ಪ್ರಚಲಿತ

ಬಿಗ್ ಬ್ರೇಕಿಂಗ್: ರಾಹುಲ್ ಗಾಂಧಿಯ ಸಮಾವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತನಿಗೆ ಬಾರಿಸಿದ ಪವರ್ ಮಿನಿಸ್ಟರ್!! ಮತ್ತೆ ರೌಡಿಸಂ ತೋರಿಸಿದ ಡಿಕೆಶಿ!!

ಡಿ.ಕೆ ಶಿವಕುಮಾರ್ ತನ್ನ ದರ್ಪ,ಹಣ, ಹಾಗೂ ಗೂಂಡಾಗಿರಿಯಿಂದಲೇ ಹೆಸರಾಗಿರುವ ಕಾಂಗ್ರೆಸ್ ನಾಯಕ. ತಾನು ಅಕ್ರಮವಾಗಿ ಸಂಪಾದಿಸಿರುವ ಹಣದಿಂದಲೇ ಕಾಂಗ್ರೆಸ್ ಪಕ್ಷವನ್ನು ಅಧಿಕಾದ ಗದ್ದುಗೆಗೆ ಏರಿಸಿದ್ದ ಕರ್ನಾಟಕ ಕಾಂಗ್ರೆಸ್ಸಿನ ಮಾಸ್ಟರ್ ಪೀಸ್.!! ಕಳೆದ ಬಾರಿ ಐಟಿ ದಾಳಿ ನಡೆದು ಡಿಕೆಶಿ ಯ ಅಕ್ರಮ ಆಸ್ತಿಗಳನ್ನೆಲ್ಲಾ ಜಪ್ತಿ ಮಾಡಿ ಪವರ್ ಮಿನಿಸ್ಟರ್ ಗೆ ಬಿಗ್ ಶಾಕ್ ನೀಡಿತ್ತು!! ಅದಾದ ನಂತರ ಡಿಕೆಶಿಗೆ ಪಿತ್ತ ನೆತ್ತಿಗೇರಿದಂತೆ ಮಾಡುತ್ತಿದ್ದಾರೆ…. ಪವರ್ ಮಿನಿಸ್ಟರ್ ಪವರ್ ವೀಕ್ ಆಗುತ್ತಿದ್ದಂತೆಯೇ ಸಾಮಾನ್ಯ ಜನರನ್ನು ಕಂಡರೆ ಅದೇನಾಗುತ್ತೋ ಗೊತ್ತಿಲ್ಲ ಇವರಿಗೆ…

ತಾನು ಅಕ್ರಮವಾಗಿ ಸಂಪಾದಿಸಿದ ಆಸ್ತಿಗಳ ಸಾಮ್ರಾಜ್ಯದ ಮೇಲೆ ಐಟಿ ದಾಳಿ ಆಗಿದೆ ಎಂಬ ಸ್ಪೋಟಕ ಮಾಹಿತಿ ಅಂದು ಡಿಕೆಶಿ ಮಾತ್ರವಲ್ಲದೇ ಕಾಂಗ್ರೆಸ್ ಸರಕಾರವನ್ನೇ ಬೆಚ್ಚಿಬೀಳಿಸಿತ್ತು. ತಾಕತ್ತಿದ್ದರೆ ನನ್ನ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ಎಂದು ಛಾಲೆಂಜ್ ಹಾಕಿದ್ದ ಡಿಕೆಶಿ ಅಂದು ಮಾತ್ರ ಒಂದು ವಾರಗಳ ಕಾಲ ನಿದ್ದೆಯಿಲ್ಲದೆ ಐಟಿ ಅಧಿಕಾರಿಗಳ ಹಿಂದೆಯೇ ವಿಲವಿಲ ಒದ್ದಾಡಬೇಕಾಗ ಅನಿವಾರ್ಯತೆಗೆ ಒಳಗಾಗಿದ್ದರು. ಡಿಕೆಶಿ ಸಾಮ್ರಾಜ್ಯ ಅಕ್ಷರಷಃ ಕಂಗೆಟ್ಟು ಹೋಗಿತ್ತು. ಅದಾದ ಬಳಿಕ ಬಳಿಕ ಈ ಡಿಕೆ ಶಿವಕುಮಾರ್ ಪಿತ್ತ ನೆತ್ತಿಗೇರಿದಂತೆಯೇ ಮಾಡುತ್ತಿದ್ದಾರೆ..

ಸೆಲ್ಫಿ ವೇಳೆ ನೆತ್ತಿಗೇರಿತು ಡಿಕೆಶಿ ಪಿತ್ತ!!

