ಪ್ರಚಲಿತ

ನಾನೊಬ್ಬ ಲಿಂಗಾಯತ! ನಾನೊಬ್ಬ ವೀರಶೈವ! ನಾನೊಬ್ಬ ಹಿಂದೂ! ಲಿಂಗಾಯತರು ಇನ್ನು ಮುಂದೆ ಹಿಂದೂಗಳಲ್ಲ ಎನ್ನುವ ಅಧಿಕಾರವನ್ನು ನಿನಗೆ ಕೊಟ್ಟಿದ್ಯಾರು ರಾಹುಲ್ ಗಾಂಧಿ?! ಸಿದ್ಧರಾಮಯ್ಯನೇ?! ಅಥವಾ ವೇಷಧಾರಿಗಳೇ?

ಇವತ್ತು, ಸತ್ಯ ಹೇಳಲಿಕ್ಕಿದೆ ನಮಗೆ!! ಇಲ್ಲಿಯ ತನಕ, ಎಪ್ಪತ್ತು ವರ್ಷಗಳ ಕಾಲ ಭಾರತವನ್ನು ಬರ್ಬಾದ್ ಮಾಡಿದ್ದರೂ ಸಹ ಅದೇನೋ ಒಂದು ಸೌಜನ್ಯಕ್ಕಾದರೂ ಸಹ ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್ ಗಾಂಧಿಗೆ ಕಷ್ಟವಾದರೂ ಗೌರವ ಕೊಡುತ್ತಿದ್ದೆವು! ಆದರೆ, ಯಾವತ್ತು ಇದೇ ಮನುಷ್ಯ ಒಂದ ಪಂಗಡವನ್ನು ರಾಜಕೀಯ ಹಿನ್ನೆಲೆಯಲ್ಲಿ ಬೇರ್ಪಡಿಸಿ ಅವರ್ಯಾರೂ ಸಹ ಹಿಂದೂ ಧರ್ಮಕ್ಕೆ ಸೇರಿದವರಲ್ಲ ಎಂಬ ಹೇಳಿಕೆ ನೀಡಿದನೋ, ಅವತ್ತೇ ಅವನ ಮೇಲೆ ಯಾವ ಗೌರವವನ್ನೂ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲವೇ ಇಲ್ಲ ಬಿಡಿ!! ಈ ಆಕ್ರೋಶದ ಪತ್ರವನ್ನು ನೇರವಾಗಿ ರಾಹುಲ್ ಗಾಂಧಿಗೆ ಮತ್ತು, ಕಾಂಗ್ರೆಸ್ ನಾಯಕರಾದ ನಾಲಾಯಕ್ ಗಳು ಮತ್ತು ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟವರಿಗೂ ಸಹ ಸ್ವಲ್ಪ ಧರ್ಮ ಮತ ಪಂಥಗಖ ತತ್ವ ಅರಿವಾಗಲಿ ಎಂಬ ಉದ್ದೇಶದಿಂದ ಬರೆಯುತ್ತಿದ್ದೇನೆ!

ಕಾಂಗ್ರೆಸ್ ಪಕ್ಷದವರು ನೆನ್ನೆಯಷ್ಟೇ, ಲಿಂಗಾಯತರಿಗೋಸ್ಕರ ಬೇರೆ ಧರ್ಮವನ್ನು ಸೃಷ್ಟಿ ಮಾಡುತ್ತೇವೆಂದೂ, ಜೊತೆಗೆ ಅವರು ಇನ್ನು ಮುಂದೆ ಹಿಂದೂ ಧರ್ಮಕ್ಕೆ ಸೇರಿದವರಲ್ಲವೆಂದೂ ಘೋಷಿಸಿದ್ದಾರಲ್ಲವೇ?! ಅದೇ ರೀತಿ, ರಾಹುಲ್ ಗಾಂಧಿಯೂ ಸಹ ನೆನ್ನೆ ಇದ್ದಕ್ಕಿದ್ದ ಹಾಗೆ, ಕರ್ನಾಟಕದಲ್ಲಿರುವ ಅದೆಷ್ಟೋ ಮಿಲಿಯನ್ ಲಿಂಗಾಯತರು ಇನ್ನು ಹಿಂದೂಗಳಲ್ಲ ಎಂದನಲ್ಲವೇ?! ಯಾವ ಮುಟ್ಠಾಳ ಹಿಂದೂ ಧರ್ಮವನ್ನು ಒಡೆಯಲಿಕ್ಕೆ ರಾಹುಲ್ ಗಾಂಧಿಗೆ ಅಧಿಕಾರ ನೀಡಿದ್ದು ಸ್ವಾಮಿ?! ಲಿಂಗಾಯತರನ್ನು ಅಹಿಂದರು ಎಂದು ಕರೆಯಲಿಕ್ಕೆ, ಲಿಂಗಾಯತರಿಗೋಸ್ಕರ ಬೇರೆ ಧರ್ಮ ಸ್ಥಾಪನೆ ಮಾಡುವುದಕ್ಕೆ ಹಿಂದೂ ಧರ್ಮವೇನು ಇವರಪ್ಪ ಸ್ವಿಸ್ ಬ್ಯಾಂಕಿನಲ್ಲಿಟ್ಡ ಹಣದ ಕಂತೆಗಳೇ?! ಅಥವಾ, ಅದು ನಿನಗೆ ಇದು ನನಗೆ ಎನ್ನಲಿಕ್ಕೆ ಇದೇನು ಇವ ಮುತ್ತಜ್ಜ ಮಾಡಿಟ್ಟ ಆಸ್ತಿಯೇ?! ಲಿಂಗಾಯತ – ವೀರಶೈವ ಮತಗಳ ಅರ್ಥವಾದರೂ ಗೊತ್ತೇನು?! ಬಸವಣ್ಣನ ತತ್ವಗಳ ಆಧಾರದ ಮೇಲೆ ಭಗವಾನ್ ಶಿವನನ್ನು ಅದಮ್ಯವಾಗಿ ಆರಾಧಿಸುವ ಅವೆರಡೂ ಮತಗಳಿಂದ ಇವತ್ತು, ಹಿಂದೂ ಧರ್ಮದಲ್ಲಿ ಉಳಿದಿರುವ ಆಚಾರಗಳಲ್ಲಿ ಲಿಂಗಾಯತ ಮತ್ತು ವೀರಶೈವರ ಪಾತ್ರ ಅತಿ ದೊಡ್ಡದಾಗಿರುವಾಗ ಈ ಕಾಂಗ್ರೆಸ್ ಪಕ್ಷದವರು ಮತ್ತು, ಪ್ರತ್ಯೇಕ ಧರ್ಮ ಬೇಕು ಎಂಬುದಕ್ಕೆ ಯಾವ ನೈತಿಕತೆ ಬೆಂಬಲಿಸಿತು?!

