ಪ್ರಚಲಿತ

ಬಿಜೆಪಿಯ ಫೈನಲ್ ಲಿಸ್ಟ್ ಪ್ರಕಟ..! ಬಾಕಿ ಇದ್ದ ಕ್ಷೇತ್ರ ಭರ್ತಿ ಮಾಡಿದವರಾರು ಗೊತ್ತಾ..?

ಭಾರೀ‌ ಕುತೂಹಲ ಕೆರಳಿಸಿದ್ದ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ರಾಷ್ಟ್ರೀಯ ನಾಯಕರ ಸರ್ವೆಯ ಪ್ರಕಾರ ಮುಗಿದಿದ್ದು ಈಗಾಗಲೇ ನಾಲ್ಕು ಹಂತದಲ್ಲಿ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಬಿಡುಗಡೆಗೊಳಿಸಿತ್ತು. ಮೊದಲ ಮೂರು ಪಟ್ಟಿಯಲ್ಲಿ ಶೇಕಡಾ ೮೦% ರಷ್ಟು ಹೆಸರನ್ನು ಪ್ರಕಟಿಸಿದ್ದ ಬಿಜೆಪಿ ನಾಲ್ಕನೇ ಪಟ್ಟಿಯಲ್ಲಿ ಕೇವಲ ೭ ಜನರ ಹೆಸರನ್ನು ಘೋಷಿಸಿತ್ತು. ಇದೀಗ ಮತ್ತೆ ಬಾಕಿ ಇರುವ ನಾಲ್ಕು ಕ್ಷೇತ್ರಗಳ ಹೆಸರನ್ನು ಬಿಡುಗಡೆಗೊಳಿಸಿ ತನ್ನೆಲ್ಲಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಕೊನೆಯ ಪಟ್ಟಿಯಲ್ಲಿ ಕಮಲ ಹಿಡಿದ ಕಲಿಗಳು..!

ಒಂದೊಂದು ಕ್ಷೇತ್ರಗಳಲ್ಲೂ ಟಿಕೆಟ್ ಆಕಾಂಕ್ಷಿಗಳ ದೊಡ್ಡ ಪಟ್ಟಿ ರಾಷ್ಟ್ರೀಯ ನಾಯಕರ ಮುಂದಿದ್ದರೂ , ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಬಿಜೆಪಿಯನ್ನು ಗೆಲ್ಲಿಸಬೇಕೆಂದು ತಂತ್ರ ರೂಪಿಸಿರುವ ಪಕ್ಷದ ಹಿರಿಯರು ಕೊನೆಗೂ ಎಲ್ಲಾ ಅಭ್ಯರ್ಥಿಗಳ ಹೆಸರು ಘೋಷಿಸಿದ್ದಾರೆ.

ಕಳೆದ ನಾಲ್ಕು ಪಟ್ಟಿಯಲ್ಲಿ ಬಾಕಿ ಇದ್ದ ಕ್ಷೇತ್ರಗಳ ಪೈಕಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ರಮೇಶ್ ರೆಡ್ಡಿ , ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಮರಿಸ್ವಾಮಿ , ಶ್ರೀನಿವಾಸ್ ಪುರ ವಿಧಾನಸಭಾ ಕ್ಷೇತ್ರದಿಂದ ಡಾ. ವೇಣುಗೋಪಾಲ್ , ಶಿರಾ ವಿಧಾನಸಭಾ ಕ್ಷೇತ್ರದಿಂದ ಎಸ್.ಆರ್. ಗೌಡ , ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚಂದಗಾಲು ಶಿವಣ್ಣ ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಶಿವಲಿಂಗೇಗೌಡ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

Image result for bjp flag

ಅಂತಿಮವಾಗದ ಬಾದಾಮಿ, ವರುಣಾ..!

ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಪೈಕಿ ಭಾರೀ ಕುತೂಹಲ ಕೆರಳಿಸಿರುವ ಕ್ಷೇತ್ರ ಬಾದಾಮಿ ಮತ್ತು ವರುಣ. ಕಾಂಗ್ರೆಸ್ ನಿಂದ ಸ್ವತಃ ಸಿದ್ದರಾಮಯ್ಯನವರೇ ಈ‌ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿತ್ತು.‌ ಆದರೆ ಇನ್ನೂ ಕಾಂಗ್ರೆಸ್ ನ ಅಂತಿಮ ನಿಲುವು ಪ್ರಕಟವಾಗಿಲ್ಲ. ಅದೇ ಕಾರಣಕ್ಕಾಗಿ ಕಾಂಗ್ರೆಸ್ ನ್ನು ಮಣಿಸಲು ಬಿಜೆಪಿ ಸಿದ್ದವಾಗಿದ್ದು ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಅದಕ್ಕಾಗಿಯೇ ಇನ್ನೂ ಈ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನೂ ಬಹಿರಂಗಪಡಿಸಿಲ್ಲ. ಇತ್ತ ಕಾಂಗ್ರೆಸ್ ಬಿಜೆಪಿಯ ಅಭ್ಯರ್ಥಿಗಳನ್ನು ನೋಡಿ ತಮ್ಮ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಲು ಮುಂದಾಗಿದೆ..!

–ಅರ್ಜುನ್

 

Tags

Related Articles

Close