ಹೌದು… ಜವಾಹರಲಾಲ್ ನೆಹರೂರವರ ಕಾಲದಿಂದಲೂ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಹಿಡಿದಿರುವ “ಸೋ ಕಾಲ್ಡ್” ಗಾಂಧಿ ಎನ್ನುವ ಉಪನಾಮವನ್ನಿಟ್ಟುಕೊಂಡು ಮೆರೆದಾಡುತ್ತಿರುವ ನೆಹರೂ ಕುಟುಂಬಸ್ಥರು ಶ್ರೀಮಂತವಾಗಿದ್ದ ಭಾರತ ದೇಶವನ್ನು ಬಡರಾಷ್ಟ್ರ ಎಂದು ಈಡೀ ವಿಶ್ವವೇ ಮೂಲೆಗುಂಪು ಮಾಡುವ ಹಾಗೆ ಮಾಡಿಯೇ ಬಿಟ್ಟರು!! ದೇಶ ಅಭಿವೃದ್ಧಿ ಕಾಣದೇ ಹಿಂದೂಗಳನ್ನು ತುಚ್ಛವಾಗಿ ಕಾಣುತ್ತಾ ಮತಕ್ಕೋಸ್ಕರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದ್ದ ಕಾಂಗ್ರೆಸ್ ಪಕ್ಷದ ಹಿಂದಿನ ಹಿಡನ್ ಅಜೆಂಡ ಇದೀಗ ಬಯಲಾಗಿದ್ದು, ಈ ಕುರಿತ ಮಾಹಿತಿಯೊಂದನ್ನು ಬಿಜೆಪಿ ಸಂಸದರೊಬ್ಬರು ಹೊರಹಾಕಿದ್ದಾರೆ!!
ಸೋನಿಯಾ ಅಂಟೋನಿಯೋ ಮೈನೋ ಅಲಿಯಾಸ್ ಸೋನಿಯಾ ಗಾಂಧಿ ಎನ್ನುವ ಹೆಸರನ್ನಿಟ್ಟುಕೊಂಡು ಮುಗ್ಧ ಭಾರತೀಯ ಪ್ರಜೆಗಳನ್ನು ಮರಳು ಮಾಡುತ್ತಾ ಓಟು ಗಿಟ್ಟಿಸಿಕೊಂಡು ಹಿಂದೂಗಳನ್ನು ಮೂಲೆಗುಂಪು ಮಾಡಿ ಹಗರಣಗಳ ಮೇಲೆ ಹಗರಣಗಳನ್ನು ನಡೆಸಿರುವ ಕಾಂಗ್ರೆಸ್ಸಿಗರ ಹಿಂದಿನ ಅಜೆಂಡಾ ಇದೀಗ ಬಯಲಾಗಿದೆ!! ಈ ಬಗ್ಗೆ ಬಿಜೆಪಿ ಸಂಸದ ಭರತ್ ಸಿಂಗ್ ಸ್ಫೋಟಕ ರಹಸ್ಯವೊಂದನ್ನು ಬಯಲು ಮಾಡಿದ್ದಾರೆ!!
ದೇಶದ ಐಕ್ಯತೆ ಹಾಗೂ ಸಮಗ್ರತೆಗೆ ಕ್ರಿಶ್ಚಿಯನ್ ಮಿಶನರಿಗಳು ಮಾರಕ ಎಂದಿರುವ ಬಿಜೆಪಿ ಸಂಸದ ಭರತ್ ಸಿಂಗ್, ಕ್ರಿಶ್ಚಿಯನ್ ಮಿಶನರಿಗಳ ನಿರ್ದೇಶನದಂತೆ ದೇಶದಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ, ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಲಿಯಾ ಕ್ಷೇತ್ರದ ಸಂಸದ ಸಿಂಗ್, ”ಕ್ರಿಶ್ಚಿಯನ್ ಮಿಶನರಿಗಳು ಕಾಂಗ್ರೆಸ್ ಪಕ್ಷವನ್ನು ನಿಯಂತ್ರಿಸುತ್ತವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ತಾಯಿ ಸೋನಿಯಾ ಗಾಂಧಿ ಈ ಮಿಶನರಿಗಳ ನಿರ್ದೇಶನದಂತೆ ಕೆಲಸ ಮಾಡುತ್ತಾರೆ,” ಎಂದು ಹೇಳಿದ್ದಾರೆ.