ಇದು ಸತ್ಯವೇ ತಾನೇ?! ೧೨ ನೇ ಶತಮಾನದಲ್ಲಿ, ಹಿಂದೂ ಸಮಾಜದ ಸುಧಾರಕಾರಾಗಿ ಅದೆಷ್ಟೋ ಕೊಡುಗೆಗಳನ್ನು ನೀಡಿದ ಬಸವೇಶ್ವರರು ಸಮಾಜದಲ್ಲಿದ್ದ ಮತ ಭೇದಗಳನ್ನು ತೊಡೆದು ಹಾಕುವಲ್ಲಿ ಶ್ರಮಿಸಿದ ಮೊದಲ ವ್ಯಕ್ತಿಯೆಂಬ ಸತ್ಯ ಇವತ್ತು ಈ ಎಲ್ಲಾ ಪ್ರತ್ಯೇಕತೆಯ ಮಾತನಾಡುವ
ಮುಟ್ಠಾಳರಿಗೆ ಅರಿವಿದೆ ಅಲ್ಲವಾ?! ಅಸ್ಪರ್ಶ್ಯತೆಯನ್ನು ತೊಡೆದು ಹಾಕಿ, ಎಲ್ಲ ಹಿಂದೂಗಳೂ ಒಂದೇ ಎನ್ನುವಂತಹ ಸಿದ್ಧಾಂತ ಪ್ರತಿಪಾದಿಸಿದ ಅದೇ ಬಸವಣ್ಣನನ್ನಯ ಮುಂದಿಟ್ಟುಕೊಂಡು ಜಾತಿ ಜಾತಿ ಎಂದು ಬಡಿದಾಡಿದವರಿಗೆ ಯಾವ ನೈತಿಕತೆ ಇದ್ದೀತು?! ಅವರ ಬದುಕಿನುದ್ದಕ್ಕೂ, ಯಾವತ್ತಿಗೂ ಸಹ ಲಿಂಗಾಯತ ಮತ್ತು ವೀರಶೈವರು ಬೇರೆ ಎಂದೆನ್ನಲಿಲ್ಲ! ಯಾವತ್ತಿಗೂ, ಇಬ್ಬರೂ ಬೇರೆ ಬೇರೆಯಾಗಿ ಹಿಂದೂ ಧರ್ಮದಿಂದ ಬೇರ್ಪಡಬೇಕು ಎನ್ನಲಿಲ್ಲ! ಪ್ರಾಚೀನ ಕಾಲದಲ್ಲಿ ಅವರವರ ಕಸುಬಿಗನುಗುಣ ವಾಗಿ ಕರೆದ ನಾಮಧೇಯವೇ ಕೊನೆಗೆ ಜಾತಿಯಾಯಿತು! ಕೊನೆಗೆ, ಅದೇ ದೇಶಕ್ಕೂ ಧರ್ಮಕ್ಕೂ ಮಾರಕವಾಯಿತು! ಅಷ್ಟೇ! ಇಂತಹ ಆಚರಣೆ, ಅಸ್ಪ್ರಶ್ಯತೆ, ಜಾತಿ ಬೇಧಗಳನ್ನು ಅತಿಯಾಗಿ ವಿರೋಧಿಸಿದ ಬಸವಣ್ಣ ಹಿಂದೂ ಧರ್ಮವದ ಸಾರವನ್ನು ಎತ್ತಿ ಹಿಡಿದದ್ದೂ ಅಷ್ಟೇ ಸತ್ಯವಲ್ಲವೇ ಸ್ವಾಮಿ?! ಪ್ರಜಾಪ್ರಭುತ್ವಕ್ಕೋಸ್ಕರ ಧ್ವನಿ ಎತ್ತಿದರು! ಮಹಿಳೆಯ ಸ್ವಾತಂತ್ರ್ಯಕ್ಕೋಸ್ಕರ ಧ್ವನಿ ಎತ್ತಿದರು!! ಅದೂ ಅಲ್ಲದೇ, ಹಿಂದೂ ಧರ್ಮದ ಆಚಾರ ವಿಚಾರಗಳ ಉಳಿವಿಗೆ ಧ್ವನಿ ಎತ್ತಿದರು! ಪ್ರಜಾಪ್ರಭುತ್ವದ ವಿಚಾರವೇ ಅರಿಯದ ಸಮಾಜದಲ್ಲಿ, ಎಲ್ಲರಿಗೂ ಸಮನಾದ ನ್ಯಾಯ ನೀತಿ ಎಂದು ಅರಿಕೆ ಮಾಡಿಕೊಟ್ಟದ್ದು ಬಸವಣ್ಣನವರೇ ಅಲ್ಲವೇ?! ಇದನ್ನಾದರೂ, ಈ ಪ್ರತ್ಯೇಕತಾ ವಾದಿಗಳು ಒಪ್ಪುತ್ತಾರೆಯೇ?! ಅಥವಾ ಮತ್ತದೇ ಬಸವಣ್ಣನವರ ಮುಂದೆ, ಜಾತಿ ಜಾತಿ ಹೊಡೆದಾಡಿಕೊಂಡು ಬದುಕು ನಡೆಸುತ್ತಾರೋ?! ಬಸವಣ್ಣನವರ ಅನುಭವ ಮಂಟಪವೊಂದು ಈ ಲಿಂಗಾಯತ ವೀರಶೈವ ಪ್ರತ್ಯೇಕತಾವಾದಿಗಳಿಗೆ ದಾರಿ ದೀಪವಾಗ ಬೇಕಿತ್ತು!! ಮತ್ತದೇ ಐಕ್ಯತೆಯಿಂದ ಬಾಳಲು ! ಆದರೆ, . . ಛೇ!! ಅದೇ ಮುಳುವಾಯಿತಾ?!