ಈ ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್ ಇಂದು ಬಳ್ಳಾರಿಯಲ್ಲಿ ರಾಹುಲ್ ಗಾಂಧಿಯ ಸಮಾವೇಶದ ಸಿದ್ಧತೆ ತೊಡಗಿದ್ದ ಸಮಯದಲ್ಲಿ ಪಾಪ ತನ್ನ ಪಕ್ಷದ ಅಭಿಮಾನಿಯೊಬ್ಬ ಸೆಲ್ಫಿ ತೆಗೆಯಲು ಮುಂದಾದರು… ಆದರೆ ಡಿಕೆ ಶಿವಕುಮಾರ್ ಮಾತ್ರ ಸಾಮಾನ್ಯ ಜನರನ್ನು ಕಂಡರೆ ಅದೆಲ್ಲಿಂದ ಬರುತ್ತೋ ಕೋಪ ಅಂತಾ ಗೊತ್ತಾಗಲ್ಲ… ಪಾಪ ಹತ್ತಿರ ಬಂದು ಒಬ್ಬಾತ ಸೆಲ್ಫಿ ತೆಗೆಯಲು ಮುಂದಾದ… ಅದೇ ಸಮಯದಲ್ಲಿ ಡಿಕೆಶಿಗೆ ಎಲ್ಲಿಂದ ಪಿತ್ತ ನೆತ್ತಿಗೇರಿತೋ ಗೊತ್ತಿಲ್ಲ… ಪಟಕ್ಕನೇ ಹೊಡೆದೇ ಬಿಟ್ಟರು… ಇಷ್ಟೋ ಅಹಂ ಹೊಂದಿರುವವವರು ಪವರ್ ಮಿನಿಸ್ಟರ್ ಆಗುವಂತಹ ಯಾವುದೇ ಅರ್ಹತೆ ಹೊಂದಿಲ್ಲ!! ಡಿಕೆ ಶಿವಕುಮಾರ್ ದರ್ಪ ಇದೇ ಮೊದಲಲ್ಲ ಈ ಮೊದಲು ಕೂಡಾ ಸೆಲ್ಫಿ ತೆಗೆಯಲು ಬಂದವರಿಗೆ ಈ ರೀತಿಯಾಗಿ ಮಾಡಿದ್ದಾರೆ..

ಹಣದ ಮದ ಈ ಪವರ್ ಮಿನಿಸ್ಟರ್‍ಗೆ ಈ ರೀತಿಯಾಗಿ ಮಾಡುತ್ತಿದೆ ಅಂತಾ ಕಾಣಿಸುತ್ತದೆ…ಕೇವಲ ಸೆಲ್ಫಿ ವಿಷಯ ಮಾತ್ರವಲ್ಲ ಅಂದು ಬಹಿರಂಗವಾಗಿಯೇ ತನ್ನ ಹಣದ ದೌಲತ್ತನ್ನು ತೋರಿಸಿದ್ದರು… ಯಾವ ಬೆಟ್ಟಿಂಗ್ ದಂಧೆ ಇಂದು ಮಾನವ ಕುಲವನ್ನು ನಾಶಮಾಡುತ್ತಿದೆಯೋ ಅದೇ ಬೆಟ್ಟಿಂಗ್ ದಂಧೆಯನ್ನು ರಾಜ್ಯದ ಜನತೆಗೆ ಬಹಿರಂಗವಾಗಿಯೇ ಹಾಕಿದ್ದರು.. ಓರ್ವ ಮಂತ್ರಿಸ್ಥಾನವನ್ನು ಅಲಂಕರಿಸಿರುವ ವ್ಯಕ್ತಿ ಈ ರೀತಿ ಜೂಜಿಗೆ ಆಹ್ವಿನಿಸುವುದು ಆತನ ಹುದ್ದೆಗೆ ಗೌರವ ತರುವುದೇ? ಭಾರತೀಯ ಜನತಾ ಪಕ್ಷ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲೋದಿಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗೋದಿಲ್ಲ, ಬೆಟ್ಟ್ ಕಟ್ಟುತ್ತೇನೆ. ಎಷ್ಟು ಬೇಕೋ ಅಷ್ಟು ಬೆಟ್ ಕಟ್ಟುತ್ತೇನೆ. ಯಾರಾದರೂ ಇದ್ದೀರಾ?” ಎಂದು ಬಹಿರಂಗವಾಗಿಯೇ ಬೆಟ್ಟಿಂಗ್ ದಂಧೆಗೆ ಆಹ್ವಾನಿಸಿದ್ದಾರೆ. ಮಾತ್ರವಲ್ಲದೆ ಚೆನ್ನಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷ ಗೆಲ್ಲೊದಿಲ್ಲ ಈ ಬಗ್ಗೆ ಎಷ್ಟು ಬೇಕಾದರೂ ಬೆಟ್ ಕಟ್ಟುತ್ತೇನೆ ಎಂದು ಅಹಂಕಾರದಿಂದಲೇ ಜೂಜಿಗೆ ಆಹ್ವಾನಿಸಿ ದರ್ಪ ತೋರಿಸಸಿದ್ದರು.!!

