ಪ್ರಚಲಿತ

ಸ್ಫೋಟಕ ಸುದ್ಧಿ: ಕೆ.ಜೆ ಜಾರ್ಜ್‍ಗೆ ರಾಜೀನಾಮೆ ಅನಿವಾರ್ಯ!! ಕೆ.ಜೆ ಜಾರ್ಜ್ ಯಾರ ಜೊತೆ ಸಂಬಂಧವಿಟ್ಟುಕೊಂಡಿದ್ದಾರೆ ಗೊತ್ತಾ?

ಈ ಬಾರಿ ಗ್ರಣಹ ಕಳೆದ ನಂತರ ಕೆ.ಜೆ ಜಾರ್ಜ್‍ಗೆ ಗ್ರಹಣ ಹಿಡಿದಂತೆ ಕಾಣುತ್ತಿದೆ.. ಯಾಕೆಂದರೆ ಈ ಬಾರಿ ಜಾರ್ಜ್‍ಗೆ ಡಬಲ್ ಧಮಾಕಾ ಅಂತಾನೇ ಹೇಳ ಬಹುದು.. ಒಂದು ಕಡೆಯಲ್ಲಿ ಡಿವೈಎಸ್‍ಪಿ ಗಣಪತಿ ಹತ್ಯೆ ಪ್ರಕರಣ ಇನ್ನೊಂದು ಕಡೆಯಲ್ಲಿ ತನ್ನ ಆಪ್ತರ ಮನೆಗೆ ಐಟಿ ದಾಳಿ ನಡೆಸಿರುವುದು..ಹೀಗಾಗಿ ಕೆ.ಜೆ ಜಾರ್ಜ್‍ಗೆ ಸಂಕಷ್ಟದ ಮೇಲೆ ಸಂಕಷ್ಟ ಕಾದಿದೆ ಅಂತಾನೇ ಹೇಳಹಬುದು!!

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್ ಸರಕಾರದ ಕರಾಳ ಮುಖ ಅನಾವರಣಗೊಳ್ಳುವಂತೆ ಕಾಣುತ್ತಿದೆ!! ಅಂತೂ ಇಂತೂ ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬ ಮಾತಿನಂತೆ ಈ ಬಾರಿ ಕೆ.ಜೆ ಜಾರ್ಜ್ ತಪ್ಪು ಮಾಡಿದ್ದೇ ಆದರೆ ಶಿಕ್ಷೆ ಅನುಭವಿಸುವ ಕಾಲ ಸನಿಹದಲ್ಲಿದೆ ಎಂಬುವುದು ತಿಳಿಯುತ್ತದೆ..

ಮೊನ್ನೆ ತಾನೇ ರಾಜ್ಯ ಕಾಂಗ್ರೆಸ್ ಸಚಿವ ಕೆ.ಜೆ.ಜಾರ್ಜ್‍ಗೆ ಐಟಿ ಇಲಾಖೆ ಬಿಗ್ ಶಾಕ್ ನೀಡಿದೆ.!! ಗಣಪತಿ ಹತ್ಯೆ ಪ್ರಕರಣ ಬೆನ್ನಲ್ಲೇ ಕೆ.ಜೆ ಜಾರ್ಜ್ ಆಪ್ತರ ಮನೆಗೆ ಐಟಿ ದಾಳಿ ನಡೆಸಿದ್ದಾರೆ.. ವಂದಿತ್ ರೆಡ್ಡಿ .. ಈತ ಆಂದ್ರ ಮೂಲದ ಚಿತ್ತೂರಿನವನು.. ಈತ ಜಾರ್ಜ್ ಮಗ ರಾಣಾನ ಆಪ್ತ ಮಿತ್ರ ನಾಗಿದ್ದಾನೆ.. ಮತ್ತೊಬ್ಬ ಯುಗೇಂಧರ್ ಜಾರ್ಜ್.. ಜಾರ್ಜ್‍ನ ಅತ್ಯಾಪ್ತ ಅಂತಾನೇ ಹೇಳಬಹುದು.. ಈತ ಸಚಿವ ಕೆ.ಜೆ ಜಾರ್ಜ್‍ನ ವ್ಯವಹಾರದ ಲೆಕ್ಕಾಚಾರವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುವವನು… ಇನ್ನೊಬ್ಬ ಸಚಿವ ಜಾರ್ಜ್‍ನ ಮಗ ರಾಣಾನ ಆಪ್ತ ಇಸ್ಮಾಯಿಲ್ ಎನ್ನುವಾತ.. ಈತ ಗನ್ ಅಂಗಡಿಗಳನ್ನು ಹೊಂದಿರುತ್ತಾನೆ.. ಈತ ಜಾರ್ಜ್‍ನ ಬಲಗೈ ಬಂಟ ಅಂತಾನೇ ಹೇಳಬಹುದು.. ಈ ಮೂವರು ಸಚಿವ ಕೆ.ಜೆ ಜಾರ್ಜ್ ಆಪ್ತರ ಮನೆಗೆ ಐಟಿ ದಾಳಿಯಾಗಿರುವುದು ನಿಜವಾಗಿಯೂ ಜಾರ್ಜ್‍ಗೆ ದೊಡ್ಡ ಶಾಕ್ ಆಗಿತ್ತು… ಆದರೆ ಇಷ್ಟು ಆಪ್ತರಾಗಿದ್ದ ಈ 3 ಜನರನ್ನೂ ಇವರು ಯಾರೆಂದು ಕೇಳುವ ಮಟ್ಟಕ್ಕೆ ಇಳಿದಿದ್ದರು ಈ ಶ್ರೀಮಂತ ಸಚಿವ!!

