ಪ್ರಚಲಿತ

ಪ್ರಧಾನ ಮಂತ್ರಿಯನ್ನೇ ಅವಮಾನಿಸಿದ ಸಿದ್ದರಾಮಯ್ಯ..! ನಾಯಿಗಿಂತ ಕಡೆ ಎಂಬ ಮಾತನ್ನು ಒಪ್ಪಿಕೊಂಡ ಸಿದ್ದರಾಮಯ್ಯ..?

ಈ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಚುನಾವಣೆ ಹತ್ತಿರ ಬರುತ್ತಿರುವಾಗ ಮೈಕೈ ನಡುಗುತ್ತೆ ಅನ್ನೋದು ಇದೀಗ 100% ಖಾತ್ರಿಯಾಗಿದೆ. ಕಳೆದ 5 ವರ್ಷಗಳಿಂದ ನನ್ನದೇ ರಾಜ್ಯ, ನಾನೇ ಅರಸ ಎಂದು ಬೊಬ್ಬಿರಿದು ಅಹಂಕಾರದಿಂದ ವರ್ತಿಸುತ್ತಿದ್ದ ಸಿದ್ದರಾಮಯ್ಯರಿಗೆ ಇದೀಗ ಭಯ ಕಾಡಲಾರಂಭಿಸಿದೆ. ಮೊದ ಮೊದಲು ಸ್ಪರ್ಧೆಗಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಅಲ್ಲಿ ಗೆಲ್ಲೋದು ಕಷ್ಟ ಎಂಬ ಮಾಹಿತಿಯನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾದಾಮಿ ವಿಧಾನ ಸಭಾ ಕ್ಷೇತ್ರಕ್ಕೆ ಕಣ್ಣಾಯಿಸಿ ಕಾಡಿ ಬೇಡಿ ಕೈಕಮಾಂಡ್‍ನಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಆದರೆ ಯಾವಾಗ ಬಳ್ಳಾರಿ ಸಂಸದ ಶ್ರೀರಾಮುಲು ಅವರನ್ನು ಬಾದಾಮಿಯಿಂದ ಕಣಕ್ಕಿಳಿಸಿದರೋ ಅಂದಿನಿಂದ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಭಯ ಕಾಡಲಾರಂಭಿಸಿದೆ.

ಪ್ರಧಾನಿಯನ್ನೇ ಏಕವಚನದಲ್ಲಿ ನಿಂದಿಸಿದ ಸಿದ್ದರಾಮಯ್ಯ..!

ಎರಡೂ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಭಾರತೀಯ ಜನತಾ ಪಕ್ಷದ ಚುನಾವಣಾ ರಣತಂತ್ರದಿಂದ ಈ ಬಾರಿ ಸೋಲೋದು ಖಚಿತ ಎಂಬ ಭಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸುಂಟರಗಾಳಿಯ ರೀತಿಯ ಅಬ್ಬರವನ್ನು ಕಂಡು ಬೆಚ್ಚಿ ಬಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿಯನ್ನು ಏಕವಚನದಲ್ಲೇ ನಿಂದಿಸಿದ್ದಾರೆ.

ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತನ್ನ ನಾಲಿಗೆಯನ್ನು ಹರಿಯ ಬಿಟ್ಟಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಗೆ 56 ಇಂಚಿನ ಎದೆ ಇದೆಯಂತೆ. ಆ 56 ಇಂಚಿನ ಎದೆಯಲ್ಲಿ ಬಡವರಿಗೆ ಜಾಗ ಇದಿಯಾ..? 56 ಇಂಚಿನ ಎದೆ ಮೋದಿಗೆ ಮಾತ್ರ ಇರೋದಾ..? ಬಾಡಿ ಬಿಲ್ಡರ್‍ಗಳಿಗೂ 56 ಇಂಚಿನ ಎದೆ ಇರುತ್ತೆ.! ಮನ್ ಕೀ ಬಾತ್ ನಲ್ಲಿ ಹೊಟ್ಟೆ ತುಂಬುತ್ತಾ?” ಎಂದು ಹೇಳಿದರು.

