ್ನಿಸಬೇಕಾದದ್ದು ದೇಶದ ಪ್ರಧಾನ ಮಂತ್ರಿಯಲ್ಲ, ಬದಲಿಗೆ ಎಡಪಂಥೀಯರ ಬಗಲಲ್ಲಿ ಆತು ಕೂತಿರುವ ಕರ್ನಾಟಕದ ಮುಖ್ಯಮಂತ್ರಿ ಎಂಬುದೂ ನಿನಗರಿವಿಲ್ಲದೇ ಇರುವುದು ನೋಡಿದರೆ ನೀನೆಂಥಾ ಮುತ್ಸದ್ದಿ ಎಂದು ಗೊತ್ತಾಗಿ ಹೋಗುತ್ತದೆ!
ನಿನ್ನ ಕರ್ಮಕ್ಕೆ ಗೌರೀ ಲಂಕೇಶ್ ಗೆ ಈ ಮಾತು ಕೇಳಬೇಕಿತ್ತು ನೀನು! ನಿನ್ನ ಮಿಷನರಿಗಳಿಗೆ, ಡಿವೈಎಫ್ ಸಂಘಟನೆಗಳಂತಹ ಅದೆಷ್ಟೋ ದೇಶದ್ರೋಹಿ ಸಂಘಟನೆಗಳಿಗೆ ಇದೇ ಪ್ರಶ್ನೆಯನ್ನು ಕೇಳಬೇಕಿತ್ತು ನೀನು!
ಹಿಂದೂಗಳ ಸಾವಿಗೆ ಸಂಭ್ರಮಿಸುವುದ್ಯಾಕೆ ಎಂದೆಯಾ?! ಸಂಘದವರ ಹೆಣಗಳೇ ಸಾಲಾಗಿ ಬಿತ್ತಲ್ಲ ಕೇರಳದಲ್ಲಿ?! ಆಗ ನೀ ಎಲ್ಲಿದ್ದೆ?! ಯಾರ ಸಾವನ್ನು ಸಂಭ್ರಮಿಸುತ್ತಿದ್ದೀ ಪ್ರಕಾಶ?! ಅವೆಲ್ಲದಕ್ಕೂ ತಾಕತ್ತಿಲ್ಲದ ನೀನು ಇದ್ದಕ್ಕಿದ್ದಂತೆ ಎದ್ದು ಬಂದ ರೀತಿ ನೋಡಿದರೇ ಗೊತ್ತಾಗಿ ಹೋಗುತ್ತದೆ! ಸತ್ಯ ಹೇಳು! ತಿರುಪೆ
ಎತ್ತಿದ ಗಂಜಿ ಗಿರಾಕಿಗಳ ಕೈನಲ್ಲಿ ಎಷ್ಟು ತಗೊಂಡೆ?!
ಈ ಹಿಂದೆ ಕವಿತಾ ಲಂಕೇಶ್ ರವರು ‘ನನಗೊಂದು ಮಗು ಬೇಕು, ಆದರೆ ಗಂಡ ಬೇಡ’ ಎಂದಿದ್ದರು! ಅವರಿಗೀಗ ಮಗುವಿದೆ!
“ಗೌರೀ ಲಂಕೇಶರ ಕುಟುಂಬದವನು ನಾನು! ನನಗೆ ಬಹಳ ನೋವಾಗಿದೆ” ಎಂದೆಯಲ್ಲವಾ?!
ಏನಿದೆ ನಿನ್ನ ಹತ್ತಿರ ಹೇಳು?!
ನಿನಗೆ ಕನಿಷ್ಠ ಯೋಗ್ಯೆತೆಯಾದರೂ ಇದೆಯಾ?! ದೇಶದಲ್ಲಿ ಅತೀ ಕಿರಿಯ ವಯಸ್ಸಿಗೇ ಲೋಕಸಭಾ ಸದಸ್ಯರಾದ ಹೆಗ್ಗಳಿಕೆ ಯೋಗಿಯ ಹತ್ತಿರವಿದೆ! ಒಬ್ಬ ಶಾಸ್ತ್ರಜ್ಞನೂ ದೇಶವನ್ನು ಮುನ್ನಡೆಸಬಹುದೆಂಬುದನ್ನು ನಿರೂಪಿಸಿದ ಹೆಗ್ಗಳಿಕೆಯೂ ಇದೆ! ಸ್ಪರ್ಧಿಸಿದ ಯಾವ ಚುನಾವಣೆಯಲ್ಲೂ ಸೋಲದ ತಾಕತ್ತಿದೆ! ಲೋಕಸಭೆಯಲ್ಲಿ ಅತಿ ಹೆಚ್ಚು ಹಾಜರಾತಿ! ಸಮಸ್ಯೆ ಹೇಳಿಕೊಂಡು ಬರುವ ಪ್ರತಿ ಒಬ್ಬರಿಗೂ ಪರಿಹಾರ ಕೊಟ್ಟು ಕಳಿಸುವ ತಾಳ್ಮೆಯಿದೆ!
ಮೋದಿಯ ಬಗ್ಗೆ ಮತ್ತೆ ನಾ ಹೇಳಬೇಕಿಲ್ಲ! ಇಡೀ ಜಗತ್ತಿನ ಎದುರು ವಿಶ್ವ ನಾಯಕ ಎಂದು ಗುರುತಿಸಿಕೊಳ್ಳುವ ಮಹತ್ಸಾಧನೆಯ ಮುಂದೆ ಬೇರಾವ ವಿವರಣೆ ಬಾಕಿಯಿದೆ?!
ನಿನ್ನ ಹತ್ತಿರ ಏನಿದೆ?! ಕಂಡವರ ಕಾಲು ಹಿಡಿದು ಗಳಿಸಿದ ರಾಷ್ಟ್ರಪ್ರಶಸ್ತಿಗಳ ಹೊರತಾಗಿ?! ಹೇಳಪ್ಪಾ! ಹೇಳು! ಉತ್ತರ ಕೊಡು ತಾಕತ್ತಿದ್ದರೆ!
– ತಪಸ್ವಿ