ಪ್ರಚಲಿತ

ಬ್ರೇಕಿಂಗ್! ಕಾಂಗ್ರೆಸ್ ನಿಂದ ರಮ್ಯಾ ಕಿಕ್ ಔಟ್..? ವಿವಾದಾತ್ಮಕ ಹೇಳಿಕೆಗೆ ಸಿಎಂ ರಿಂದ ಕ್ಲಾಸ್..?

ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಇದ್ದು , ಎಲ್ಲಾ ರಾಜಕೀಯ ಪಕ್ಷಗಳ ತಯಾರಿಯೂ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಪ್ರಚಾರಕ್ಕಿಳಿದ ಅಭ್ಯರ್ಥಿಗಳು ಮತ್ತು ಆಯಾ ಪಕ್ಷದ ನಾಯಕರುಗಳು ರಾಜ್ಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಆದರೆ ಈವರೆಗೆ ಕಾಂಗ್ರೆಸ್ ಪರವಾಗಿ ಮಾತನಾಡುತ್ತಾ, ಪ್ರಧಾನಿ ಮೋದಿಯವರನ್ನು ಏನಾದರೊಂದು ವಿಚಾರಕ್ಕೆ ಪ್ರಶ್ನಿಸುತ್ತಾ ತನ್ನ ಹೆಸರು ಚಾಲ್ತಿಯಲ್ಲಿರುವಂತೆ ಮಾಡಿಕೊಂಡಿರುವ ಕನ್ನಡ ಚಿತ್ರರಂಗ ನಟಿ ರಮ್ಯಾ ಅವರು ಸದ್ಯ ರಾಜ್ಯ ರಾಜಕಾರಣದಿಂದ ನಾಪತ್ತೆಯಾಗಿದ್ದಾರೆ..!

ರಮ್ಯಾಳನ್ನು ದೂರ ಇಟ್ಟ ಸಿಎಂ-ಪರಂ..?

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ತನ್ನ ಮರ್ಯಾದೆ ಕಳೆದುಕೊಳ್ಳುವುದರ ಜೊತೆಗೆ ಕಾಂಗ್ರೆಸ್ ನ ಮರ್ಯಾದೆಯನ್ನೂ ಹರಾಜಿಗಿಡುತ್ತಿರುವ ರಮ್ಯಾ ಅವರನ್ನು ಸದ್ಯ ರಾಜ್ಯ ರಾಜಕಾರಣದಿಂದ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ದೂರ ಇಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಯಾಕೆಂದರೆ ರಮ್ಯಾ ಅವರ ಒಂದೊಂದು ಹೇಳಿಕೆಯಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಲೇ ಇದೆ. ರಮ್ಯಾ ಅವರ ಹೇಳಿಕೆಯನ್ನೇ ವಿರೋಧ ಪಕ್ಷಗಳು ಟೀಕಿಣುತ್ತಿದ್ದು, ಇದರಿಂದ ರಮ್ಯಾಳಿಗಿಂತ ಕಾಂಗ್ರೆಸ್ ಗೆ ಹೆಚ್ಚು ನಷ್ಟ ಎಂದು ಅರಿತಿರುವ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರು ರಮ್ಯಾಳನ್ನು ಇನ್ನೂ ಕರ್ನಾಟಕದಲ್ಲಿ ಪ್ರಚಾರಕ್ಕೆ ಬಳಸಿಕೊಂಡಿಲ್ಲ.

Image result for ramya

ರಮ್ಯಾ ಅವರು ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಆದ್ದರಿಂದ ನೇರವಾಗಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಂಪರ್ಕ ಇದೆ. ಆದ್ದರಿಂದಲೇ ಪದೇ ಪದೇ ಬಿಜೆಪಿ, ಸಂಘಪರಿವಾರದ ಅಥವಾ ಪ್ರಧಾನಿ ಮೋದಿಯವರ ಬಗ್ಗೆ ಕೀಳಾಗಿ ಮಾತನಾಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಇದರಿಂದ ಕಾಂಗ್ರೆಸ್ ಗೆ ನಷ್ಟವೇ ಹೊರತು , ಯಾವುದೇ ರೀತಿಯ ಲಾಭ ಉಂಟಾಗುವುದಿಲ್ಲ. ಇದೀಗ ಚುನಾವಣೆಯೂ ಸಮೀಪಿಸುತ್ತಿದ್ದು ಈ ಹಿಂದಿನಂತೆ ವಿವಾದಾತ್ಮಕವಾಗಿ ಹೇಳಿಕೆ ನೀಡಿದರೆ ರಾಜ್ಯದಲ್ಲಿ ಮತ್ತಷ್ಟು ಗೊಂದಲಗಳು ಉಂಟಾಗುತ್ತದೆ ಎಂದು ಅರಿತಿರುವ ಕಾಂಗ್ರೆಸಿಗರೇ ಸ್ವತಃ ರಮ್ಯಾಳನ್ನು ರಾಜ್ಯ ಚುನಾವಣಾ ಪ್ರಚಾರದಿಂದ ದೂರ ಇಟ್ಟಿದ್ದಾರೆ‌. ಅದೇ ಕಾರಣಕ್ಕಾಗಿ ಇನ್ನೂ ದೆಹಲಿಯಿಂದ ಕರ್ನಾಟಕಕ್ಕೆ ಬರದ ರಮ್ಯಾ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಕೆಲವೊಂದು ಹೇಳಿಕೆ ನೀಡುತ್ತಿದ್ದಾರೆ..!

ಸದ್ಯ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇರುವುದರಿಂದ ಕಾಂಗ್ರೆಸ್ ಗೆ ಮೊದಲೇ ಸೋಲಿನ ಭಯ ಕಾಡುತ್ತಿದೆ. ಇಂತಹ ಸಂದರ್ಭಗಳಲ್ಲಿ ಮತ್ತಷ್ಟು ವಿವಾದ ಸೃಷ್ಟಿಸಿದರೆ ಪಕ್ಷಕ್ಕೆ ಮತ್ತಷ್ಟು ಹೊಡೆತ ಬೀಳುತ್ತದೆ ಎಂಬ ಕಾರಣಕ್ಕಾಗಿ ಸ್ವತಃ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ..!

–ಅರ್ಜುನ್

Tags

Related Articles

Close