ಪ್ರಚಲಿತ

ಮುಂದುವರಿದ ಕಾಂಗ್ರೆಸ್ ಗೂಂಡಾಗಳ ದರ್ಪ!! ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಹ್ಯಾರಿಸ್ ಬೆಂಬಲಿಗರು!!

ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ್ದ.. ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಹಲ್ಲೆಗೊಳಗಾದ ಯುವಕನಾಗಿದ್ದು, ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮತ್ತು ಮೊಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು..

ಹಲ್ಲೆಗೊಳಗಾದ ವಿದ್ವತ್ ರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಶಾಸಕರ ಪುತ್ರ ಮತ್ತು ಆತನ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ವಿಷಯ ನಮಗೆ ತಿಳಿದೇ ಇದೆ… ಆಸ್ಪತ್ರೆಯಲ್ಲಿದ್ದ ವಿದ್ವತ್ ಸಹೋದರ ಸಾತ್ವಿಕ್ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇದೀಗ ವಿದ್ವತ್ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಈ ಸಂಬಂಧ ಮೊಹಮ್ಮದ್ ನಲಪಾಡ್ ಹ್ಯಾರಿಸ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.. ದೂರು ದಾಖಲಾಗುತ್ತಿದ್ದಂತೆ ಪ್ರಮುಖ ಆರೋಪಿಯಾಗಿರುವ ಶಾಸಕರ ಪುತ್ರ ಮೊಹಮ್ಮದ್ ನಲಪಾಡ್ ತಲೆಮರೆಸಿಕೊಂಡಿದ್ದರೂ ಮತ್ತೆ ಇಂದು ಪೊಲೀಸ್ ಅತಿಥಿಯಾಗಿದ್ದಾನೆ…

ಶನಿವಾರ ಗೂಂಡಾಗಿರಿ ಮಾಡಿ ಮಹಮ್ಮದ್ ನಲಪಾಡ್ ಎಲ್ಲೊ ತಲೆಮರಿಸಿಕೊಂಡಿದ್ದಾನೆ ಎಂಬ ಡ್ರಾಮಾ ಕೊನೆಗೂ ವಿಷಯ ಬಯಲಾಗಿದೆ… ಶನಿವಾರದಿಂದ ಇಂದಿನವರೆಗೂ ತನ್ನ ಮನೆಯಲ್ಲಿಯೇ ಕಳ್ಳನಂತೆಯೇ ಬಚ್ಚಿಕೊಂಡಿದ್ದ ಶಾಸಕನ ಗೂಂಡಾ ಮಗ!! ಯಾಕೆಂದರೆ ಒಂದು ವೇಳೆ ಶನಿವಾರ ಪೆÇಲೀಸರು ಅರೆಸ್ಟ್ ಮಾಡಿದ್ದೇ ಆದರೆ ಶನಿವಾರ ಜಾಮೀನು ಸಿಗಲ್ಲ… ನಂತರ ಅದೇ ಆದಿತ್ಯವಾರವೂ ಯಾವುದೇ ಕೇಸ್ ನಡೆಯಲ್ಲ… ಜಾಮೀನು ಸಿಗಲ್ಲ.. ಒಂದು ವೇಳೆ ಸರೆಂಡರ್ ಆದರೆ ಶನಿವಾರ ಆದಿತ್ಯವಾರ ಜೈಲಿನಲ್ಲಿ ತನ್ನ ಮಗ ಕೊಳೆಯಬೇಕು ಎನ್ನುವ ಉದ್ಧೇಶವನ್ನಿಟ್ಟುಕೊಂಡು ಶಾಸಕ ತನ್ನ ಮಗನನ್ನು ಈ ರೀತಿಯಾಗಿ ಉಪಾಯದಿಂದ ಮನೆಯಲ್ಲಿಯೇ ಬಚ್ಚಿಟ್ಟಿದ್ದ..!!

