ಪ್ರಚಲಿತ

ಈ ಹಿಂದೂ ಸಿಂಹ ಗುಡುಗಿತೆಂದರೆ ಸಾಕು ಕಾಂಗ್ರೆಸ್ ಕಾರ್ಯಾಲಯದಿಂದ ಸಿಂಹಾಸನದವರೆಗೆ ಎಲ್ಲರ ಎದೆಯಲ್ಲೂ ನಡುಕ ಶುರುವಾಗುವುದು ಸತ್ಯ!!

ಸುಬ್ರಮಣ್ಯನ್ ಸ್ವಾಮಿ!! ಈ ಹೆಸರು ಕೇಳಿದರೆ ಸಾಕು, ಕಾಂಗ್ರೆಸಿನ ಕಾರ್ಯಲಯ, ಅಷ್ಟೇ ಏಕೆ ಸಿಂಹಾಸದಲ್ಲಿ ಕುಳಿತ ರಾಜಮಾತೆಯೂ ಬೆಚ್ಚಿ ಬೀಳುತ್ತಾರೆ!! ಕಾಂಗ್ರೆಸ್ ಮತ್ತು ರಾಜಮಾತೆಯನ್ನು ಎದುರಿಸುವ ಧೈರ್ಯವೇ ಇಲ್ಲದ ಕಾಲವಾಗಿತ್ತದು. ರಾಜಮಾತೆಯ ಎದುರು ನಿಂತವರು ಸ್ವರ್ಗಾರೋಹಣ ಗೈದರೆಂದೇ ಅರ್ಥ. ಬದುಕುವ ಆಸೆ ಇಲ್ಲದವರಷ್ಟೇ ಕಾಂಗ್ರೆಸಿನ ರಾಜಮಾತೆಯನ್ನು ಎದುರು ಹಾಕಿಕೊಳ್ಳಬಲ್ಲರು ಎನ್ನುವ ಮಾತು ಅಕ್ಷರಷ ನಿಜ. ಅಂತಹ ಸಂಧರ್ಭದಲ್ಲಿ ಜೀವದ ಹಂಗು ತೊರೆದು ಕಾಂಗ್ರೆಸಿನ ರಾಜಮಾತೆಗೇ ಸಡ್ದು ಹೊಡೆದು ಎದೆಯೊಡ್ಡಿ ನಿಂತು ಕಾಂಗ್ರೆಸಿನ ಬ್ರಹ್ಮಾಂಡ ಭ್ರಷ್ಟಾಚಾರ, ಅನಾಚಾರ, ಹಿಂದೂ ವಿರೋಧಿ ನೀತಿಗಳನ್ನು ದೇಶದ ಸಮಕ್ಷ ತಂದವರು ಸುಬ್ರಮಣ್ಯನ್ ಸ್ವಾಮಿ.

ರಾಜಮಾತೆಯ ಪರಿವಾರದ ಎಳೆ ಎಳೆಯನ್ನೂ ಬಿಚ್ಚಿಟ್ಟು, ಆಕೆ ಮತ್ತು ಆಕೆಯ ಮಕ್ಕಳ ಇಟಲಿ ನಾಗರಿಕತ್ವದ ದಾಖಲೆ ತಂದು ದೇಶದ ಕಣ್ಣು ತೆರೆಸಿದವರು ಇವರು. ಅಯೋಧ್ಯೆಯಲ್ಲಿ ರಾಮನಿಗಾಗಿ ಮಂದಿರ ಕಟ್ಟ ಬೇಕೆಂದು ಹಗಲಿರುಳೂ ಕಷ್ಟ ಪಡುತ್ತಿರುವವರು ಇವರು. ಇನ್ನೇನು ಕಾಂಗ್ರೆಸ್ ಎಂಬ ಹಿಂದೂ ದ್ವೇಶಿ ಪಕ್ಷ, ರಾಮ ಸೇತುವನ್ನು ಒಡೆದೇ ಬಿಡುತ್ತಿತ್ತೇನೋ, ಆಗಲೇ ನ್ಯಾಯಾಲಯದ ಬಾಗಿಲು ತಟ್ಟಿ ರಾಮ ಸೇತುವನ್ನು ಉಳಿಸಿದವರು ಇವರು. ಶತ್ರು ಪಾಳಯವನ್ನು ಏಕಾಂಗಿಯಾಗಿ ಎದುರಿಸುತ್ತಾ ಕಾಂಗ್ರೆಸಿನ ರಾಜಮಾತೆ ಮತ್ತು ಯುವರಾಜನನ್ನು ನ್ಯಾಶನಲ್ ಹೆರಾಲ್ಡ್ ಕೇಸಿನಲ್ಲಿ ಕೋರ್ಟಿನ ಕಟ ಕಟಯವರೆಗೂ ಎಳೆದು ತಂದ ಹಿಂದೂ ಸಿಂಹ ಸುಬ್ರಮಣ್ಯನ್ ಸ್ವಾಮಿ. ಇವತ್ತು 50 ಸಾವಿರ ಬಾಂಡ್ ಇಟ್ಟು ಜಾಮೀನಿನ ಮೇಲೆ ತಿರುಗಾಡುತ್ತಿದ್ದಾರೆ ಅಮ್ಮ-ಮಗ.