ಜಾತಿ ವ್ಯವಸ್ಥೆಯನ್ನು ತೊಡಗಿಸಲೇ ಬೇಕೆಂಬ ಹಠಕ್ಕೆ ನಿಂತ ಬಸವಣ್ಣನವರ ಕ್ರಾಂತಿಕಾರಕ ಹೆಜ್ಜೆಗೆ ಅವತ್ತಿನ ಇಡೀ ಸಮಾಜ ತಲೆ ಬಾಗಿತ್ತಲ್ಲವೇ?! ಇಡೀ ಸಮಾಜ ಅವತ್ತು ಒಂದೇ ಸೂರಿನಡಿ ಒಗ್ಗಟ್ಟಿನಿಂದ ಕೂಡಿತ್ತಲ್ಲವೇ?! ಸನಾತನ ಧರ್ಮವೊಂದೇ ಸತ್ಯ ಎಂದ ಬಸವಣ್ಣನವರು ಹಿಂದುತ್ವ ಎಂಬುದ ಕ್ಕೋಸ್ಕರ ಬದುಕನ್ನೇ ಸವೆಸಿದರಲ್ಲವೇ?! ಅವತ್ತು, ಪ್ರತೀ ಹಿಂದುವಿಗೆ ಬಸವಣ್ಣನವರು ಹೇಳಿದ್ದೇನು?! ಪ್ರತಿಯೊಬ್ಬ ಹಿಂದೂವಿಗೂ ಭೋಧಿಸಿದ್ದು ಮತ್ತದೇ ಹಿಂದುತ್ವವನ್ನು! ಮತ್ತದೇ ಜಾತ್ಯಾತೀತತೆಯನ್ನು! ಮತ್ತದೇ, ಹಿಂದುತ್ವ ಆದರ್ಶಗಳನ್ನು! ಸಂಪ್ರದಾಯ ಆಚಾರ ವಿಚಾರಗಳು ಬೇರೆಯದೇ ಇರಬಹುದಾದರೂ ಸಹ, ನಮ್ಮ ಪ್ರತೀ ಸಿದ್ಧಾಂತ ಆದರ್ಶಗಳು ನಿಂತದ್ದು ಮತ್ತದೇ ಹಿಂದುತ್ವದ ಆಧಾರದ ಮೇಲೆ!!

