ಅತ್ಯಂತ ಹೀನಾಯವಾಗಿ ಸೋತು ಹೋದ ಜನತಾ ದಳ ಈ ಬಾರಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುತ್ತಿದೆ. ಯಾವ ಯೋಗ್ಯತೆಯೂ ಇಲ್ಲದೆ ಅತ್ಯಂತ ಕಳಪೆ ಮಟ್ಟದ ಸಾಧನೆಯನ್ನು ಮಾಡುತ್ತಿರುವ ಜನತಾ ದಳ ಇಂದು ರಾಜ್ಯದ ಜನತೆಯ ಆಕ್ರೋಶವನ್ನು ಒಪ್ಪಿಕೊಂಡಿದೆ. ರಾಜ್ಯದ ಜನತೆ ತನ್ನ ಪಕ್ಷವನ್ನು ವಿರೋಧಿಸಿದ್ದಾರೆ ಎಂದು ಸ್ವತಃ ಜನತಾ ದಳ ರಾಜ್ಯಾಧ್ಯಕ್ಷ ಹಾಗೂ ನಿಯೋಜಿತ ಮುಖ್ಯಮಂತ್ರಿ ಕುಮಾರ ಸ್ವಾಮಿ ಒಪ್ಪಿಕೊಂಡಿದ್ದಾರೆ.
ಜನತೆ ನನ್ನನ್ನು ತಿರಸ್ಕರಿಸಿದ್ದಾರೆ-ಕುಮಾರ ಸ್ವಾಮಿ…
ನಿಯೋಜಿತ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶೃಂಗೇರಿಗೆ ತನ್ನ ಟೆಂಪಲ್ ರನ್ ನಡೆಸುತ್ತಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರ ಹಿನ್ನೆಲೆಯಲ್ಲಿ ಟೆಂಪಲ್ ರನ್ ಶುರುವಿಟ್ಟುಕೊಂಡಿದ್ದಾರೆ. ಈ ವೇಳೆ ಶೃಂಗೇರಿಯಲ್ಲಿ ಸಾಲಮನ್ನಾದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ನಿಯೋಜಿತ ಮುಖ್ಯಮಂತ್ರಿ ಕುಮಾರ ಸ್ವಾಮಿ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಭರವಸೆ ನೀಡಿದ್ದೀರಿ ಆದರೆ ಈಗ್ಯಾಕೆ ಹೀಗೆ ಹೇಳುತ್ತಿದ್ದೀರಿ ಎಂಬ ಪ್ರಶ್ನೆಗೆ ಕುಮಾರ ಸ್ವಾಮಿ ರಾಜ್ಯದ ಜನತೆಯ ಮೇಲಿನ ಬೇಸರವನ್ನು ಹೊರ ಹಾಕಿದ್ದಾರೆ.
“ರಾಜ್ಯದ ಜನತೆ ತನ್ನನ್ನು ಹಾಗೂ ತನ್ನ ಪಕ್ಷವನ್ನು ತಿರಸ್ಕರಿಸಿದ್ದಾರೆ. ದೇವರ ಪ್ರೇರಣೆಯಿಂದಲೇ ನನಗೆ ಮುಖ್ಯಮಂತ್ರಿ ಪಟ್ಟ ದೊರಕಿದೆ. ಹಾಗಾಗಿ ನಾನು ಸಾಲ ಮನ್ನಾ ಮಾಡುವುದು ಕಷ್ಟ. ಸಂಪೂರ್ಣ ಬಹುಮತ ಬಂದಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ನಾನು ಭರವಸೆ ನೀಡಿದ್ದೆ. ಆದರೆ ರಾಜ್ಯದ ಜನತೆಗೆ ಅದು ಇಷ್ಟವಿರಲಿಲ್ಲ ಎಂದು ಕಾಣುತ್ತದೆ. ಹಾಗಾಗಿ ನನ್ನನ್ನು ತಿರಸ್ಕರಿದ್ದಾರೆ. ಹೀಗಾಗಿ ಸಾಲ ಮನ್ನಾ ಮಾಡಲು ಯೋಚಿಸಬೇಕಾಗುತ್ತದೆ. ಚಿಕ್ಕಮಗಳೂರು ಸಹಿತ ಅನೇಕ ಕಡೆಗಳಲ್ಲಿ ನಮ್ಮನ್ನು ಹೀನಾಯವಾಗಿ ಸೋಲಿಸಿದ್ದು ನಮಗೆ ಬೇಸರವಾಗಿದೆ. ಜನ ನಮ್ಮನ್ನು ಇಷ್ಟೊಂದು ತಿರಸ್ಕಾರ ಮಾಡುತ್ತಾರೆ ಎಂದು ನಾನು ತಿಳಿದೇ ಇಲ್ಲ. ಜನತೆಯ ಆಕ್ರೋಶ ನನಗೆ ಅರ್ಥವಾಗಿದೆ” ಎಂದು ರೋಷಭರಿತವಾಗಿ ಹೇಳಿದ್ದಾರೆ.
ಯಾಕೆ ಇಷ್ಟೊಂದು ಕೋಪ..?