ಆದರೆ ಈ ಮೂರೂ ಜನ ತನ್ನ ಆಪ್ತರಾಗಿದ್ದರು ಸಹ ಕೆ.ಜೆ ಜಾಜ್ ಮಾತ್ರ ಇವರು ಯಾರೂ ಅಂತಾನೇ ಗೊತ್ತಿಲ್ಲ ಅಂತಾ ಬೊಗಳೆ ಬಿಟ್ಟಿದ್ದರು.. ಅದಾಲೇ ಮಾಧ್ಯಮಗಳು ಈ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಕೆ.ಜೆ ಜಾರ್ಜ್‍ನ ಆಪ್ತರ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಿತು.. ಈ ಮೂರೂ ಜನರೊಂದಿಗಿನ ಆಪ್ತತೆಯ ಬಗ್ಗೆ ಪ್ರಸಾರ ಮಾಡಿತು.. ಅದಾಗಲೇ ಎಚ್ಚೆತ್ತ ಸಚಿವ ಕೆ.ಜೆ ಜಾರ್ಜ್ ಈ ಮೂವರೂ ನನ್ನ ಆಪ್ತರ ಎನ್ನುವ ಮಾಹಿತಿಯನ್ನು ಹೊರಹಾಕಿದ್ದಾರೆ… ಅದಲ್ಲದೆ ನಾನು ಯಾವೂದಕ್ಕೂ ಕೇರ್ ಮಾಡಲ್ಲ ಅಂತಾನು ಹೇಳಿದ್ದಾರೆ..

ಏನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ ಎಂಬಂತೆ ಈ ಮಾತನ್ನು ಹೇಳಿದ್ದಾರೆ.. ಅದರಲ್ಲೂ ಒಬ್ಬ ಸಚಿವನಿಗೆ ಇಸ್ಮಾಯಿಲ್‍ನಂತವನೊಂದಿಗೆ ಸಂಬಂಧ ಹೊಂದಿರುವುದು ನಿಜವಾಗಿಯೂ ಬೆಚ್ಚಿ ಬೀಳಿಸುವಂತಹ ಸಂಗತಿ ಅಂತಾನೇ ಹೇಳಬಹುದು.. ಬಂದೂಕು ವ್ಯಾಪಾರಸ್ಥನ ಜೊತೆ ಈತನಿಗಿರುವ ಸಮಬಂಧವಾದರೂ ಎಂಬುವುದು ಎಲ್ಲರ ಪ್ರಶ್ನೆಯಾಗಿದೆ…ಒಂದು ಕಡೆಯಲ್ಲಿ ಐಟಿ ದಾಳಿ ಇನ್ನೊಂದೆಡೆ ಡಿವೈಎಸ್‍ಪಿ ಗಣಪತಿ ಹತ್ಯೆ ಪ್ರಕರಣ ಹೀಗೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಂಟಕ ಬಂದಿರುವ ಹಾಗೆ ಕಾಣುತ್ತಿದೆ..

ಡಿವೈಎಸ್‍ಪಿ ರಾಜ್ಯ ಪ್ರಭಾವಿ ಸಚಿವ ಕೆ.ಜೆ ಜಾರ್ಜ್ ಕೈವಾಡ ಬಲವಾಗಿ ಕಾಣುತ್ತಿದ್ದ, ಯಾವುದೇ ಕ್ಷಣದಲ್ಲೂ ಬಂಧನವಾಗುವ ಸಾಧ್ಯತೆ ಕೂಡಾ ಇದೆ… ಜಾರ್ಜ್ ಸಾಹೇಬರನ್ನ ಕೇಳಿದರೆ, `ಸಿಎಂ ಹೇಳಿದರೆ ಈಗಲೇ ರಾಜೀನಾಮೆ ಕೊಡುತ್ತೇನೆ’ ಎಂದು ತುಂಬ ಸಾತ್ವಕರಂತೆ ನುಡಿದಿದ್ದರು.. ಮುಖ್ಯಮಂತ್ರಿ ಇವರ ರಾಜೀನಾಮೆ ಕೇಳುವುದಿಲ್ಲ. ಅವರು ರಾಜೀನಾಮೆ ಕೊಡುವುದಿಲ್ಲ. ಬಹಳ ದೀರ್ಘವಾಗಿ ಈ ಪ್ರಕರಣದ ಬಗ್ಗೆ ಹೇಳಬೇಕಿಲ್ಲ.

