ಪ್ರಚಲಿತ

ತಾರಕಕ್ಕೇರಿದ ಅನಂತ ಕುಮಾರ್ ಹೆಗಡೆ ಚುನಾವಣಾ ಪ್ರಚಾರ! ವೇಷಾಧಾರಿ ರಾಹುಲ್ ಗಾಂಧಿ ಶ್ರವಣ ಬೆಳಗೊಳಕ್ಕೆ ಬಂದು ಹಾಗೇ ವೇಷ ಧರಿಸಲಿ ಎಂದ ಹೆಗಡೆ!

ನೇರವಾಗಿ ಹೇಳಬೇಕೆಂದರೆ, ಇವತ್ತು ಪ್ರತಿಯೊಬ್ಬ ಸ್ವಾಭಿಮಾನಿ ಯುವಕನೂ ಕೂಡ, ಕಾಂಗ್ರೆಸ್ಸಿನ ಆಡಳಿತದಿಂದ ಸೋತು ಸುಣ್ಣವಾಗಿ ಹೋಗಿದ್ದಾ,ನೆ! ಕಳೆದ ಎಪ್ಪತ್ತು ವರ್ಷಗಳಿಂದ ನಡೆದ, ಕಾಂಗ್ರೆಸ್ಸಿನ ದೌರ್ಜನ್ಯವೊಂದು ಸದ್ಯದಲ್ಲಿಯೇ ಕೊನೆಗಾಣುತ್ತದೆ ಎನ್ನುವುದೂ ಸುಳ್ಳ,ಲ್ಲವಷ್ಟೇ?!

ಅದಕ್ಕೆ ಸರಿಯಾಗಿ ಕರ್ನಾಟಕ ವಿಧಾನಸಭೆಯ ಚುನಾವಣೆಯ ಪ್ರಚಾರವೂ ಬಿರುಸಿನಿಂದ ನಡೆಯುತ್ತದೆ! ಭಾರತೀಯ ಜನತಾ ಪಕ್ಷದ ನಾಯಕರೆಲ್ಲರೂ ಸಹ ಕರ್ನಾಟಕದ ಭವಿಷ್ಯವನ್ನು ಉತ್ತಮಗೊಳಿಸಬೇಕೆಂವ ಮಹದುದ್ದೇಶದಿಂದ, ಕಾಲಿಗೆ ಚಕ್ರ ಕಟ್ಟಿಕೊಂಡವರ ಹಾಗೆ ರಾಜ್ಯ ತಿರುಗುತ್ತಿದ್ದಾರೆ! ಜೊತೆ ಜೊತೆಗೇ, ಸಿದ್ಧರಾಮಯ್ಯರವರ ಐದು ವರ್ಷದ ಭಯಂಕರ ಮತ್ತು ಅಮಾನವೀಯ ಆಡಳಿತದ ಬಗ್ಗೆಯೂ ಮತ್ತೆ ಮತ್ತೆ ಕನ್ನಡಿಗರಿಗೆ ನೆನಪಿಸಿಕೊಡುತ್ತಿದ್ದಾರೆ ಬಿಜೆಪಿ ನಾಯಕರು!

ಆದರೆ, ಇತ್ತ ಒಕ್ಕೂಟ ಸಚಿವರಾದ ಅನಂತ ಕುಮಾರ್ ಹೆಗಡೆ ಮಾತ್ರ ‌‌ನೇರಾ ನೇರ ಪ್ರಶ್ನೆಗಿಳಿದಿದ್ದಾರೆ! ರಾಹುಲ್ ಗಾಂಧಿಯವರ ಮೈ ಚಳಿ ಬಿಡಿಸಿರುವ ಹೆಗಡೆ, ರಾಹುಲ್ ಗಾಂಧಿ ಹೇಗೆ ವೇಷಧಾರಿಯಾಗಿದ್ದಾರೆ ಎಂದು ಹೇಳಿದ್ದಲ್ಲದೇ, ಶ್ರವಣ ಬೆಳಗೊಳಕ್ಕೆ ಯಾವಾಗ ಬರುತ್ತೀರಿ ಎಂದಿದ್ದೇ, ನೆರೆದಿದ್ದವರು ಗೊಳ್ಳೆಂದು ನಕ್ಕಿದ್ದಾರೆ!