ಎಸ್… ನಿಯೋಜಿತ ಮುಖ್ಯಮಂತ್ರಿ ಜನತಾ ದಳದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರ ಸ್ವಾಮಿ ಜನತೆಯ ಮೇಲೆ ಕೋಪಗೊಳ್ಳಲು ಕಾರಣವೂ ಇದೆ. ರಾಜ್ಯದ ಹಲವಾರು ಕಡೆಗಳಲ್ಲಿ ಜನತಾ ದಳವನ್ನು ರಾಜ್ಯದ ಜನತೆ ಮಣ್ಣು ಮುಕ್ಕಿಸಿದ್ದರು. ಅದೆಷ್ಟೋ ಜಿಲ್ಲೆಯಲ್ಲಿ ಜನತಾ ದಳ ಶೂನ್ಯ ಸಾಧನೆಯನ್ನೇ ಮಾಡಿದೆ. ಅನೇಕ ವಿಧಾನ ಸಭಾ ಕ್ಷೇತ್ರಗಳಲ್ಲಿ ಜನತಾ ದಳದ ಅಭ್ಯರ್ಥಿಗಳು ಠೇವಣಿಯನ್ನೇ ಕಳೆದುಕೊಂಡಿದ್ದಾರೆ. ಹಳೆ ಮೈಸೂರು ಸಹಿತ ಕೆಲವೇ ಕೆಲವು ಭಾಗಗಳಲ್ಲಿ ಮಾತ್ರವೇ ಜನತಾ ದಳ ಸ್ಥಾನವನ್ನು ಪಡೆದುಕೊಂಡಿದೆ. 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಜನತಾ ದಳ ಪಡೆದುಕೊಂಡಿದ್ದು ಕೇವಲ 38 ವಿಧಾನ ಸಭಾ ಕ್ಷೇತ್ರಗಳನ್ನು ಮಾತ್ರ.
ಜನತಾ ದಳ ಯಾವ ಜಿಲ್ಲೆಯಲ್ಲಿ ಎಷ್ಟು ಸ್ಥಾನಗಳನ್ನು ಪಡೆದುಕೊಂಡಿದೆ ನೋಡಿ…
ಜಿಲ್ಲೆ. ಗಳಿಸಿದ ಸ್ಥಾನಗಳು
1. ಬಾಗಲಕೋಟೆ. 00
2. ಬೆಂಗಳೂರು ನಗರ 01
3. ಬೆಂಗಳೂರು ಗ್ರಾಮಾಂತರ 03
4. ಬಳ್ಳಾರಿ. 00
5. ಬೆಳಗಾವಿ 00
6. ಬೀದರ್ 01
7. ಚಾಮರಾಜನಗರ 01
8. ಚಿಕ್ಕಮಗಳೂರು 00
9.ಚಿಕ್ಕಬಳ್ಳಾಪುರ 01
10. ಚಿತ್ರದುರ್ಗ 00
11.ದಕ್ಷಿಣ ಕನ್ನಡ 00
12. ದಾವಣಗೆರೆ 00
13. ಧಾರವಾಡ 00
14.ಗದಗ್ 00
15.ಹಾಸನ 06
16.ಹಾವೇರಿ 00
17.ಕಲಬುರಗಿ. 00
18.ಕೊಡಗು 00
19.ಕೋಲಾರ 01
20.ಕೊಪ್ಪಳ 00
21.ಮಂಡ್ಯ 07
22. ಮೈಸೂರು 04
23.ರಾಮನಗರ 02
24.ರಾಯಚೂರು 02
25.ಶಿವಮೊಗ್ಗ 00
26.ತುಮಕೂರು 04
27.ಉತ್ತರ ಕನ್ನಡ 00
28.ಉಡುಪಿ 00
29.ವಿಜಯಪುರ 02
30.ಯಾದಗಿರಿ 01
ಒಟ್ಟು. 38
ಒಟ್ಟು 30 ಜಿಲ್ಲೆಗಳಲ್ಲಿ ಅರ್ಧಕ್ಕಿಂತ ಹೆಚ್ಚು (16) ಜಿಲ್ಲೆಗಳಲ್ಲಿ ಶೂನ್ಯ ಸಾಧನೆ.
ಹೀಗಾಗಿಯೇ ಕುಮಾರ ಸ್ವಾಮಿಗೆ ಜನತೆಯ ಮೇಲೆ ಬೇಸರವಾಗಿದೆ ಎನ್ನಲಾಗಿದೆ. ಆದರೂ ತಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ತುದಿಗಾಲಿನಲ್ಲಿ ನಿಂತಿದ್ದಾರೆ. “ಜನತೆಯ ಆಕ್ರೋಶವನ್ನು ಒಪ್ಪಿಕೊಂಡಿದ್ದೀರಿ ತಾನೇ..? ಮತ್ಯಾಕೆ ನಿಮೆಗೆ ಆ ಸ್ಥಾನ, ತಿರಸ್ಕರಿಸಿ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕುಮಾರ ಸ್ವಾಮಿಯವರನ್ನು ಜನತೆ ಟ್ರೋಲ್ ಮಾಡುತ್ತಿದ್ದಾರೆ.
ಸುನಿಲ್ ಪಣಪಿಲ