ಪ್ರಚಲಿತ

ಸ್ಫೋಟಕ ಮಾಹಿತಿ ಬಹಿರಂಗ! ಜಾಹೀರಾತಿಗೋಸ್ಕರ ಕರ್ನಾಟಕ ಕಾಂಗ್ರೆಸ್ ಸರಕಾರ ಖರ್ಚು ಮಾಡಿದ ಹಣದ ಮೊತ್ತ ತಿಳಿದರೆ ನಿಮಗೆ ಹೃದಯಾಘಾತ ಖಂಡಿತ!!

ಕೊನೆಗೂ ಸಿದ್ಧರಾಮಯ್ಯ ಸರಕಾರ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕೆ ಯಾವ ಮಟ್ಟಕ್ಕಾದರೂ ಇಳಿಯುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ! ಹಗರಣಗಳ ಮೇಲೆ ಹಗರಣ! ಅನ್ಯಾಯಗಳ ಮೇಲೆ ಅನ್ಯಾಯ! ಅಕ್ರಮ ಭೂ ಉಸ್ತುವಾರಿ, ಎಂದೆಲ್ಲ ಹಗರಣಗಳ ಸುರಿಮಳೆ ಸುರಿಸಿದ ರಾಜ್ಯ ಕಾಂಗ್ರೆಸ್ ಏನೂ ಗೊತ್ತಿಲ್ಲದ ಬೆಕ್ಕಿನಂತೆ ಕಣ್ಣುಮುಚ್ಚಿಯೇ ಮೀಸೆಯಡಿ ನಗೆಯಾಡುತ್ತಿತ್ತು!

ಕಳೆದ ನಾಲ್ಕೂವರೆ ವರ್ಷಗಳಿಂದ ನಿದ್ರಿಸುತ್ತಿದ್ದ ಸಿದ್ಧರಾಮಯ್ಯ ಸರಕಾರ, ಈಗ 2018 ರ ಕರ್ನಾಟಕ ಚುನಾವಣೆ ಸನಯದಲ್ಲಿ ನಿದ್ದೆಯಿಂದ ಎದ್ದಿದೆ! ಆದರೆ, ಈಗ ತನ್ನ ಪ್ರಚಾರಕ್ಕೋಸ್ಕರ, ಸರಕಾರದ ದುಡ್ಡನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿರುವ ಸಿದ್ಧರಾಮಯ್ಯ ಸರಕಾರ ಅದೆಷ್ಟೋ ಕೋಟಿಗಳನ್ನು ಸುರಿಯುತ್ತಿದೆ! ನೆನಪಿಡಿ! ರಾಜ್ಯದ ಅಭಿವೃದ್ಧಿಗೋಸ್ಕರವಲ್ಲ, ಬದಲಾಗಿ ತನ್ನ ಸ್ವ ಪ್ರಚಾರಕ್ಕೋಸ್ಕರ!

ತನ್ನ ಹೊಸ ಹೊಸ ಪ್ರಚಾರದ ಗೀಳಿಗೆ ಈಗ ಕಾಂಗ್ರೆಸ್ ಒಳಗಾಗುತ್ತಿದ್ದು, ತನ್ನ ನವನವೀನವಾದ ಚುನಾವಣೆ ಪ್ರಚಾರದ ಬ್ಯಾನರ್ರಿನಲ್ಲಿ ಸೋನಿಯಾ ಗಾಂಧಿ ಹಾಗೂ ಈಗಿನ ಕಾಂಗಿಗಳ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯ ವಿವಿಧ ವಿನ್ಯಾಸದ ಛಾಯಾಚಿತ್ರಗಳನ್ನು ವಿಶೇಷವಾಗಿ ಹಾಕಿದ್ದು, ಬ್ಯಾನರ್ ಗಳಿಗೆ ಯರ್ರಾಬಿರ್ರಿ ಖರ್ಚು ಮಾಡುತ್ತಿದೆ! ಸ್ವಂತ ಹಣವಲ್ಲ ಸ್ವಾಮಿ ಖರ್ಚು ಮಾಡುತ್ತಿರುವುದು, ಬದಲಾಗಿ ರಾಜ್ಯ ಸರಕಾರದ ಬೊಕ್ಕಸದಿಂದ!

