ದೇಶದಲ್ಲಿ ಸನಾತನ ಧರ್ಮದ ಇತಿಹಾಸದ ಹಿಂದೆ ಬೆನ್ನಟ್ಟಿ ಹೋದರೆ ಅದರ ಬುಡ ಸಿಗುವುದು ಬಹಳ ಕಷ್ಟ. ಯಾಕೆಂದರೆ ಹಿಂದೂ ಧರ್ಮದ ಇತಿಹಾಸವೇ ಹೀಗೆ. ಇಡೀ ಜಗತ್ತು ವಿಕಾಸದ ಹಾದಿ ಹಿಡಿಯುವ ಹೊತ್ತಿಗೆ , ಹಿಂದೂ ಧರ್ಮ ಜಗತ್ತಿಗೆ ತನ್ನ ಸಾಮಾರ್ಥ್ಯ ಏನೆಂಬುದನ್ನು ಸಾಬೀತು ಪಡಿಸಿತ್ತು.
ತಾನು ಉತ್ತಮನಾಗಿ ಇತರರನ್ನೂ ಉತ್ತಮರಾಗಿಸುವ ಒಂದು ಶ್ರೇಷ್ಠ ನೀತಿ ಇರುವುದು ಕೇವಲ ಹಿಂದೂ ಧರ್ಮಕ್ಕೆ ಮಾತ್ರ. ಹಿಂದೂ ಧರ್ಮವನ್ನು ನಾಶ ಮಾಡಲು ಬಂದ ಅದೆಷ್ಟೋ ದುಷ್ಟ ಶಕ್ತಿಗಳು ತಾವೇ ನಾಶ ಆಗಿ ಹೋಗಿವೆ. ಪ್ರತಿಯೊಂದು ವಸ್ತುವಿನಲ್ಲೂ ದೇವರನ್ನು ಕಾಣುವ ಧರ್ಮ ಹಿಂದೂ ಧರ್ಮ.
ಹಿಂದೂ ಧರ್ಮವು ತಮ್ಮ ತಾಯಿಗೆ ನೀಡುವ ಸ್ಥಾನವನ್ನು ನೀಡಿರುವುದು ಕೇವಲ ಗೋವಿಗೆ ಮಾತ್ರ. ಇಂತಹ ಗೋವಿಗೆ ಸಾವಿರಾರು ವರ್ಷಗಳಿಂದ ಪೂಜೆ ಪುರಸ್ಕಾರ ನೀಡಿ ಧರ್ಮ ರಕ್ಷಣೆಯ ಜೊತೆಗೆ ಗೋ ರಕ್ಷಣೆ ಮಾಡುತ್ತಾ ತಮ್ಮ ಪರಂಪರೆಯನ್ನು ಉಳಿಸಿಕೊಂಡು ಬಂದವರು ಹಿಂದೂಗಳು.
ಇತಿಹಾಸದಲ್ಲಿ ಮುಸ್ಲಿಂ ರಾಜರುಗಳ ಅಟ್ಟಹಾಸಕ್ಕೆ ನಲುಗಿಹೋಗಿದ್ದ ಹಿಂದೂ ಧರ್ಮದ ಆಚಾರ ವಿಚಾರಗಳು , ಅದೆಷ್ಟೋ ದಾಳಿಗಳ ಮಧ್ಯೆಯೂ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ.
ಇತಿಹಾಸದಲ್ಲಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ್ದ ಸಾಧು ಸಂತರುಗಳು ಗೋವನ್ನು ಸಾಕಿ ಸಲಹಿ , ಅದರಿಂದ ಆಗುವ ಪ್ರಾಕೃತಿಕ ಲಾಭವನ್ನು ತಾವೂ ಉಪಯೋಗಿಸಿ, ಇತರರಿಗೂ ಗೋವಿನ ಮಹತ್ವವನ್ನು ತಿಳಿಸಿದರು.ಇದು ಕೇವಲ ಸಾಧು ಸಂತರುಗಳಿಗೆ ಮಾತ್ರ ಸೀಮಿತವಾಗಿರದೆ, ಇಡೀ ಹಿಂದೂ ಸಮಾಜವೇ ಗೋಮಾತೆಗೆ ವಿಶೇಷ ರೀತಿಯ ಗೌರವ ನೀಡುತ್ತಾ , ಗೋರಕ್ಷಣೆ ಮಾಡುತ್ತಾ ಬಂದಿದೆ.
ದೇಶದಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚುತ್ತಿದ್ದಂತೆ ಹಿಂದೂ ಧರ್ಮದ ಆಚಾರ ವಿಚಾರಗಳ ಮತ್ತು ತಮ್ಮ ಸಂಸ್ಕೃತಿಯ ಮೇಲೆ ದಾಳಿ ನಡೆಸುತ್ತಲೇ ಇದ್ದಾರೆ. ಆದರೂ ಹಿಂದೂ ಸಮಾಜ ಮಾತ್ರ ಯಾವುದೇ ಕಾರಣಕ್ಕೂ ಒಂದು ಹೆಜ್ಜೆಯೂ ಹಿಂದೆ ಸರಿಯದೆ ಎಲ್ಲಾ ಸವಾಲುಗಳನ್ನು ಸ್ವೀಕರಿಸುತ್ತಾ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಮೂಲಕ ತಮ್ಮ ಸನಾತನ ಧರ್ಮವನ್ನು ಉಳಿಸಿಕೊಂಡು ಬಂದಿದ್ದಾರೆ.
ವರ್ಷಗಳು ಉರುಳಿದಂತೆ ಗೋವಿನ ಬಗ್ಗೆ ಚರ್ಚೆಗಳು ತೀವ್ರವಾದವು. ಗೋ ರಕ್ಷಣೆಗಾಗಿ ಹಿಂದೂಪರ ಸಂಘಟನೆಗಳು ಹುಟ್ಟಿಕೊಂಡವು. ಧರ್ಮ ರಕ್ಷಣೆಗಾಗಿ ಪಣತೊಟ್ಟ ಯುವಕರ ಮಧ್ಯೆಯೂ ಗೋವನ್ನು ನಾಶ ಮಾಡಲು ಜಿಹಾದಿಗಳು ಪ್ರಯತ್ನಿಸುತ್ತಲೇ ಇದ್ದಾರೆ.
ಅದೆಷ್ಟೋ ಕುಟುಂಬಗಳು ಗೋವನ್ನೇ ತಮ್ಮ ಜೀವನಕ್ಕೆ ಆಧಾರವಾಗಿ ಉಪಯೋಗಿಸುತ್ತಿದ್ದರೆ , ಇತ್ತ ಮುಸ್ಲಿಮರು ಹಟ್ಟಿಯಿಂದಲೇ ಕಳ್ಳತನ ಮಾಡಿ ನಮ್ಮ ಆಹಾರದ ಹಕ್ಕು ಎಂದು ಕಡಿದೇ ಬಿಟ್ಟರು.
ಗೋರಕ್ಷಣೆಗಾಗಿ ಅದೆಷ್ಟೋ ಸಂತ ಸಮ್ಮೇಳನಗಳೇ ನಡೆದು ಹೋಗಿವೆ. ಎಲ್ಲಾ ಧರ್ಮ ಸಮ್ಮೇಳನಗಳಲ್ಲೂ ಕೇಳಿ ಬಂದ ಕೂಗು ಮಾತ್ರ ಒಂದೇ, ‘ಗೋವನ್ನು ಉಳಿಸಿ – ಗೋವನ್ನು ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕು ಎಂಬೂದು.
