ಪ್ರಚಲಿತರಾಜ್ಯ

ಹಿಂದೂ ಕಾರ್ಯಕರ್ತನ ಕೊಲೆ ಮಾಡಿದ ತಪ್ಪಿಗೆ ಈ ಕಾಂಗ್ರೆಸ್ ಶಾಸಕ ಪಡುತ್ತಿರುವ ಪಶ್ಚಾತ್ತಾಪ ಎಂಥಾದ್ದು ಗೊತ್ತಾ..? ಕೊಲೆಯಲ್ಲಿ ಹೋದ ಮಾನ ಸೀರೆ ಕೊಟ್ಟರೂ ಬಾರದು.!

ರಾಜಕೀಯ ಲಾಭಕ್ಕಾಗಿ ಯಾವುದೇ ರೀತಿಯ ನಾಟಕವಾಡಲು ಸಿದ್ದರಿರುವ ಕಾಂಗ್ರೆಸ್ ಗೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಾಮಾನ್ಯ ಜನರ ನೆನಪಾಗತ್ತಿದೆ. ಬಡವರ ಪರ ಎಂದು ಹೇಳಿಕೊಂಡು ಅಧಿಕಾರ ಹಿಡಿದ ರಾಜ್ಯ ಕಾಂಗ್ರೆಸ್ ಸರಕಾರ , ತಮ್ಮ ಕೈಗೆ ಅಧಿಕಾರ ಸಿಗುತ್ತಿದ್ದಂತೆ ರಾಜ್ಯದ ಜನತೆಯನ್ನು ಮರೆತು ತಮ್ಮ ಲಾಭ ನೋಡಿಕೊಳ್ಳುತ್ತಿದ್ದಾರೆ.

ಇದೀಗ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಗೆ ದಿನ ಎಣಿಕೆ ಶುರುವಾಗುತ್ತಿದ್ದಂತೆ ಕಾಂಗ್ರೇಸಿಗರ ಕಳ್ಳಾಟವೂ ಬಹಳ ಜೋರಾಗಿಯೇ ನಡೆಯುತ್ತಿದೆ. ಮತದಾರರನ್ನು ಸೆಳೆಯಲು ಈ ಕಾಂಗ್ರೆಸ್ ನಾಯಕರು ಪಡುತ್ತಿರುವ ಪಾಡು ಅಂತಿಂತಾದ್ದಲ್ಲ.

ಕರಾವಳಿಯಲ್ಲಿ ನಡೆಯುತ್ತಿದೆ ಕಾಂಗ್ರೆಸ್ಸಿಗರ ಹರಸಾಹಸ..!

ಕರಾವಳಿ ಹಿಂದೂಗಳ ಭದ್ರಕೋಟೆಯಾಗಿದ್ದರೂ ಸಹ ಕಳೆದ ಬಾರಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಪ್ರಾಬಲ್ಯ ಸಾಧಿಸಿದ್ದರು. ಗೆದ್ದ ದಿನದಿಂದಲೇ ತಮ್ಮ ಅಟ್ಟಹಾಸ ಮೆರೆದಿದ್ದ ಕಾಂಗ್ರೇಸಿಗರು, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಹಲ್ಲೆ ಕೊಲೆಗಳಂತಹ ದುಷ್ಕೃತ್ಯಗಳನ್ನು ಮಾಡುವ ಮೂಲಕ ಕರಾವಳಿಯನ್ನು ಕೋಮು ಗಲಭೆಗೆ ಕುಖ್ಯಾತಿ ಪಡೆಯುವಂತೆ ಮಾಡಿದ್ದರು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಜಾತಿ ಧರ್ಮಗಳ ನಡುವೆ ಕಿಚ್ಚು ಹಚ್ಚಿ ತಾವು ಮಾತ್ರ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದೂಗಳ ಓಲೈಕೆಗಾಗಿ ಹರಸಾಹಸ ಪಡುತ್ತಿರುವ ಕಾಂಗ್ರೆಸ್ ಕೆಲವೊಂದು ತಂತ್ರಗಳನ್ನು ಬಳಸಿ ಮತದಾರರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.

