ದೇಶಪ್ರಚಲಿತ

ದೇವರ ನಾಡಿನಲ್ಲಿ ಜಿಹಾದಿಗಳ ಅಟ್ಟಹಾಸ!
ನಡು ರಸ್ತೆಯಲ್ಲೇ ನಡೆಯಿತು ಅಮಾನುಷ ಕೃತ್ಯ!

ಮೊನ್ನೆ ತಾನೆ ಪಾಪಿ ಅಫ್ತಾಬ್‌ನ ಗೆಳೆತನದ ಬಲೆಯಲ್ಲಿ ಬಿದ್ದ ಶ್ರದ್ಧಾ ವಾಕರ್ ಎಂಬ ಹೆಣ್ಣು ಮಗಳ ಹತ್ಯೆ‌ಯ ನೋವು ಇನ್ನೂ ಮಾಸಿಲ್ಲ. ಆಗಲೇ ಕೇರಳದ ಕೊಚ್ಚಿ‌ಯಲ್ಲಿ ಹಿಂದೂ ಯುವತಿಯೋರ್ವಳನ್ನು ನಡು ರಸ್ತೆಯಲ್ಲಿ‌ಯೇ ಫಾರೂಕ್ ಎಂಬ ಅಶಾಂತಿ ದೂತ ಕೊಚ್ಚಿ ಕೊಲ್ಲಲು ಯತ್ನಿಸಿದ ಘಟನೆ ಕೆಲ ದಿನಗಳ ಹಿಂದಷ್ಟೇ ನಡೆದಿದೆ.

ಅಂದ ಹಾಗೆ ಆರೋಪಿ ಉತ್ತರಾಖಂಡ್‌ನವನು. ಹುಡುಗಿ ಪಶ್ಚಿಮ ಬಂಗಾಳ ಮೂಲದವಳು. ಇವರಿಬ್ಬರೂ ಕೇರಳದ ಕೊಚ್ಚಿಯಲ್ಲಿ ಕೆಲಸ ಮಾಡುತ್ತಿದ್ದವರು. ಆರೋಪಿ ಫಾರೂಕ್ ಮತ್ತು ಹಿಂದೂ ಯುವತಿಯ ಮಧ್ಯೆ ಸ್ನೇಹ ಬೆಳೆದಿತ್ತು. ಆದರೆ ಅದ್ಯಾವುದೋ ಕಾರಣಕ್ಕೆ ಇವರಿಬ್ಬರ ಸ್ನೇಹದ ನಡುವೆ ಬಿರುಕು ಉಂಟಾಗಿತ್ತು. ಆ ನಂತರ ಆಕೆ ಪರಿಚಿತ ವ್ಯಕ್ತಿ‌ಯ ಜೊತೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪಾಪಿ ಫಾರೂಕ್ ಬೈಕ್‌ನಲ್ಲಿ ಬಂದು, ಆಕೆಯ ಮೇಲೆ ಮಾರಕಾಯುಧ ಬಳಸಿ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಗೂ ಮೊದಲು ಇವರೀರ್ವರ ನಡುವೆ ಕೆಲ ಕಾಲ ಜಗಳವಾಗಿತ್ತು. ಆ ಬಳಿಕ ‌ಯುವತಿಯ ಕತ್ತು ಕತ್ತರಿಸಲು ಈತ ಮುಂದಾಗಿದ್ದ. ಆಗ ಸ್ಥಳದಲ್ಲಿದ್ದ 3 ನೇ ವ್ಯಕ್ತಿಯ ಮಧ್ಯಪ್ರದೇಶ‌ದಿಂದ ಇದು ಸಾಧ್ಯವಾಗಿಲ್ಲ. ಆದರೆ ಹಲ್ಲೆಯಿಂದ ಗಾಯಗೊಂಡಿರುವ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯುವತಿಯರೇ ಗಮನಿಸಿ, ಅಶಾಂತಿ ದೂತರ ಸಂಪರ್ಕ, ಸಂಬಂಧ, ಸ್ನೇಹ ಬೆಳೆಸುವ ಮುನ್ನ, ಅವರಿಂದ ನಮಗೆ ಮುಂದೆ ಬಂದೊದಗಬಹುದಾದ ಅಪಾಯ ಏನು? ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಸ್ನೇಹ ಇರಲಿ‌. ಆದರೆ ನಾವು ಎಂತಹವರ ಸ್ನೇಹ ಮಾಡುತ್ತಿದ್ದೇವೆ. ಈ ಸ್ನೇಹ ನಮ್ಮ ಜೀವಕ್ಕೆ ಜೀವನಕ್ಕೆ ತಂದೊಡ್ಡಬಹುದಾದ ‌ಸಾಧಕ ಬಾಧಕ‌ಗಳ ಬಗೆಗೂ ಆಲೋಚಿಸಿ ಸ್ನೇಹ ಬೇಕೋ ಬೇಡವೋ ಎಂಬುದನ್ನು ಆಲೋಚಿಸಿದಲ್ಲಿ ಉತ್ತಮ. ಇಲ್ಲವಾದಲ್ಲಿ ಮುಂದೊಮ್ಮೆ ಅಫ್ತಾಬ್, ಫಾರೂಕ್‌ನಂತಹ ದುರುಳರಿಂದ ನಾವು ಬೀದಿ ಹೆಣವಾಗಬೇಕಾದೀತು ಎಚ್ಚರ. ನಮ್ಮ ಹೆಣ ರಣಹದ್ದುಗಳಿಗೆ ಆಹಾರವಾಗಬೇಕೋ, ಅಥವಾ ಸುಂದರ ಸಂಸಾರದಲ್ಲಿ ಸಂತೋಷದಿಂದ ಜೀವಿಸಬೇಕೋ ಎಂಬುದನ್ನು ನೀವು ಆಲೋಚನೆ ಮಾಡಿದಾಗ ‘ಹಿಂದೂ ಯುವತಿಯ ಮೇಲೆ ಅಶಾಂತಿ ದೂತನಿಂದ ಹಲ್ಲೆ’ ಎನ್ನುವ ತಲೆಬರಹದ ಜೊತೆಗೆ ನಮ್ಮ ದಾರುಣ ಕಥೆ ಮಾಧ್ಯಮ‌ಗಳಲ್ಲಿ ಪ್ರಕಟವಾಗುವುದು ತಪ್ಪುತ್ತದೆ. ಜೊತೆಗೆ ನಮ್ಮನ್ನು ಈ ವರೆಗೆ ಸಾಕಿ ಸಲಹಿದ ಹೆತ್ತವರ ಗೌರವೂ ಉಳಿಯುತ್ತದೆ.

