ಪ್ರಚಲಿತ

ತೆರೆಯ ಮರೆಯಿಂದಲೇ ಕಾರ್ಯ ನಿರ್ವಹಿಸುವ ಕಾಂಗ್ರೆಸಿನ “ಮಾಸ್ಟರ್ ಮೈಂಡ್”, “ಸ್ನೈಪರ್ ಕಿಲ್ಲರ್” ಅಹ್ಮದ್ ಪಟೇಲ್ ಎಂದರೆ ಕಾಂಗ್ರೆಸಿನ ಕುಳಗಳು ಜೈ ಎನ್ನುವುದೇಕೆ?

ಕಾಂಗ್ರೆಸಿನ “ಮಾಸ್ಟರ್ ಮೈಂಡ್”, ಮೇಡಮ್ ಜೀ ಯ ಬಳಿಕ ಕಾಂಗ್ರೆಸಿನಲ್ಲಿ ನಂ.2 ರಲ್ಲಿರುವ ಈತ ಮೇಡಮ್ ಜೀ ಬಲಗೈ ಬಂಟ. ಮೇಡಮ್ ಜೀಯ ಅತ್ತೆಯ ಕಾಲದಿಂದಲೇ ರಾಜಕಾರಣದಲ್ಲಿರುವ ಈತ ಬರೋಬ್ಬರಿ ನಲವತ್ತು ವರ್ಷಗಳನ್ನು ರಾಜಪರಿವಾರದ “ಸೇವೆ” ಮಾಡುತ್ತಾ ಮುಡುಪಾಗಿಟ್ಟಿದ್ದಾನೆ. ಕಾಂಗ್ರೆಸಿಗೆ ರಣತಂತ್ರಗಳನ್ನು ಹೆಣೆಯುವೆದೇ ಅಹ್ಮದ್ ಪಟೇಲ್! ಈತ ಹೇಳಿದ ಬಳಿಕ ಮುಗಿಯಿತು, ಮೇಡಮ್ ಜೀ ಅದಕ್ಕೆ ಅಸ್ತು ಅಸ್ತು ಎಂದು ಹೇಳುತ್ತಾರೆ ಎಂದೇ ಲೆಕ್ಕ. ಮೇಡಮ್ ಜೀ ಒಂದು ಕರೆಗೆ ಅರ್ಧ ರಾತ್ರಿಯಲ್ಲೂ ಓಡೋಡಿ ಹೋಗುವ ಈತನನ್ನು ಕಂಡರೆ ಯುವರಾಜನಿಗೆ ಅಷ್ಟಕಷ್ಟೆ ಎನ್ನುವ ಗುಸುಗುಸು ಸುತ್ತೆಲ್ಲಾ ಹರಿದಾಡುತ್ತದೆ. ಮೇಡಮ್ ಜೀ ಅತ್ಯಂತ ನಿಕಟವರ್ತಿಯಾಗಿರುವುದರಿಂದಲೇ ಕಾಂಗ್ರೆಸಿನ ಇತರ ಕುಳಗಳೆಲ್ಲವೂ ಈತನ ಮಾತಿಗೆ ಜೈ ಎನ್ನುತ್ತವೆ. ಮೇಲು ನೋಟಕ್ಕೆ ಮೋಡಮ್ ಜೀ ಎಲ್ಲಾ ನಿರ್ಧಾರಗಳನ್ನು ಮಾಡುವಂತೆ ಕಂಡರೂ ರಣತಂತ್ರ ರೂಪಿಸುವುದು ಅಹ್ಮದ್ ಪಟೇಲೆ.