ಓವೈಸಿ ಎಂಬ ದುರುಳನ ಕಣ್ಣಲ್ಲಿ ಕಣ್ಣಿಟ್ಟು ನಿಮ್ಮ ಪೂರ್ವಜರೆಲ್ಲಾ ಹಿಂದೂಗಳು ನೀವು ಒಪ್ಪಿಕೊಳ್ಳುವುದಿಲ್ಲ, ಆದರೆ ಇದುವೆ ಸತ್ಯ ಎಂದು ಹೇಳುವ ಛಾತಿ ಇರುವುದು ಸ್ವಾಮಿಜಿಗೆ ಮಾತ್ರ. 1975 ರಲ್ಲಿ ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾಗ ಯಾರೂ ಊಹಿಸಲಾಗದಂತಹ ಕೆಲಸವನ್ನು ಮಾಡಿದ್ದು ಇದೇ ಸುಬ್ರಮಣ್ಯನ್ ಸ್ವಾಮಿ. ತುರ್ತು ಪರಿಸ್ಥಿಯ ಸಂಧರ್ಭದಲ್ಲಿ ಸಿಖ್ಕರಂತೆ ವೇಷ ಧರಿಸಿ ಸಂಸತ್ ಗೆ ನುಗ್ಗಿ ಇಂದಿರಾ ಗಾಂಧಿಯ ವಿರುದ್ದ ಘೋಷಣೆ ಕೂಗುತ್ತಾ ಪತ್ರಕರ್ತರಿಗೆ “ಭಾರತದ ಗಣತಂತ್ರ ಸತ್ತಿದೆ” ಎಂದು ಎರಡು ನಿಮಿಷದ ಸಂದರ್ಶನ ಕೊಟ್ಟು, “ಹಿಟ್ಲರ್ ದೀದಿ”ಗೆ ಸಡ್ಡು ಹೊಡೆದವರಿವರು. ಜಯಲಲಿತಾ, ಚಿದಂಬರಮ್, ಶಶಿಕಲಾ, ಮಾರನ್ ಅಷ್ಟೇ ಎಕೆ ತನ್ನದೇ ಪಕ್ಷದ ಅರುಣ್ ಜೇಟ್ಲಿಯಂತಹವರನ್ನೂ ಬಿಟ್ಟಿಲ್ಲ ಇವರು. ನ್ಯಾಯಯುತವಾಗಿಯೇ ಮಾತನಾಡುವ ಸ್ವಾಮಿ ಅವರು ತನ್ನ ಪಕ್ಷದವರು ತಪ್ಪು ಮಾಡಿದಾಗ ಅವರನ್ನೂ ತರಾಟೆಗೆ ತೆಗೆದುಕೊಳ್ಳುತ್ತಾರೆ.

ಹಿಟ್ಲರ್ ನಂತಹ ಅತ್ತೆಯನ್ನೆ ಬಿಟ್ಟಿಲ್ಲ ಈ ಸಿಂಹ, ಇನ್ನು ಪುಟಗೋಸಿ ಇಟಲೀ ಇಲಿಯನ್ನು ಬಿಟ್ಟೀತೇ? ಸ್ವತಃ ಇಂದಿರಾಗಾಂಧಿಗೇ ತಲೆ ನೋವಾಗಿದ್ದರು ಸ್ವಾಮಿಜಿ. ಇವತ್ತು ಭಾರತೀಯರು ಕೈಲಾಸ- ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಭಾಗ್ಯ ಪಡೆದಿದ್ದರೆ ಅದು ಸ್ವಾಮಿ ಅವರಿಂದಾಗಿ. ಕಾಶ್ಮೀರದಲ್ಲಿ 370 ನೇ ವಿಧಿಯನ್ನು ತೆಗೆಯಬೇಕೆಂದು ಒತ್ತಾಯ ಮಾಡುವ ಇವರು ವಿದೇಶಗಳ ಜೊತೆ ಭಾರತ ಸೌಹಾರ್ದ ಸಂಬಂಧಗಳನ್ನು ಏರ್ಪಡಿಸಬೇಕೆಂದು ಒತ್ತಾಯಿಸುತ್ತಾರೆ. ಭಾರತದ ರಕ್ಷಾ ಮಂತ್ರಾಲಯವನ್ನು ನನಗೆ ಕೊಡಿ ಎರಡೆ ನಿಮಿಷದಲ್ಲಿ ಉಗ್ರರ ಉಪಟಳವನ್ನು ತಡೆಯುತ್ತೇನೆ ಎನ್ನುವ ಇವರ ಮಾತು ಉತ್ಪ್ರೇಕ್ಷೆಯದಲ್ಲ. ಸ್ವಾಮಿ ಯವರ ವರ್ಚಸ್ಸು ಅಂಥಹುದು, ಮನಸ್ಸು ಮಾಡಿದರೆಂದರೆ ಅದನ್ನು ಮಾಡಿಯೇ ತೀರುತ್ತಾರೆ. ಕಾಂಗ್ರೆಸಿನ ಮತ್ತು ರಾಜ ಪರಿವಾರದ ವಿರುದ್ದ ದಾಖಲೆ ಒಟ್ಟು ಮಾಡಲು ಜಗತ್ತಿನ ದೇಶಗಳನ್ನೆಲ್ಲಾ ಸುತ್ತಾಡಿ ಕಡತಗಳನ್ನೆಲ್ಲಾ ಜಾಲಡುತ್ತಾರೆ. ಅಮ್ಮ-ಮಗನ ವಿದ್ಯಾರ್ಹತೆಯ ದಾಖಲೆಯನ್ನು ಜಾಲಾಡಿ ಇಬ್ಬರೂ ನಕಲಿ ಪದವಿ ಪತ್ರ ಹೊಂದಿರುವುದನ್ನು ಸಾಬೀತು ಪಡಿಸಿ ಅವರ ಸುಳ್ಳಿನ ಮೂಟೆಯಿಂದ ಒಂದೊಂದೇ ಕಟ್ಟನ್ನು ಹೊರಗೆಡವಿದ್ದಾರೆ.