ಪ್ರತೀ ಬಾರಿಯೂ ಸಹ ನಮ್ಮ ಆಚಾರ ವಿಚಾರಗಳಲ್ಲಿ ಹಿಂದುತ್ವವೇ ಗಾಢವಾಗಿ ಕಾಣಬೇಕಾದರೆ ಅದ್ಯಾವ ಸಂಸ್ಕಾರದ ಮೇಲೆ , ನೈತಿಕತೆಯ ಮೇಲೆ ಈ ಪಕ್ಷ ಮತ್ತು ರಾಹುಲ್ ಗಾಂಧಿ ಇನ್ನು ಲಿಂಗಾಯತರು ಹಿಂದೂಗಳಲ್ಲ ಎಂದು ಘೋಷಿಸಿದರು?!

ನೋಡಿ!! ಈ ಲಿಂಗಾಯತರನ್ನು ಹಿಂದೂಗಳಲ್ಲ ಎನ್ನುವುದು! ವೀರಶೈವರು ಇನ್ನು ಹಿಂದೂಗಳಲ್ಲ ಎನ್ನುವುದು! ಜೈನ ಸಿಖ್ ಬೌದ್ಧರನ್ನು ಅಲ್ಪ ಸಂಖ್ಯಾತರನ್ನಾಗಿಸಿದ್ದು, ಇವೆಲ್ಲವೂ ಇದೆಯಲ್ಲವಾ?! ಅದು ಕೇವಲ ನಿಮ್ಮ ಪಕ್ಷದ ರಾಜಕೀಯ ತಂತ್ರ ಮಾತ್ರವೇ ಅಲ್ಲ!! ಬದಲಾಗಿ, ಹಿಂದೂ
ಸಮಾಜವನ್ನು ಒಡೆಯುವ ಮತ್ತು ಭಾರತದಲ್ಲಿ, ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡುವಂತಹ ಉದ್ದೇಶ ಮಾತ್ರವಷ್ಟೆ!! ಇದು, ಇವತ್ತಲ್ಲ, ಯಾವತ್ತು ಕಾವಿ ಹಾಕಿದವರೂ ಸಹ ಕಾಂಗ್ರೆಸ್ ಗೆ ಜೈ ಎಂದರೋ, ಅವತ್ತೇ ನಮಗೆಲ್ಲ ಗೊತ್ತಾಗಿ ಹೋಗಿದೆ! ಬಣವಣ್ಣನವರ ತತ್ವವನ್ನು ಎಡಗಾಲಿನಲ್ಲಿ ಒದ್ದು, ಪ್ರತ್ಯೇಕ ಧರ್ಮದ ಬೇಡಿಕೆಯನ್ನಿಟ್ಟಿದ್ದಾರೆಂದು! ಆದರೆ, ಅದ್ಯಾವ ಪುರುಷಾರ್ಥಕ್ಕಾದೀತು?!!

ಈ ರಾಹುಲ್ ಗಾಂಧಿ ಮತ್ತು ಆತನ ಚೇಲಾಗಳಿಗೆ ಬಹುಷಃ ಗೊತ್ತೇ ಇಲ್ಲ ಎನ್ನುವುದು ಕಾಣುತ್ತದೆ! ಈ ಲಿಂಗಾಯತ ವೀರಶೈವರ ಒಗ್ಗಟ್ಟು ಒಡೆಯಲಿಕ್ಕೆ ನಾಂದಿ ಹಾಕಿದ್ದು ತಾನೊಬ್ಬ ಕನ್ನಡ ಕವಿಯೆಂದು ಕೊಂಡಿದ್ದ ಚನ್ನಪ್ಪ ಡಿ ಉತ್ತಂಗಿ! ಮಜಾ ಎಂದರೆ, ಈ ವ್ಯಕ್ತಿ ಬಸೆಲ್ ಸೆಮಿನರಿಯಲ್ಲಿ ದೇವತಾಶಾಸ್ತ್ರದ ಅಧ್ಯಯನವನ್ನು ಕೈಗೆತ್ತಿಕೊಂಡಿದ್ದಲ್ಲದೇ, 1908 ರಲ್ಲಿ ಬವೆಲ್ ಒಬ್ಬ (ಕ್ರಿಶ್ಚಿಯನ್ ಸುವಾರ್ತೆ ಶಿಕ್ಷಕ) ಮಿಷನರಿಯಾಗಿ ಹೋದ!! 1908 ರಿಂದ ಬ್ರಿಟೀಷರೊಂದಿಗೆ ಕೈಜೋಡಿಸಿ ಹಲ್ಲು ಕಿರಿದ!! ಅಲ್ಲಿದ ಶರುವಾಯಿತು ನೋಡಿ ಆತನ ಪಕ್ಕಾ ಮಿಷನರಿ ಕೆಲಸ!! ಹಿಂದೂ ಪ್ರಾಬಲ್ಯದ ಸ್ಥಳಗಳಲ್ಲಿ ಜೀಸಸ್ ಮತ್ತು ಕ್ರೈಸ್ತಧರ್ಮದ ಸಂದೇಶವನ್ನು ಹರಡಲು ಪ್ರಾರಂಭಿಸಿದ ಆತ, ಕ್ರಿಶ್ಚಿಯನ್ ಧರ್ಮದ ಬಗೆಗೆ ಅನೇಕ ಪುಸ್ತಕಗಳನ್ನು ಬರೆದದ್ದಲ್ಲದೇ, ಜನರ ದಿಕ್ಕು ತಪ್ಪಿಸಲು ಹಿಂದೂ ಹೆಸರುಗಳನ್ನೂ ನೀಡಿದ. ಹಿಂದೂಗಳನ್ನು, ಮತ್ತು ಅದರಲ್ಲೂ ವಿಶೇಷವಾಗಿ ಲಿಂಗಾಯಿತರನ್ನು ಮರುಳು ಮಾಡಲು ತಪ್ಪಾಗಿ ಅರ್ಥೈಸಲ್ಪಟ್ಟ ಮತ್ತು ತಿರುಚಲ್ಪಟ್ಟ ಇತಿಹಾಸಗಳನ್ನು ತುಂಬಿದ ಪುಸ್ತಕಗಳನ್ನೂ ಸಮಾಜಕ್ಕೆ ಪರಿಚಯಿಸಿದ!! ಆತನ ಪುಸ್ತಕಗಳಾದ ಮೃತ್ಯುಂಜಯ (ಯೇಸುಕ್ರಿಸ್ತನ ಕೊನೆಯ ದಿನಗಳು) (1963), ಲಿಂಗಾಯಿಸಂ ಮತ್ತು ಕ್ರಿಶ್ಚಿಯಾನಿಟಿ (1969), ಅನುಭವಾ ಮಂಟಪ: ವಿರೋಷಿವಿಜಂನ ಹೃದಯ (1932) ಎಂಬಂತಹ ಪುಸ್ತಕಗಳಿವೆಯಲ್ಲವಾ?! ಅದಷ್ಟೂ ಕೂಡ ಹಿಂದೂ ಸಮಾಜವನ್ನು ವಿಭಜಿಸುವ ಗುರಿಯನ್ನು ಹೊಂದಿದ್ದವಷ್ಟೇ!!

