ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಬೆಂಗಳೂರಿನ ಸಂತೋಷ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮುಸ್ಲಿಂ ಮತಾಂಧನಿಗೆ ಬೆಂಬಲ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತನ ಹತ್ಯೆಯನ್ನು ಈ ರೀತಿ ವಿಡಂಬಣೆ ಮಾಡುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಕ್ರೂ ಡ್ರೈವರ್ ಹೇಳಿಕೆ ನೀಡಿದ್ದ ರಾಮಲಿಂಗಾ ರೆಡ್ಡಿ…
ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಸಂತೋಷ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಿದ ಮತಾಂಧ ಮುಸ್ಲಿಂ ಯುವಕ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಖಾದರ್ ಎಂಬಾತನ ಪುತ್ರನಾಗಿದ್ದಾನೆ. ಈ ಬಗ್ಗೆ ಮಾಧ್ಯಮಗಳು ಗೃಹ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸಿದ್ದ ರಾಮಲಿಂಗಾ ರೆಡ್ಡಿ “ಕೊಲೆ ಮಾಡಿದ್ದಾನೆ ಎನ್ನಲಾದ ಆ ಮುಸ್ಲಿಂ ಯುವಕ ಜಸ್ಟ್ ಸ್ಕ್ರೂ ಡ್ರೈವರ್ನಿಂದ ತಾಗಿಸಿದ್ದಾನೆ ಅಷ್ಟೇ. ಇಷ್ಟಕ್ಕೇ ಆತ ಮೃತ ಪಟ್ಟಿದ್ದಾನೆ. ಕೊಲೆ ಮಾಡುವ ಉದ್ಧೇಶ ಆತನಿಗೆ ಇರಲಿಲ್ಲ” ಎಂಬ ಉಡಾಫೆ ಉತ್ತರವನ್ನು ನೀಡಿದ್ದಾರೆ. ಗೃಹ ಸಚಿವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿವೆ
ಭಾರತೀಯ ಜನತಾ ಪಕ್ಷದ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ಮಾಡುತ್ತಾರೆ. ರಾಜ್ಯದಲ್ಲಿ 24ಕ್ಕೂ ಅಧಿಕ ಹತ್ಯೆಗಳು ನಡೆದಿವೆ. ಆದರೆ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿವೆ. ಈ ಕೆಟ್ಟ ಸರ್ಕಾರವನ್ನು ಕಿತ್ತು ಬಿಸಾಡಬೇಕೆಂದು ಆಕ್ರೋಷ ವ್ಯಕ್ತಪಡಿಸಿದ್ದರು. ಸಂಸದೆ ಶೋಭಾ ಕರಂದ್ಲಾಜೆ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಮಾಜಿ ಸಚಿವ ಆರ್.ಅಶೋಕ್ ಸಹಿತ ಅನೇಕ ಭಾರತೀಯ ಜನತಾ ಪಕ್ಷದ ನಾಯಕರು ಆಕ್ರೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಲತಾಣಗಳಲ್ಲಿ ಭಾರೀ ಆಕ್ರೋಶ -ನಿಮ್ಮನ್ನೇ ಚುಚ್ಚಬೇಕೆಂದ ಫೇಸ್ ಬುಕ್ ಪ್ರಿಯರು…
ಇನ್ನು ರಾಮಲಿಂಗಾ ರೆಡ್ಡಿಯ “ಜಸ್ಟ್ ಸ್ಕ್ರೂ ಡ್ರೈವರ್ ಚುಚ್ಚಿದಷ್ಟೇ” ಎಂಬ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿದೆ. ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿಯ ವಿರುದ್ಧ ಜನತೆ ಕಿಡಿ ಕಾರಿದ್ದಾರೆ.
ಫೇಸ್ಬುಕ್ನಲ್ಲಿ ವ್ಯಕ್ತವಾದ ಪ್ರಮುಖ ಪ್ರತಿಕ್ರಿಯೆ ಇಲ್ಲಿದೆ ನೋಡಿ…
Uma Javali :ಇನ್ನು ಮುಂದೆ ಆಯುಧ ಬಳಸಿದವರ ತಪ್ಪಿಲ್ಲ, ಅವರೆಲ್ಲ ಅಮಾಯಕರು, ತಪ್ಪೆಲ್ಲ ಆಯುಧಗಳದ್ದೇ ಆಗಿರುತ್ತೆ…
Manju Shastri :ಹೊಟ್ಟೆ ಒಳ್ಗೆ ಸ್ಕ್ರೂ ಇತ್ತೇನೊ…… ಅದ್ನ ತೆಗಿಯೋಕೆ ಒಳ್ಗೆ (ಸ್ಕ್ರೂ)ಡ್ರೈವರ್ ಹಾಕಿದ್ದಾರೆ ಮಾರ್ರೇ…..
Praveen S N Kumar: ಗಾಂಧಿಯನ್ನು ಕೊಂದಿದ್ದು ಗೂಡ್ಸೆಯಲ್ಲ, #ರಿವಾಲ್ವರ್.ಹಾಗಾಗಿ ಗೂಡ್ಸೆಯವರು ನಿರಪರಾಧಿ
Mahantesh Hugar: ಇದನ್ನ ತಯಾರಿಸಿದ ಕಂಪನಿ ಮೇಲೆ ಕೇಸ್ ಹಾಕಬೇಕು :-ರಾಂಲಿಂರೆ.
