ಪ್ರಚಲಿತ

ಬಿಗ್ ಬ್ರೇಕಿಂಗ್: ಗೌರಿ ಲಂಕೇಶ್ ಹತ್ಯೆಗೆ ಮತ್ತೆ ಹಿಂದುತ್ವದ ಟಾರ್ಗೆಟ್!! ಅಲ್ಲೇ ಇದ್ದಾರಂತೆ ಹಂತಕರು!!

ರಾಜ್ಯದಲ್ಲಿ ಹಿಂದೂ ವಿರೋಧಿ ನೀತಿಯಿಂದಲೇ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಹಿಂದೂಗಳ ಆಚಾರ ವಿಚಾರಗಳಿಗೆ ಪ್ರತೀಬಾರಿ ಧಕ್ಕೆ‌ ತರುತ್ತಲೇ ಇದೆ…!!

ರಾಜ್ಯದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಮೇಲೆ‌ ಹಲ್ಲೆ ಕೊಲೆಗಳು ನಡೆಯುತ್ತಲೇ ಇದ್ದರೂ ಸಿದ್ದರಾಮಯ್ಯ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ…! ಸರಕಾರಿ ಅಧಿಕಾರಿಗಳು ರಾಜ್ಯದ ಸಚಿವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೀನ ಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿದೆ…!!

ಇಂತಹ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿದ್ದರೂ ಸಿದ್ದರಾಮಯ್ಯನವರು ಇದ್ಯಾವುದರ ಗೋಜಿಗೂ ಹೋಗದೆ ತಮ್ಮ ರಾಜಕೀಯ ಲಾಭಕ್ಕಾಗಿ ರಾಜ್ಯದಲ್ಲಿ ಇಂತಹ ದುಷ್ಕ್ರತ್ಯಗಳನ್ನು ನಡೆಸುತ್ತಲೇ ಬಂದಿದ್ದಾರೆ…!!

ಕೆಲ ಸಮಯದ ಹಿಂದೆ ಪತ್ರಕರ್ತೆ ಮತ್ತು ನಾಸ್ತಿಕವಾದಿಯಾಗಿದ್ದ ಗೌರಿ ಲಂಕೇಶ್ ರ ಹತ್ಯೆಯಾಗಿತ್ತು…!
ಸದಾ ಹಿಂದೂ ಧರ್ಮವನ್ನು ನಿಂದಿಸುತ್ತಲೇ ಬಂದಿದ್ದ ಗೌರಿ ಲಂಕೇಶ್ ರ ಹತ್ಯೆ ಆಗುತ್ತಲೇ ರಾಜ್ಯದಲ್ಲಿ ಬುದ್ದಿಜೈವಿಗಳು ಎನಿಸಿಕೊಂಡವರು ಅಲ್ಲಲ್ಲಿ ಹೋರಾಟ ಮಾಡಿ ರಾಜ್ಯ ಸರಕಾರದ ವಿರುದ್ಧ ಧ್ವನಿ ಎತ್ತಬೇಕಾದವರು ಕೇಂದ್ರದ ಮೋದಿ ಸರಕಾರವನ್ನು ಪ್ರಶ್ನಿಸಿದರು…!! ರಾಜ್ಯದಲ್ಲಿ ನಡೆಯುವ ಅವಘಡಗಳಿಗೆ ನೇರವಾಗಿ ಮೋದಿ ಸರಕಾರವನ್ನು ಪ್ರಶ್ನಿಸುತ್ತಿರುವ ಕರ್ನಾಟಕದ ಬುದ್ದಿಜೀವಿಗಳು ಪದೇ ಪದೇ ಟೌನ್ ಹಾಲ್ ಮುಂದೆ ಧರಣಿ ಕೂತು ತಾವು ನ್ಯಾಯದ ಪರ ಎಂದು ತೋರಿಸಿಕೊಡುತ್ತಿದ್ದಾರೆ…!!

ಗೌರಿ‌ ಲಂಕೇಶ್ ಹತ್ಯೆ ನಡೆದ ನಂತರದಲ್ಲಿ ‘ನಾನೂ ಗೌರಿ ನಾವೆಲ್ಲಾ ಗೌರಿ’ ಎಂಬ ಕಾರ್ಯಕ್ರಮ ಮಾಡಿದ್ದರು.
ಆದರೆ ಇದು ರಾಜ್ಯ ಸರಕಾರದ ಕುಮ್ಮಕ್ಕಿನಿಂದಲೇ ನಡೆದ ಕಾರ್ಯಕ್ರಮ ಎಂಬೂದು ಬಹಳ ಅಚ್ಚರಿಗೆ ಮತ್ತು ಅನುಮಾನಗಳಿಗೆ ಕಾರಣವಾಗಿದೆ…!!

ರಾಜ್ಯ ಸರಕಾರದ ವೈಫಲ್ಯವನ್ನು ಮುಚ್ಚಿಹಾಕಲು ಸರಕಾರವೇ ಇಂತಹ ಕಾರ್ಯಕ್ರಮವನ್ನು ಮಾಡಲು ಸಹಾಯ ಮಾಡಿರುವುದು ಈಗಾಗಲೇ ಬೆಳಕಿಗೆ ಬಂದಿದೆ.!!

