ಪ್ರಚಲಿತ

ಬ್ರೇಕಿಂಗ್!! ರಾಹುಲ್ ಆಗಮನದಂದು ರಾಜ್ಯ ಬಂದ್‍ಗೆ ಕರೆ ಕೊಟ್ಟ ಬಿಜೆಪಿ!! ಯಡಿಯೂರಪ್ಪನವರ ಡಿಮ್ಯಾಂಡ್ ಏನು ಗೊತ್ತಾ?!

ಮಹದಾಯಿ ವಿಚಾರವಾಗಿ ಕರ್ನಾಟಕಕ್ಕೆ ಮೋದಿ ಅಮಿತ್ ಶಾ ಬರುತ್ತಾರೆಂಬ ಸುದ್ಧಿ ಕೇಳುತ್ತಿದ್ದಂತೆಯೇ ಸರಕಾರ ಕರ್ನಾಟಕ ಬಂದ್‍ಗೆ ಕರೆ ನೀಡಿತ್ತು!! ಅದಕ್ಕೆ ಬೆಣ್ಣೆ ಸವರುವಂತೆ ಕಾಂಗ್ರೆಸ್ ಕೂಡಾ ಬೆಂಬಲವನ್ನು ವ್ಯಕ್ತಪಡಿಸುತ್ತಾನೆ ಬಂದಿದೆ.. ಒಂದು ಸರಕಾರ ಎಂದರೆ ಅದು ಯಾವ ರೀತಿಯಾಗಿ ಕೆಲಸ ನಿರ್ವಹಿಸಬೇಕೆಂದರೆ ಯಾವ ಸಂಘಟನೆಗಳು ಅಥವಾ ಯಾವುದಾದರೂ ಪಕ್ಷಗಳು ಬಂದ್‍ಗೆ ಕರೆ ನೀಡಿತ್ತೇ ಆಗಿದ್ದಲ್ಲಿ ಅದನ್ನು ಬೆಂಬಲಿಸದೆ ಅದಕ್ಕೆ ಸರಿಯಾದ ಪರಿಹಾರೋಪಾಯವನ್ನು ಹುಡುಕಿ ಬಂದ್ ಆಗದಂತೆ ನೋಡಿಕೊಳ್ಳ ಬೇಕು… ಒಂದು ದಿನ ಏನಾದರೂ ಕರ್ನಾಟಕ ಸಂಪೂರ್ಣ ಬಂದ್ ಆಗಿದ್ದೇ ಆದಲ್ಲಿ ಎಷ್ಟು ನಷ್ಟ ಅನುಭವಿಸ ಬೇಕಾಗುತ್ತದೆ..

ಈ ಕಾಂಗ್ರೆಸ್ ಪಕ್ಷ ಎಷ್ಟೊಂದು ನಾಟಕವಾಡುತ್ತೆ ಎಂಬುವುದು ಮತ್ತೊಮ್ಮೆ ಸಾಭೀತಾಗಿದೆ. ಸರ್ಕಾರ ಜನರ ಒಳಿತಿಗಾಗಿ ಹಾಗೂ ಜನರ ಕ್ಷೇಮಕ್ಕಾಗಿ ಆಡಳಿತ ನಡೆಸಬೇಕೇ ಹೊರತು ರಾಜಕೀಯ ದುರುದ್ಧೇಶವನ್ನು ಇಟ್ಟುಕೊಂಡು ತಮ್ಮ ಅಧಿಕಾರವನ್ನು ನಡೆಸಲೇಬಾರದು. ಆದರೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ತನ್ನದೇ ಹಿಟ್ಲರ್ ಶೈಲಿಯಲ್ಲಿ ಆಡಳಿತವನ್ನು ನಡೆಸುತ್ತಿದೆ. ಕಳೆದ ಐದು ವರ್ಷದಿಂದ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಂದು ವಿರೋಧ ಪಕ್ಷವನ್ನು ಮಣಿಸುವತ್ತಲೇ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಮತ್ತೆ ತನ್ನ ಆಡಳಿತವನ್ನು ದುರುಪಯೋಗಪಡಿಸಿಕೊಂಡು ಜನವಿರೋಧಿ ಕೆಲಸಕ್ಕೆ ಇಳಿದಿದೆ.