ದೇಶದಲ್ಲಿ ಕ್ರೈಸ್ತ ಮಿಷನರಿಗಳು ಮತಾಂತರ ಮಾಡುವ ಮೂಲಕ ಹಿಂದೂಗಳನ್ನು ಒಡೆಯುತ್ತಿದ್ದಾರೆ ಎಂಬ ಮಾತು ದಶಕಗಳಿಂದ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಬಿಜೆಪಿ ಸಂಸದರು ಕ್ರೈಸ್ತ ಮಿಷನರಿಗಳು ದೇಶದ ಏಕತೆಗೆ ಗಂಡಾಂತರ ಎಂದು ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಭರತ್ ಸಿಂಗ್, ದೇಶದ ಏಕತೆ ಹಾಗೂ ಸಮಗ್ರತೆಗೆ ಕ್ರೈಸ್ತ ಮಿಶನರಿಗಳು ಎಂದಿಗೂ ಅಪಾಯಕಾರಿಯಾಗಿವೆ ಎಂದು ಆರೋಪಿಸಿದ್ದಾರೆ.
BJP MP Bharat Singh sparks a row with his controversial remark on UPA chairperson Sonia Gandhi and Congress. Listen in to what he said #ITVideo
More videos: https://t.co/NounxnP7mg pic.twitter.com/zbdKgc0oZF— India Today (@IndiaToday) April 22, 2018
ಈ ಕ್ರೈಸ್ತ ಮಿಶನರಿಗಳು ಕಾಂಗ್ರೆಸ್ ಪಕ್ಷವನ್ನು ನಿಯಂತ್ರಣ ಮಾಡುತ್ತಿವೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಕ್ರೈಸ್ತ ಮಿಶನರಿಗಳ ನಿರ್ದೇಶನದಂತೆಯೇ ಕೆಲಸ ಮಾಡುತ್ತಿದ್ದಾರೆ ಎಂದು ಭರತ್ ಸಿಂಗ್ ದೂರಿದ್ದಾರೆ. ಈಗಾಗಲೇ ‘ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಓರ್ವ ಕ್ರೈಸ್ತ, ಆತನ 10 ಜನಪಥ ನಿವಾಸದಲ್ಲಿ ಚರ್ಚ್ ಇದೆ” ಎಂದು ಬಿಜೆಪಿ ರಾಜ್ಯಸಭಾ ಸದಸ್ಯ, ಸುಬ್ರಮಣಿಯನ್ ಸ್ವಾಮಿ ಹೇಳಿದ್ದರು!!
ಅಷ್ಟೇ ಅಲ್ಲದೇ, ಗುಜರಾತ್ನಲ್ಲಿ ಹಿಂದೂ ದೇವಾಲಯಗಳಿಗೆ ಒಂದರ ಬಳಿಕ ಒಂದರಂತೆ ಭೇಟಿ ಕೊಡುತ್ತಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ, ತಾನು ಹಿಂದೂ ಎನ್ನುವುದನ್ನು ಮೊತ್ತ ಮೊದಲಾಗಿ ಘೋಷಿಸಿಕೊಳ್ಳಬೇಕು ಎಂದು ಸ್ವಾಮಿ ಸವಾಲೊಡ್ಡಿದ್ದರು!! ಕಾಂಗ್ರೆಸ್ ನ ನಂಬರ್ 2 ಆಗಿರುವ ರಾಹುಲ್ ಗಾಂಧಿ ಓರ್ವ ಕ್ರೈಸ್ತನೆಂದು ನಾನು ಶಂಕಿಸುತ್ತೇನೆ ಮತ್ತು ಆತನ 10 ಜನಪಥ್ ನಿವಾಸದೊಳಗೆ ಚರ್ಚ್ ಇರಬಹುದೆಂದೂ ಶಂಕಿಸುತ್ತೇನೆ ಎಂಬುದಾಗಿ ಸ್ವಾಮಿ ಹೇಳಿದ್ದರು!!