ಈ ವ್ಯಕ್ತಿ ಸದಾ ತೆರೆಮರೆಯಲ್ಲೇ ಕಾರ್ಯ ನಿರ್ವಹಿಸುತ್ತಾನೆ. ಈತನದು ನಿಗೂಢ ವ್ಯಕ್ತಿತ್ವ. ಯಾವತ್ತೂ ಮಾಧ್ಯಮದ ಮುಂದೆ ಸುಳಿಯುವುದಿಲ್ಲ. ಯಾರ ಜೊತೆಗೂ ಹೆಚ್ಚು ಬೆರೆಯುವುದಿಲ್ಲ, ವಿನಾ ಕಾರಣ ವಾಗ್ವಾದ, ವಿವಾದಿತ ಹೇಳಿಕೆಗಳನ್ನು ಕೊಡುವುದಿಲ್ಲ. ಆದ್ದರಿಂದ ಈತನ ಮನಸಿನ್ನಲ್ಲಿ ಏನಾಗುತ್ತಿದೆ, ಈತನ ಮುಂದಿನ ನಡೆಯೇನು ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಈತ ಥೇಟ್ ಸ್ನೈಪರ್ ಕಿಲ್ಲರ್ ನಂತೆಯೇ ಕಾರ್ಯ ನಿರ್ವಹಿಸುತ್ತಾನೆ!! ಹೊಂಚು ಹಾಕಿ ಎಗರುವುದರಲ್ಲಿ ಸ್ನೈಪರ್ ಕಿಲ್ಲರ್ ಗಳದ್ದು ಎತ್ತಿದ “ಕೈ”. ಕಣ್ಣೆವೆ ಮಿಟಿಕಿಸುವದರೊಳಗೆ ತನ್ನ ಬೇಟೆಯನ್ನು ಗುಂಡಿಕ್ಕಿ ಕೊಂದು ಹೇಳ ಹೆಸರಿಲ್ಲದಂತೆ ಪರಾರಿಯಾಗುತ್ತದೆ ಈ ಸ್ನೈಪರ್ ಕಿಲ್ಲರ್!!

ಕಾಂಗ್ರೆಸ್ ಅಂದರೆ ಅಹ್ಮದ್ ಪಟೇಲ್! ಮೇಡಮ್ ಜೀ ಯನ್ನು ಹೊರತು ಪಡಿಸಿ ಕಾಂಗ್ರೆಸಿನೊಳಗೆ ಈತನ ಮಾತಿಗೆ ಎದುರಾಡುವವರೇ ಇಲ್ಲ. ದಿಲ್ಲಿ ಇಂದ ಭಾರತದ ಗಲ್ಲಿವರೆಗೆ ಹಬ್ಬಿರುವ ಮದರಸಾಗಳ ಮಾಲೀಕ ಈತ!! ದೇವಬಂಧ್ ಮುಸ್ಲಿಮರ ಮದರಸಾಗಳಲ್ಲಿ ಈತನ ಪರಿವಾರದವರದ್ದೇ ಕಾರುಬಾರು. ಭಾರತದಲ್ಲಿ ಉಗ್ರರ ಪೋಷಣೆಗೆ ಬರುವ ವಿದೇಶೀ ಹಣವನ್ನು ಅವರಿಗೆ ಪೂರೈಸುವುದೇ ಅಹ್ಮದ್ ಪಟೇಲ್. ಈತನಿಗೆ ಉಗ್ರ ಸಂಘಟನೆ ಐಸಿಸ್ ಜೊತೆ ಸಂಬಂಧ ಇದೆಯೆಂದು ಜಗಜ್ಜಾಹೀರಾಗಿರುವ ಸತ್ಯ. ಆದರೆ ತನ್ನ ಕೆಲಸಗಳಿಗೆ ಸಾಕ್ಷಿಯನ್ನೇ ಇಡದ ಈತನನ್ನು ಹಣಿಯುವುದು ಸುಲಭವಲ್ಲ. ಎಲ್ಲಿಯೂ ಸಿಕ್ಕಿ ಹಾಕಿಕೊಳ್ಳದ ಈತ ಚಾಣಾಕ್ಷನಾಗಿ ಪಾರಾಗುವುದರಲ್ಲಿ ನಿಸ್ಸೀಮ. ಕಾಂಗ್ರೆಸಿನ “ಟ್ರಬಲ್ ಶೂಟರ್” ತನಗೆ ಒದಗಿದ ಆಪತ್ತುಗಳನ್ನು ಎದುರಿಸದಿರುವನೇ? ಭಾರತದ ಎಲ್ಲಾ ಆಯಕಟ್ಟಿನ ಜಾಗಗಳಲ್ಲಿ ಈತನ ನಿಷ್ಠಾವಂತ ಬಾಲ ಬಡುಕರಿರುವುದರಿಂದ ಪೂರ್ವಾಭಾವಿಯಾಗಿಯೇ ಎಲ್ಲಾ ವಿಷಯಗಳು ಈತನಿಗೆ ತಿಳಿಯುತ್ತದೆ ಎನ್ನುವುದು ಉತ್ಪ್ರೇಕ್ಷೆಯಲ್ಲ.

