ಪ್ರಚಲಿತ

ಕಾಂಗ್ರೆಸ್ ಪ್ರಚಾರಕ್ಕೆ ತೆರಳಿದ ದರ್ಶನ್‍ಗೆ ಚಾಲೆಂಜ್ ಹಾಕಿದ ಗ್ರಾಮಸ್ಥರು!! ದರ್ಶನ್ ವಿರುದ್ಧ ಸಿಡಿದೆದ್ದ ಕಾರ್ಯಕರ್ತರು!!

ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಈಗಾಗಲೇ ಹಲವು ವಿಚಾರಗಳಿಂದ ಗಮನ ಸೆಳೆದಿದ್ದು, ಬಾದಾಮಿ ಕ್ಷೇತ್ರವು ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಸ್ಟಾರ್ಗಳು ಅಖಾಡಕ್ಕಿಳಿದು ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ!! ಇದಾಗಲೇ ಸಿಎಂ ಪರ ಪ್ರಚಾರಕ್ಕೆಂದು ಯಾರು ತೆರಳುತ್ತಾರೋ ಅವರಿಗೆ ಒಂದಲ್ಲ ಒಂದು ರೀತಿಯ ವಿಘ್ನಗಳು ನಡೆಯುತ್ತನೇ ಇದೆ!! ಇದು ಸಿಎಂ ಸಿದ್ದರಾಮಯ್ಯನವರಿಗೆ ಭಾರೀ ಮುಖಭಂಗವಾಗಿದೆ!!

ದರ್ಶನ್‍ಗೆ ಜೆಡಿಎಸ್ ಕಾರ್ಯಕರ್ತರಿಂದ ಕ್ಲಾಸ್!!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿರುವ ಚಾಮುಂಡೇಶ್ವರಿ ಕ್ಷೇತ್ರ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರತೊಡಗಿದ್ದು ,ತಾರಾ ಪ್ರಚಾರಕರು ಒಬ್ಬರಾದಂತೆ ಒಬ್ಬರು ಬಂದು ಸಿಎಂ ಪರ ಪ್ರಚಾರ ನಡೆಸಲು ಹೊರಟಾಗ ಒಂದಲ್ಲ ಒಂದು ವಿಷಯದಲ್ಲಿ ಎಲ್ಲಾ ಸ್ಟಾರ್ ನಾಯಕರೂ ಹಿಂದೆ ಸರಿಯುವಂತಾಗಿದೆ!! ಇಂದು ನಟ ದರ್ಶನ್ ಅವರು ಸಿಎಂ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಆಗಮಿಸಿದ್ದು ಚಾಲೆಂಜಿಗ್ ಸ್ಟಾರ್ ದರ್ಶನ್‍ಗೆ ಬಾರೀ ಮುಖಭಂಗವಾಗಿದೆ!! ನಾಗನಹಳ್ಳಿಯಲ್ಲಿ ಜೆಡಿಎಸ್ ಕಾಯಕರ್ತರು ಪ್ರತಿಭಟನೆ ನಡೆಸಿ ವಿರೋಧ ತೋರಿದ್ದಾರೆ. ಅಂಬರೀಷ್ ಅವರ ಸಚಿವ ಸ್ಥಾನ ಕಿತ್ತುಕೊಂಡಾಗ ಯಾಕೆ ಮಾತನಾಡಲಿಲ್ಲ, ಕಾವೇರಿ ಪರ ಹೋರಾಟ ಯಾಕೆ ಮಾಡಲಿಲ್ಲ ಎಂದು ಪ್ರತಿಭಟನಾ ನಿರತರು ದರ್ಶನ್ ಅವರನ್ನು ಪ್ರಶ್ನಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈ ಬಾರಿ ಸಿಎಂ ಸಿದ್ದರಾಮಯ್ಯರ ಅಬ್ಬರದ ಪ್ರಚಾರಕ್ಕೆ ಬ್ರೇಕ್ ಬೀಳೋದಂತು ಖಂಡಿತ!! ಹೀಗಾಗಿ ಸಿಎಂ ಪ್ಲಾನ್ ಉಲ್ಟಾ ಆಗುವ ಸಾಧ್ಯತೆ ಇದೆ!

