ಅಂಕಣಪ್ರಚಲಿತ

ಆತ ಭಾರತದ ರಕ್ತಪಾತಕ್ಕಾಗಿ ಪಣತೊಟ್ಟ ಜಾಗತಿಕ ಭಯೋತ್ಪಾದಕ! ಆದರೆ, ಅವನ ಮಕ್ಕಳು ಮಾತ್ರ ಭಾರತದಲ್ಲಿ ಲಕ್ಷ ಎಣಿಸುವ ಸರಕಾರೀ ನೌಕರರು!

ಸೈಯ್ಯದ್ ಸಲಾಲುದ್ದೀನ್!!

ಈ ಹೆಸರನ್ನು ಬಹುಷಃ ನೀವು ಕೇಳಿರಲೇ ಬೇಕು!! ಜಗತ್ತಿನಾದ್ಯಂತ ಪಾತಕಗಳನ್ನು ಸೃಷ್ಟಿಸಿದ ಹುಜ್ಬುಲ್ ಮುಜಾಹಿದ್ದೀನ್ ಎಂಬ ಭಯೋತ್ಪಾದಕ ಸಂಘಟನೆಯ ಅಧ್ಯಕ್ಷನಾತ! ಸೈಯ್ಯದ್ ಮಹಮ್ಮದ್ ಯೂಸುಫ್ ಎಂಬುದು ಈತನ ನಿಜನಾಮ! ಭಾರತದ ‘ಮೋಸ್ಟ್ ವಾಂಟೆಡ್’ ಉಗ್ರ! ಭಾರತದ
ಪೋಲೀಸರಿಗೇನಾದರೂ ಈತ ಸಿಕ್ಕಿದ್ದೇ ಆದರೆ, ಬೀದಿಯಲ್ಲಿಯೇ ಹೆಣವಾಗಿಸುವಷ್ಟು ಈತ ಭಾರತದಲ್ಲಿ ಪಾತಕ ನಡೆಸಿದ್ದಾನೆಂದರೆ ಕಲ್ಪಿಸಿಕೊಳ್ಳಿ!

ಈತ ಕಟ್ಟಿದ ಸಂಘಟನೆಯೊಂದಿದೆಯಲ್ಲವಾ?! ಭಾರತದ ಶಿರವೆಂದೇ ಭಾವಿಸುವ ಕಾಶ್ಮೀರದಲ್ಲಂತೂ ಈತನ ಕೈಚಳಕವೊಂದು ಕಾಶ್ಮೀರವನ್ನು ಇನ್ನೇನು ಪಾಕಿಸ್ಥಾನಕ್ಕೆ ಸೇರಿಸಿಯೇ ಬಿಡುತ್ತದೆ ಎಂಬಷ್ಟು ಮಟ್ಟಕ್ಕೆ ಹೋಗಿ ನಿಂತಿತ್ತಷ್ಟೇ!! ಈತನ ಸಂಘಟನೆಯ ಪ್ರಭಾವವೊಂದು ಹಲವಾರು ಭಾರತೀಯ ಸೈನಿಕರನ್ನೂ ಬಲಿ ತೆಗೆದುಕೊಂಡಿತಷ್ಟೇ! ಕಳೆದ ವರ್ಷ, ನಮ್ಮ ಭಾರತೀಯ ಸೈನಿಕರು ಕಾಶ್ಮೀರದ ಕಣಿವೆಗಳಲ್ಲಿ ಅಡಗಿದ್ದ ಬುರ್ಹಾನ್ ವಾನಿ ಎಂಬ ಉಗ್ರನನ್ನು ಅಟ್ಟಾಡಿಸಿ ಬಲಿ ಪಡೆದರು! ಆತ ಇದೇ ಸಂಘಟನೆಗೆ ಸೇರಿದ್ದ ಪ್ರಮುಖ ನಾಯಕ! ಆದರೆ, ದುರಾದೃಷ್ಟ ನೋಡಿ! ಕಾಶ್ಮೀರದ ಜಿಹಾದಿಗಳು ಸಯ್ಯದ್ ಸಲಾಲುದ್ದೀನ್ ನ ಬೆಂಬಲಕ್ಕೆ ನಿಂತು ಬಿಟ್ಟರು!! ಭಾರತದ ಹೆಸರು ಕೇಳಿದರೇ ಉರಿಉದು ಬೀಳುವ ಈ ಆಸಾಮಿಗೆ ಭಾರದತದಲ್ಲಿ ದ್ವೇಷವನ್ನು ಹರಡಲು ಸಹಕರಿಸಿದ್ದು ಕಾಶ್ಮೀರದ ಜಿಹಾದಿಗಳೇ !! ಕಾಶ್ಮೀರದಿಂದ ಪ್ರಾರಂಭವಾದ ಈತನ ಸಂಘಟನೆಯೊಂದು ಬಂಗಾಳದಲ್ಲೂ ಹಬ್ಬಿತು! ಅಲ್ಲಿಂದ ನೇರವಾಗಿ ಕೇರಳ! ಬಿಡಿ! ಕಾಶ್ಮೀರದ ಕಣಿವೆಗಳಲ್ಲಿ ಆಗಲೇ ಭಾರತದ ಧ್ವಜವನ್ನು ಕಿತ್ತು, ಜಿಹಾದಿಗಳ ಧ್ವಜವನ್ನು ನೆಡಲಾಗಿತ್ತು!