ಅನ್ಯರಿಗೆ ಗೋವು ಕೇವಲ ಪ್ರಾಣಿ, ಆದರೆ ಹಿಂದೂ ಧರ್ಮಕ್ಕೆ ಗೋ’ಮಾತೆ’. ಇತರ ಧರ್ಮಕ್ಕೂ ಸನಾತನ ಹಿಂದೂ ಧರ್ಮಕ್ಕೂ ಇರುವ ಸಾಮ್ಯತೆ ಇಷ್ಟೇ. ಗೋವು ಒಂದು ಪ್ರಾಣಿಯಾದರೆ , ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಮಕ್ಕೋಟಿ ದೇವರುಗಳನ್ನೇ ಈ ಗೋವು ತನ್ನ ಮೈಯಲ್ಲಿ ಸೇರಿಸಿಕೊಂಡಿದೆ. ಅದಕ್ಕಾಗಿಯೇ ಗೋವು ಎಂದರೆ ದೇವರಂತೆ ಪೂಜಿಸುತ್ತಾರೆ ಹಿಂದೂಗಳು.
ಈವರೆಗೆ ಗೋರಕ್ಷಣೆಗಾಗಿ ಸಮ್ಮೇಳನ ಪ್ರತಿಭಟನೆ ಇಂತಹ ಕಾರ್ಯಕ್ರಮಗಳು ನಡೆಯುತ್ತಿತ್ತು. ಆದರೆ ಇದೀಗ ಗುಜರಾತ್ ನ ವಡೋದರದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಒಂದು ಸಿನಿಮಾವೇ ತಯಾರಾಗುತ್ತಿದೆ. ಇಡೀ ಸಮಾಜವನ್ನು ಜಾಗ್ರತಗೊಳಿಸುವ ಸಲುವಾಗಿ ಈ ಚಿತ್ರ ತೆರೆ ಮೇಲೆ ಬರಲಿದೆ.
ಗೋರಕ್ಷಣೆಗಾಗಿ ಹಿಂಸಾಚಾರ ನಡೆಯುತ್ತಿದೆ ಎಂದು ಆರೋಪಿಸುವ ಕೆಲ ಕ್ರೂರ ಮನಸ್ಥಿತಿಯುಳ್ಳ ಜನರ ನಡುವೆಯೇ ಈ ಚಿತ್ರ ಬರುತ್ತಿದ್ದು ದೇಶದಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಗೋ ರಕ್ಷಣೆಣೆಯನ್ನೇ ಆಧಾರವಾಗಿಟ್ಟುಕೊಂಡು ‘ಗೋ ರಕ್ಷಕ’ ಎಂಬ ಧಾರ್ಮಿಕ ಮುಖಂಸ ಪಂಕಜ್ ಗೋ ಸ್ವಾಮಿ ಎಂಬವರ ಕೈಯಲ್ಲಿ ತಯಾರಾಗಲಿದೆ. ಧಾರ್ಮಿಕ ಕಾರ್ಯಕ್ರಮ, ಧರ್ಮ ಸಮ್ಮೇಳನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಪಂಕಜ್ ಗೋಸ್ವಾಮಿ ಇದೀಗ ಗೋರಕ್ಷಣೆಗಾಗಿ ಚಲನಚಿತ್ರವನ್ನೇ ನಿರ್ಮಿಸಲು ಮುಂದಾಗಿದ್ದಾರೆ.
ಗೋವಿನ ಸಂಪೂರ್ಣ ಮಹತ್ವವನ್ನು ತಿಳಿಸುವ ಚಿತ್ರ ಇದಾಗಿದ್ದು ಈಗಾಗಲೇ ಭಾರೀ ಸದ್ದು ಮಾಡಿದೆ.
ಗೋರಕ್ಷಣೆಗಾಗಿ ಒಂದೊಂದೇ ಮೆಟ್ಟುಗಳನ್ನು ಹುಟ್ಟುಹಾಕುತ್ತಿರುವ ಹಿಂದೂ ಸಮಾಜ ಇದೀಗ ಮತ್ತೊಂದು ಮಹತ್ತರವಾದ ನಿರ್ಧಾರಕ್ಕೆ ಸಜ್ಜಾಗಿದೆ.
–ಅರ್ಜುನ್