Image result for dharshan

ಸಿಎಂ ಪರ ಸ್ಫರ್ದಿಸಲ್ಲ ಎಂದ ಸುದೀಪ್

ನಟ ಸುದೀಪ್ ಇಂದು ಬಾದಾಮಿಯಲ್ಲಿ ಸಿಎಂ ಪರ ಪ್ರಚಾರಕ್ಕೆ ಹೋಗುವುದಿಲ್ಲ. ಒಂದು ವೇಳೆ ಶ್ರೀರಾಮುಲು ಪ್ರಚಾರಕ್ಕೆ ಕರೆದರೆ ಮಾತ್ರ ಹೋಗುತ್ತೆನೆ ಎಂದು ನಟ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಸುರಪುರದ ಹೆಲಿಪ್ಯಾಡ್‍ನಲ್ಲಿ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರಕ್ಕೆ ಕರೆದಿದ್ದಾರೆ. ಆ ಕುರಿತು ನಾನು ಇನ್ನು ಯಾವುದೇ ನಿರ್ಧಾರ ಮಾಡಿಲ್ಲ ಎಂದರು. ಇಂದಿನ ಚುನಾವಣೆ ಪ್ರಚಾರದಲ್ಲಿ ನನ್ನ ಸಹೋದರ ರಾಜುಗೌಡ ಪರ ಪ್ರಚಾರ ಮಾಡಲು ಬಂದಿದ್ದೇನೆ. ನಾನು ಇಲ್ಲಿಗೆ ಬಂದಿರುವುದು ವೈಯಕ್ತಿಕವಾಗಿ. ರಾಜುಗೌಡ ಗೆಲ್ಲುತ್ತಾರೆ ಎಂದರು!!

Related image

ಅದಲ್ಲದೆ ನಿನ್ನೆ ತಾನೇ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ದಿಸಲಿರುವ ಶ್ರೀರಾಮುಲು ವಿರುದ್ಧ ಸ್ಪರ್ಧಿಸಲಿರುವ ಸಿದ್ದರಾಮಯ್ಯ ಪ್ರಚಾರಕ್ಕೆ ಸುದೀಪ್ ಹೆಸರು ಕೇಳುತ್ತಲೇ ಬಾದಾಮಿ ಕ್ಷೇತ್ರದ ಜನತೆ ಗುಡುಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸುದೀಪ್‍ಗೆ ಭಾರೀ ಮುಖಭಂಗವಾಗಿದೆ ಎನ್ನಲಾಗಿದೆ!! ಮೇ 7ರಂದು ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ನಟ ಸುದೀಪ್ ಪ್ರಚಾರ ನಡೆಸುವ ಹಿನ್ನೆಲೆಯಲ್ಲಿ `ಗೋ ಬ್ಯಾಕ್ ಸುದೀಪ್’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹ ಕೇಳಿಬಂದಿದೆ. ಅದಲ್ಲದೆ ನಿನ್ನೆ ಸುದೀಪ್ ಬಾದಾಮಿ ಜನರು ಸಿಎಂ ಪರ ಪ್ರಚಾರಕ್ಕೆ ಬಂದರೆ ಹುಷಾರ್ ಎಂದು ಕ್ರಾಂತಿ ವೀರ ಲಕ್ಷ್ಮಣ ಸಂಘಟನೆ ಈಗಾಗಲೇ ಎಚ್ಚರಿಸಿತ್ತು!! ಇದೀಗ ಸುದೀಪ್‍ರವರು ಸಿಎಂ ಪರ ಸ್ಪರ್ಧಿಸಲ್ಲ ಎಂಬ ಸ್ಪಷ್ಟನೆಯನ್ನು ನೀಡಿದ್ದಾರೆ!!

ಹೀಗೆ ಸಿಎಂ ಸಿದ್ದರಾಮಯ್ಯನವರು ಈಗಾಗಲೇ ಕನ್ನಡದ ಬಹು ಬೇಡಿಕೆ ನಟರನ್ನೇ ತಮ್ಮ ಪ್ರಚಾರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ!! ಆದರೆ ಏನು ಮಾಡೋಣ ಎಲ್ಲಿ ಸಿಎಂ ಪರ ಪ್ರಚಾರಕ್ಕೆ ತೆರಳುತ್ತಾರೋ ಅಲ್ಲೆಲ್ಲಾ ಆ ನಟರಿಗೆ ಒಂದಲ್ಲ ಒಂದು ರೀತಿ ವಿಘ್ನಗಳು ನಡೆಯುತ್ತನೇ ಇರುತ್ತದೆ… ಹೀಗಾಗಿ ಬಾದಾಮಿ ಮತ್ತು ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಹವಾ ಎಷ್ಟದೆ ಎಂಬುವುದು ಈಗಾಗಲೇ ಸಿಎಂಗೆ ತಿಳಿದಿರಬಹುದು!! ಸಿಎಂಗೆ ಗೆಲುವಿನ ಮಾತು ಕೇವಲ ಕನಸಾಗಿ ಉಳಿಯುವ ಸಾಧ್ಯತೆ ಇದೆ!!

source: vijayavani

-ಪವಿತ್ರ

Tags

Related Articles

Close