ಆದರೆ‌….

ನಾವು ಭಾರತೀಯರಿದ್ದೇವೆ ನೋಡಿ! ಸಹಿಷ್ಣುಗಳು!! ಎಲ್ಲದಕ್ಕಿಂತ ಹೆಚ್ಚಾಗಿ ಮೂರ್ಖರು! ಯಾಕೆ ಗೊತ್ತಾ?! ನಾವು ಭಾರತೀಯರು ಇದೇ ಸೈಯ್ಯದ್ ಸಲಾಲುದ್ದೀನ್ ನ ಕುಟುಂದವರಿಗೆ ಭಾರತದಲ್ಲಿ ಎಲ್ಲಾ ಸೌಲಭ್ಯಗಳನ್ನೂ ನೀಡಿ, ನಮ್ಮದೇ ತೆರಿಗೆಯ ಹಣದಿಂದ ಸುಖವಾಗಿಟ್ಟಿದ್ದೇವೆ ಅಂದರೆ ನಂಬುತ್ತೀರಾ?! ಸಾಲದ್ದಕ್ಕೆ, ನಾವು ಭಾರತೀಯರೆನ್ನಿಸಿಕೊಂಡವರೇ ಸೈಯ್ಯದ್ ನ ಮಕ್ಕಳನ್ನು ರಕ್ಷಿಸುತ್ತಿದ್ದೇವೆ ಎಂದರೆ, ನಮ್ಮ ಭಾರತೀಯರ ಸಹಿಷ್ಣುವೊಂದು ಅದೆಷ್ಟು ಪರಿಧಿಯನ್ನು ಮೀರಿ ಹೋಗಿದೆ ಯೋಚಿಸಿ!

ಹಾ! ಸಲಾಲುದ್ದೀನ್ ಗೆ ಐದು ಜನ ಗಂಡು ಮತ್ತು ಎರಡು ಜನ ಹೆಣ್ಣು ಮಕ್ಕಳು! ಆದರೆ, ಈತನ ಐದೂ ಜನ ಗಂಡು ಮಕ್ಕಳು ಯಾರೂ ಸಹ ಪಾಕಿಸ್ಥಾನದಲ್ಲಿಲ್ಲ!! ಬದಲಾಗಿ ಕಾಶ್ಮೀರದಲ್ಲಿ ವಾಸವಾಗಿದ್ದಾರೆ! ಅದೂ ಸಹ ಒಳ್ಳೆಯ ಸರಕಾರೀ ನೌಕರಿಯಲ್ಲಿ!

