ಪ್ರಚಲಿತ

ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಕಾಂಗ್ರೆಸ್ ಗೂಂಡಾಗಳು!! ಮುಂದುವರಿಯುತ್ತಲೇ ಇದೆ ಕಾಂಗ್ರೆಸ್ ಗೂಂಡಾಗಿರಿ!!

ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ಕಾಂಗ್ರೆಸ್‍ಗೆ ಏನಾಗುತ್ತದೋ ತಿಳಿಯುತ್ತಿಲ್ಲ!! ಒಂದರ ಮೇಲೆ ಒಂದರ ಮೇಲೆ ಒಂದರಂತೆ ಗೂಂಡಾಗಿರಿಯನ್ನು ಪ್ರದರ್ಶನ ಮಾಡುತ್ತನೇ ಬರುತ್ತಿದ್ದಾರೆ!! ಅಧಿಕಾರದ ಅವಧಿ ಮುಗಿಯುತ್ತಾ ಬರುತ್ತಿದ್ದಂತೆಯೇ ಇನ್ನು ನಾವು ಇಲ್ಲಿ ಆಳ್ವಿಕೆಯನ್ನು ಮಾಡಲು ಸಾಧ್ಯವಿಲ್ಲ.. ಹಗರಣಗಳು ಬೇಕಾದಷ್ಟು ಮಾಡಿದ್ದಾಯಿತು.. ಅದೆಷ್ಟೋ ಹಣವನ್ನು ಲೂಟಿ ಮಾಡಿದ್ದಾಯಿತು.. ಮುಂದೆ ಇಂತಹ ಚಾನ್ಸ್ ಸಿಗಲ್ಲ ಎಂಬ ಉದ್ಧೇಶದಿಂದ ಏನೋ ಪಾಪ ಇತ್ತೀಚಿನ ದಿನಗಳಲ್ಲಿ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ ಕಾಂಗ್ರೆಸ್ಸಿಗರು!!

ಪಾಪದ ಕೊಡ ತುಂಬಿದೆ ಅನ್ನುತ್ತಾರಲ್ಲಾ, ಬಹುಷಃ ಇದಕ್ಕೆ ಆಗಿರಬೇಕು. ಅಧಿಕಾರಕ್ಕೆ ಬಂದು 5 ವರ್ಷಗಳು ತುಂಬುತ್ತಲೇ ಇಷ್ಟು ವರ್ಷಗಳು ಮಾಡಿದ ಪಾಪಗಳು ಒಂದೊಂದೇ ಬಯಲಾಗುತ್ತಿದೆ. ಒಂದಲ್ಲಾ ಎರಡಲ್ಲಾ, ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಅದೆಷ್ಟೋ ಚಟುವಟಿಕೆಗಳನ್ನು ಮಾಡಿ ಈ ಸರ್ಕಾರ ಯಾರೂ ಮಾಡದಷ್ಟು ಪಾಪವನ್ನು ಕಟ್ಟಿಕೊಂಡು ಈಗ ಆ ಪಾಪದ ಕರ್ಮಗಳನ್ನು ಒಂದೊಂದಾಗಿಯೇ ಅನುಭವಿಸುತ್ತಿದೆ.

ಅದೆಷ್ಟೋ ದಿನದಿಂದ ರಾಜ್ಯದಲ್ಲಿ ಒಂದೇ ಒಂದು ಸದ್ದು. ಅದು ಕಾಂಗ್ರೆಸ್ ಗೂಂಡಾಗಳ ಗೂಂಡಾಗಿರಿ!! ಪ್ರಮುಖ ಕಾಂಗ್ರೆಸ್ ಮುಖಂಡರೇ ಗೂಂಡಾಗಿರಿಯಲ್ಲಿ ಭಾಗಿಯಾಗಿ ಸರ್ಕಾರದ ಮಾನ ಮರ್ಯಾದೆಯನ್ನು ಹರಾಜು ಹಾಕುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಗೂಂಡಾಗಿರಿ ಬಯಲಾಗಿದೆ. ತನ್ನ ಛೇಲಾಗಳನ್ನು ಛೂಬಿಟ್ಟು ತಮಗೆ ಬೇಕಾದ ಹಾಗೆ ಕೆಲಸ ಮಾಡಿಕೊಳ್ಳುತ್ತಿದ್ದ ಕಾಂಗ್ರೆಸ್ ಶಾಸಕರಿಗೆ ಈಗ ಅದೇ ಗೂಂಡಾ ಛೇಲಗಳು ಕಗ್ಗಂಟಾಗಿ ಪರಿಣಮಿಸಿದೆ.!!