ತಾನು ಮಾತ್ರ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಲ್ಲದೆ ತನ್ನ ಕಾರ್ಯಕರ್ತರನ್ನೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಲಿ ಎನ್ನುವ ಉದ್ಧೇಶ ಈ ಕಾಂಗ್ರೆಸ್ ನಾಯಕರದ್ದು. ಆದರೆ ರಾಜ್ಯದ ಜನರು ಮಾತ್ರ ಬುದ್ಧಿವಂತರು. ರಾಜ್ಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರಗಳನ್ನು ಒಂದೊಂದಾಗಿಯೇ ಬಯಲಿಗೆ ತಂದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದು ರಾಜ್ಯವನ್ನೂ ಕಾಂಗ್ರೆಸ್ ಮುಕ್ತ ಮಾಡುವ ಉದ್ದೇಶವನ್ನು ಜನತೆ ಇಟ್ಟುಕೊಂಡಿದ್ದಾರೆ.

 

ಡಿಕೆ ಶಿವಕುಮಾರ್ ಅವರ ಈ ದರ್ಪ ಇದು ಮೊದಲೇನಲ್ಲ. ಅನೇಕ ಬಾರಿ ಇವರ ದಬ್ಬಾಳಿಕೆಯನ್ನು ರಾಜ್ಯದ ಜನತೆ ಕಂಡಿದ್ದಾರೆ. ಇವರ ವಿರುದ್ದ ಮಾತಡಿನಾಡಿದರೆ ಯಾವೊಬ್ಬ ವ್ಯಕ್ತಿಯಾದರೂ ಅವನನ್ನು ಬೆದರಿಸುವ ಕೆಲಸವನ್ನು ಮಾಡುತ್ತಾರೆ ಡಿಕೆ ಶಿವಕುಮಾರ್. ಈ ಹಿಂದೆ ರಾಜ್ಯದ ಪ್ರಮುಖ ಸುದ್ಧಿ ಸಂಸ್ಥೆಯಾದ ಕನ್ನಡ ಚಾನೆಲ್‍ನ ಸ್ಟೂಡಿಯೋಗೆ ನುಗ್ಗಿ ದರ್ಪ ಮೆರೆದು ತನ್ನ ಅಹಂಕಾರವನ್ನು ಪ್ರದರ್ಶಿಸಿದ್ದರು. ಆದರೆ ರಾಜ್ಯ ಸರ್ಕಾರ ಮಾತ್ರ ಅವರ ದರ್ಪವನ್ನೇ ಆದರಿಸಿಕೊಂಡು ಅವರನ್ನು ಕರೆದು ಸಚಿವ ಸ್ಥಾನದ ಪಟ್ಟ ನೀಡಿದೆ. ಈ ಮೂಲಕ ತಮ್ಮ ಸರ್ಕಾರ ಉಳ್ಳವರ ಪಾಲಿಗೆ ಎಂಬುವುದನ್ನು ಮತ್ತೊಮ್ಮೆ ಸಾಭೀತು ಪಡಿಸಿದೆ.

ಒಟ್ಟಾರೆಯಾಗಿ ಇಂಧನ ಸಚಿವ ಡಿಕೆ ಶಿವಕುಮಾರ್ ಯಾವ ರೀತಿ ಯಾರಿಗೂ ಹಲ್ಲೆ ಮಾಡಿದರೂ ಅಥವಾ ಏನೇ ಮಾಡಿದರೂ ಡಿಕೆ ಶಿವಕುಮಾರ್‍ರನ್ನು ಯಾರೂ ಕೇಳುವವರಿಲ್ಲ.. ಯಾಕೆಂದರೆ ಡಿಕೆ ಶಿವಕುಮಾರ್ ಕಾಂಗ್ರೆಸ್‍ನ ಕೃಪಾಕಟಾಕ್ಷವಿದೆ.. ಇಲ್ಲದೇ ಇದ್ದರೆ ಸಾಮಾನ್ಯ ಜನರು ಸೆಲ್ಫಿ ತೆಗೆಯಲು ಬಂದರೆ ಹೊಡೆದೇ ಬಿಡುವಷ್ಟರ ಮಟ್ಟಿಗೆ ಬರುತ್ತಾರೆ ಎಂದರೆ ಯಾವ ರೀತಿಯ ಸಚಿವ ಇವರು? ಇಂತಹವರನ್ನೂ ಕಾಂಗ್ರೆಸ್ ಸರಕಾರ ಮತ್ತೆ ಮತ್ತೆ ಪೋಷಿಸಿ ಬೆಳೆಸುತ್ತಿದೆ…. ಸಿದ್ದರಾಮಯ್ಯ ಸರಕಾರ ಇಂತವರಿಗೆ ಬೆಂಬಲಿಸುತ್ತಾನೇ ಬಂದರೆ ಮುಂದೊಂದು ದಿನ ಜನರೇ ನಿಮಗೆ ಬುದ್ಧಿ ಕಲಿಸುತ್ತಾರೆ..!!

ಪವಿತ್ರ

Tags

Related Articles

Close