ಪ್ರಚಲಿತ

ರವಿ ಬೆಳಗೆರೆ ಎರಡನೇ ಪತ್ನಿ ದಿಢೀರ್ ನಾಪತ್ತೆ!!!

ಪತ್ರಕರ್ತ ರವಿ ಬೆಳಗೆರೆ ತನ್ನ ಸಹೋದ್ಯೋಗಿ ಮಿತ್ರ ಸುನಿಲ್ ಹೆಗ್ಗರವಳ್ಳಿಯನ್ನು ಕೊಲೆಮಾಡಲು ಭೀಮಾ ತೀರದ ಹಂತಕರಿಗೆ ಸುಪಾರಿ ನೀಡಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ರವಿ ಬೆಳಗೆರೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ರವಿ ಬೆಳಗೆರೆ ಸುನಿಲ್‍ನನ್ನು ಕೊಲೆ ನಡೆಸಲೆಂದು ಸುಪಾರಿ ನೀಡಲು ಆತನಿಗೆ ತನ್ನ ಎರಡನೇ ಪತ್ನಿ ಯಶೋಮತಿಯೊಂದಿಗೆ ಇದ್ದ ಅಕ್ರಮ ಸಂಬಂಧವೇ ಕಾರಣ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಲ್ಲದೆ ತನ್ನ ಫೇಸ್‍ಬುಕ್ ಸ್ಟೇಟಸ್‍ನಲ್ಲಿಯೂ ರವಿಬೆಳಗೆರೆ ಈ ವಿಷಯವನ್ನು ಸೂಚ್ಯವಾಗಿ ವಿವರಿಸಿದ್ದರು.

ರವಿಬೆಳಗೆರೆಯ ಕೈಯ್ಯಲ್ಲಿ ಇಂಥದೊಂದು ಅಚಾನಕ್ ನಡೆಯಲು ಆಕೆಯ ಪತ್ನಿಯ ಮೇಲಿನ ಕುರುಡು ಪ್ರೀತಿಯೇ ಕಾರಣ ಎನ್ನುವುದು ಬೆಳಕಿಗೆ ಬಂದಿತ್ತು. ಅಲ್ಲದೆ ರವಿಯ ಎರಡನೇ ಪತ್ನಿ ಯಶೋಮತಿಗೆ ಸುನಿಲ್ ಹೆಗ್ಗರವಳ್ಳಿ ಜೊತೆ ಅನೈತಿಕ ಸಂಬಂಧ ಇರುವುದು ಬೆಳಕಿಗೆ ಬಂದಿದ್ದು, ಇದನ್ನು ಕಂಡುಕೊಂಡ ರವಿ ಬೆಳಗೆರೆ ಸುನಿಲ್‍ನನ್ನು ಮುಗಿಸಲು ಭೀಮಾ ತೀರದ ಹಂತಕರಿಗೆ ಸುಪಾರಿ ನೀಡಿದ್ದರು.

