ರಾಜ್ಯದಲ್ಲಿ ಕಾಂಗ್ರೆಸ್ ಎಂಬ ಮುಸಲ್ಮಾನ ಪ್ರೇಮಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಪ್ರಾರಂಭದ ಹಂತದಲ್ಲಿಯೇ ಮುಸಲ್ಮಾನರ ಮೇಲಿದ್ದ ಕೇಸುಗಳನ್ನು ವಾಪಾಸ್ ಪಡೆಯಲಾಗಿತ್ತು. ಮತ್ತೆ ಅಲ್ಪಸಂಖ್ಯಾತರ ಓಲೈಕೆಯನ್ನು ಶುರುವಿಟ್ಟುಕೊಂಡಿದ್ದರು ಕಾಂಗ್ರೆಸ್ ಮುಖಂಡರು. ಕಾಂಗ್ರೆಸ್ ನಾಯಕರು ಈ ಒಂದು ನಿರ್ಧಾರಕ್ಕೆ ಬಂದಿದ್ದು ಮಾತ್ರವಲ್ಲದೆ “ರಾಜ್ಯದಲ್ಲಿರುವ ಹಿಂದೂ ಕಾರ್ಯಕರ್ತರ ವಿರುದ್ಧ ಹೋರಾಡಿ, ನಿಮಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ” ಎಂದು ಹೇಳಿಕೆಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೀಡಿದ್ದರು. ಯಾವಾಗ ಮುಖ್ಯಮಂತ್ರಿಗಳೇ ಇಂತಹ ಹೇಳಿಕೆಯನ್ನು ನೀಡಿದರೋ ಅಂದಿನಿಂದ ರಾಜ್ಯದಲ್ಲಿ ಹಿಂದೂಗಳ ಮಾರಣ ಹೋಮಗಳೇ ನಡೆಯಲಾರಂಭಿಸಿತು. ಹಿಂದೂ ಕಾರ್ಯಕರ್ತರ ಸಾಲು ಸಾಲು ಹೆಣಗಳು ಬೀದಿಯಲ್ಲಿ ಬೀಳಲಾರಂಭಿಸಿತು. ಮೂಡುಬಿದಿರೆಯ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯ ಹತ್ಯೆಯಿಂದ ಸುರತ್ಕಲ್ ಕಾಟಿಪಳ್ಳದ ದೀಪಕ್ ರಾವ್ ಹತ್ಯೆಯವರೆಗೂ ಅದೆಷ್ಟೋ ಹಿಂದೂಗಳ ಹತ್ಯೆಗಳು ಈ ರಾಜ್ಯದಲ್ಲಿ ನಡೆದೇ ಹೋಗಿತ್ತು.
ಹತ್ಯೆಗಳ ಹಿಂದೆ ಇದೆಯಂತೆ ಈ ಗ್ರೂಪ್..!!!
ಈ ಎಲ್ಲಾ ಮತೀಯ ಹತ್ಯೆಗಳು ಪಿಎಫ್ಐ ಹಾಗೂ ಕೆಎಫ್ಡಿ ಸಂಗಟನೆಗಳು ಮಾಡುತ್ತಿದ್ದಾವೆ ಎನ್ನುವ ನಿಖರ ಮಾಹಿತಿ ಮಾತ್ರ ಸುಳ್ಳಲ್ಲ. ಆದರೆ ಈಗ ಈ ಸಾಲಿಗೆ ಮತ್ತೊಂದು ತಂಡ ಸೇರಿಕೊಂಡಿರುವ ಬಗ್ಗೆ ಗುಮಾನಿ ದಟ್ಟವಾಗಿದೆ. ರಾಜ್ಯದಲ್ಲಿ ನಡೆದ ಈ ಎಲ್ಲಾ ಹತ್ಯೆಗಳಿಗೂ ಈ ಸಂಘಟನೆಯ ಪಾಲು ಇದೆ ಎಂಬ ಅಂಶ ಈವಾಗ ಮಾಧ್ಯಗಳಲ್ಲಿ ಭಾರೀ ಚರ್ಚೆಗಳನ್ನು ಹುಟ್ಟುಹಾಕಿದೆ.
“ಟಾರ್ಗೆಟ್” ಏನು?