ಇನ್ನು ಭಾರತೀಯ ಮಾಧ್ಯಮಗಳನ್ನು ತನ್ನ ಪುಂಗಿಯ ನಾದಕ್ಕೆ ಆಡಿಸುವವನೇ ಈತ. ಒಂದು ಮಾಮೂಲಿ ಎನಿಸುವ ಸುದ್ದಿಯನ್ನು ದಿನದ ಇಪ್ಪತ್ತನಾಲ್ಕು ಘಂಟೆಯೂ ಚಾನಲ್ಲಿನಲ್ಲಿ ಬರುವಂತೆ ಮಾಡಿ ಇಡಿಯ ದೇಶದ ಗಮನವನ್ನೇ ಇನ್ನೊಂದು ವಿಷಯದೆಡೆಗೆ ತಿರುಗಿಸುವಲ್ಲಿ ಈತನ ಮಾಸ್ಟರ್ ಮೈಂಡೇ ಕೆಲಸ ಮಾಡುವುದು. ದೇಶದ 90% ಮಾಧ್ಯಮಗಳು ಅಹ್ಮದ್ ಪಟೇಲ್ ಅಣತಿಗೆ ಆಜ್ಞಾನುವರ್ತಿಯಾಗಿ ಕಾರ್ಯ ನಿರ್ವಹಿಸುತ್ತವೆ. ಈತ ಘೋರ ಹಿಂದೂ ವಿರೋಧಿ, ಆದ್ದರಿಂದಲೇ ಈ ಎಲ್ಲಾ ಚಾನೆಲ್ ಗಳು ಹಿಂದೂ ವಿರೊಧೀ ಧೋರಣೆಯನ್ನು ಒಳಗೊಂಡಿರುವುದು. ಯಾವಾಗ ಈ ಬಾಲ ಬಡುಕ ಮಾಧ್ಯಮಳ ಅಸಲಿಯತ್ತು ಜನರಿಗೆ ಗೊತ್ತಾಯಿತೋ ಆಗ ಜನರು ನೈಜ ಸುದ್ದಿಗಾಗಿ ಸಾಮಾಜಿಕ ಜಾಲತಾಣಗಳತ್ತ ಮುಖ ಮಾಡಿದರು. ಅದನ್ನು ಮನಗಂಡ ಪಟೇಲ್ ತನ್ನ ಪಟಾಲಮ್ಮನ್ನು ಸಾಮಾಜಿಕ ಜಾಲತಾಣಗಳತ್ತ ಛೂ ಬಿಟ್ಟ.