ಆತನನ್ನು ಪೊಲೀಸರು ಕರೆದುಕೊಂಡು ಹೋಗಬೇಕಾದರೆ ರಾಜ ಮರ್ಯಾದೆಯಿಂದ ಹೀಗಾಗಿ ಇದೊಂದು ಕಾಂಗ್ರೆಸ್ ಸರ್ಕಾರವನ್ನು ಬಳಸಿಕೊಂಡು ದರ್ಪ ಮೆರೆದ ಶಾಸಕ ಹ್ಯಾರೀಸ್ ಹಾಗೂ ಪೆÇಲೀಸರ ನಾಟಕ ಎಂಬುವುದು ಸುಳ್ಳಲ್ಲ. ಇದೀಗ ಆತನನ್ನು ತನ್ನ ನಿವಾಸದಿಂದ ಕಬ್ಬನ್ ಪೆÇಲೀಸ್ ಸ್ಟೇಷನ್‍ವರೆಗೂ ಕೈಹಿಡಿದು ನಡೆಸಿಕೊಂಡು ಬಂದಿದ್ದಾರೆ ಪೆÇಲೀಸರು!! ಇದು ಶಾಸಕ ಮತ್ತು ಪೆÇಲೀಸರ ನಾಟಕವಲ್ಲದೆ ಮತ್ತೇನೆಂದು ಹೇಳಬಹುದು?!

ಶನಿವಾರ ಹಲ್ಲೆನಡೆಸಿದ್ದ ಈತ ಈಗಾಗಲೇ ಸೆಲ್‍ನಲ್ಲಿ ಕಂಬಿ ಎನಿಸಬೇಕಿತ್ತು.. ಆದರೆ ಶನಿವಾರದಿಂದ ತನ್ನ ಮಗನನ್ನು ಕಳ್ಳನಂತೆ ಮನೆಯಲ್ಲಿಯೆ ಇಟ್ಟು ಡ್ರಾಮಾ ಮಾಡಿ ಇಂದು ಪೆÇಲೀಸ್ ಕೈವಶನಾಗಿದ್ದ..ಅಲ್ಲಿ ಕೂಡಾ ಆತನಿಗೆ ರಾಜಾತಿಥ್ಯ!! ಗೂಂಡಾ ಸಿಕ್ಕಿದಾಕ್ಷಣಾ ಸೆಲ್‍ಗೆ ಹಾಕುವ ಬದಲು ಪೆÇಲೀಸರು ಕೂಡಾ ಶಾಸಕನ ಮಗ ಎನ್ನುವ ಉದ್ಧೇಶವನ್ನಿಟ್ಟುಕೊಂಡು ಜ್ಯೂಸ್ ಕೊಟ್ಟು ಸತ್ಕರಿಸಿದ್ದರು. ಪೆÇಲೀಸ್ ಕೈವಶವಾದರೂ ಅಲ್ಲೂ, ತನ್ನ ಗೂಂಡಾಗಿರಿಯನ್ನು ಪ್ರದರ್ಶಿಸಿದ್ದಾನೆ…

ಇಷ್ಟೆಲ್ಲಾ ಗೂಂಡಾಗಿರಿ ತೋರಿಸಿ ಇಂದು ರಾಜಾತಿಥ್ಯದಿಂದ ಕರೆದುಕೊಂಡು ಹೋದ ಪೆÇಲೀಸರ ಎದುರೇ ಕಾಲ ಮೇಲೆ ಹಾಕಿ ಮತ್ತೆ ದರ್ಪ ತೋರಿಸಿದ್ದಾನೆ..ಈತನ ವಿರುದ್ಧ  ಸೆಕ್ಷನ್ 307 ಅಡಿಯಲ್ಲಿ ಕೇಸ್ ದಾಖಲಾಗಿದ್ದರೂ ನಾನು ಯಾವುದಕ್ಕೂ ಕೇರ್ ಮಾಡಲ್ಲ!! ನನಗೆ ಏನಾದರೂ ಮಾಡಿದೆ ನನ್ನ ಅಪ್ಪ ಇದ್ದಾರೆ ಎನ್ನುವ ಭಾವನೆಯಿಂದ ಇನ್ಸ್‍ಪೆಕ್ಟರ್ ಚೇಂಬರ್ನಲ್ಲಿ ದರ್ಪ ತೋರಿಸುವಂತೆ ಕಾಲ ಮೇಲೆ ಕಾಲು ಹಾಕಿ ಪೊಲೀಸರ ಎದುರೇ ಕುಳಿತಿದ್ದ.. ಆದರೆ ಇದೀಗ ಮತ್ತೆ ತನ್ನ ಗೂಂಡಾಗಿರಿಯನ್ನು ಮೆರೆದಿದ್ದಾರೆ ಶಾಸಕ ನಲಪಾಡ್ ಗ್ಯಾಂಗ್!!