ಕನ್ನಡ ಪರ ಸಂಘಟನೆಗಳು ಘೋಷಿಸಿರುವ ರಾಜ್ಯ ಬಂದ್‍ಗೆ ಹಿಂಬಾಗಿಲಿನಿಂದ ಸಹಕಾರ ನೀಡುತ್ತಿರುವುದೇ ರಾಜ್ಯ ಕಾಂಗ್ರೆಸ್ ಸರಕಾರ. ಈ ಒಂದು ವಿಚಾರ ಈ ಮೊದಲೇ ಬಟಾ ಬಯಲಾಗಿತ್ತು… ಈ ಹಿಂದೆ 28ಕ್ಕೆ ಕರ್ನಾಟಕ ರಾಜ್ಯ ಬಂದ್‍ಗೆ ಕನ್ನಡ ಪರ ಸಂಘಟನೆಗಳು ನಿರ್ಧರಿಸಿದ್ದವು. ಮಹದಾಯಿ ನೀರಿನ ವಿಚಾರವಾಗಿ ನ್ಯಾಯಕ್ಕಾಗಿ ಸರ್ಕಾರಗಳ ವಿರುದ್ಧ ಜನವರಿ 28 ಕರ್ನಾಟಕ ಬಂದ್ ಮಾಡಿ ಹೋರಾಟ ನಡೆಸುವುದಾಗಿ ಘೋಷಣೆ ಮಾಡಿದ್ದವು. ಆದರೆ ಈಗ ಧಿಡೀರ್ ರಾಜ್ಯ ಬಂದ್‍ನ ದಿನಾಂಕವೇ ಬದಲಾಗಿ ಹೋಗಿತ್ತು.

ನಾಳೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯುವ ಪರಿವರ್ತನಾ ಯಾತ್ರೆ ನಾಳೆ ಮೈಸೂರಿನಲ್ಲಿ ನಡೆಯಲಿದೆ.. ಈ ಯಾತ್ರೆಗೆ ಅಮಿತ್ ಶಾ ಆಗಮಿಸಿ ಭಾಗವಹಿಸಲಿದ್ದಾರೆ. ಆದರೆ ಈ ಬೃಹತ್ ಯಾತ್ರೆಯನ್ನು ಶತಾಯಗತಾಯ ವಿಫಲಗೊಳಿಸಲೇ ಬೇಕು ಎಂಬ ಹಠ ಕಟ್ಟಿಕೊಂಡಿರುವ ಕಾಂಗ್ರೆಸ್ ಪಕ್ಷ ಈಗ ಬಂದ್ ರಾಜಕೀಯ ಮಾಡಲು ಮುಂದಾಗಿದ್ದು 28ಕ್ಕೆ ಬಂದ್ ಇದ್ದದ್ದು ಹಠಾತ್ತನೇ ತಡೆದು ಮತ್ತೊಂದು ಬಿಗ್ ಪ್ಲಾನ್ ಮಾಡಿದ್ದರು…

ಜನವರಿ 28ಕ್ಕೆ ನಡೆಯಬೇಕಾಗಿದ್ದ ಕರ್ನಾಟಕ ರಾಜ್ಯ ಬಂದ್‍ನ ದಿನಾಂಕ ಬದಲಾವಣೆಯಾಗಿ ಅಮಿತ್ ಶಾ ಮೈಸೂರಿಗೆ ಆಗಮಿಸುವ, ಅಂದರೆ ನಾಳೆ ರಾಜ್ಯ ಬಂದ್ ಮಾಡಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ. ಆದರೆ ಕನ್ನಡ ಸಂಘಟನೆಗಳು ನಿರ್ಧರಿಸಿದ ಈ ಬಂದ್ ಘೋಷಣೆಯ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಪ್ಲಾನಿಂಗ್ ಇದೆ ಎಂಬುವುದು ಈ ಮೊದಲೇ ಬಯಲಾಗಿತ್ತು.. ಅಮಿತ್ ಶಾ ಭಾಗವಹಿಸುವ ಮೈಸೂರಿನ ಪರಿವರ್ತನಾ ಯಾತ್ರೆಯು ವಿಫಲವಾಗಲೇ ಬೇಕು ಎಂಬ ಉದ್ಧೇಶದಿಂದ ಕನ್ನಡ ಸಂಘಟನೆಗಳೊಂದಿಗೆ ಕೈಜೋಡಿಸಿ ರಾಜ್ಯ ಸರ್ಕಾರವೇ ರಾಜ್ಯ ಬಂದ್‍ಗೆ ಬೆಂಬಲ ನೀಡಿತ್ತು..

