ಪ್ರಚಲಿತ

ಚೂರಿ ಹೇಳಿಕೆಯಿಂದ ಮತ್ತೊಮ್ಮೆ ಬಾಲ ಬಿಚ್ಚಿದ ವಿವಾದಾತ್ಮಕ ಮಹಿಳೆ!! ಇವಳಿಗೆ ಕಾಂಗ್ರೆಸ್ಸಿನ ಕೃಪಾ ಕಟಾಕ್ಷ ಹೇಗಿದೆ ಗೊತ್ತಾ??

ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದ ಅವ್ಯವಹಾರಗಳಿಗೆ ಕೊಲೆ ಸುಲಿಗೆಗಳಿಗೆ ಲೆಕ್ಕವೇ ಇಲ್ಲ ಎಂಬಂತಾಗಿದ್ದು, ಇದಕ್ಕೆ ರಾಜ್ಯದಲ್ಲಿ ನಡೆದ ಹಿಂದೂ ಯುವಕರ ಸರಣಿ ಕೊಲೆಗಳೂ ಇದಕ್ಕೆ ದಿಟ್ಟ ನಿದರ್ಶನ!! ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆಗಳು ಹತ್ತಿ ಉರಿಯಲು ಕುಮ್ಮಕ್ಕು ನೀಡುತ್ತಿರುವ ಇವರದೇ ಸರ್ಕಾರ ಇದೀಗ ಮಂಗಳೂರಿಗರು ಬೀದಿಯಲ್ಲೇ ಚೂರಿ ಇರಿಯುತ್ತಾರೆ ಎನ್ನುವ ಹೇಳಿಕೆ ನೀಡುವ ಮೂಲಕ ಇಡೀ ಜಿಲ್ಲೆಯ ಜನರನ್ನು ಕೊಲೆಗಾರರು ಎನ್ನುವಂತೆ ಬಿಂಬಿಸಿದ್ದಾರೆ.

ಹೌದು… ಕರಾವಳಿ ಹಿಂದೂಗಳ ಭದ್ರಕೋಟೆ ಎನ್ನುವುದು ಇಡೀ ದೇಶಕ್ಕೆ ತಿಳಿದ ವಿಚಾರ!! ಆದರೆ “ದಕ್ಷಿಣ ಕನ್ನಡದ ಮೇಲೆ ಒಂದು ಕಣ್ಣಿಡಬೇಕು, ಗೌರಿ ಕೊಲೆಗಾರರು ಕರಾವಳಿಯಲ್ಲೇ ಇರಬಹುದು” ಎನ್ನುವ ಮೂಲಕ ಕರಾವಳಿಯ ಭಾಗದ ಜನತೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಲ್ಲದೇ, ರಾಜ್ಯ ಸರ್ಕಾರವನ್ನು ದಕ್ಷಿಣ ಕನ್ನಡದ ಜನತೆಯ ಮೇಲೆ ಒಂದು ಕಣ್ಣಿಡಲು ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆ ಸ್ವಾಮಿ ಎಚ್ಚರಿಸಿದ್ದರು.

ಅಷ್ಟೇ ಅಲ್ಲದೇ ಸ್ಯಾಂಡಲ್ ವುಡ್ ನ ನಟಿ, ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸೋಶಿಯಲ್ ಮಿಡಿಯಾದ  ಮುಖ್ಯಸ್ಥೆಯಾಗಿರುವ ರಮ್ಯಾ ಪಾಕಿಸ್ತಾನವನ್ನು ಸ್ವರ್ಗ ಎಂದು ಹೇಳಿದ್ದಲ್ಲದೇ, ಮಂಗಳೂರನ್ನು ನರಕ ಎಂದು ಹೇಳುವ ಮೂಲಕ ಕರಾವಳಿ ಜನತೆಯನ್ನು ಕೊಲೆಗಾರರು ಎನ್ನುವಂತೆ ಚಿತ್ರಿಸಿದ್ದರು. ಆದರೆ ಇದೀಗ ಮತ್ತೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ಜನ ಮುಜುಗರ ಪಡುವಂತಹ ವಿವಾದಾತ್ಮಕ ಹೇಳಿಕೆಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ನೀಡಿದ್ದಾರೆ.

“ಉತ್ತರ ಕರ್ನಾಟಕ ಭಾಗದ ಜನರು ಬೀದಿಗಿಳಿದು ಹೋರಾಟ ನಡೆಸಿದರೆ ಮಂಗಳೂರಿನ ಜನ ಬೀದಿಯಲ್ಲೇ ಚೂರಿ ಇರಿಯುತ್ತಾರೆ” ಎನ್ನುವ ಮೂಲಕ ಇಡೀ ಜಿಲ್ಲೆಯ ಜನರನ್ನು ಕೊಲೆಗಾರರು ಎನ್ನುವ ಪಟ್ಟವನ್ನು ಕಟ್ಟಿರುವ ಇವರು ಕರಾವಳಿ ಜನತೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ದಕ್ಷಿಣ ಕನ್ನಡ ಜನತೆಯ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾದ್ಯಮಗೋಷ್ಠಿಯಲ್ಲಿ ಫೆಬ್ರವರಿ 20 ರಂದು ಸುಳ್ಯದಲ್ಲಿ ನಡೆದ ಅಕ್ಷತಾ ಎನ್ನುವ ವಿದ್ಯಾರ್ಥಿನಿಯ ಕೊಲೆಯ ವಿಚಾರದ ಕುರಿತು ಮಾಹಿತಿ ನೀಡುತ್ತಿದ್ದ ಇವರು, ಮಂಗಳೂರಿನ ಜನ ಬೀದಿಯಲ್ಲೇ ಚೂರಿ ಇರಿಯುತ್ತಾರೆ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಬಾರಿ ಸುದ್ದಿಯಾಗಿದ್ದಾರೆ. ಮಂಗಳೂರು ಭಾಗದ ಜನ ಸೌಮ್ಯತೆಗೆ, ಸೌಜನ್ಯತೆಗೆ ಬೆಲೆ ಕೊಡುವ ಜನ ಎಂದು ಭಾವಿಸಲಾಗಿದೆ. ಅಷ್ಟೇ ಅಲ್ಲದೇ ಬುದ್ದಿವಂತರ ನಾಡು ಎನ್ನುವ ಹೆಸರಿಗೆ ಖ್ಯಾತವಾದ ಜಿಲ್ಲೆಗೆ ಕೊಲೆಗಾರರ ಪಟ್ಟವನ್ನು ನೀಡುತ್ತಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ದೊಡ್ಡ ವಿಪರ್ಯಾಸದ ಸಂಗತಿ!!