ಇತಿಹಾಸದಲ್ಲಿ ಅದೆಷ್ಟೋ ಉದಾಹರಣೆಗಳಿವೆ ಬಿಡಿ!! ಒಂದಲ್ಲ ಎರಡಲ್ಲ! ನೂರಾರು! ಅದಲ್ಲದೇ, ಯಾರಾದರೂ ಭಾರತದಲ್ಲಿ ಧರ್ಮ ವಿಭಜನೆಗೆ ನಾಂದಿ ಹಾಡಿದಿದ್ದರೆ ಅದು ಕೇವಲ ಬ್ರಿಟಿಷರು ಮಾತ್ರ!! ಅವರಷ್ಟು “ಒಡೆದು ಆಳುವ ನೀತಿ’ ಯನ್ನು ಪರಿಪಾಲಿಸಿದವರು ತದನಂತರ ಬಂದ ಕಾಂಗ್ರೆಸ್ಸಿಗರೇ ಹೊರತು ಇನ್ಯಾರೂ ಅಲ್ಲ ಅಲ್ಲವೇ?! ಅವತ್ತೂ ಸಹ ಇದೇ ಕಾಂಗ್ರೆಸ್ ದೇಶವನ್ನು ವಿಭಜಿಸಿತು! ತದನಂತರ, ಇದ್ದಬದ್ದ ಹಿಂದೂಗಳನ್ನು ಜಾತಿಯಾಧಾರಿತವಾಗಿ ವಿಂಗಡಿಸಿ ವಿಭಜಿಸಿತು! ಮತ್ತು, ಈಗ ಈ ಸಿದ್ಧರಾಮಯ್ಯನ ಸರದಿ ಅಷ್ಟೇ ಅಲ್ಲವೇ?! ಅತ್ತ ಈ ರಾಹುಲ್ ಗಾಂಧಿ ಎನ್ನುವ ಘನತೆಯಿಲ್ಲದವನೊಬ್ಬ ಘೋಷಿಸಿ ಬಿಡುತ್ತಾನೆ! ಇನ್ನು, ಲಿಂಗಾಯತರ್ಯಾರೂ ಹಿಂದೂಗಳಲ್ಲ ಎಂದು! ದುರಂತವೆಂದರೆ, ಈ ಪ್ರತ್ಯೇಕ ಧರ್ಮಕ್ಕೆ ಅರ್ಜಿ ಸಲ್ಲಿಸಿದವರು ಮತ್ತದೇ ಚನ್ನಪ್ಪ ಡಿ ಉತ್ತಂಗಿ ಮತ್ತು ಹೀರೆಮಲ್ಲೂರ್ ಈಶ್ವರನ್ ರವರ ಬೆಂಬಲಿಗರಷ್ಟೇ!! ಇಂತವೇ ದುರ್ದೈವದ ಧರ್ಮ ಗೊತ್ತಿಲ್ಲದ
ಒಂದಷ್ಟು ನರಿಗಳು ಕಾಂಗ್ರೆಸ್ ಸರಕಾರದ ಹತ್ತಿರ ಹೋಗಿ, ಲಿಂಗಾಯಿತರಿಗೆ ಪ್ರತ್ಯೇಕ ಧರ್ಮ ನೀಡಿ ಎಂದಿರುವುದು! ಅವತ್ತಿನಿಂದ ಇವತ್ತಿಗೂ ಮತ್ತದೇ ವಿಭಜನೆ! ಮತ್ತದೇ ನರಳಾಟ! ಮತ್ತದೇ, ಅಕ್ಷರ್ಶಃ ದೇಶವನ್ನು ಒಡೆಯುವ ಹುನ್ನಾರ! ಇದು, ಕಾಂಗ್ರೆಸ್ಸಿಗರಿಗಷ್ಟೇ ಸಾಧ್ಯ!!