ತನ್ನ ಮಾತನ್ನು ಮುಂದುವರೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಮೋದಿ ಕಾಂಗ್ರೆಸ್‍ನವರು ಮುಧೋಳ ನಾಯಿಯಿಂದ ಬುದ್ಧಿ ಕಲಿಯಬೇಕು ಎಂದು ಹೇಳುತ್ತಾನೆ. ಬೆಳೆಸಿದ ಅಡ್ವಾಣಿಯನ್ನೇ ಮೂಲೆ ಗುಂಪು ಮಾಡಿದ್ದಾನೆ.! ಇವನಿಗೇ ನಿಯತ್ತಿಲ್ಲ, ಇವನ್ಯಾರೀ ಕಾಂಗ್ರೆಸ್‍ನ್ನು ಪ್ರಶ್ನಿಸೋನು” ಎಂದು ಏಕವಚನದಲ್ಲೇ ನಿಂದಿಸಿದ್ದಾರೆ.

ಮೊನ್ನೆ ತಾನೇ ಕಾಂಗ್ರೆಸ್ಸಿಗರು ಮುಧೋಳ ನಾಯಿಗಿಂತ ಕಡೆ ಎಂದಿದ್ದರು. “ದೇಶಪ್ರೇಮ ಎಂಬುವುದನ್ನು ಮುಧೋಳ ನಾಯಿಯಿಂದ ನೋಡಿ ಕಲಿಯಬೇಕು. ಮುಧೋಳ ನಾಯಿಗಿರುವ ದೇಶ ಪ್ರೇಮ ಈ ಕಾಂಗ್ರೆಸ್ಸಿಗರಿಗೆ ಇಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನಾಯಕರನ್ನು ಝಾಡಿಸಿದ್ದರು. ಇದೀಗ ತಾವು ನಾಯಿಗಿಂತಲೂ ಕಡೆ ಎಂಬುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಭೀತುಪಡಿಸಿದ್ದಾರೆ.

ಇದೇ ಮೊದಲಲ್ಲ…!

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ನೀಚ ನಾಲಿಗೆಯ ಮರ್ಮ ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ಈ ಸಿಎಂಗೆ ಏಕವಚನದಲ್ಲಿ ನಿಂದಿಸಿಯೇ ಅಭ್ಯಾಸ. ನಿನ್ನೆ ಕೂಡಾ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಏಕವಚನದಲ್ಲಿ ನಿಂದಿಸಿ ಟೀಕೆಗೆ ಗುರಿಯಾಗಿದ್ದರು.

ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ದುರಾವರ್ತನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. “ಇಂತಹಾ ನೀಚ ಮುಖ್ಯಮಂತ್ರಿ ಇರೋದ್ರಿಂದಾನೆ ಕರ್ನಾಟಕವೇ ತಲೆ ತಗ್ಗಿಸುವಂತಾಗಿದೆ. ಇವನು ಮೊದಲು ಇಲ್ಲಿಂದ ತೊಲಗಬೇಕು. ಇವನೊಬ್ಬ ಸೋಗಲಾಡಿ ಸಿದ್ದ” ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಒಟ್ಟಾರೆ ಸೋಲಿನ ಭಯದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಂಟರಗಾಳಿಯಂತಿರುವ ಪ್ರಧಾನಿ ನರೇಂದ್ರ ಮೋದಿಯನ್ನು ತಡೆಯಲು ವಿಫಲರಾಗಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಅನ್ನೋದು ಸ್ಪಷ್ಟವಾಗುತ್ತಿದ್ದು, ಇದು ಮುಂದಿನ ಚುನಾವಣೆಯಲ್ಲಿ ಮತ್ತಷ್ಟು ಪರಿಣಾಮ ಬೀರೋದ್ರಲ್ಲಿ ಯಾವುದೇ ಸಂಶಯವಿಲ್ಲ.

-ಸುನಿಲ್ ಪಣಪಿಲ

Tags

Related Articles

Close