ಬೆಂಗಳೂರು ಸಿಸಿಬಿ ಪೆÇಲೀಸರಿಂದ ಎರಡನೇ ಪತ್ನಿ ಯಶೋಮತಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಯಾವುದೇ ಕ್ಷಣದಲ್ಲಿ ಸಿಸಿಬಿ ವಿಚಾರಣೆ ಹಾಜರಾಗುವಂತೆ ಹೇಳೋ ಸಾಧ್ಯತೆ ಇದ್ದು, ಹೆಗ್ಗರವಳ್ಳಿ ಜೊತೆ ನಂಟಿನ ಬಗ್ಗೆ ಮಾಹಿತಿ ಸಂಗ್ರಹಿಸುವ ನಿರೀಕ್ಷೆ ಇದೆ. ರವಿ ಬೆಳಗೆರೆ ಬೆದರಿಕೆ ಬಗ್ಗೆಯೂ ಪೆÇಲೀಸರು ವಿಚಾರಣೆ ನಡೆಸಲಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಐಪಿಸಿ 164 ಅನ್ವಯ ಯಶೋಮತಿಯ ಸ್ವಇಚ್ಛಾ ಹೇಳಿಕೆ ಪಡೆಯುವ ಸಾಧ್ಯತೆ ಇದೆ. ಆದ್ದರಿಂದ ತನ್ನ ವಿಚಾರಣೆ ನಡೆಯುವುವದರಿಂದ ಹೆದರಿ ಶುಕ್ರವಾರ ರಾತ್ರಿಯಿಂದ 2ನೇ ಪತ್ನಿ ಯಶೋಮತಿ ನಾಪತ್ತೆಯಾಗಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರೋ ಮನೆಯಲ್ಲಿ ಸದ್ಯ ಯಶೋಮತಿ ಇಲ್ಲ. ತನ್ನ ಫೇಸ್‍ಬುಕ್ ಅಕೌಂಟ್ ಕೂಡ ಕ್ಲೋಸ್ ಮಾಡಿದ್ದಾರೆ. ಅಲ್ಲದೆ ಯಶೋಮತಿ ಯಾವುದೇ ಫೆÇೀನ್ ಕರೆಗಳನ್ನ ಸ್ವೀಕರಿಸುತ್ತಿಲ್ಲ. ಸುನೀಲ್ ಹೆಗ್ಗರವಳ್ಳಿ ಹಾಗೂ ಯಶೋಮತಿ ನಡುವೆ ಅನೈತಿಕ ಸಂಬಂಧವಿತ್ತು. ಈ ಬಗ್ಗೆ ಮನೆ ಕೆಲಸದಾಕೆ ರವಿ ಬೆಳಗೆರೆಗೆ ಮಾಹಿತಿ ನೀಡಿದ್ದರು. ಈ ಮಧ್ಯೆ ಒಂದು ಬಾರಿ ರವಿ ಬೆಳಗೆರೆ ಮಧ್ಯರಾತ್ರಿ ಮನೆಗೆ ಬಂದಾಗ ಸುನೀಲ್ ಓಡಿಹೋಗಿದ್ದರು ಎಂಬ ಮಾತುಗಳೂ ಕೂಡ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ರವಿ ಬೆಳಗೆರೆ ಸುನೀಲ್ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎಂದು ತಿಳಿದುಬಂದಿದೆ.

`ಹೆಜ್ಜೆ ಇಡುವಾಗ ತುಂಬಾ ಎಚ್ಚರ ಬೇಕು. ಗಂಡ ರಣಭೂಮಿಯಲ್ಲಿರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿರ್ವತೆಯೇ?’

ಈ ವಾಕ್ಯ ಖ್ಯಾತ ಪತ್ರಕರ್ತ ರವಿಬೆಳಗೆರೆಯವರದ್ದು. ಸುನಿಲ್ ಹೆಗ್ಗರವಳ್ಳಿ ಹತ್ಯೆ ಸುಪಾರಿಗೂ ಮುನ್ನ ರವಿಬೆಳಗೆರೆ ಅವರು ಫೇಸ್‍ಬುಕ್‍ನಲ್ಲಿ ಹಾಕಿರುವ ಸ್ಟೇಟಸ್ ಇಂದು ಭಾರೀ ಚರ್ಚೆಗೆ ಕಾರಣವಾಗಿತ್ತು. ತನ್ನ ಹೆಂಡತಿ ಜೊತೆಗಿನ ಫೆÇೀಟೋವನ್ನು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದ ರವಿಬೆಳಗೆರೆ ಆ ರೀತಿ ಸ್ಟೇಟಸ್ ಹಾಕಿದ್ದರು. ಆ ಸ್ಟೇಟಸ್ ಹಾಕಿ ಮೂರು ತಿಂಗಳಾಗುತ್ತಿದ್ದಂತೆ ಸುಪಾರಿ ಹತ್ಯೆಯ ಹಿನ್ನೆಲೆ ರವಿ ಅರೆಸ್ಟ್ ಆಗಿದ್ದಾರೆ. ಕ್ರೈಂ ಡೈರಿಯಲ್ಲಿ ಮಿಂಚುತ್ತಿದ್ದ ವ್ಯಕ್ತಿಯೊಬ್ಬ ಇಂದು ಪೆÇಲೀಸ್ ಡೈರಿಯಲ್ಲಿ ಖಾಯಂ ಸ್ಥಾನ ಪಡೆಯುವಂತಾಯಿತು. ಪಾಪಿಗಳ ಲೋಕದಲ್ಲಿ ಸಿಕ್ಕಿನಬೀಳುವಂತಾಯಿತು.