ಸತ್ಯ ಒಪ್ಪಿಕೊಂಡು ಬಿಡಿ ನೈತಿಕತೆ ಇದ್ದರೆ!! ಇದೇ ರಾಹುಲ್ ಗಾಂಧಿಯ ಚೇಲಾಗಳು, ದಕ್ಷಿಣದ ಬ್ಯಾಪ್ಟಿಸ್ಟ್ ಚರ್ಚ್ ಮತ್ತು ಜೋಶುವಾ ಮಿಷನರಿಗಳ ಜೊತೆ ಸೇರಿ, ಉತ್ತರ ಮತ್ತು ದಕ್ಷಿಣ ಕರ್ನಾಟಕದ ಕೆಲ ಭಾಗಗಳಲ್ಲಿರುವ ಲಿಂಗಾಯತರನ್ನು ಆಮಿಷ ಒಡ್ಡಿ ಆಕರ್ಷಿಸಲು ಪ್ರಯತ್ನಿಸಿದ್ದು ಸುಳ್ಳೇನು?! ಇದೇ ದರಿದ್ರ ಮಿಷನರಿಗಳು ಲಿಂಗಾಯಿತರನ್ನು ಕುರಿತು, ಸರಕಾರೀ ಸೌಲಭ್ಯಗಳು ಸಿಗುತ್ತವೆ! ಹಿಂದೂ ಧರ್ಮದಿಂದ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿ ಎಂದೆಲ್ಲ ತಲೆ ಕೆಡಿಸಿದ್ದು, ಇದೇ ಕಾಂಗ್ರೆಸ್ ಪಕ್ಷದ ಥರಾವರಿ ಭಾಗ್ಯಗಳ ಪ್ರತಿಫಲ!! ಅದಕ್ಕೆ ತಕ್ಕನಾಗಿ, ಪ್ರತೀ ಲಿಂಗಾಯಿತನಿಗೂ ಸಹ, ಒಂದು ಬೈಬಲ್ಲು ಮತ್ತು , ಚನ್ನಪ್ಪನ ಲಿಂಗಾಯತ ಹಾಗೂ ಕ್ರೈಸ್ತ ಎನ್ನುವ ಪುಸ್ತಕ ನೀಡಿ ಪುಸಲಾಯಿಸಿದ್ದು ಸತ್ಯವೇ ತಾನೆ?!

ತನ್ನ ತಾ ಶಿವಭಕ್ತನೆಂದು ಕೊಳ್ಳುವ ರಾಹುಲ್ ಗಾಂಧಿ, ತನ್ನ ತಾ ಹಿಂದೂ! ನನ್ನ ಹೆಸರೇ ರಾಮ ಎನ್ನುವ ಸಿದ್ಧರಾಮಯ್ಯ! ಮತ್ತು, ನಾವೆಲ್ಲ ಬಸವಣಣನವರ ಅನುಯಾಯಿಗಳು ಎಂದು ಕಾವಿ ತೊಟ್ಟು ಪ್ರತ್ಯೇಕ ಧರ್ಮ ಬೇಕೆಂದವರು!! ಇವರಿಗಾರಿಗಾದರೂ, ಬಸವಣ್ಣನವರ ತತ್ವಗಳ ಬಗೆಗೆ ಅರಿವಿದೆಯೇ?! ಹೋಗಲಿ!! ಬಸವಣ್ಣನವರ ತತ್ವಗಳನ್ನು ಅನುಸರಿಸುವ ಯೋಗ್ಯತೆಯಾದರೂ ಇದೆಯೇ?!! ಹೋಗಲಿ!! ಎಲ್ಲಿಯಾದರೂ ಬಸವಣ್ಣನವರು ಹಿಂದೂ ಧರ್ಮದಿಂದ ಲಿಂಗಾಯಿತರಾಗಲಿ ಅಥವಾ, ವೀರಶೈವರಾಗಲಿ ಪ್ರತ್ಯೇಕವಾಗಬೇಕೆಂದು ಹೇಳಿದ್ದಾರೆಯೇ?! ಇಲ್ಲವಲ್ಲ?! ಇವತ್ತು, ಪ್ರತಿ ಸ್ವಾಭಿಮಾನಿ ಲಿಂಗಾಯತ ಹಿಂದೂವಿನ ಸ್ವಾಭಿಮಾನ ಕದಡಿದ ಈ ಕಾಂಗ್ರೆಸ್ ನರಿಗಳಿಗೆ ಮರ್ಯಾದೆ ಕೊಡಬೇಕಿದೆಯೇ?!