ನಮ್ಮ ಸಮಾಜದಲ್ಲಿ ಶ್ರದ್ಧಾಳ ಹಾಗೆಯೇ ಹಿರಿಯರು ಹೇಳಿದ್ದನ್ನು ತಲೆಗೆ ತೆಗೆದುಕೊಳ್ಳದೆ, ಅನ್ಯ ಧರ್ಮೀಯ ಅಶಾಂತಿ ದೂತ ಯುವಕರ ಜೊತೆಗೆ ತೆರಳಿ, ಕೊನೆಗೆ ನರಕ ಯಾತನೆ, ಹಿಂಸೆ, ಹತ್ಯೆ‌ಗೆ ಒಳಗಾಗುವ ಹೆಣ್ಮಕ್ಕಳ ದಾರುಣ ಅಂತ್ಯ ದಿನಕ್ಕೊಂದರಂತೆ ವರದಿಯಾಗುತ್ತಲೇ ಇದೆ. ಆದರೂ ನಮ್ಮ ಹಿಂದೂ ಹೆಣ್ಮಕ್ಕಳಲ್ಲಿ ಕೆಲವರಿಗೆ ಈ ಪರಿಸ್ಥಿತಿ‌ಯ ತೀವ್ರತೆ ಅರಿವಾಗದೇ ಇರುವುದು ದುರಂತ. ಲವ್ ಜಿಹಾದ್, ಮುಸಲ್ಮಾನ ಯುವಕರ ಜೊತೆಗೆ ಸ್ನೇಹ ಮೋಡಿದ ಹಿಂದೂ ಹೆಣ್ಣುಮಕ್ಕಳು ಇಂತಹ ಘಟನೆಗಳನ್ನು ನೋಡಿದಾಗೆಲ್ಲಾ ‘ನನ್ನ ಅನ್ಯಧರ್ಮದ ಗೆಳೆಯ ಎಲ್ಲರಂತಲ್ಲ, ಶಾಂತಿದೂತ’ ಎಂದು ಉದ್ದುದ್ದ ಭಾಷಣ ಬಿಗಿಯುತ್ತಾರೆ. ಕೊನೆಗೆ ಆ ಶಾಂತಿದೂತನ ಜೊತೆಗೆ ಬದುಕಲು ಹೋಗಿ, ಅವನ ಕೈಯಿಂದಲೇ ಹತ್ಯೆಯಾಗುತ್ತಾರೆ. ಆಮೇಲೆ ನಿಜಕ್ಕೂ ಅವನು ಶಾಂತಿದೂತನೇ ಆಗುತ್ತಾನೆ. ಹೇಗೆ ಗೊತ್ತಾ.. ತಾನೇ ಹತ್ಯೆ ಮಾಡಿದ ಹಿಂದೂ ಹುಡುಗಿಯನ್ನು ಫ್ರಿಝ್‌ನೊಳಗಿಟ್ಟು ತಣ್ಣಗೆ ಮಾಡುತ್ತಾನೆ. ಆಗ ನಿಮ್ಮ ಶಾಂತಿದೂತ ಗೆಳೆಯನ ಇನ್ನೊಂದು ಮುಖ ಅನಾವರಣವಾಗುತ್ತದೆ. ಆದರೇನು ಮಾಡುವುದು?. ಅವನ ಇನ್ನೊಂದು ಮುಖವನ್ನು ಸಮಾಜಕ್ಕೆ ಪರಿಚಯಿಸುವುದಕ್ಕೂ ನೀವಿರುವುದಿಲ್ಲ.