ಕಳೆದ ವರ್ಷದ ಜುಲೈ 7ರಂದು ಡಿವೈಎಸ್ಪಿ ಗಣಪತಿಯವರು ಮಾಧ್ಯಮವೊಂದರ ಮುಂದೆ ತಮಗೆ ಕೆ.ಜೆ.ಜಾರ್ಜ್ ಮತ್ತು ಇಬ್ಬರು ಉನ್ನತ ಪೆÇಲೀಸ್ ಅಧಿಕಾರಿಗಳಿಂದ ಕಿರುಕುಳವಾಗುತ್ತಿದೆ ಎಂದು ಆಲವತ್ತುಕೊಂಡು ಅನುಮಾನಾಸ್ಪದವಾಗಿ ಮಡಿಕೇರಿಯ ಲಾಡ್ಜೊಂದರಲ್ಲಿ ಹೆಣವಾಗಿ ಕಂಡಿದ್ದು ನಿಮಗೆಲ್ಲ ಗೊತ್ತೇ ಇದೆ. ಇಷ್ಟಾಗಿಯೂ ಜಾರ್ಜ್ ಕ್ಯಾರೆ ಅನ್ನಲಿಲ್ಲ! ಗಣಪತಿಯವರ ಕುಟುಂಬದ ಮೇಲೆ ಒತ್ತಡ ಹೇರಿ ಅವರ ಪತ್ನಿಯಿಂದಲೇ, ಗಣಪತಿ ಮಾನಸಿಕ ಕಾರಣಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಬರೆಸಿಕೊಂಡು ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸಿದ್ದನ್ನೂ ನಮಗೆ ತಿಳಿದ ವಿಷಯ.. ಆದರೆ ಗಣಪತಿ ವೈದ್ಯರನ್ನು ಭೇಟಿ ಮಾಡಿದ್ದು ತುಂಬ ಹಿಂದೆ ಎಂಬುದು ಆಮೇಲೆ ಸ್ಪಷ್ಟವಾಗಿತ್ತು.. ಒಬ್ಬರು ಮಾನಸಿಕ ಖಿನ್ನತೆ ಅಂದರು. ಇನ್ನೊಬ್ಬರು ಕುಟುಂಬದೊಳಗೆ ಸರಿ ಇರಲಿಲ್ಲ ಎಂದರು.

ಆದರೆ ಪೆÇಲೀಸ್ ಅಧಿಕಾರಿಯೊಬ್ಬ ಮಾನಸಿಕ ಖಿನ್ನತೆಗೆ ಒಳಗಾಗುವ ಸ್ಥಿತಿ ಯಾಕೆ ಬಂತು? ಅದಕ್ಕೆ ಹೊಣೆ ಯಾರು? ಕಿರುಕುಳದ ಕಾರಣಕ್ಕೇ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರಾ? ಎಂಬುದನ್ನೆಲ್ಲ ಯಾರೂ ತನಿಖೆ ಮಾಡಲಿಲ್ಲ. ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಂಡವರು ಪತ್ರ ಬರೆದು, ದಲ್ಲಿ ಯಾರದ್ದಾದರೂ ಮೇಲೆ ಆರೋಪ ಮಾಡಿದ್ದರೆ, ವೀಡಿಯೊ ದಾಖಲಿಸಿದ್ದರೆ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿಸಲಾಗುತ್ತದೆ.