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್‍ನ ಒಂದೊಂದೇ ಕರಾಳ ಮುಖ ಹೊರಬರುತ್ತಿದೆ… ಈಗಾಗಲೇ ಕಾಂಗ್ರೆಸ್ ಶಾಸಕ ಹ್ಯಾರಿಸ್‍ನ ಗೂಂಡಾ ಮಗ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಮೆರದಿದ್ದು ಇದಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ…

ದಿನಕ್ಕೊಂದು ಪ್ರಕರಣದಂತೆ, ಸಾಮಾನ್ಯ ಜನರ ಮೇಲೆ ಹಲ್ಲೆಯಾಗುತ್ತಲೇ ಇದೆ ಎಂದರೆ ರಾಜ್ಯವಾಳಲು ಸಮರ್ಥರು ಎಂದು ಇವರನ್ನು ಜನರು ಆಯ್ಕೆ ಮಾಡಿದರೆ ಇವರು ಮಾತ್ರ ಮಾಡುವುದು ಇಂತಹ ಗೂಂಡಾಗಿರಿ ಕೆಲಸ ಎಂದರೆ ನಿಜವಾಗಿಯೂ ವಿಷಾದನೀಯ!! ವಿದ್ವತ್ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ ಕಾಂಗ್ರೆಸ್ ಶಾಸಕನ ಮಗ ಗೂಂಡಾ ಮೊಹಮ್ಮದ್ ನಲಪಾಡ್!! ಕೊನೆಗೂ ಜೈಲು ಸೇರಿಕೊಂಡು ಕಂಬಿ ಎಣಿಸುತ್ತಿದ್ದಾನೆ ಬಿಡಿ!! ತದನಂತರ ಕಾಂಗ್ರೆಸ್ ಶಾಸಕ ಬೈರತಿ ಬಸವರಾಜು ಛೇಲಾ ನಾರಾಯಣ ಸ್ವಾಮೀ, ಕೃಷಿ ಸಚಿವ ಕೃಷ್ಣ ಬೈರೇಗೌಡರ ಛೇಲಾಗಳ ಗೂಂಡಾಗಿರಿ, ಸಿಎಂ ಮಗನ ಆಪ್ತರ ಗೂಂಡಾಗಿರಿ!! ಹೀಗೆ ಗೂಂಡಾಗಿರಿಗೆ ಕಾಂಗ್ರಸ್‍ಗೆ ಸುಪ್ರಸಿದ್ಧ ಅಂತಾನೇ ಹೇಳಬಹುದು!! ಇಷ್ಟು ಅವಾಂತರಗಳನ್ನು ಮಾಡಿದ್ದು ಸಾಕಾಗಿಲ್ಲ ಅಂತಾ ಇಂದು ಮತ್ತೊಂದು ಅವಾಂತರವನ್ನು ಮಾಡಿದ್ದಾರೆ!! ಗೂಂಡಾಗಿರಿ ಪ್ರದರ್ಶನ ಸಾಮಾನ್ಯ ಜನರ ಮೇಲೆ ಅಲ್ಲದೆ ಪೊಲೀಸರ ಮೇಲೂ ಪ್ರದರ್ಶನವಾಗಿದೆ!!..

ರಾಜ್ಯದಲ್ಲಿ ಮುಂದುವರಿದ ಕೈ ಗೂಂಡಾಗಳ ಗೂಂಡಾಗಿರಿ!!

