ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ್ದ.. ಉದ್ಯಮಿ ಲೋಕ್ನಾಥ್ ಪುತ್ರ ವಿದ್ವತ್ ಹಲ್ಲೆಗೊಳಗಾದ ಯುವಕನಾಗಿದ್ದು, ಇವರು ಇತ್ತೀಚೆಗೆ ವಿದ್ವತ್ ಸಿಂಗಾಪೂರ್ನಲ್ಲಿ ಪದವಿ ಮುಗಿಸಿ ನಗರಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು..
ಹಲ್ಲೆಗೊಳಗಾದ ವಿದ್ವತ್ ರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಶಾಸಕರ ಪುತ್ರ ಮತ್ತು ಆತನ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿದ್ದ ವಿದ್ವತ್ ಸಹೋದರ ಸಾತ್ವಿಕ್ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇದೀಗ ವಿದ್ವತ್ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಈ ಸಂಬಂಧ ಮಹಮ್ಮದ್ ನಲಪಾಡ್ ಹ್ಯಾರಿಸ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.. ದೂರು ದಾಖಲಾಗುತ್ತಿದ್ದಂತೆ ಪ್ರಮುಖ ಆರೋಪಿಯಾಗಿರುವ ಶಾಸಕರ ಪುತ್ರ ಮಹಮ್ಮದ್ ನಲಪಾಡ್ ತಲೆಮರೆಸಿಕೊಂಡಿದ್ದ..
ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಶಾಸಕ ಹ್ಯಾರಿಸ್ ನನ್ನ ಮಗ ಫೆÇೀನ್ ಸ್ವಿಚ್ ಆಫ್ ಮಾಡ್ಕೊಂಡಿದ್ದಾನೆ.. ನಿನ್ನೆ ರಾತ್ರಿ ಅವನ ಅಮ್ಮನಿಗೆ ಫೆÇೀನ್ ಮಾಡಿದ್ದನು. ಆಗ ಸರೆಂಡರ್ ಆಗುವಂತೆ ನಾನೇ ಮಗನಿಗೆ ಹೇಳಿದ್ದೇನೆ ಅಂದಿದ್ದಾರೆ. ಎಂದು ಸಖತ್ತಾಗಿಯೇ ನಾಟಕವಾಡಿದ್ದಾರೆ.. ಆದರೆ ಶಾಸಕ ತನ್ನ ಮನೆಯಲ್ಲಿಯೇ ಆತನನ್ನು ಯಾರಿಗೂ ತಿಳಿಯದಂತೆ ಬಂಧನವಿಟ್ಟಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ…
ಮನೆಯಲ್ಲಿಯೇ ಮಗನ್ನು ಇಟ್ಟು ಹೈ ಡ್ರಾಮಾ ಮಾಡಿದ ಕಾಂಗ್ರೆಸ್ ಶಾಸಕ!!
ಶನಿವಾರ ಗೂಂಡಾಗಿರಿ ಮಾಡಿ ಮಹಮ್ಮದ್ ನಲಪಾಡ್ ಎಲ್ಲೊ ತಲೆಮರಿಸಿಕೊಂಡಿದ್ದಾನೆ ಎಂಬ ಡ್ರಾಮಾ ಕೊನೆಗೂ ವಿಷಯ ಬಯಲಾಗಿದೆ… ಶನಿವಾರದಿಂದ ಇಂದಿನವರೆಗೂ ತನ್ನ ಮನೆಯಲ್ಲಿಯೇ ಕಳ್ಳನಂತೆಯೇ ಬಚ್ಚಿಕೊಂಡಿದ್ದ ಶಾಸಕನ ಗೂಂಡಾ ಮಗ!! ಯಾಕೆಂದರೆ ಒಂದು ವೇಳೆ ಶನಿವಾರ ಪೊಲೀಸರು ಅರೆಸ್ಟ್ ಮಾಡಿದ್ದೇ ಆದರೆ ಶನಿವಾರ ಜಾಮೀನು ಸಿಗಲ್ಲ… ನಂತರ ಅದೇ ಆದಿತ್ಯವಾರವೂ ಯಾವುದೇ ಕೇಸ್ ನಡೆಯಲ್ಲ… ಜಾಮೀನು ಸಿಗಲ್ಲ.. ಒಂದು ವೇಳೆ ಸರೆಂಡರ್ ಆದರೆ ಶನಿವಾರ ಆದಿತ್ಯವಾರ ಜೈಲಿನಲ್ಲಿ ತನ್ನ ಮಗ ಕೊಳೆಯಬೇಕು ಎನ್ನುವ ಉದ್ಧೇಶವನ್ನಿಟ್ಟುಕೊಂಡು ಶಾಸಕ ತನ್ನ ಮಗನನ್ನು ಈ ರೀತಿಯಾಗಿ ಉಪಾಯದಿಂದ ಮನೆಯಲ್ಲಿಯೇ ಬಚ್ಚಿಟ್ಟಿದ್ದ..!!
ಶಾಸಕ ಗೂಂಡಾ ಮಗನಿಗೆ ರಾಜ ಮರ್ಯಾದೆ!!