ಫೆಬ್ರವರಿ 4 ರಂದು ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಕರ್ನಾಟಕದಲ್ಲಿ ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ ಪರಿವರ್ತನಾ ಯಾತ್ರೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಇದನ್ನೇ ಗಮನದಲ್ಲಿಟ್ಟುಕೊಂಡ ಕಾಂಗ್ರೆಸ್ ಪಕ್ಷ ಮತ್ತೆ ಫೆಬ್ರವರಿ 4ರಂದು ಬಂದ್ ನಡೆಸಲು ಕನ್ನಡ ಸಂಘಟನೆಗಳಿಗೆ ಬೆಂಬಲವನ್ನು ನೀಡಿತ್ತು.. ಪ್ರಧಾನಿ ಮೋದಿಯವರು ರಾಜ್ಯಕ್ಕೆ ಬಂದರೆ ಸಾಕು ಕಾಂಗ್ರೆಸ್ ಪಕ್ಷ ಬೆಚ್ಚಿ ಬೀಳುತ್ತೆ. ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಲು ಹೊರಟಿರುವ ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಕಾಲಿಟ್ಟರೆ ರಾಜ್ಯದಲ್ಲೂ ಬದಲಾವಣೆ ಆಗೋದು ಖಂಡಿತ. ಈ ಕಾರಣದಿಂದಲೇ ರಾಜ್ಯದಲ್ಲಿ ಕನ್ನಡ ಸಂಘಟನೆಗಳು ಬಂದ್‍ಗೆ ಬೆಂಬಲವನ್ನು ನೀಡುತ್ತಿದೆ ಎಂಬುವುದು ಬಿಜೆಪಿ ಅಲ್ಲದೆ ಇದು ಎಲ್ಲರಿಗೂ ತಿಳಿದ ವಿಷಯ!!
ರಾಹುಲ್ ಬರುವ ದಿನವೇ ಬಂದ್‍ಗೆ ಕರೆ ನೀಡಿದ ಯಡಿಯೂರಪ್ಪ!!

ಇಷ್ಟೆಲ್ಲಾ ಕುತಂತ್ರಗಳನ್ನು ಮಾಡಿದ ಕಾಂಗ್ರೆಸ್‍ಗೆ ಈಗ ಬಿಜೆಪಿ ಬಾಣವನ್ನು ಬಿಟ್ಟಿದೆ… ಫೆಬ್ರವರಿ 10 ರಿಂದ 13ರ ಒಳಗಾಗಿ ರಾಹುಲ್ ಗಾಂಧಿ ರಾಜ್ಯ ಭೇಟಿಯ ಸಮಯದಲ್ಲಿ ಬಿಜೆಪಿ ಬಂದ್‍ಗೆ ಕರೆ ನೀಡಿದೆ… ಮಡಿಕೇರಿ ಪರಿವರ್ತನಾ ಯಾತ್ರೆಯಲ್ಲಿರುವ ಯುಡಿಯೂರಪ್ಪನವರು ಈ ಹೇಳಿಕೆಯನ್ನು ನೀಡಿದ್ದಾರೆ…ಯಾಕೆಂದರೆ ಮಹದಾಯಿ ವಿಚಾರವಾಗಿ ತುಟಿಕ್ ಪಿಟಿಕ್ ಎನ್ನದ ರಾಹುಲ್ ಗಾಂಧಿ ಅಂದು ಮಹದಾಯಿ ವಿಚಾರವಾಗಿ ಕರ್ನಾಟಕಕ್ಕೆ ನೀರು ಬಿಡುವಂತೆ ಪ್ರಸ್ತಾವನೆ ಮಾಡಬೇಕು ಎನ್ನುವ ಉದ್ಧೇಶದಿಂದ ಯಡಿಯೂರಪ್ಪನವರು ರಾಹುಲ್ ಗಾಂಧಿ ಬರುವ ದಿನ ಬಂದ್‍ಗೆ ಕರೆ ನೀಡಿದ್ದಾರೆ..

ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಬರುವ ದಿನದಂದು ಕನ್ನಡ ಸಂಘಟನೆಗಳು ಹಾಗೂ ಕಾಂಗ್ರೆಸ್ ಪಕ್ಷಗಳು ಸೇರಿ ಬಂದ್‍ಗೆ ಕರೆ ನೀಡಿತ್ತು.. ಈ ಬಂದ್‍ಗೆ ಭಾರತೀಯ ಜನತಾ ಪಕ್ಷ ಸೆಡ್ಡು ಹೊಡೆದಿದೆ.. “ನೀವು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರು ಕರ್ನಾಟಕಕ್ಕೆ ಆಗಮಿಸುವ ದಿನವೇ ಕರ್ನಾಟಕ ಬಂದ್‍ಗೆ ಕರೆ ನೀಡುವುದಾದರೆ ನಾವೂ ಸುಮ್ಮನಿರೋದಿಲ್ಲ. ನಮಗೂ ರಾಜಕೀಯ ಮಾಡೋಕ್ಕೆ ಬರುತ್ತೆ. ರಾಹುಲ್ ಗಾಂಧಿಗೆ ರಾಜ್ಯಕ್ಕೆ ಬರುವ ದಿನವೇ ನಾವೂ ಕರ್ನಾಟಕ ಬಂದ್‍ಗೆ ಕರೆಕೊಡುತ್ತೇವೆ” ಎಂದು ಯಡಿರಪ್ಪನವರು ಪರಿವರ್ತನಾ ಯಾತ್ರೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ… ಅದಲ್ಲದೆ ಈ ಮೊದಲೇ ವಿಧಾನ ಸಭಾ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕೂಡಾ ಹೇಳಿಕೆಯನ್ನು ಕೂಡಾ ನೀಡಿದ್ದರು..

ಮಹದಾಯಿ ವಿಚಾರವಾಗಿ ಅಮಿತ್ ಶಾ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹಾಗೂ ಯಡಿಯೂರಪ್ಪನವರು ಮಾತನಾಡಿ ಈ ಬಗ್ಗೆ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳುವಂತೆ ಮಾತನಾಡಿ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.. ಆದರೆ ಎಲ್ಲಿ ಕರ್ನಾಟಕಕ್ಕೆ ಗೋವಾ ಮುಖ್ಯಮಂತ್ರಿ ನೀರು ಬಿಡಲು ಒಪ್ಪಿಕೊಳ್ಳುತ್ತಾರೋ ಎಂಬುವುದನ್ನು ಅರಿತುಕೊಂಡ ಕಾಂಗ್ರೆಸ್ ಮಹದಾಯಿ ವಿಚಾರವಾಗಿ ಪ್ರತಿಭಟನೆಯನ್ನು ಮಾಡಿದ್ದರು.. ಹಾಗಾಗಿ ಈ ಗೊಂದಲಕ್ಕೆ ಒಳಗಾದ ಮನೋಹರ್ ಪರಿಕ್ಕರ್ ಕೂಡಾ ಸಹಜವಾಗಿಯೇ ಕರ್ನಾಟಕಕ್ಕೆ ನೀರು ಕೊಡಲು ಹಿಂದೆ ಸರಿದರು.. ಇದರ ಹಿಂದೆ ಇರುವ ಕೈ ಕಾಂಗ್ರೆಸ್ಸಿನದು..ಕಾಂಗ್ರೆಸ್‍ನವರು ಮಹದಾಯಿ ವಿಚಾರವಾಗಿ ನರೇಂದ್ರ ಮೋದಿಯವರು ಮಾತನಾಡಬೇಕು… ಎಂದು ಬೊಬ್ಬೆ ಇಡುತ್ತಿದ್ದ ಇವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಈ ವಿಚಾರವಾಗಿ ಯಾತಕ್ಕಾಗಿ ಬಾಯಿ ಮುಚ್ಚಿದ್ದಾರೆ ಎಂಬುವುದು ತಿಳಿಯುತ್ತಿಲ್ಲ… ಅಂದು ಗೋವಾ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಸೋನಿಯಾ ಗಾಂಧಿ ನೀವು ಏನೂ ಚಿಂತೆಯನ್ನು ಮಾಡಬೇಡಿ!! ಕರ್ನಾಟಕಕ್ಕೆ ಒಂದು ಹನಿ ನೀರೂ ಬಿಡಲ್ಲ ಎಂದು ಹೇಳಿದ್ದರು..ಇದೆಲ್ಲಾ ಓಟುಗಾಗಿ ಕಾಂಗ್ರೆಸ್‍ನವರು ಏನು ಮಾಡಲೂ ತಯಾರಿರುತ್ತಾರೆ..