ಅವರ ಹಿರಿಯ ಮಗ ಶಕೀಲ್ ಯೂಸುಫ್, ಶ್ರೀನಗರದ ಶೇರ್-ಐ-ಕಾಶ್ಮೀರ ಎಂಬ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ!! ಎರಡನೆಯ ಮಗ ಜಾವೇದ್ ಯೂಸುಫ್ ಶಿಕ್ಷಣ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ!! ಮೂರನೇ ಮಗನಾದ ಶಾಹಿದ್ ಯೂಸುಫ್, ಶೇರ್-ಇ- ಕಾಶ್ಮೀರ ಸಂಸ್ಥೆಯಲ್ಲಿ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ದಲ್ಲಿ ರಿಸರ್ಚ್ ಮಾಡುತ್ತಿದ್ದಾರೆ! ನಾಲ್ಕನೇ ಮಗ ವಾಹಿದ್ ಯೂಸುಫ್ ಶೇರ್-ಇ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರಾಗಿದ್ದಾರೆ!! ಐದು ಪುತ್ರರಲ್ಲಿ ಕಿರಿಯನಾದ ಮುಯೀದ್ ಯೂಸುಫ್, ಶ್ರೀನಗರದಲ್ಲಿರುವ ಕಾಶ್ಮೀರ ವಾಣಿಜ್ಯೋದ್ಯಮ ಅಭಿವೃದ್ಧಿ ಇನ್ಸ್ಟಿಟ್ಯೂಟ್ (ಇಡಿಐ) ನಲ್ಲಿ ಕೆಲಸ ಮಾಡುತ್ತಿದ್ದಾರೆ!!

ದುರಂತ ನೋಡಿ ನಮ್ಮ ಭಾರತದ್ದು!! ತಂದೆ ಎನ್ನಿಸಿಕೊಂಡವನು ಜಾಗತಿಕ ಭಯೋತ್ಪಾದಕ! ಭಾರತಕ್ಕೆ ಆತನಿಂದ ಅದೆಷ್ಟೋ ನಷ್ಟಗಳಾಗಿವೆ! ಸದಾಕಾಲವೂ ಆಪತ್ತಿದೆ! ಆದರೆ, ಅಂತಹ ಭಯೋತ್ಪಾದಕನ ಮಕ್ಕಳಿಗೆ ಸರಕಾರೀ ಕೆಲಸ ಕೊಟ್ಟು ಪೋಷಿಸಲಾಗುತ್ತಿದೆ! ಅದ್ಯಾವ ನಂಬಿಕೆಯ ಮೇಲೆ ಸರಕಾರೀ ಕೆಲಸಗಳನ್ನು ಒಬ್ಬ ಭಯೋತ್ಪಾದಕನ ಮಕ್ಕಳಿಗೆ ನೀಡಲಾಗಿದೆ ಎಂಬುದೊಂದು ಇವತ್ತಿಗೂ ತಿಳಿಯದ ವಿಚಾರ! ಇದೊಂದೇ ವಿಚಾರ ಸಾಕಲ್ಲವಾ?! ನಾವೆಷ್ಟು ಭಯೋತ್ಪಾದನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು?! ಕಾಶ್ಮೀರದ ಕಣಿವೆಗಳಲ್ಲಿ ಅದೆಷ್ಟೋ ಸೈನಿಕರ ಹತ್ಯೆಗೆ ಕಾರಣನಾದ ಒಬ್ಬ ಜಾಗತಿಕ ಭಯೋತ್ಪಾದಕನನ್ನು ಸೆರೆ ಹಿಡಿಯಲು ಅದೆಷ್ಟು ಗಂಭೀರವಾಗಿ ಪ್ರಯತ್ನಿಸುತ್ತಿದ್ದೇವೆ ಎಂದು?!