ಕೇವಲ ಹ್ಯಾರಿಸ್ ನಾಟಕ ಮಾತ್ರವಲ್ಲದೆ ಇದು ಸ್ವತಃ ಕಬ್ಬನ್ ಪಾರ್ಕ್ ಪೆÇಲೀಸರ ಒಪ್ಪಂದವೂ ಹೌದು. ಇದು ಈಗ ಬಹಿರಂಗವಾಗಿದೆ. ಕಬ್ಬನ್ ಪಾರ್ಕ್ ಪೆÇಲೀಸರು ಆತ ಕಾಂಗ್ರೆಸ್ ಶಾಸಕರ ಮನೆಯಲ್ಲಿ ಇದ್ದಾನೆ ಎಂಬ ಸ್ಪಷ್ಟ ಮಾಹಿತಿ ಇದ್ದರೂ ಆತನನ್ನು ಬಂಧಿಸಲು ಹಿಂದೇಟು ಹಾಕುತ್ತಾರೆ.
ಹೀಗಾಗಿ ಇದೊಂದು ಕಾಂಗ್ರೆಸ್ ಸರ್ಕಾರವನ್ನು ಬಳಸಿಕೊಂಡು ದರ್ಪ ಮೆರೆದ ಶಾಸಕ ಹ್ಯಾರೀಸ್ ಹಾಗೂ ಪೆÇಲೀಸರ ನಾಟಕ ಎಂಬುವುದು ಸುಳ್ಳಲ್ಲ. ಇದೀಗ ಆತನನ್ನು ತನ್ನ ನಿವಾಸದಿಂದ ಕಬ್ಬನ್ ಪೊಲೀಸ್ ಸ್ಟೇಷನ್ವರೆಗೂ ಕೈಹಿಡಿದು ನಡೆಸಿಕೊಂಡು ಬಂದಿದ್ದಾರೆ ಪೊಲೀಸರು!! ಇದು ಶಾಸಕ ಮತ್ತು ಪೊಲೀಸರ ನಾಟಕವಲ್ಲದೆ ಮತ್ತೇನೆಂದು ಹೇಳಬಹುದು?!
ಸೆಲ್ನಲ್ಲಿ ಇರಬೇಕಾಗಿದ್ದ ಗೂಂಡ ಮೊಹಮ್ಮದ್ ನಲಪಾಡ್ ಪೊಲೀಸ್ ಚೇಂಬರ್ನಲ್ಲಿ!!
ಶನಿವಾರ ಹಲ್ಲೆನಡೆಸಿದ್ದ ಈತ ಈಗಾಗಲೇ ಸೆಲ್ನಲ್ಲಿ ಕಂಬಿ ಎನಿಸಬೇಕಿತ್ತು.. ಆದರೆ ಶನಿವಾರದಿಂದ ತನ್ನ ಮಗನನ್ನು ಕಳ್ಳನಂತೆ ಮನೆಯಲ್ಲಿಯೆ ಇಟ್ಟು ಡ್ರಾಮಾ ಮಾಡಿ ಇಂದು ಪೊಲೀಸ್ ಕೈವಶನಾಗಿದ್ದಾನೆ..
ಗೂಂಡಾ ಸಿಕ್ಕಿದಾಕ್ಷಣಾ ಸೆಲ್ಗೆ ಹಾಕುವ ಬದಲು ಪೊಲೀಸರು ಕೂಡಾ ಶಾಸಕನ ಮಗ ಎನ್ನುವ ಉದ್ಧೇಶವನ್ನಿಟ್ಟುಕೊಂಡು ಜ್ಯೂಸ್ ಕೊಟ್ಟು ಸತ್ಕರಿಸಿದ್ದಾರೆ… ಪೊಲೀಸ್ ಕೈವಶವಾದರೂ ಅಲ್ಲೂ, ತನ್ನ ಗೂಂಡಾಗಿರಿಯನ್ನು ಪ್ರದರ್ಶಿಸಿದ್ದಾನೆ…
ಪೊಲೀಸರ ಎದುರು ಕಾಲ ಮೇಲೆ ಕಾಲು ಹಾಕಿ ಧಿಮಾಕು!!
ಇಷ್ಟೆಲ್ಲಾ ಗೂಂಡಾಗಿರಿ ತೋರಿಸಿ ಇಂದು ರಾಜಾಥಿತ್ಯದಿಂದ ಕರೆದುಕೊಂಡು ಹೋದ ಪೊಲೀಸರ ಎದುರೇ ಕಾಲ ಮೇಲೆ ಹಾಕಿ ಮತ್ತೆ ದರ್ಪ ತೋರಿಸಿದ್ದಾನೆ..ಈತನ ವಿರುದ್ಧ ಸೆಕ್ಷನ್ 307 ಅಡಿಯಲ್ಲಿ ಕೇಸ್ ದಾಖಲಾಗಿದ್ದರೂ ನಾನು ಯಾವುದಕ್ಕೂ ಕೇರ್ ಮಾಡಲ್ಲ!! ನನಗೆ ಏನಾದರೂ ಮಾಡಿದೆ ನನ್ನ ಅಪ್ಪ ಇದ್ದಾರೆ ಎನ್ನುವ ಭಾವನೆಯಿಂದ ಇನ್ಸ್ಪೆಕ್ಟರ್ ಚೇಂಬರ್ನಲ್ಲಿ ದರ್ಪ ತೋರಿಸಿದ್ದಾರೆ..
-ಪವಿತ್ರ