ರಾಜ್ಯದಲ್ಲಿ ಸದ್ಯ ಈ ಒಂದು ಗ್ರೂಪ್ನ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಟಾರ್ಗೆಟ್ ಗ್ರೂಪ್ ಎಂಬ ಮುಸಲ್ಮಾನ ಹಸ್ತಕ ತಂಡವೊಂದು ಹಿಂದೂಗಳ ಹತ್ಯೆಗಳನ್ನು ಮಾಡುವಲ್ಲಿ ಸಕ್ರಿಯವಾಗಿದೆ ಎಂಬ ಅಂಶ ಬಯಲಾಗಿದೆ. ರಾಜ್ಯದಲ್ಲಿ ಹಿಂದೂ ಪರ ಸಂಘಟನೆಗಳ ಅಥವಾ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನೇ ಗುರಿಯಾಗಿಸಿ ಈ ಹತ್ಯೆಯನ್ನು ನಡೆಸಲಾಗುತ್ತಿದೆ ಎಂಬ ಮಾಹಿತಿ ಸಂಚಲವನ್ನೇ ಮೂಡಿಸಿದೆ.
ಮುಸ್ಲಿಮರೂ “ಟಾರ್ಗೆಟ್”..?
ಈ ಟಾರ್ಗೆಟ್ ಕೇವಲ ಹಿಂದೂಗಳಿಗೆ ಮಾತ್ರವಲ್ಲ. ಬದಲಾಗಿ ಹಿಂದೂ ಸಂಘಟನೆಗಳಿಗೆ ಒಲವನ್ನು ವ್ಯಕ್ತ ಪಡಿಸುವ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುವ ಮುಸ್ಲಿಂ ವ್ಯಕ್ತಿನೂ ಈ ಗುಂಪಿನ “ಟಾರ್ಗೆಟ್”. ಈ ಹಿಂದೆ ಉಳ್ಳಾಲದಲ್ಲಿ ನಡೆದ ಜುಬೈರ್ ಎಂಬಾತನ ಕೊಲೆಯನ್ನೂ ಇದೇ ಗುಂಪು ಮಾಡಿರುವ ಬಗ್ಗೆ ಸ್ಪಷ್ಟವಾಗಿದೆ. ಉಳ್ಳಾಲದ ಜುಬೈರ್ ಎಂಬಾತ ಭಾರತೀಯ ಜನತಾ ಪಕ್ಷದ ಕಾರ್ಯಕರ್ತನನ್ನು ಆತ ಮುಸ್ಲಿಮನೆನ್ನದೆ ಕೊಚ್ಚಿ ಕೊಂದು ಬಿಟ್ಟಿದ್ದರು. ಈ ಗುಂಪಿಗೆ ಬಲಪಂಥೀಯವಾದವೇ ಟಾರ್ಗೆಟ್ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸುಮಾರು 8 ವರ್ಷಗಳ ಹಿಂದೆ ಉಳ್ಳಾಲದ ಮಾಸ್ತಿಕಟ್ಟೆ ಎಂಬಲ್ಲಿ ಆರಂಭವದ ಈ ಗ್ರೂಪ್ ಇಂದು ತನ್ನ ಜಾಲವನ್ನು ರಾಜ್ಯದಲ್ಲೇ ಪಸರಿಸಿದೆ. ಟ್ರಾವೆಲ್ ಏಜೆನ್ಸೀಸ್ ಮೂಲಕ ಈ ಟಾರ್ಗೆಟ್ ಗ್ರೂಪ್ ತೆರೆದುಕೊಂಡಿತ್ತು. ಅದರಲ್ಲೂ ಮಂಗಳೂರು, ಉಳ್ಳಾಲ ಹಾಗೂ ಸುರತ್ಕಲ್ನಲ್ಲಿ ಈ ಗ್ರೂಪ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಸದ್ಯ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಬಂಧಿತರಾದವರೆಲ್ಲರೂ ಟಾರ್ಗೆಟ್ ಗ್ರೂಪಿನ ಸಹಚರರಾಗಿದ್ದಾರೆ. ದೀಪಕ್ ರಾವ್ ಹತ್ಯೆಗೆ ಟಾರ್ಗೆಟ್ ಗ್ರೂಪ್ಗೆ ಸುಪಾರಿ ನೀಡಿದ್ದು ಈ ಗ್ರೂಪ್ ಕೃತ್ಯವನ್ನು ಎಸಗಿದೆ ಎಂದು ಹೇಳಲಾಗುತ್ತಿದೆ.