ಈ ಸೈಯ್ಯದ್ ಸಲಾಲುದ್ದೀನ್ ಎಂಬುವವನು ತನ್ನ ಬದುಕನ್ನೇ ಭಾರತದ ನಾಶಕ್ಕೆ ಮುಡಿಪಾಗಿಟ್ಟಿರುವಾಗ, ದುಡಿದ ಒಂದು ರೂಪಾಯಿಯನ್ನೂ ಸಹ ಭಾರತದಲ್ಲಿ ರಕ್ತ ಪಾತ ನಡೆಸಲು ಬಳಸುವಾಗ, ನಮ್ಮ ಭಾರತ ಆತನ ಮಕ್ಕಳಿಗೆ ಸರಕಾರೀ ನೌಕರಿಯನ್ನು ಒದಗಿಸಿದೆ! ಸಂಬಳವನ್ನೂ ನೀಡುತ್ತಿದೆ! ಅಲ್ಪಸಂಖ್ಯಾತರಿಗೆ ಸಿಗುವ ಪ್ರತೀ ಸೌಲಭ್ಯವನ್ನು ಮುಚ್ಚು ಮರೆಯಿಲ್ಲದೇ ಒದಗಿಸುತ್ತಿದೆ! ಯಾವ ಪುರುಷಾರ್ಥಕ್ಕೆ ಸ್ವಾಮಿ?! ಮಕ್ಕಳು ಅದೇ ದುಡ್ಡಿನಲ್ಲಿ ತಂದೆಗೆ ಸಹಾಯ ಮಾಡಲಿ ಎಂದಾ?! ಭಾರತದಲ್ಲಿ ಇನ್ನೂ ಹೆಚ್ಚಿನದಾದ ಪಾತಕಗಳನ್ನು ಸೃಷ್ಟಿಸಲು ಸಹಾಯವಾಗಲಿ ಎಂದಾ?!

ಭಯೋತ್ಪಾದಕ ಕುಟುಂಬಕ್ಕೆ ರಾಯಲ್ ಟ್ರೀಟ್ ಮೆಂಟ್ ನೀಡುವ ದೇಶದ ಅತ್ಯಂತ ಕರುಣಾಜನಕ ಸ್ಥಿತಿ ಇದು ಎಂದರೆ ತಪ್ಪಾಗಲಾರದೇನೋ!! ಜಮ್ಮು ಮತ್ತು ಕಾಶ್ಮೀರ ಸರಕಾರವು ಒಬ್ಬ ಭಯೋತ್ಪಾದಕನ ಮಕ್ಕಳಿಗೆ ಉದ್ಯೋಗವನ್ನು ಒದಗಿಸುವುದು ಅಗತ್ಯವೇನಿದೆ ಹೇಳಿ ?! ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲೇ ಇಡೀ ಬದುಕು ಕಳೆಯುವವನ ಕುಟುಂಬದವರನ್ನು ದೇಶದಿಂದ ಹೊರಗೆ ಕಳುಹಿಸಬೇಕೇ ಅಥವಾ ಅವರ ತಂದೆ ಮಾತ್ರ ಭಯೋತ್ಪಾದಕನೇ ಹೊರತು ಆತನ ಮಕ್ಕಳಲ್ಲ! ಅವರಯ ಅಮಾಯಕರು ಎಂದು ನಾವು ಕುರುಡರಾಗಿ ಮೂರ್ಖರಂತೆ ನಂಬಿ ಭಾರತದಲ್ಲಿ ವಾಸ್ತವ್ಯ ಹೂಡಲು ಅನುಮತಿ ನೀಡಬೇಕೇ?!

(ಆಜಾದಿ ಗ್ಯಾಂಗ್ , ಕಾಂಗ್ರೆಸ್, ಎಎಪಿ ಮತ್ತು ಎಡಪಂಥೀಯ ಪಕ್ಷಗಳಂತಹ ರಾಜಕೀಯ ಪಕ್ಷಗಳು ಅಂತಹ ವಾದಗಳನ್ನು ಮುಂದಿಡುತ್ತವೆ ಎಂದು ನಾನು ಭಾವಿಸುತ್ತೇನೆ) ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕನಾದ ಯಾಸಿನ್ ಭಟ್ಕಳನ್ನು ಪೋಲಿಸರು ಬಂಧಿಸಿದಾಗ ಇದೇ ವಾದವೊಂದು ಸಮಾಜದೆದುರಿಗೆ ನಾಚಿಕೆಯಿಲ್ಲದ ಹಾಗೆ ಮುಂದಿಟ್ಟಿದ್ದರು ಎಂಡಪಂಥೀಯರು! ಆದರೆ .. ನಂತರದ ವಿಚಾರಣೆಯಲ್ಲಿ ಯಾಸೀನ್ ನ ಎಲ್ಲಾ ಸಹೋದರರೂ ಸಹ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ತಿಳಿದುಬಂದಿತ್ತು! ಆಗ, ಇದೇ ಎಡಪಂಥೀಯರ ಸ್ವರವೊಂದು ಅಡಗಿ ಹೋಗಿತ್ತು!