ಮಹದಾಯಿ ವಿಚಾರವಾಗಿ ಅಮಿತ್ ಶಾ ಸ್ಪಂಧಿಸಿದ್ದಾರೆ. ಆದರೆ ರಾಹುಲ್ ಗಾಂಧಿ ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ತಾಕತ್ತಿದ್ದರೆ ರಾಹುಲ್ ಗಾಂಧಿಯಿಂದ ಮಹದಾಯಿ ಬಗ್ಗೆ ಪ್ರತಿಕ್ರಿಯೆಯನ್ನು ಕಾಂಗ್ರೆಸ್ ಹೇಳಿಸಲಿ” ಎಂದು ಯಡಿಯೂರಪ್ಪ ಹೇಳಿದ್ದಾರೆ..

ರಾಜ್ಯದ ಭಾರತೀಯ ಜನತಾ ಪಕ್ಷದ ನಾಯಕರು ಅಮಿತ್ ಶಾ ಮಧ್ಯಸ್ಥಿಕೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇವರನ್ನು ಕರೆಸಿ ಮಾತುಕತೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ನೀಡಿದ್ದರು. ಸ್ವತಃ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಈ ಬಗ್ಗೆ ಸಹಮತವನ್ನು ವ್ಯಕ್ತಪಡಿಸಿದ್ದರು. ಆದರೆ ಅದರ ಬೆನ್ನಲ್ಲೇ ಗೋವಾದ ಕಾಂಗ್ರೆಸ್ ಮುಖಂಡರು ಇದರ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ಯಾವೊಬ್ಬ ರಾಜ್ಯದ ಕಾಂಗ್ರೆಸ್ಸಿಗನೂ ಇದರ ಬಗ್ಗೆ ಮಾತಾಡಲ್ಲ. ಮಹದಾಯಿ ವಿಚಾರವಾಗಿ ಗೋವಾ ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಮನವಿಯನ್ನು ರಾಜ್ಯ ಕಾಂಗ್ರೆಸ್ ಮಾಡಿಲ್ಲ. ಸ್ವತಃ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯೇ ಕರ್ನಾಟಕಕ್ಕೆ ನೀರು ನೀಡಲು ನಾನು ಬಿಡೋದಿಲ್ಲ ಎಂದು ಗೋವಾ ಜನತೆಗೆ ಭರವಸೆ ನೀಡಿದ್ದರು. ಹಾಗಾದರೆ ನಿಜವಾಗಿಯೂ ಪ್ರಶ್ನೆ ಮಾಡಬೇಕಾದದ್ದು ಯಾರನ್ನು?

ಒಟ್ಟಿನಲ್ಲಿ ಕನ್ನಡ ಸಂಘಟನೆಗಳನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು, ಭಾರತೀಯ ಜನತಾ ಪಕ್ಷದ ವಿರುದ್ಧ ಸಮರ ಸಾರುತ್ತಿರುವ ರಾಜ್ಯ ಕಾಂಗ್ರೆಸ್ ಪಕ್ಷ ಅದ್ಯಾವ ನೆಲೆಯಲ್ಲಿ ರಾಜಕೀಯ ಮಾಡುತ್ತಿದೆಯೋ ಗೊತ್ತಿಲ್ಲ. ಆದರೆ ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಇದುವೇ ಕಾಂಗ್ರೆಸ್ ಪಕ್ಷಕ್ಕೆ ಕಂಟಕವಾಗುವ ಎಲ್ಲಾ ಸಾಧ್ಯತೆಗಳಿವೆ.

ಪವಿತ್ರ

Tags

Related Articles

Close