ಈಗ ನಷ್ಟವಾದದ್ದು ನಿಮ್ಮನ್ನು ಹೆತ್ತವರಿಗೆ ಮಾತ್ರ. ನೀವು ನಂಬಿ ಹೋದ ಅ ಶಾಂತಿ ದೂತ ಮತ್ತೊಂದು ಹುಡುಗಿ‌ಯ ಜೊತೆಗೆ ಚಕ್ಕಂದ ಆಡುತ್ತಿರುತ್ತಾನೆ. ನಿಮ್ಮ ಆತ್ಮ ಅವನ ಈ ಆಟಗಳನ್ನು ನೋಡಿ ಕಣ್ಣೀರಿಡಬೇಕಷ್ಟೇ. ಅಂದ ಹಾಗೆ ಈಗ ಅವನ ಸಂಗಾತಿಯಾದವಳು ಸಹ ನಿಮ್ಮ ಹಾಗೆಯೇ ಅಂತ್ಯ ಕಾಣುತ್ತಾಳೆ ಎನ್ನುವುದು ಸತ್ಯ.

ಹಿಂದೂ ಹೆಣ್ಮಕ್ಕಳೇ, ಆಧುನಿಕತೆ ಒಳ್ಳೆಯದೇ. ಆದರೆ ಪ್ರೀತಿಸುವ ವಿಚಾರದಲ್ಲಿಯೂ ಧರ್ಮ ಮೀರುವ ಆಧುನಿಕತೆ ಬೇಡ. ಇದು ನಿಮ್ಮನ್ನು ನೀವೇ ಅಪಾಯದ ಕೂಪಕ್ಕೆ ತಳ್ಳಿದಂತೆ. ಆ ಕೂಪಕ್ಕೆ ಬೀಳುವ ಮೊದಲೇ ಆಲೋಚಿಸಿ. ಇಲ್ಲವಾದರೆ ‘ಆಗಿ ಹೋದುದಕೆ ಚಿಂತಿಸಿ ಫಲವಿಲ್ಲ’ ಎಂಬಂತಾಗಬಹುದು. ನೀವೂ ಶ್ರದ್ಧಾ ಆಗದಿರಲಿ ಎಂಬ ಕಳಕಳಿ ನಮ್ಮದು.

Tags

Related Articles

Close