ನಾವು ಭಾರತೀಯರು ಅದೆಷ್ಟು ಅಸಹಾಯಕರಾಗಿದ್ದೇವೆ ಎಂಬುದನ್ನು ಒಮ್ಮೆ ತಿಳಿದುಕೊಳ್ಳಿ!

ಒಸಾಮಾ ಬಿನ್ ಲಾಡೆನ್ ಪುತ್ರರಿಗೆ ಅಮೆರಿಕ ಸರಕಾರ ಉದ್ಯೋಗಗಳನ್ನು ಒದಗಿಸುತ್ತದೆಯೇ? ಉದ್ಯೋಗ ಬಿಡಿ! ಲಾಡೆನ್ ನ ಮಕ್ಕಳು ಅಮೇರಿಕಾದಲ್ಲಿ ಬದುಕುಳಿಯುವುದೇ ಇಲ್ಲ! ಭಯೋತ್ಪಾದಕ ಅವನು, ಅವನ ಕುಟುಂಬದವರಲ್ಲ ಎಂಬ ಯಾವ ಮೂರ್ಖತನಕ್ಕೂ ಯಾವ ರಾಷ್ಟ್ರವೂ ಬಹುಷಃ ಇಳಿಯುವುದಿಲ್ಲ! ಮತ್ತು, ಇಳಿಯಲೂ ಬಾರದು!!

ಬಿಡಿ! ಸೈಯ್ಯದ್ ಮಕ್ಕಳಂತೆ ದಾವೂದ್ ಇಬ್ರಾಹಿಂ ಅವರ ಮಗಳು ಅಥವಾ ಮಗನಿಗೆ ನಾವು ಸರ್ಕಾರಿ ಉದ್ಯೋಗಗಳನ್ನು ನೀಡಬಾರದೇಕೆ?! ಸಾಧ್ಯವಾ?! ಇಲ್ಲ ಎಂದಾದರೆ, ಸೈಯದ್ ಸಲಾಲುದ್ದೀನ್ ನ ಮಕ್ಕಳಿಗೆ, ಮೊಮ್ಮಕ್ಕಳಿಗ್ಯಾಕೆ ಈ ವಿಶೇಷ ಸ್ಥಾನಮಾನವನ್ನು ಏಕೆ ನೀಡಬೇಕು ಹೇಳಿ?!

ಇದನ್ನು ಇನ್ನು ಮುಂದಾದರೂ ಗಂಭೀರವಾಗಿ ತೆಗೆದು ಕೊಳ್ಳಲಿದೆಯೇ ಭಾರತ ಸರಕಾರ?! ಒಬ್ಬ ಜಾಗತಿಕ ಭಯೋತ್ಪಾದಕನಿಗೆ ಹುಟ್ಟಿದವರನ್ನು ಅದ್ಯಾವ ಮಹದುದ್ದೇಶಕ್ಕೆ ಸರಕಾರೀ ನೌಕರಿ ಕೊಟ್ಟು ಪೋಷಿಸುತ್ತಿದೆ ಎನ್ನುವುದನ್ನು ಭಾರತ ಸರಕಾರ ತಿಳಿಸುವಷ್ಟು ಧೈರ್ಯ ತೋರುವುದಾ?!


ತಪಸ್ವಿ

Tags

Related Articles

Close