ಕಾಂಗ್ರೆಸ್ ಶಾಸಕನಿಂದ ಮನೆ ಮನೆಗೆ ಸೀರೆ..!

ಅಧಿಕಾರದಲ್ಲಿ ಇರುವ ಪಕ್ಷವೇ ಇಂದು ತನ್ನ ಉಳಿವಿಗಾಗಿ ಈ ರೀತಿ ಹೋರಾಟ ಮಾಡುತ್ತಿದೆ ಎಂದರೆ , ಈ ಸರಕಾರದ ವೈಫಲ್ಯ ಯಾವ ರೀತಿಯಲ್ಲಿದೆ ಎಂಬೂದು ತಿಳಿಯುತ್ತದೆ.ಕರಾವಳಿಯ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವಂತಹ ಬಿ ಎ ಮೊಹಿನುದ್ದೀನ್ ಬಾವಾ ತನ್ನ ಕ್ಷೇತ್ರದಲ್ಲಿ ಮನೆ ಮನೆಗೆ ಸೀರೆ ಹಂಚಿ ಮತದಾರರನ್ನು ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮಂಗಳೂರಿನ ಉತ್ತರ ವಲಯದ ಸುರತ್ಕಲ್ ನಲ್ಲಿ ಇತ್ತೀಚೆಗೆ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಕೊಲೆಯಾಗಿತ್ತು. ರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಯಾಗಿದ್ದ ದೀಪಕ್ ರಾವ್ ಕೊಲೆಗಾರರಿಗೂ ಶಾಸಕ ಮೊಹಿನುದ್ದೀನ್ ಬಾವಾ ರಿಗೂ ಬಹಳ ಹತ್ತಿರದ ಸಂಪರ್ಕ ಇತ್ತೂ ಎಂಬೂದು ತನಿಖೆಯ ವೇಳೆ ಬಯಲಾಗಿತ್ತು. ಇದರಿಂದಾಗಿ ತನ್ನ ಇಮೇಜ್ ಗೆ ಧಕ್ಕೆ ಉಂಟಾದ ಪರಿಣಾಮವಾಗಿ ಮುಂದಿನ ಚುನಾವಣೆಯಲ್ಲಿ ಸೋಲು ಖಚಿತ ಎಂದು ಅರಿತ ಶಾಸಕ ಇದೀಗ ಮನೆ ಮನೆಗೆ ಸೀರೆ ಹಂಚಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ದೇಶದ್ರೋಹಿಗಳ ಜೊತೆ ನೇರ ಸಂಪರ್ಕ ಹೊಂದಿದ್ದ ಶಾಸಕ..!