ಇದಲ್ಲದೇ, ಇಲ್ಲಿಯವರೆಗೂ ಬರೋಬ್ಬರಿ 129 ಕೋಟಿ ರೂಗಳನ್ನು ಜಾಹೀರಾತಿಗಾಗಿ ಸಿದ್ದರಾಮಯ್ಯ ಖರ್ಚು ಮಾಡಿದ್ದಾರೆ ಎಂದು ಬೆಂಗಳೂರು ನಾಗರಿಕ ಹೋರಾಟ ಸಮಿತಿ ಯ ಉಪಾಧ್ಯಕ್ಷ ಬಿ.ಗಣೇಶ್ ಸಿಂಗ್ ಆರೋಪಿಸಿದ್ದಾರೆ.

ಬೃಹತ್ ಬೆಂಗಳೂರು ನಗರ ಪಾಲಿಕೆಯಲ್ಲಿ ಯಾವುದೇ ರೀತಿಯ ಹಣವನ್ನೂ ಪಾವತಿಸದೇ, 489 ಬಸ್ ನಿಲ್ದಾಣಗಳನ್ನು ಗುತ್ತಿಗೆಗೆ ತೆಗೆದುಕೊಂಡು ತನ್ನ ನಾಲ್ಕು ವರ್ಷದ ಮಹಾಸಾಧನೆಯನ್ನು ಬಿಂಬಿಸಲು ಹೊರಟಿದೆ ಸರಕಾರ! ಕಾರ್ಪೋರೇಷನ್ ಗೆ ಸಿದ್ಧರಾಮಯ್ಯ ಕೊಡಬೇಕಾಗಿರುವುದು ಇನ್ನೂ 13 ಕೋಟಿ ರೂಪಾಯಿಗಳು! ಇದಕ್ಜೆ ಸಂಬಂಧ ಪಟ್ಟ ಹಾಗೆ, ಬಿಬಿಎಂಪಿಯ ಜಾಹೀರಾತು ಘಟಕದ ಅಸಿಸ್ಟೆಂಟ್ ಕಮಿಷನರ್ ಈಗಾಗಲೇ ಎರಡು ಬಾರಿ ನೋಟೀಸ್ ಕಳುಹಿಸಿದ್ದರೂ, ಸಿದ್ದಣ್ಣ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ವಾಸ್ತವವಾಗಿ, ಬಿಬಿಎಂಪಿಯ ಹಣಗಳೆಲ್ಲವೂ ರಸ್ತೆ ಗುಂಡಿಗಳನ್ನು ಮುಚ್ಚಲಿಕ್ಕೆ, ಅದೆಷ್ಡೋ ಹಸಿದ ಹೊಟ್ಟೆಗಳನ್ನು ತುಂಬಿಸುವುದಕ್ಕೆ, ನಗರದ ಅಭಿವೃದ್ಧಿಗೆ
ಹೋಗುತ್ತದೆಂದು ಗೊತ್ತಿದ್ದರೂ ಸಹ, ಸಿದ್ಧರಾಮಯ್ಯ ತನ್ನ ಸ್ವಾರ್ಥಕ್ಕೆ ಇನ್ನೂ ಜಾಹೀರಾತುಗಳ ಬಾಡಿಗೆ ಕೊಡದೇ ಇರುವುದು ದೊಡ್ಡ ಅನ್ಯಾಯವಲ್ಲವೇ?! ಇವರ ತುಕ್ಕು ಹಿಡಿದ ಮುಖಗಳನ್ನು ಬ್ಯಾನರ್ ಮಾಡಿ ಹಾಕಿಸುವ ಬದಲು ಹಸಿದ ಹೊಟ್ಟೆಗಳಿಗೆ ಆಹಾರ ನೀಡಬಹುದಿತ್ತಲ್ಲವೇ?!

ಬಿಡಿ! ಸಣ್ಣ ಸಣ್ಣ ಮಕ್ಕಳ ಅನ್ನವನ್ನೇ ಕಿತ್ತುಕೊಂಡ ಸಿದ್ಧರಾಮಯ್ಯ ಇನ್ನು ಉಳಿದವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರಾ?! ಇದಕ್ಕೆಲ್ಲ ಯಾವ ರೀತಿಯ ಸಮರ್ಥನೆ ನೀಡುತ್ತಾರೆ?”! ಇಂತಹ ಕರ್ಮದ ಪಕ್ಷವನ್ನು ಎಲ್ಕಾದರೂ ನೋಡಿದ್ದೀರೇ?!

Source :https://www.newskarnataka.com/bangalore/cm-faces-charges-of-illegally-spending-govt-funds-for-publicity

– ಪೃಥು ಅಗ್ನಿಹೋತ್ರಿ

Tags

Related Articles

Close