ಮಾಧ್ಯಮ ಪ್ರತಿನಿಧಿಗಳಿಗೆ  ಮೊಹಮ್ಮದ್ ನಲಪಾಡ್ ಬೆಂಬಲಿಗರಿಂದ ಹಲ್ಲೆ!!

ಗೊಂಡಾಗಿರಿ ಮೆರೆದ ಮೊಹಮ್ಮದ್ ನಲಪಾಡ್ ವಿರುದ್ಧ ಎಫ್‍ಐಆರ್ ದಾಖಲಾಗುತ್ತಿದಂತೆ ಆತನನ್ನು ಪೊಲೀಸರು ತಪಾಸಣೆಗೆ ಕರೆದೊಯ್ಯತ್ತಿದ್ದರು.. ಅದೇ ಸಮಯದಲ್ಲಿ ಮಾಧ್ಯಮ ಚಿತ್ರೀಕರಣ ಮಾಡುವ ಸಮಯದಲ್ಲಿ ಮೊಹಮ್ಮದ್ ನಲಪಾಡ್ ಬೆಂಬಲಿಗರು ಮಾಧ್ಯಮದ ವಿರುದ್ಧ ಹಲ್ಲೆ ನಡೆಸಿದ್ದಾರೆ..

ಕಬ್ಬನ್ ಪಾರ್ಕ್ ಠಾಣೆ ಬಳಿ ಮೊಹಮ್ಮದ್ ನಲಪಾಡ್ ಬೆಂಬಲಿಗರು ದರ್ಪವನ್ನು ತೋರಿಸುವ ಮೂಲಕ ಮೊಹಮ್ಮದ್ ನಲಪಾಡ್ ಮಾತ್ರವಲ್ಲ ಬದಲಾಗಿ ನಲಪಾಡ್ ಬೆಂಬಲಿಗರೂ ಗೂಂಡಾಗಿರಿ ಮಾಡೋದಲ್ಲಿ ಎಕ್ಸ್‍ಪರ್ಟ್ ಅಂತಾ ತೋರಿಸಿದ್ದಾರೆ… ಮಾಧ್ಯಮದ ವಿರುದ್ಧವೇ ಈ ರೀತಿ ದರ್ಪ ತೋರಿಸುವವರು ಇನ್ನು ಯಾವ ರೀತಿ ಸಾಮಾನ್ಯ ಜನರನ್ನು ನೋಡಿಕೊಳ್ಳಬಹುದು…. ಶಾಸಕನ ಮಗ ಮಾತ್ರ ಈ ರೀತಿ ಅಂದರೆ ತನ್ನ ಬೆಂಬಲಿಗರೂ ಅದೇ ರೀತಿ ಗೂಂಡಾಗಳು ಎಂದು ಸಾಭೀತು ಪಡಿಸಿದ್ದಾರೆ ಬಿಡಿ… ಇಂತಹವರಿಗೆ ಕಠಿಣ ಶಿಕ್ಷೆಯನ್ನು ನೀಡ ಬೇಕು…

ಪವಿತ್ರ

Tags

Related Articles

Close