ಅಷ್ಟಕ್ಕೂ , ಹೆಗಡೆ ಹೇಳಿದ್ದೇನು ಗೊತ್ತಾ?!

“Union Minister Anantkumar Hedge takes a veiled jibe at Congress President Rahul Gandhi, says ‘Under the pretext of visiting temples, Rahul Gandhi was merely staging a drama’.”

“ಧರ್ಮದ ವಿಚಾರ ಬಂದಾಗ ನಾವು ಭಾರತೀಯ ಜನತಾ ಪಕ್ಷದವರು ಯಾವತ್ತೂ ರಾಜಿ ಮಾಡಿಕೊಂಡಿದ್ದೇ ಇಲ್ಲ! ಆದರೆ, ಕಾಂಗ್ರೆಸ್ಸಿನೋರದ್ದು ಇನ್ನೊಂದು ಕಥೆ! ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿಯವರಿಗೆ ಈಗ ಭಾರತದಲ್ಲಿ ಹಿಂದೂ ಧರ್ಮವಿದೆ ಎಂಬುದು ನೆನಪಾಗಿ ಹೋಗಿದೆ! ಅದಕ್ಕೋಸ್ಕರ, ಎಲ್ಲಾ ದೇವಸ್ಥಾನಗಳಿಗೆ, ಎಲ್ಲಾ ಮಠ ಮಂದಿರಗಳಿಗೆ ಹೋಗಲಿಕ್ಕೆ ಪ್ರಾರಂಭ ಮಾಡಿದಾರೆ! ಆದರೆ, ರಾಹುಲ್ ಗಾಂಧಿಗೆ ದೇವರ ತೀರ್ಥ ನೀಡಿದರೆ ಅದನ್ನು ಹೇಗೆ ಕುಡಿಯಬೇಕು ಎನ್ನುವುದು ಗೊತ್ತಿಲ್ಲ! ಯಾರೋ ಹೇಳಿದರು ಎಂದು ದೇವಸ್ಥಾನಕ್ಕೆ ಹೋಗಬೇಕಾದರೆ ಖಾವಿ ಹಾಕಿ ಹೋದರು! ಮಠ ಮಂದಿರಗಳಿಗೆ ಹೋಗಬೇಕಾದರೆ ರುದ್ರಾಕ್ಷಿ ಮಾಲೆ ಹಾಕಿಕೊಂಡು ಹೋದರು! ಮಸೀದಿಗೆ ಹೋಗಬೇಕೆಂದರೆ ಕೋಳಿ ಪುಕ್ಕ ತೊಟ್ಟುಕೊಂಡು ಹೋದರು! ಇಗರ್ಜಿಗೆ ಹೋಗಬೇಕೆಂದರೆ, ಕೊರಳಲ್ಲೊಂದು ಶಿಲುಬೆ ಕಟ್ಟಿಕೊಂಡು ಹೋದರು! ಒಟ್ಟಾರೆಯಾಗಿ ನಾಟಕ ಮಾಡೋದು ಅಷ್ಟೇ! ರಾಹುಲ್ ಗಾಂಧಿಯವರಿಗೆ ಹೇಳುತ್ತೇನೆ! ನಮ್ಮ ಭಾರತದ ಅತ್ಯಂತ ದೊಡ್ಡ ಶ್ರದ್ಧಾ ಕೇಂದ್ರವಾದ ಶ್ರವಣ ಬೆಳಗೊಳಕ್ಕೂ ಹೋಗಿ ಬನ್ನಿ ಎಂದು!!