ರವಿಬೆಳಗೆರೆಗೆ ಎರಡನೇ ಹೆಂಡತಿ ಯಶೋಮತಿಗೆ ಮಗನೂ ಇದ್ದಾನೆ. ರಾಜ್ ಲೀಲಾ ವಿನೋದ ಪುಸ್ತಕ ಬಿಡುಗಡೆಯ ಸಂದರ್ಭ ತನ್ನ ಹೆಂಡತಿ ಹಾಗೂ ಮಗನನ್ನು ಘಂಟಾಘೋಷವಾಗಿ ಪರಿಚಯ ಮಾಡಿಸಿದ್ದರು. ಆದರೆ ಅದೇ ಹೆಂಡತಿಯ ಮೇಲಿನ ಪ್ರೀತಿ ಇಂದು ರವಿಬೆಳಗೆರೆ ಕೈಗಳಿಗೆ ಉಕ್ಕಿನ ಕಡಗ ಬೀಳಿಸುವಂತೆ ಮಾಡಿದೆ. ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಶಶಿ ಮುಂಡೇವಾಡಗಿಗೆ ರವಿ 30 ಲಕ್ಷಕ್ಕೆ ಸುಪಾರಿ ನೀಡಿದ್ದರು. ಈತ ಶಾರ್ಪ್‍ಶೂಟರ್ ತಾಹಿರ್ನನ್ನು ನೇಮಿಸಿದ್ದು, ಇದಕ್ಕಾಗಿಯೇ ಆತ ಕಂಟ್ರಿಮೇಡ್ ಪಿಸ್ತೂಲ್ ಖರೀದಿಸಿದ್ದ. ಇದೆಲ್ಲಾ ಬೆಳಕಿಗೆ ಬರುತ್ತಿದ್ದಂತೆ ಈ ಮುಂಚೆ ರವಿ ಹಾಕಿದ್ದ ಫೇಸ್‍ಬುಕ್ ಪೆÇೀಸ್ಟ್ ಕೂಡಾ ಭಾರೀ ಸದ್ದು ಮಾಡುತ್ತಿದೆ. ಹೆಂಡತಿ ಮೇಲಿನ ಅತಿ ಪ್ರೀತಿ ರವಿಬೆಳಗೆರೆಯನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎನ್ನುವುದು ಇದೀಗ ಬಟಾಬಯಲಾದ ಸತ್ಯ..

ವಿಜಯಪುರದ ಜೈಲಿನಲ್ಲಿದ್ದ ಕೈದಿ ನೀಡಿದ್ದ ಸುಳಿವು ಆಧರಿಸಿ ಸುಪಾರಿ ಕಿಲ್ಲರ್ ನನ್ನು ಬಂಧಿಸಿದ್ದ ಪೆÇಲೀಸರು, ಯಲಹಂಕ ಮನೆಯಲ್ಲಿ ಮೂರು ರಿವಾಲ್ವರ್ ವಶಪಡಿಸಿಕೊಂಡಿದ್ದರು. ಆರಂಭದಲ್ಲಿ ಈತ ನನಗೆ ಈ ಪ್ರಕರಣದ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದನಾದರೂ ಎಸ್‍ಐಟಿ ಈ ಮನೆಯಲ್ಲಿ ತೀವ್ರ ಪರಿಶೋಧನೆ ನಡೆಸಿತ್ತು. ಈ ವೇಳೆ ಮನೆಯಲ್ಲಿದ್ದ ಖಾಲಿ ಟಿವಿಯ ಒಳಗಡೆ 3 ರಿವಾಲ್ವರ್ ಸಿಕ್ಕಿತ್ತು.

ಇದೀಗ ರವಿ ಬೆಳಗೆರೆ ಸುಪಾರಿ ಕೊಲೆಗೆ ಸ್ಕೆಚ್ ಹಾಕಿರುವುದನ್ನು ಒಪ್ಪಿಕೊಂಡಿದ್ದು, ಐಪಿಸಿ ಸೆಕ್ಷನ್ 307ರ ಪ್ರಕಾರ ಕೊಲೆಗೆ ಸಂಚು, 120(ಬಿ) ಪ್ರಕಾರ ಪಿತೂರಿ ಮಾಡಿದ ಕೇಸ್‍ನಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಸಿಸಿಬಿ ಎಸಿಪಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಕೇಸ್ ದಾಖಲಾಗಿದ್ದು ವಿಚಾರಣೆ ಮುಂದುವರಿದಿದೆ.

source: http://publictv.in/ravi-belageres-second-wife-yashomathi-missing-facebook-account-closed/

ಚೇಕಿತಾನ

Tags

Related Articles

Close