Ramu K Ganig :ಹೌದಾ ಹಾಗಾದರೆ ಬನ್ನಿ ನಾನೂ ಒಮ್ಮೆ ಟ್ರೈ ಮಾಡ್ತೀನಿ ಪ್ರಾಣ ಹೋಗುತ್ತೋ ಇಲ್ಲವೋ ನೋಡೋಣ ಹೇಗಿದ್ರೂ ಕೇಸಿಲ್ಲ ಅಂತ ನೀವೇ ಹೇಳಿದ್ದೀರಲ್ಲ
ಎಲ್ಲರೂ ಕೇಳಿ ಮಚ್ಚಲ್ಲಿ ರಾಡಲ್ಲಿ ಹೊಡೆದ್ರೆ ಮಾತ್ರ ಕೊಲೆ ಪ್ರಕರಣ ಸ್ಕ್ರೂ ಡ್ರೈವರ್ ನಲ್ಲಿ ಚುಚ್ಚಿದರೆ ಅದು ಕೊಲೆ ಅಲ್ಲ ಶಿಕ್ಷೆನು ಇಲ್ಲ ಕಾಂಗ್ರೇಸ್ ಸರ್ಕಾರದ ಹೊಸಸ್ಕ್ರೂ ಡ್ರೈವರ್ ಬಾಗ್ಯ ಎಲ್ಲರೂ ಟ್ರಾಯ್ ಮಾಡಿ ಇದು ಲಿಮಿಟೆಡ್ ಆಫರ್ ಕಾಂಗ್ರೇಸ್ ಸರ್ಕಾರ ಮುಗಿಯೋವರೆಗೆ ಮಾತ್ರ
ಹೊಗಿರೊದು ಬೇರೆಯವನ ಪ್ರಾಣ ಅಲ್ವ ಅದಕ್ಕೆ ಬೇಜಾವಬ್ದಾರಿ ಹೇಳಿಕೆ
ಸಿದ್ದು ಹಾಸನ್: ಹೊಗಿರೊದು ಬೇರೆಯವನ ಪ್ರಾಣ ಅಲ್ವ ಅದಕ್ಕೆ ಬೇಜಾವಬ್ದಾರಿ ಹೇಳಿಕೆ
ಇವರ ಮಕ್ಕಳಿಗೆ ಹೀಗೆ ಚುಚ್ಚಿದ್ದರೆ ಆವಾಗಲು ಹೀಗೇ ಹೇಳಿಕೆ ಕೊಡ್ತಾಯಿದ್ರ ಗ್ರಹಮಂಕ್ರಿಗಳೆ
Ravichandra Bhat: ಸ್ವಾಮಿ ರೆಡ್ಡಿಯವ್ರೆ, ಇನ್ವೆಸ್ಟ್ರಿಗೆಷನ್ ರಿಪೋರ್ಟ್ ಕೊಟ್ರಿ ಹಾಗೇ ಪೋಸ್ಟ್ಮಾರ್ಟಮ್ ರಿಪೋರ್ಟ್ ನೀವೇ ಕೊಟ್ಟುಬಿಡಿ..
ಸೂಪರ್ ಸರ್ ನೀವು…
Manjunatha Uttam Manju: ಹೌದಾ ಹಾಗಾದರೆ ಬನ್ನಿ ನಾನೂ ಒಮ್ಮೆ ಟ್ರೈ ಮಾಡ್ತೀನಿ ಪ್ರಾಣ ಹೋಗುತ್ತೋ ಇಲ್ಲವೋ ನೋಡೋಣ ಹೇಗಿದ್ರೂ ಕೇಸಿಲ್ಲ ಅಂತ ನೀವೇ ಹೇಳಿದ್ದೀರಲ್ಲ.
ಹಲವಾರು ಮಂದಿ ಅದೇ ಸ್ಕ್ರೂ ಡ್ರೈವರ್ನಿಂದ ಗೃಹ ಸಚಿವ ರಾಮಲಿಂಗಾ ರೆಡ್ಡಿಗೆ ಜಸ್ಟ್ ಚುಚ್ಚಬೇಕು. ಆವಾಗ ಏನಾಗುತ್ತೆ ಒಮ್ಮೆ ನೋಡಬೇಕು ಎಂದು ಕಿಡಿ ಕಾರಿದ್ದಾರೆ. ಓರ್ವ ರಾಜ್ಯ ಗೃಹ ಮಂತ್ರಿಯಾಗಿ ಜವಭ್ಧಾರಿಯುತ ಹೇಳಿಕೆಯನ್ನು ನೀಡಬೇಕಾದ ಈ ಮಂತ್ರಿಗಳೇ ರಾಜಕೀಯ ಹಾಗೂ ಮುಸಲ್ಮಾನರ ಓಲೈಕೆಗೋಸ್ಕರ ಇಂತಹಾ ಹೇಳಿಕೆಯನ್ನು ನೀಡಿ ರಾಜ್ಯದ ಹಾಗೂ ಕಾನೂನಿನ ಹಾದಿ ತಪ್ಪಿಸುವುದು ಎಷ್ಟು ಸರಿ? ಪೊಲೀಸ್ ತನಿಖೆಗೂ ಮುನ್ನವೇ ಆತನಿಗೆ ಕೊಲೆ ಮಾಡುವ ಉದ್ಧೇಶವಿರಲಿಲ್ಲ ಎಂದು ಗೃಹ ಸಚಿವರೇ ಆತನ ಪರವಾಗಿ ಸರ್ಟಿಫಿಕೇಟ್ ಕೊಡುತ್ತಾರೆಂದರೆ ಏನರ್ಥ ಎಂಬ ಆಕ್ರೋಷವೂ ವ್ಯಕ್ತವಾಗಿದ್ದು, ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಇದು ಭಾರೀ ಪರಿಣಾಮ ಬೀಳಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
-ಸುನಿಲ್ ಪಣಪಿಲ