ಕಾಂಗ್ರೆಸ್ಸಿನ ಕೃಪಾಕಟಾಕ್ಷವನ್ನು ಹೊಂದಿರುವಂತಹ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಬಡತನವಿದೆ, ನೋವಿದೆ, ಹಸಿವಿದೆ. ಆದರೆ ಅಲ್ಲಿಯ ಜನ ಬೀದಿಗಿಳಿದು ಜಗಳವಾಡುತ್ತಾರೆ ಆದರೆ ಆ ಸ್ವಭಾವವನ್ನು ಮಂಗಳೂರಿನಲ್ಲಿ ನೋಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಮಂಗಳೂರಿನ ಜನ ಚಾಕುವಿನಿಂದ ಚುಚ್ಚುವವರು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಜಿಲ್ಲೆಯ ಜನರನ್ನು ಕೊಲೆಗಾರರು ಎಂದು ಹೇಳಿದ್ದಾರೆ.

ಪ್ರತೀಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯು ಕಟ್ಟಾ ಹಿಂದೂಗಳ ಭದ್ರಕೋಟೆಯೂ ಆಗಿದೆ!! ಆದರೆ ಹಿಂದೂಗಳ ತೇಜೋವಧೆ ಮಾಡುತ್ತಿರುವ ಕಾಂಗ್ರೆಸ್ಸಿಗರು ನಿಷ್ಠಾವಂತ ಅಧಿಕಾರಿಗಳನ್ನೇ ಕಿತ್ತು ಹಾಕಿ, ತಾನು ಮುಸಲ್ಮಾಮರ ಓಟಿನಿಂದಾಗಿಯೇ ಇಷ್ಟು ವರುಷಗಳ ಕಾಲ ಶಾಸಕನಾದೆ ಎಂದು ಹೇಳುವ ಶಾಸಕರು ಇರುವ ಇದೇ ಜಿಲ್ಲೆಯಲ್ಲಿ ಕೋಮು ಗಲಭೆಯನ್ನು ಇವರೇ ಸೃಷ್ಟಿಸುವುದಿಲ್ಲ ಎಂದು ಹೇಳಲು ಸಾಧ್ಯವೇ??

ಹೀಗಿರಬೇಕಾದರೆ, ದಕ್ಷಿಣ ಕನ್ನಡದ ಜನತೆಯನ್ನು ಕೊಲೆಗಾರರ ಪಟ್ಟಿ ಕಟ್ಟಿರುವ ಕಾಂಗ್ರೆಸ್ಸಿನ ಕೃಪಾಕಟಾಕ್ಷವನ್ನು ಹೊಂದಿರುವಂತಹ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಮಂಗಳೂರಿನ ಜನ ಬೀದಿಯಲ್ಲೇ ಚೂರಿ ಇರಿಯುತ್ತಾರೆ ಎಂದು ಹೇಳಿದ್ದಾರಲ್ಲ. ಹಾಗಾದರೆ ಇವರು ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಅದು ಹೇಗೆ ವಾಪಸ್ ಹೋದರೋ ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ!!

ಒಟ್ಟಾರೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕೆಲವು ಕಿಡಿಗೇಡಿಗಳು ನಡೆಸುವಂತಹ ಕೃತ್ಯಗಳಿಗೆ ಇಡೀ ಜಿಲ್ಲೆಯ ಜನರನ್ನು ಹೊಣೆಯಾಗಿಸುವಂತಹ ಹಾಗೂ ಜಿಲ್ಲೆಯ ಎಲ್ಲಾ ಜನರನ್ನು ಕೊಲೆಗಾರರು ಎನ್ನುವಂತೆ ಬಿಂಬಿಸುವ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ!! ಅಷ್ಟೇ ಅಲ್ಲದೇ ಬುದ್ದಿವಂತರ ನಾಡನ್ನು ಕೊಲೆಗಾರರ ಜಿಲ್ಲೆ ಎನ್ನುವ ಹಣೆಪಟ್ಟಿಯನ್ನು ಕಟ್ಟಿರುವ ಕಾಂಗ್ರೆಸ್ಸಿಗರು ಅದ್ಯಾವ ಮುಖ ಹೊತ್ತುಕೊಂಡು ದಕ್ಷಿಣ ಕನ್ನಡ ಜಿಲ್ಲೆಗೆ ಇನ್ನು ಮುಂದೆ ಮತಪ್ರಚಾರ ಮಾಡಲು ಹೋಗುತ್ತಾರೋ ನಾ ಕಾಣೆ!!

– ಅಲೋಖಾ

Tags

Related Articles

Close