ಈಗ ಸಾಮಾಜಿಕ ಜಾಲತಾಣಗಳ ತುಂಬಾ ಈತನ ಪಟಾಲಮ್ಮಿನದ್ದೇ ಕಾರುಬಾರು. ಸಾವಿರಾರು ನಕಲಿ ಅಕೌಂಟ್ ಗಳನ್ನು ಸೃಷ್ಟಿಸಿ ವ್ಯವಸ್ತಿತವಾಗಿ “ಬ್ಲಾಂಗಿಗ್ ಜಿಹಾದ್” ಅನ್ನು ಹರಡಲಾಗುತ್ತಿದೆ. ಇದೆಲ್ಲದರ ಪರಿವೆಯೆಲ್ಲದ ಜನ ಈತ ಬೀಸಿದ ಖೆಡ್ಡಾಕ್ಕೆ ದಬದಬನೇ ಬೀಳುತ್ತಿದ್ದಾರೆ. ಅರುವತ್ತೇಳರ ಇಳಿವಯಸ್ಸಿನಲ್ಲೂ ಮೂವತ್ತರ ಹರೆಯದ ಯುವಕರೂ ನಾಚುವಂತೆ ರಣತಂತ್ರ ಹೆಣೆಯುವ ಈತನ ಚಾಕ ಚಕ್ಯತೆಗೆ ಸರಿ ಸಾಟಿಯೇ ಇಲ್ಲ. ಗುಜರಾತಲ್ಲಿ ಈತ ತೋಡಿದ ಖೆಡ್ಡಾಕ್ಕೆ ಸ್ವತಃ ಮೋದೀ ಜೀ ಮತ್ತು ಅಮಿತ್ ಶಾ ಬೀಳುವುದಲ್ಲಿದ್ದರೆಂದರೆ ಈತನ ಬುದ್ದಿಮತ್ತೆ ಎಂಥದ್ದಿರಬೇಕು!! ಯಾವ ರಾಜ್ಯದಲ್ಲಿ ಯಾವ ಸಮಯದಲ್ಲಿ ಏನು ರಣತಂತ್ರ ಹೆಣೆಯಬೇಕೆಂಬುದು ಗೊತ್ತಿರುವುದು ಅಹ್ಮದ್ ಪಟೇಲ್ ಗೆ ಮಾತ್ರ.

ಬಿಹಾರ ಚುನಾವಣೆ ಸಮಯದಲ್ಲಿ ಅಖಲಾಕ್ ಘಟನೆಯನ್ನು ಮುನ್ನೆಲೆಗೆ ತಂದ ಈ ವ್ಯಕ್ತಿ ಕರ್ನಾಟಕ ಚುನಾವಣೆಯ ಹೊಸ್ತಿಲಲ್ಲಿ ಜನವರಿಯಲ್ಲಿ ನಡೆದಿದೆ ಎನ್ನಲಾಗುವ ಕಥುವಾ ಕೊಲೆ ಪ್ರಕರಣಕ್ಕೆ ಹೊಸದೊಂದೇ ರೂಪ ಕೊಟ್ಟ. ಈತನ ಅಣತಿಗೇ ಕಾಯುತ್ತಿರುವ ಈತನ ಪಟಾಲಮ್, ಮೋದಿ ಮತ್ತು ಭಾಜಪಾ ವಿರುದ್ದ ವಿಷ ಕಾರಲು ಈ ಅವಕಾಶವನ್ನು ಚೆನ್ನಾಗೇ ಬಳಸಿಕೊಂಡಿದೆ. ಈ ಹಿಂದೆ “ಭಗವಾ ಆತಂಕವಾದ” ಎಂಬ ಸುಳ್ಳನ್ನು ಹಬ್ಬಿದ ಈತ ಮತ್ತು ಈತನ ಪಟಾಲಮ್ ಈ ಬಾರಿ “ಹಿಂದೂಗಳೆಲ್ಲ ಅತ್ಯಾಚಾರಿ”ಗಳೆನ್ನುವ ಹೊಸತೊಂದು ಪದವನ್ನು ಹುಟ್ಟು ಹಾಕಿದೆ. ಒಂದಂತೂ ಸತ್ಯ, ಕಾಂಗ್ರೆಸನ್ನು ಸೋಲಿಸಬೇಕೆಂದರೆ ಮೊದಲು ಅಹ್ಮದ್ ಪಟೇಲ್ ನನ್ನು ಸೋಲಿಸಬೇಕು. ಯಾರ ಕೈಗೂ ಸಿಗದ ಈತನ ತಲೆಯಲ್ಲಿ ನಡೆಯುವ ಮುಂದಿನ ನಡೆಗಳನ್ನು ಅರಿಯುವುದು ಕಷ್ಟವಾದರೂ ಅಸಾಧ್ಯವೇನಲ್ಲ. ಅಹ್ಮದ್ ಪಟೇಲ್ ಸೋತನೆಂದರೆ ಕಾಂಗ್ರೆಸ್ ಸೋತಂತೆಯೆ. ಆದರೆ ತನ್ನ ಜೀವನದ ಬಹುಪಾಲು ರಾಜಕಾರಣದಲ್ಲೇ ಕಳೆದಿರುವ ಈತ ಸುಲಭದ ಪೆಟ್ಟಿಗೆ ಸೋಲೊಪ್ಪಿಕೊಳ್ಳುವವನಲ್ಲ.