ಮುಸ್ಲಿಂ ರಾಷ್ಟ್ರದಿಂದ ಬರುತ್ತಿದೆ ರಾಶಿ ರಾಶಿ ಹಣ,!
ಈ ವಿಷಯ ನಿಜಕ್ಕೂ ನಮ್ಮನ್ನು ಬೆಚ್ಚಿಬೀಳಿಸುವಂತದ್ದೆ. ರಾಜ್ಯದಲ್ಲಿ ಹಿಂದೂಗಳ ಹತ್ಯೆಗಳಿಗೆ ಕಾರ್ಯನಿರ್ವಹಿಸುತ್ತಿರುವ ಈ “ಟಾರ್ಗೆಟ್” ಎಂಬ ಗುಂಪಿಗೆ ಮುಸ್ಲಿಂ ರಾಷ್ಟ್ರವಾದ ಸೌಧಿಯಿಂದ ಹಣ ಬರುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿವೆ. ಮಾತ್ರವಲ್ಲದೆ ದುಬೈ ಸಹಿತ ಇನ್ನಿತರ ಮುಸ್ಲಿಂ ರಾಷ್ಟ್ರಗಳಿಂದಲೂ ಈ ತಂಡಕ್ಕೆ ಹಣಕಾಸಿನ ನೆರವು ಬರುತ್ತಿದೆ ಎಂದು ಹೇಳಲಾಗುತ್ತಿದೆ. ಫಾರಿನ್ ಫಂಡಿಂಗ್ನಿಂದ ಬರುವ ಹಣದಿಂದ ಈ ಗುಂಪು ಇಲ್ಲಿರುವ ಅಮಾಯಕ ಹಿಂದೂಗಳ ಹತ್ಯೆಗಳನ್ನು ಮಾಡುತ್ತಿವೆ ಎಂಬುವುದು ಬಯಲಾಗಿದೆ.
ಯಾವಾಗ ಕ್ರಮ ಕೈಗೊಳ್ಳುತ್ತೀರಿ ಮುಖ್ಯಮಂತ್ರಿಗಳೇ..?
ರಾಜ್ಯದಲ್ಲಿ ಇಷ್ಟು ಕೊಲೆಗಳು ರಾಜಾರೋಷವಾಗಿ ನಡೆಯುತ್ತಿದೆ. ಆದರೆ ಈವರೆಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಸ್ವತಃ ಮಾಧ್ಯಮಗಳೇ ಈ ಬಗ್ಗೆ ಪುಂಕಾನು ಪುಂಕವಾಗಿ ಬಿತ್ತರಿಸಿದರೂ ಸರಕಾರ ಮಾತ್ರ ಯಾವುದೇ ಕ್ರಮ ಈವರೆಗೂ ಕೈಗೊಂಡಿಲ್ಲ. ಹಾಗಾದರೆ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಯಾವ ಸಂದೇಶವನ್ನು ನೀಡುತ್ತೆ..? ಸ್ವತಃ ಕಾಂಗ್ರೆಸ್ ಸಚಿವನಾದ ಯುಟಿ ಖಾದರ್ ಅವರೇ ಈ ಟಾರ್ಗೆಟ್ ಗುಂಪಿನ ಬೆಂಬಲಕ್ಕಿರುವಾಗ ಈ ಸರ್ಕಾರದಿಂದ ಅದ್ಯಾವ ನ್ಯಾಯದ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು? ಈ ಸರ್ಕಾರಕ್ಕೆ ಇನ್ನೆಷ್ಟು ರಾಶಿ ಹೆಣಗಳು ಬೀಳಬೇಕೋ ಆ ದೇವನೇ ಬಲ್ಲ. ಒಟ್ಟಿನಲ್ಲಿ ರಾಜ್ಯದ ಹಿಂದೂ ಸಮಾಜ ಮಾತ್ರ ಭಯದ ವಾತಾವರಣದಲ್ಲೇ ಬಾಳಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ.
-ಹರೀಶ್