ಜಿಲ್ಲಾ ನ್ಯಾಯಾಲಯದಲ್ಲಿ ಕುಟುಂಬದವರು ಪ್ರಕರಣ ದಾಖಲಿಸಿದ ನಂತರ, ನ್ಯಾಯಾಲಯದ ನಿರ್ದೇಶನದಂತೆ ಜಾರ್ಜ್ ವಿರುದ್ಧ ಎಫ್‍ಐಆರ್ ದಾಖಲಾಯಿತು. ಆಗ ಅನಿವಾರ್ಯವಾಗಿ ಜುಲೈ 16ರಂದು ಜಾರ್ಜ್ ರಾಜೀನಾಮೆ ನೀಡಿದರು. ಆದರೆ ಜಾರ್ಜ್ ಬೇಗ ನಿರಪರಾಧಿಯಾಗಿ ಸಂಪುಟಕ್ಕೆ ಮರಳುತ್ತಾರೆಂದು ಎಲ್ಲರಿಗೂ ಗೊತ್ತಿತ್ತು. ಅದಕ್ಕಾಗಿ ಸಿದ್ದರಾಮಯ್ಯ ಸಚಿವ ಸ್ಥಾನವನ್ನು ಖಾಲಿ ಇಟ್ಟುಕೊಂಡು ಕಾಯುತ್ತಿದ್ದರು. …

ಗಣಪತಿಯವರ ತಂದೆ ಕುಶಾಲಪ್ಪನವರು ಸಿಬಿಐ ತನಿಖೆಗೆ ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರಿದರು. ಅಲ್ಲಿಯೂ ನಿರಾಸೆಯೇ ಕಾದಿತ್ತು. ಆದರೂ ಛಲಬಿಡದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಆಗಸ್ಟ್ ಮೂರನೇ ವಾರ ಕುಶಾಲಪ್ಪನವರ ಮನವಿಯನ್ನು ಪುರಸ್ಕರಿಸಿ ಕೇಸನ್ನು ಸ್ವೀಕರಿಸಿ ಕೆ.ಜೆ. ಜಾರ್ಜ್‍ಗೆ ನೋಟೀಸು ಜಾರಿ ಮಾಡಿದಾಗ ಪ್ರಕರಣದಲ್ಲಿ ಏನೋ ಹುರುಳಿದೆ ಎಂಬುದರ ಪ್ರಾರಂಭಿಕ ಸೂಚನೆ ದೊರೆತಿತ್ತು.

 

ಅದರ ಬೆನ್ನಲ್ಲೇ, ಅಂದರೆ ಆಗಸ್ಟ್ 23ರಂದು ರಾತ್ರಿ 7 ಗಂಟೆಯಿಂದ 9 ಗಂಟೆವರೆಗೂ ಟೈಮ್ಸನೌ ಚಾನೆಲ್, ಸತತವಾಗಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ನಡೆದ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳು, ಪಂಚನಾಮೆಯ ಬಗ್ಗೆ ಸಿದ್ಧವಾಗಿದ್ದ ಫಾರನ್ಸಿಕ್ ವರದಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಾಗ ಎಂಥವರಿಗೂ ದಿಗ್ಭ್ರಮೆಯಾಗುವಂತಿದ್ದವು. ಇನ್ನು ಸರಕಾರವಾಗಲಿ, ಸಿಐಡಿಯಾಗಲಿ, ಗೃಹ ಇಲಾಖೆಯಾಗಲಿ ಟೈಮ್ಸ್‍ನೌನಲ್ಲಿ ಪ್ರಕಟವಾದ ಎಫ್‍ಎಸ್‍ಎಲ್ ವರದಿಯನ್ನು ನಿರಾಕರಿಸದೇ ಹೋದಾಗ ಸಿದ್ದರಾಮಯ್ಯನವರ ಸರಕಾರದ ಮೋಸಗಾರಿಕೆ ಖಚಿತವಾಯಿತು. ಸುಪ್ರೀಂ ಕೋರ್ಟ್ ಗಣಪತಿ ಪ್ರಕರಣವನ್ನು ಸಿಬಿಐಗೆ ಸಲ್ಲಿಸಬಹುದು ಎಂಬ ಭರವಸೆಯೂ ಹೆಚ್ಚಾಯಿತು!! ಇದೀಗ ಸುಪ್ರಿಂ ಕೋರ್ಟ್ ಈ ಕೇಸ್ ಬಗ್ಗೆ ಆಸಕ್ತಿಯನ್ನು ಹೊಂದಿದ್ದು ಈ ಬಗ್ಗೆ ಯಾವಾಗ ಬೇಕಾದರೂ ಕೆ.ಜೆ ಜಾರ್ಜ್‍ರನ್ನು ಬಂಧಿಸುವ ಸಾಧ್ಯತೆ ಹೆಚ್ಚಿದೆ… ಈ ಬಾರಿ ಸಚಿವ ಕೆ.ಜೆ ಜಾರ್ಜ್‍ಗೆ ರಾಜೀನಾಮೆ ಅನಿವಾರ್ಯವಾಗುತ್ತೋ ಅಂತ ಅನಿಸುವ ಕಾಲ ಸನಿಹದಲ್ಲಿದೆ.

ಪವಿತ್ರ

Tags

Related Articles

Close