ಕಾಂಗ್ರೆಸ್ ಗೆ ದೇಶದ್ರೋಹಿಗಳ ಪಟ್ಟ ಬಂದಿದ್ದೇ ಕಾಂಗ್ರೆಸ್ ನಾಯಕರು ಮಾಡುತ್ತಿರುವ ದೇಶದ್ರೋಹಿ ಚಟುವಟಿಕೆಗಳಿಂದ. ಕಾಶ್ಮೀರವನ್ನು ಭಾರತ ಎಂದಿಗೂ ಪಾಕಿಸ್ತಾನಕ್ಕೆ ಬಿಟ್ಟುಕೊಡಲು ತಯಾರಿಲ್ಲ. ಆದರೆ ಓವೈಸಿ ಮತ್ತು ಝಾಕೀರ್ ನಾಯ್ಕ್ ನಂತಹ ಮುಸ್ಲಿಂ ನಾಯಕರು ಮಾತ್ರ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಲೇ ಇದ್ದಾರೆ. ಆದರೆ ಮಂಗಳೂರಿನ ಈ ಕಾಂಗ್ರೆಸ್ ಶಾಸಕ ಇದೇ ಮುಸ್ಲಿಂ ನಾಯಕರ ಜೊತೆ ನೇರ ಸಂಪರ್ಕ ಹೊಂದಿದ್ದಾರೆ ಎಂದರೆ ಕರಾವಳಿಯಲ್ಲಿ ನಡೆಯುವ ಕೋಮುಗಲಭೆಯಲ್ಲೂ ಈ ಕಾಂಗ್ರೆಸ್ ಶಾಸಕರ ಕೈವಾಡ ಇರುವುದು ಸ್ಪಷ್ಟ. ಭಾರತ ಸರಕಾರವೇ ಝಾಕೀರ್ ನಾಯ್ಕ್ ನಂತಹ ದೇಶದ್ರೋಹಿಗಳನ್ನು ಭಾರತದಿಂದ ಗಡಿಪಾರು ಮಾಡಿದೆ, ಆದರೆ ಕಾಂಗ್ರೆಸ್ ಮಾತ್ರ ಇನ್ನೂ ಈ ನಾಯಕರ ಜೊತೆ ಸಂಪರ್ಕ ಹೊಂದಿದ್ದಾರೆ.

ಪಾಕಿಸ್ತಾನ ಜಿಂದಾಬಾದ್ ಎಂದವರಿಗೂ ಆಶ್ರಯ ಕೊಟ್ಟ ಮೊಹಿನುದ್ದೀನ್ ಬಾವಾ..!

ಹೌದು ಮಂಗಳೂರಿನ ಉತ್ತರದ ಸುರತ್ಕಲ್ ನಲ್ಲಿ ಕೆಲ ಜಿಹಾದಿ ಗುಂಪು ಪಾಕಿಸ್ತಾನದ ಪರ ಘೋಷಣೆ ಕೂಗಿ ತಮ್ಮ ಕ್ರೌರ್ಯ ಮೆರೆದಿದ್ದರು.‌ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದರೂ ಕೂಡ ಶಾಸಕರ ಪ್ರಭಾವದಿಂದಾಗಿ ಈ ಜಿಹಾದಿ ಗುಂಪುಗಳು ತಪ್ಪಿಸಿಕೊಂಡಿದ್ದರು. ತಮ್ಮ ಅಧಿಕಾರದ ಪ್ರಭಾವದಿಂದ ದೇಶದ್ರೋಹಿಗಳ ಪರ ನಿಲ್ಲುತ್ತಿದ್ದ ಶಾಸಕ ಮೊಹಿನುದ್ದೀನ್ ಬಾವಾ ದೀಪಕ್ ರಾವ್ ಹತ್ಯೆಯಲ್ಲೂ ಶಾಮೀಲಾಗಿದ್ದರು ಎಂಬ ಸತ್ಯಾಂಶವೂ ಬಯಲಾಗಿತ್ತು.

ಏನೇ ಹೇಳಿ, ಚುನಾವಣೆಗಾಗಿ ಯಾವ ಮಟ್ಡಕ್ಕೂ ಇಳಿಯಲು ತಯಾರಾಗಿರುವ ಕಾಂಗ್ರೆಸಿಗರು ಹಣ, ಸೀರೆ, ಕುಕ್ಕರ್ ಇದೇ ರೀತಿ ಒಂದಲ್ಲಾ ಒಂದು ರೀತಿಯಲ್ಲಿ ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನ‌ ನೈಜ ಮುಖ ಈಗಾಗಲೇ ರಾಜ್ಯದ ಜನತೆಯ ಮುಂದೆ ಅನಾವರಣಗೊಂಡಿದ್ದು, ಮುಂದಿನ ಚುನಾವಣೆಯೇ ಸಾಕ್ಷಿಯಾಗಲಿದೆ..!

–ಅರ್ಜುನ್

Tags

Related Articles

Close