ಪ್ರಚಲಿತ

ನೈಸ್ ನಾಯಕನಿಗೆ ಶಾಕ್ ಮೇಲೆ ಶಾಕ್!! ಈ ಬಾರಿಯೂ ಗೆಲ್ಲುತ್ತಾರಾ ಕಾಂಗ್ರೆಸ್‍ನ ನೆಂಟ!!

ಇನ್ನೇನು ನಾಳೆ ಚುನಾವಣೆ ಇರುವಾಗಲೇ ಕಾಂಗ್ರೆಸ್‍ಗೆ ಮತ್ತೊಂದು ಶಾಕ್ ಅಂತಾನೇ ಹೇಳಬಹುದು!! ಕಳೆದ ಒಂದು ತಿಂಗಳಿನಿಂದ ನಿರಂತರ ದಾಳಿ ನಡೆಸುತ್ತಿರುವ ಐಟಿ ಅಧಿಕಾರಿಗಳು ರಾಜ್ಯ ಸರಕಾರದ ಎಲ್ಲಾ ಭ್ರಷ್ಟ ಸಚಿವ,ಶಾಸಕರ ಮೇಲೂ ದಾಳಿ ನಡೆಸುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆಯೇ ಐಟಿ ಅಧಿಕಾರಿಗಳು ನಡೆಸಿದ ದಾಳಿಗೆ ಇಡೀ ರಾಜ್ಯವೇ ಬೆಚ್ಚಿಬಿದ್ದಿದ್ದು ಇದೀಗ ಚುನಾವಣೆಗೆ ಇನ್ನು ಕೇವಲ ಒಂದು ದಿನ ಬಾಕಿ ಇದ್ದು, ಐಟಿ ಅಧಿಕಾರಿಗಳ ಬೇಟೆ ಮಾತ್ರ ಇನ್ನೂ ನಿಲ್ಲುತ್ತಿಲ್ಲ. ಕಳೆದ ಐದು ವರ್ಷಗಳಿಂದ ಲೂಟಿ ಮಾಡಿ ಸಂಗ್ರಹಿಸಿರುವ ರಾಜ್ಯ ಸರಕಾರದ ಲೂಟಿಕೋರರ ಮೇಲೆ ಹದ್ದಿನ ಕಣ್ಣಿಟ್ಟಿರುವ ಐಟಿ ಇಲಾಖೆ ಇದೀಗ ಕಾಂಗ್ರೆಸ್‍ನ ಅಶೋಕ್ ಖೇಣಿ ಮೇಲೆ ಕಣ್ಣು ಹಾಕಿದ್ದಾರೆ!!

Related image

ಅಶೋಕ್ ಖೇಣಿಗೆ ಐಟಿ ಶಾಕ್!!

ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ ರಾಜ್ಯಾದ್ಯಂತ ಐಟಿ ಅಧಿಕಾರಿಗಳ ದಾಳಿ ಮುಂದುವರಿದಿದ್ದು, ಶಾಸಕ ಅಶೋಕ್ ಖೇಣಿ ಅವರ ನಿವಾಸದ ಮೇಲೆ ಇಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸದ್ಯ ಕಾಂಗ್ರೆಸ್ ಅಭ್ಯರ್ಥಿ, ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಅವರು ಅಕ್ರಮ ಹಣ ಸಂಗ್ರಹ ಆರೋಪದ ಮೇರೆಗೆ ಬೀದರ್‍ನ ರಾಂಪುರ ಕಾಲನಿಯಲ್ಲಿರುವ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜಿಲ್ಲಾಡಳಿತಕ್ಕೆ 2 ದೂರು ಬಂದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾಧಿಕಾರಿ ಅನಿರುದ್ಧ್ ನೇತೃತ್ವದಲ್ಲಿ ಜಿ.ಪಂ ಮುಖ್ಯ ಕಾರ್ಯದರ್ಶಿ ಡಾ.ಸೆಲ್ವ ಮಣಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು. ಒಂದು ಗಂಟೆಗೂ ಅಧಿಕ ಕಾಲ ಪರಿಶೀಲನೆ ಮಾಡಿದ ಅಧಿಕಾರಿಗಳ ತಂಡಕ್ಕೆ 5 ಬಾಟಲ್ ವಿದೇಶಿ ಮದ್ಯ ಮತ್ತು ಕರಪತ್ರಗಳನ್ನು ಹೊರತು ಪಡಿಸಿ ಇನ್ನೂ ನಗದು ಪತ್ತೆಯಾಗಿಲ್ಲ.!! ಅಶೋಕ್ ಖೇಣಗೆ ಇದು ಮೊದಲ ಬಾರಿಗಲ್ಲದೆ ಈ ಮೊದಲು ಕೂಡಾ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು!!

ಚುನಾವಣೆಗೆ 1 ದಿನ ಬಾಕಿ ಇರುವಾಗಲೇ ಈ ರೀತಿಯಾಗಿ ಕಾಂಗ್ರೆಸ್‍ಗೆ ಮುಖಭಂಗವಾಗುತ್ತಿರುವುದು ನೋಡಿದರೆ ಕಾಂಗ್ರೆಸ್‍ಗೆ ಸೋಲು ಖಚಿತ ಎಂಬುವುದು ಸ್ಪಷ್ಟವಾಗುತ್ತದೆ!!

ಪವಿತ್ರ

Tags

Related Articles

Close