ಇಂದು ಗೌರಿ ಲಂಕೇಶ್ ಹುಟ್ಟಿದ ದಿನವಾದ್ದರಿಂದ ‘ನಾನು ಗೌರಿ’ ಎಂಬ ಕಾರ್ಯಕ್ರಮ ಆಯೋಜನೆಯಾಗಿತ್ತು.
ಆದರೆ ಈ ಬಗ್ಗೆ ಸ್ವತಃ ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ರಾಜ್ಯ ಸರಕಾರದ ವಿರುದ್ಧ ಕೆಂಡಕಾರಿದ್ದಾರೆ…!!
ರಾಜ್ಯ ಸರಕಾರವೇ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು ತನ್ನ ತಪ್ಪುಗಳನ್ನು ಜನರಿಂದ ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.


ಗೌರಿ ಲಂಕೇಶ್ ಕೊಲೆ‌‌ ನಡೆದು ಇಷ್ಟು ದಿನವಾದರೂ ಕೊಲೆಗಾರರನ್ನು ಪತ್ತೆಹಚ್ಚುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಇದೀಗ ಇಂತಹ ಕಾರ್ಯಕ್ರಮಗಳಿಗೆ ಸರಕಾರ ಪ್ರೋತ್ಸಾಹಿಸುತ್ತಿರುವುದು ತನ್ನ ವೈಫಲ್ಯವನ್ನು ಮರೆಮಾಚಲು ಯತ್ನಿಸುತ್ತಿದೆ ಎಂದು ಇಂದ್ರಜಿತ್ ಲಂಕೇಶ್ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಗುಡುಗಿದ್ದಾರೆ…!!!

ಇದೀಗ ಇದೇ ವಿಚಾರವಾಗಿ ಕರಾವಳಿಯನ್ನು ಅವಮಾನಿಸುವ ಕಾರ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುತ್ತಿರುವ ಎಚ್ ಎಸ್ ದೊರೆಸ್ವಾಮಿ ಗೌರಿ ಕೊಲೆಗಾರರು ದಕ್ಷಿಣ ಕನ್ನಡದಲ್ಲೇ ಇರಬಹುದು ಎಂದು ಕರಾವಳಿ ಭಾಗದ ಜನರನ್ನು ಅವಮಾನಿಸಿದ್ದಾರೆ…!!


“ದಕ್ಷಿಣ ಕನ್ನಡದ ಮೇಲೆ ಒಂದು ಕಣ್ಣಿಡಬೇಕು , ಗೌರಿ ಕೊಲೆಗಾರರು ಕರಾವಳಿಯಲ್ಲೇ ಇರಬಹುದು” ಎನ್ನುವ ಮೂಲಕ ಕರಾವಳಿಯ ಭಾಗದ ಜನತೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ…!

ಕರಾವಳಿ ಹಿಂದೂಗಳ ಭದ್ರಕೋಟೆ ಎಂಬೂದು ದೇಶಕ್ಕೆ ತಿಳಿದ ವಿಚಾರ. ಆದರೆ ಇದೀಗ ಗೌರಿ ಪರ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ರಾಜ್ಯ ಸರಕಾರವನ್ನು ದಕ್ಷಿಣ ಕನ್ನಡದ ಜನತೆಯ ಮೇಲೆ ಒಂದು ಕಣ್ಣಿಡಿ ಎಂದು ಎಚ್ಚರಿಸಿದ್ದಾರೆ…!!

ರಾಜ್ಯದಲ್ಲಿ ನಡೆಯುತ್ತಿರುವ ಹಲ್ಲೆ ಕೊಲೆಗಳಿಗೆ ನರೇಂದ್ರ ಮೋದಿಯವರೇ ಕಾರಣ ಎಂದು ಎಚ್ ಎಸ್ ದೊರೆಸ್ವಾಮಿ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ…!! ಬಿಜೆಪಿ ಸರಕಾರವನ್ನು ದೇಶದಿಂದ ಓಡಿಸಬೇಕು,ಮುಂದಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸೋಲಿಸಬೇಕು ಎಂದು ‘ಗೌರಿ ದಿನ’ ಕಾರ್ಯಕ್ರಮದಲ್ಲಿ ದೊರೆಸ್ವಾಮಿ ಹೇಳಿದ್ದಾರೆ.
ಈ ಮೂಲಕ ಇಂದು ನಡೆದ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ನಡೆದ ಘಟನೆಗಳಿಗೆ ರಾಜ್ಯ ಸರಕಾರವನ್ನು ಪ್ರಶ್ನಿಸುವ ಬದಲು ಕೇಂದ್ರದ ಮೋದಿ ಸರಕಾರವನ್ನು ಪ್ರಶ್ನಿಸಿದ್ದಾರೆ…!!

ರಾಜ್ಯ ಸರಕಾರದ ಹಸ್ತಕ್ಷೇಪದಿಂದಲೇ ನಡೆದ ಈ ಕಾರ್ಯಕ್ರಮ ರಾಜಕೀಯ ಪ್ರೇರಿತ ಎಂಬೂದು ಬಹಳ ಅನುಮಾನಗಳಿಗೆ ಕಾರಣವಾಗಿದೆ…!!! ರಾಜ್ಯ ಸರಕಾರ ತನ್ನ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಕಾಂಗ್ರೆಸ್ ಸರಕಾರ ಆಡಳಿತದ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬೂದಂತು ಸ್ಪಷ್ಟ…!!!
–ಅರ್ಜುನ್

Tags

Related Articles

Close