ಲಿಂಗಾಯಿತರಿಗೆ ಅಲ್ಪಸಂಖ್ಯಾತರ ಸ್ಥಾನಮಾನವನ್ನು ನೀಡಲು ಸರ್ವೋಚ್ಛ ನ್ಯಾಯಾಲಯ ಅನುಮೋದಿಸುವುದಿಲ್ಲ ಎಂದು ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ೧೯೯೨ ನೇ ವಿಧಿ ಹೇಳಿದೆಯಲ್ಲವಾ?! ಪ್ರತ್ಯೇಕ ಧರ್ಮವಾದರೂ ಸಹ, ಅಂತಹ ಪಂಥದವರಿಗೆ ಕಾನೂನು ಪ್ರಕಾರವಾಗಿ ಯಾವುದೇ ರೀತಿಯಾದ ಸೌಲಭ್ಯ ನೀಡಲು ಸಂವಿಧಾನದಲ್ಲಿಯೇ ಅವಕಾಶವಿಲ್ಲದಿರುವಾಗ, ಈ ಲಿಂಗಾಯತ – ವೀರಶೈವ ಪಂಥವನ್ನು ಹೇಗೆ ಬೇರ್ಪಡಿಸಿದರು?! ಅದ್ಯಾವ ಆಧಾರದ ಮೇಲೆ ಸೌಲಭ್ಯಗಳ ವಚನ ನೀಡಿದರು?! ಈ ವಿಧಿಯನ್ನು ಸ್ವತಃ ಇವರದೇ ಕಾಂಗ್ರೆಸ್ ಸರಕಾರ ಅನುಮೋದಿಸಿ ಜಾರಿ ಮಾಡಿದ್ದಲ್ಲವೇ?! ಅಂದರೆ, ಈ ಎಲ್ಲಾ ನಾಟಕಗಳೂ ಸಹ ಹಿಂದುತ್ವವನ್ನು ಒಡೆಯಲಿಕ್ಕೆ, ಮತ್ತು ಲಿಂಗಾಯಿತರ ಹೆಸರಿನಲ್ಲಿ ಹೆಚ್ಚುವರಿ ಮತ ಗಳಿಸಲು ಮಾಡಿದ ಗಿಮಿಕ್! ಸತ್ಯ ತಾನೇ?!

ಈ ಕುಲಗೆಟ್ಟವರಿಗೆ ತೀರಾ ಎನ್ನುವಷ್ಟು ಚಟ ಇದೆಯಲ್ಲವಾ?! ಲಿಂಗಾಯಿತರನ್ನು ಹಿಂದೂಗಳಲ್ಲ ಎನ್ನುವುದು?! ಯಾಕೆ ಉಳಿದವರನ್ನೂ ಬಿಟ್ಟರು?! ಯಾಕೆ, ಹಿಂದೂ ಸಮಾಜದಲ್ಲಿರುವ ಪ್ರತೀ ಜಾತಿಯನ್ನೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿಸಿ ಸೌಲಭ್ಯ ನೀಡಬಾರದು?! ೧೬% ಇರುವ ಗೌಡ ಮತ್ತು ಒಕ್ಕಲಿಗರನ್ಯಾಕೆ ಬಿಟ್ಟರು?! ೫% ಇರುವ ಬ್ರಾಹ್ಮಣರನ್ನು ಯಾಕೆ ಬಿಟ್ಟರು?! ೩೨ ಲಕ್ಷ ವಿರುವ ಬಂಟ್ ಜನರನ್ನು, ೧೦ ಲಕ್ಷವಿರುವ ಕೊಡವರನ್ನು! ಇವರನ್ನೆಲ್ಲ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿಸಬಹುದಿತ್ತಲ್ಲವೇ?!

ದುರಂತವೆಂದರೆ, ಇಡೀ ಕರ್ನಾಟ ಜನ “ನಡೆದಾಡುವ ದೇವರು ” ಎಂದೇ ಆರಾಧಿಸುವ ಸಿದ್ದಗಂಗಾ ಮಠದ ಶಿವಗಂಗಾ ಮಹಾಸ್ವಾಮೀಜಿಗಳು ಅವತ್ತು ಪದೇ ಪದೇ ಎಚ್ಚರಿಸಿದ್ದರು!! ಯಾವತ್ತಿಗೂ ಸಹ, ಹಿಂದುತ್ವವನ್ನು ಒಡೆಯಬೇಡಿ ಎಂದು ಅಕ್ಷರಶಃ ಕೇಳಿಕೊಂಡಿದ್ದರು!! ಇದೇ ಸಿದ್ಧರಾಮಯ್ಯನಲ್ಲಿ, ಯಾವತ್ತೂ ಈ ನೀಚ ಕೆಲಸಕ್ಕಿಳಿಯಬೇಡಿ ಎಂದಿದ್ದಾಗ, ಅಯ್ಯೋ! ನಾನು ಅವರ ಅತಿದೊಡ್ಡ ಭಕ್ತ ಎಂದೆಲ್ಲ ನಾಟಕ ಆಡಿದ್ದ ಕರ್ನಾಟಕದ ಮುಖ್ಯಮಂತ್ರಿ ಇವತ್ತು ಮಾಡಿದ್ದೇನು?! ಶಿವಗಂಗಾ ಸ್ವಾಮೀಜಿಗಳಂತಹ ಮಹಾ ಚೇತನಕ್ಕೂ ದ್ರೋಹ ಬಗೆದರಲ್ಲ ಇವುಗಳು?! ಬಿಡಿ! ಧರ್ಮದ ಮೇಲೆಯೇ ಶ್ರದ್ದೆಯಿಲ್ಲ
ಎಂದರೆ, ಇನ್ನು ಸಾಧು ಸಂತ ಸಂನ್ಯಾಸಿಗಳ ಮೇಲಿರುತ್ತದೆಯೇ ಅಭಿಮಾನ?!