ಒಂದೊಂದೇ ಗೂಂಡಾಗಿರಿ ಪ್ರದರ್ಶನವಾಗುತ್ತಿದ್ದಂತೇಯೇ ರಾಜ್ಯ ಸರಕಾರದ ನಿಜ ಮುಖ ಇಡೀ ರಾಜ್ಯದ ಜನತೆಗೆ ತಿಳಿಯುತ್ತಿದೆ!! ಸಿದ್ದರಾಮಯ್ಯ ಸರಕಾರದ ನಿಜ ಬಣ್ಣ ಬಯಲಾಗಿ ಜನರು ಛೀಮಾರಿ ಹಾಕಿದ್ದು ಸಾಕಾಗಿಲ್ಲ ಎಂಬುವುದಕ್ಕೆ ಮತ್ತೆ ಪೊಲೀಸರ ವಿರುದ್ಧವೂ ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ!! ಜಗಳವಾಡುತ್ತಿದ್ದನ್ನು ನೋಡಿದ ಪೊಲೀಸ್ ಪೇದೆ ಅದನ್ನು ತಡೆಯಲು ಹೋದ ಎಂಬ ಉದ್ಧೇಶದಿಂದ ಪೊಲೀಸ್ ಪೇದೆಯ ವಾಕಿ ಟಾಕಿಯನ್ನೇ ಕಿತ್ತೆಸೆದ ಘಟನೆ ನಡೆದಿದೆ…!! ಮಲ್ಲಿಕಾರ್ಜುನ ಹೊಸಪೇಟೆ ಗ್ರಾಮೀಣ ಠಾಣೆಯ ಕಾನ್ಸ್‍ಟೇಬಲ್ ಆಗಿದ್ದು ಇವರ ಮೇಲೆ ಪೊಲೀಸ್ ಎನ್ನುವ ಮಾನವೀಯತೆಯನ್ನೂ ಮೆರೆಯದೆ ತನ್ನ ದರ್ಪ ತೋರಿಸಿದ್ದಾರೆ!! ಮಾಜಿ ಶಾಸಕ ಆನಂದ್ ಸಿಂಗ್ ಬೆಂಬಲಿಗರಿಂದ ಈ ಗೂಂಡಾಗಿರಿ ಪ್ರದರ್ಶನವಾಗಿದೆ!! ಒಬ್ಬ ಪೊಲೀಸ್ ಪೇದೆಗೇ ಕಾಂಗ್ರಸ್ಸಿಗರಿಮದ ರಕ್ಷಣೆ ಇಲ್ಲ; ಎಂದ ಮೇಲೆ ಇನ್ನು ಸಾಮಾನ್ಯ ಜನರ ಗತಿ ಏನು ಎಂಬುಬುದು ತಿಳಿಯುತ್ತಿಲ್ಲ!!

ಹಾಗಾದರೆ ಸಿದ್ದರಾಮಯ್ಯ ಸರಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲವೇ.. ದಿನಗಳೆದಂತೆ ಒಂದಲ್ಲ ಒಂದು ರೀತಿಯಲ್ಲಿ ಪ್ರತೀಯೊಬ್ಬ ಸಾಮಾನ್ಯ ಮನುಷ್ಯನ ಮೇಲೆ ಗೂಂಡಾಗಿರಿ ಪ್ರದರ್ಶಿಸಿದರೆ ಮುಂದೆ ಇದೇ ರೀತಿ ಗೂಂಡಾಗಿರಿ ಪ್ರದರ್ಶನವಾದರೆ ಮುಂದೆ ದೇಶದ ಭವಿಷ್ಯ ಏನು ಎಂಬುವುದು ಅರ್ಥವಾಗುತ್ತಿಲ್ಲ.. ಸಿದ್ದರಾಮಯ್ಯ ಸರಕಾರದ ಆಡಳಿತದಲ್ಲಿ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಯಾವ ಒಂದು ಪ್ರಯೋಜನಕಾರಿ ಬೆಳವಣಿಗೆಯನ್ನೂ ಮಾಡಿಲ್ಲ!! ಇಂತಹ ಗೂಂಡಾಗಿರಿ ಸರಕಾರವನ್ನು ಮುಂದೆಯೂ ಬೆಳೆಯಲು ಬಿಟ್ಟರೆ ಭಾರತದ ಕತೆ ಏನಾಗಬಹುದು ಎಂಬುವುದು ಅರ್ಥವಾಗುತ್ತಿಲ್ಲ!!

ಪವಿತ್ರ

Tags

Related Articles

Close