ಅವರಿಗೆ ಪ್ರಾಮಾಣಿಕತೆ ಇಲ್ಲ! ಶ್ರದ್ಧಾ ಕೇಂದ್ರಗಳಿಗೆ ಹೋಗಬೇಕಾದರೆ, ಉಳಿದವರು ಹೇಗೆ ಹೋಗುತ್ತಾರೋ ಅದೇ ರೀತಿ ನಾವೂ ಹೋಗಬೇಕು ಎನ್ನುತ್ತಾರೆಯೇ ಹೊರತು ಅವರಿಗೆ ಯಾವ ಭಕ್ತಿಯೂ ಇಲ್ಲ ಶ್ರದ್ಧೆಯೂ ಇಲ್ಲ! ಇಂತಹ ನಾಟಕದ ಕಂಪೆನಿಯೊಂದು ಕಳೆದ ೭೦ ವರ್ಷಗಳಿಂದ ನಮ್ಮ ದೇಶವನ್ನಾಳಿದೆ! ಮುಂದಿನ ದಿನಗಳಲ್ಲಿ ಈ ನಾಟಕದ ಕಂಪೆನಿ ನಮ್ಮ ದೇಶದಲ್ಲಿ ಇರಬಾರದು! ಎಲ್ಲಿಯ ತನಕ ಈ ದೇಶದಲ್ಲಿ ಕಾಂಗ್ರೆಸ್ ಇರುತ್ತದೋ, ಅಲ್ಲಿಯ ತನಕ ಭಾರತಕ್ಕೆ ಭವಿಷ್ಯವಿಲ್ಲ! ಲೂಟಿ ಮಾಡೋದು, ಈ ಧರ್ಮವನ್ನು ಅವಮಾನ ಮಾಡುವುದು ಸದಾಕಾಲ ನಡೆಯುತ್ತಲೇ ಇದೆ! ”

“Now Rahul Gandhi realised that there’s one religion called Hinduism. That’s why he started going to mutts and temples. He goes to temple on somebody’s suggestion. When he goes to the mosque he wears a skull cap, when he goes to Church he goes with a Cross.”

“These people are known for drama. They don’t have any morality they don’t know where to go, what norms to follow. From last 70 years, this drama company is ruling in India. This drama company should not be in our nation in future,” – Ananthkumar Hegde

ರಾಹುಲ್ ಗಾಂಧಿಗಿದು ಬೇಕಿತ್ತಾ?! ಕೇವಲ ಅಧಿಕಾರಕ್ಕಾಗಿ, ರಾಜಕೀಯ ಮನೆತನವೆಂಬುದರ ಕಾರಣಕ್ಕಾಗಿ, ತಲೆಯಲ್ಲಿ ನಯತಾ ಪೈಸೆ ರಾಜಕೀಯ ಜ್ಞಾನವಿಲ್ಲದೇ, ಚುನಾವಣೆಯೂ ನಡೆಯದೇ ಕಾಂಗ್ರೆಸ್ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು?! ಯಾರೇನೋ ಹೇಳಿದರು ಅಂತ ಮತ್ತದೇ, ನಾಟಕಕ್ಕಿಳಿದದ್ದು? ಸ್ವಲ್ಪವಾದರೂ ಬಹುಷಃ ರಾಹುಲ್ ಯೋಚಿಸಿ, ರಾಜಕೀಯ ಬಿಟ್ಟು ಸ್ವತಂತ್ರವಾಗಿ ದುಡಿಯಲು ಪ್ರಾರಂಭಿಸಿದ್ದರೆ ಬಹುಷಃ ಭಾರತೀಯರು ಕೈ ಮುಗಿ್ಉ ಗೌರವಿಸಬಹುದಿತ್ತು.‌. ಆದರೆ…..

ಒಟ್ಟಾರೆಯಾಗಿ, ರಾಹುಲ್ ಗಾಂಧಿಯವರಿಗೆ ನೇರವಾಗಿ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಭಾರತೀಯ ಜನತಾ ಪಕ್ಷದ ಒಕ್ಕೂಟ ಸಚಿವರು
ಪರೋಕ್ಷವಾಗಿಯೇ ಕಾಂಗ್ರೆಸ್ ಅಧ್ಯಕ್ಷನ ಮಾನ ಹರಾಜು ಹಾಕಿದ್ಡಾರೆ ಪಾಪ! ೪೭ ವರ್ಷದ ಯುವಕರಾದ ರಾಹುಲ್ ಗಾಂಧಿ ಶ್ರವಣ ಬೆಳಗೊಳಕ್ಕೆ ಹೋಗುತ್ತಾರೋ ಇಲ್ಲವೋ ಇನ್ನಷ್ಟೇ ನೋಡಬೇಕಿದೆ!

Source : Times Now


ಪೃಥು ಅಗ್ನಿಹೋತ್ರಿ

Tags

Related Articles

Close