ನೆನಪಿಡಿ!! ಈ ರಾಹುಲ್ ಗಾಂಧಿ ನೆನ್ನೆ ಇನ್ನು ಲಿಂಗಾಯಿತರು ಹಿಂದೂಗಳಲ್ಲ ಎಂದಾಗ ನಮಗೇನೂ ಅಷ್ಟು ಅಚ್ಚರಿಯೆನಿಸಲಿಲ್ಲ! ಯಾಕೆಂದರೆ, ಆತನ ಕುಟುಂಬವೇ ಹಾಗಿದೆ!! ನೆಹರೂವಿನಿಂದ ಇವತ್ತಿನ ರಾಗಾನ ವರೆಗೂ ಇದ್ದ ಅಷ್ಟೂ ಜನರು ಮಾಡಿದ್ದು ಅದನ್ನೇ!! ಹಿಂದೂ ಧರ್ಮದ ಅವಹೇಳನ! ನಾಶ! ವಿಭಜನೆ!! ಇವರ ಸ್ಥಿತಿ ನೋಡಿ!! ಮೊದಲು ಹಿಂದೂಗಳೆಲ್ಲ ಉಗ್ರರೆಂದರು!! ಕೊನೆಗೆ, ಹಿಂದುತ್ವ ಪ್ರತೀ ಮುಸ್ಲಿಂ ರಾಷ್ಟ್ರಕ್ಕೆ ಅಪಾಯವೆಂದರು! ಅದಾದ ಮೇಲೆ, ಕೇಸರೀ ಭಯೋತ್ಪಾದನೆ ಎಂಬ ಹೆಸರು ನೀಡಿದ್ದೂ ಇದೇ ಕಾಂಗ್ರೆಸ್!! ದೇವಸ್ಥಾನದಕ್ಕೆ ಹೋಗುವವರು ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಾರೆ ಎಂದರು! ಹಿಂದೂ ಜನಸಂಖ್ಯೆ ದೇಶಕ್ಕೆ ಮಾರಕ ಎಂದರು! ಅದಾವುದೂ ಫಲಿಸಲಿಲ್ಲ! ಅದಕ್ಕೇ, ಈಗ ವಿಭಜನೆಗಿಳಿದಿದ್ದಲ್ಲವೇ?!

ಇಡೀ ದೇಶ ಇಂತಹವರನ್ನು ನೋಡುತ್ತಿದೆ!! ಗಮನಿಸುತ್ತಿದೆ!! ಹಿಂದೂಗಳನ್ನು ಈ ದೇಶದಿಂದ ಹೊರದಬ್ಬುವ ಪ್ರಯತ್ನಕ್ಕೂ ಮೊದಲೇ ಈ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡದಿದ್ದರೆ, ಇಟಲಿ ಜನಗಳ ಸಂಸ್ಕೃತಿಯನ್ನು ಬುಡಸಮೇತ ಕಿತ್ತು ಹಾಕದಿದ್ದರೆ,. ನೆನಪಿಡಿ!! ನಾವು ಹಿಂದೂಗಳೇ ಅಲ್ಲ!! ಕಾವಿ ತೊಟ್ಟು ನಮ್ಮ ಧರ್ಮಕ್ಕೆ ಅಡ್ಡಿ ಮಾಡಿದ್ದೇ ಆದರೆ, ಆಚರಣೆಗಳಿಗೆ ತಡೆ ಹಾಕಿದ್ದೇ ಆದರೆ! ನೆನಪಿಡಿ!! ಅಂತಹ ವೇಷಧಾರಿಗಳನ್ನೂ ತೊಲಗಿಸದಿದ್ದರೆ ನಾವು ಹಿಂದೂಗಳೇ ಅಲ್ಲ!! ನೆನಪಿಡಿ!! ನಮಗೆ ನಾವಿದ್ದೇವೆ ಅಷ್ಟೇ!!

ನೆನಪಿಡಿ!! ನಾನು ಲಿಂಗಾಯತ! ನಾನು ವೀರಶೈವ! ನಾನೊಬ್ಬ ಹಿಂದೂ! ನಾನೊಬ್ಬ ಭಾರತೀಯ!!

– ತಪಸ್ವಿ

Tags

Related Articles

Close