ಹದಿನಾರು ವರ್ಷಗಳ ಹಿಂದೆ ಅಟಲ್ ಜೀ ಸರಕಾರಕ್ಕೆ ಕಾಣಿಸಿದ ಗತಿಯನ್ನೇ 2019 ಮೋದಿ ಸರಕಾರಕ್ಕೂ ಕಾಣಿಸುತ್ತೇನೆಂದು ಶಪಥಗೈದಿರುವ ಈತನ ಮುಂದಿನ ನಡೆಗಳು ಇನ್ನೂ ಆಕ್ರಾಮಕವಾಗಿರುತ್ತವೆ. ದೇಶದ ತುಂಬಾ ಮೋದಿ ವಿರೋಧೀ ಅಲೆಯೆಬ್ಬಿಸಿ ಜನರೆಲ್ಲರೂ ಮೋದಿಜಿಯನ್ನು ದ್ವೇಶಿಸುವಂತೆ ಮಾಡುವ ಉದ್ದೇಶ ಈತನದು. ಆದರೆ ಆತ ಒಂದೇ ಒಂದು ವಿಚಾರ ಮರೆತಿದ್ದಾನೆ. ಮೋದಿಜಿಯವರನ್ನು ಜನತೆಯಲ್ಲ, ಸ್ವತಃ ಭಗವಂತನೇ ಚುನಾಯಿಸಿದ್ದು!! ಜನರು ಅವರನ್ನು ಆರಿಸಿ ಕಳುಹಿಸಿದ್ದು ಮಾತ್ರ. ಯಾರು ಏನೇ ತಿಪ್ಪರಲಾಗ ಹಾಕಿದರೂ ಮೋದಿಜಿ ಮತ್ತೊಮ್ಮೆ ಗದ್ದುಗೆ ಏರಿಯೇ ಏರುತ್ತಾರೆ. ಒಂದಲ್ಲ, ನೂರು ಅಹ್ಮದ್ ಪಟೇಲ್ ಬಂದರೂ ಮೋದಿಜಿಯವರನ್ನು ಮಣಿಸುವುದು ಸಾಧ್ಯವೇ ಇಲ್ಲ. ಯಾರ ಮೇಲೆ ಪರಮಾತ್ಮನ ಕೃಪಾ ಕಟಾಕ್ಷವಿರುತ್ತದೋ ಆತನನ್ನು ಸ್ವಯಂ ಕಾಲ ಯಮನಿಗೂ ಮುಟ್ಟಲಾಗುವುದಿಲ್ಲ, ಇನ್ನು ಹುಲುಮಾನವ ಯಾವ ಲೆಕ್ಕ? ಭಾರತದ ಭಾಗ್ಯವನ್ನು ಬದಲಾಯಿಸಲು ಬಂದ ಭಾಗ್ಯ ವಿಧಾತ ಮೋದಿಜಿ.
ಸಂಭವಾಮಿ ಯುಗೇ ಯುಗೇ…..

ಮೂಲ:https://en.wikipedia.org/wiki/Ahmed_Patel

ಮೂಲ:https://timesofindia.indiatimes.com/india/whats-terror-suspects-tie-to-ahmed-patel-naqvi-asks-sonia-gandhi/articleshow/61313495.cms

ಮೂಲ:https://www.news18.com/news/politics/ahmed-patel-congress-behind-the-scenes-man-who-fought-on-frontlines-in-gujarat-1486489.html

-ಶಕುನಿ

Tags

Related Articles

Close