ಆದರೆ ಇದೀಗ ”ಕ್ರಿಶ್ಚಿಯನ್ ಮಿಶನರಿಗಳು ಕಾಂಗ್ರೆಸ್ ಪಕ್ಷವನ್ನು ನಿಯಂತ್ರಿಸುತ್ತವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ತಾಯಿ ಸೋನಿಯಾ ಗಾಂಧಿ ಈ ಮಿಶನರಿಗಳ ನಿರ್ದೇಶನದಂತೆ ಕೆಲಸ ಮಾಡುತ್ತಾರೆ,” ಎಂದು ಆರೋಪಿಸಿದ್ದಾರೆ!! ಈಶಾನ್ಯ ರಾಜ್ಯಗಳಲ್ಲಿ ಕ್ರೈಸ್ತ ಮಿಷನರಿಗಳ ಉಪಟಳ ಜಾಸ್ತಿ ಇದ್ದು, ಅವರು ಆಮಿಷ ಒಡ್ಡುವ ಮೂಲಕ ಮತಾಂತರ ಮಾಡುತ್ತಾರೆ. ಈ ಮತಾಂತರ ಪ್ರಕ್ರಿಯೆಯೇ ದೇಶಕ್ಕೆ ತುಂಬ ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ದೇಶದಲ್ಲಿ ನಡೆದ ಹಲವು ಅಹಿಂಸಾತ್ಮಕ ಪ್ರತಿಭಟನೆ, ಘಟನೆಯಲ್ಲೂ ಈ ಕ್ರೈಸ್ತ ಮಿಶನರಿಗಳ ಕೈವಾಡವಿದೆ. ಅದರಲ್ಲೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿ ಭಂಜನೆ ಮಾಡುವಲ್ಲಿ ಕ್ರೈಸ್ತ ಮಿಶನರಿಗಳು ಕುತಂತ್ರ ಮಾಡಿವೆ ಎಂದು ಭರತ್ ಸಿಂಗ್ ಆರೋಪ ಮಾಡಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಗಳ ಧ್ವಂಸ ಪ್ರಕರಣದ ಹಿಂದೆ ಕ್ರಿಶ್ಚಿಯನ್ ಮಿಷಿನರಿಗಳ ಕೈವಾಡ ಇದೆ ಎಂದು ಆರೋಪಿಸಿರುವ ಉತ್ತರ ಪ್ರದೇಶದ ಬಲಿಯಾ ಕ್ಷೇತ್ರದ ಬಿಜೆಪಿ ಸಂಸದ ಭರತ್ ಸಿಂಗ್ ಅಂಬೇಡ್ಕರ್ ಪ್ರತಿಮೆಗಳನ್ನು ಹಾನಿ ಮತ್ತು ಧ್ವಂಸಗೊಳಿಸುವಂತೆ ಕ್ರಿಶ್ಚಿಯನ್ ಮಿಷಿನರಿಗಳು ಸೂಚಿಸಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ!!
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪಕ್ಷ ಬಲಿಷ್ಠವಾಗುತ್ತಿರುವುದನ್ನು ಸಹಿಸಿಕೊಳ್ಳದ ಕ್ರಿಶ್ಚಿಯನ್ ಮಿಶನರಿಗಳು ಈ ರೀತಿ ಮಾಡುತ್ತಿದ್ದು, ಕ್ರಿಶ್ಚಿಯನ್ ಮಿಶನರಿಗಳು ಹಣಕಾಸಿನ ಬೆಂಬಲ ನೀಡುವ ಮೂಲಕ ಹಿಂದೂಗಳನ್ನು ಕ್ರಿಶ್ಚಿಯನ್ ಗೆ ಮತಾಂತರಗೊಳಿಸುತ್ತಿವೆ ಎಂದೂ ಆರೋಪಿಸಿದ್ದಾರೆ!! ಈಗಾಗಲೇ ಅದೆಷ್ಟೋ ಅಮಾಯಕ ಹಿಂದೂಗಳಿಗೆ ನಾನಾ ರೀತಿಯ ಆಮಿಷಗಳನ್ನೊಡ್ಡಿ ಮರಳು ಮಾಡುತ್ತಿರುವ ಕ್ರಿಶ್ಚಿಯನ್ ಮಿಶನರಿಗಳು ಇದೀಗ ಕ್ರಿಶ್ಚಿಯನ್ ಮಿಶನರಿಗಳ ನಿರ್ದೇಶನದಂತೆ ದೇಶದಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎನ್ನುವ ವಿಚಾರ ನಿಜಕ್ಕೂ ಕೂಡ ಅಚ್ಚರಿ ತಂದಿದೆ!!
– ಅಲೋಖಾ
tweet https://