ಸುಬ್ರಮಣ್ಯನ್ ಸ್ವಾಮಿಯನ್ನು ಎದುರು ಹಾಕಿಕೊಳ್ಳಲು ಸ್ವತಃ ರಾಜಮಾತೆಯೇ ಹೆದರುತ್ತಾರೆ. ಸೂಕ್ತ ದಾಖಲೆಗಳಿಲ್ಲದೆ ಸ್ವಾಮಿ ಅಪವಾದಗಳನ್ನು ಮಾಡುವುದಿಲ್ಲ. ಅವರೇನಾದರೂ ಮೈದಾನಕ್ಕೆ ಇಳಿಯುತ್ತಿದ್ದಾರೆಂದರೆ ಅವರಲ್ಲಿ ದಾಖಲೆಗಳಿವೆ ಎಂದೇ ಅರ್ಥ. ಅದಕ್ಕೇ ಸ್ವಾಮಿಯನ್ನು ಎದುರು ಹಾಕಿಕೊಳ್ಳುವ ಭಂಡ ಧೈರ್ಯ ಯಾರಿಗೂ ಇಲ್ಲ. ರಾಜೀವ್ ಗಾಂಧಿಯ ಅತ್ಯಂತ ನಿಕಟವರ್ತಿಯಾಗಿದ್ದ ಸ್ವಾಮಿ ಅವರಿಗೆ “ರಾಜಪರಿವಾರದ ರಹಸ್ಯ”ಗಳೆಲ್ಲವೂ ಗೊತ್ತು. ರಾಜೀವ್ ಗಾಂಧಿಯ ಹತ್ಯೆಯಲ್ಲಿ ಅವರ “ನಿಕಟವರ್ತಿ”ಗಳ ಕೈವಾಡ ಇದೆಯೆಂಬುದನ್ನು ಹೇಳಿದವರು ಇವರೆ. ದೇಶ ಮತ್ತು ಧರ್ಮವನ್ನು ಅದಮ್ಯವಾಗಿ ಪ್ರೀತಿಸುವ ಸ್ವಾಮಿ ಅವರಿಗೆ ದೇಶ ಮತ್ತು ಹಿಂದೂಗಳು ಚಿರ ಋಣಿ. ಕಾಂಗ್ರೆಸ್ ನಂತಹ ಕಾಂಗ್ರೆಸ್ ಅನ್ನು ಎದುರು ಹಾಕಿಕೊಳ್ಳುವುದು ಸಾಮಾನ್ಯದ ಮಾತಲ್ಲ. ರಾಜಪರಿವಾರವನ್ನು ಜೈಲಿಗೆ ಅಟ್ಟಿಯೇ ತೀರುವೆನೆಂದು ಪಣ ತೊಟ್ಟಿರುವ ಸ್ವಾಮಿ ಅವರ ಕಾರ್ಯಕ್ಕೆ ಪ್ರಭು ರಾಮ ಇನ್ನಷ್ಟು ಬಲ ನೀಡಲಿ. ಜೈ ಶ್ರೀ ರಾಮ್…

ಮೂಲ:https://en.wikipedia.org/wiki/Subramanian_Swamy
https://www.inuth.com/india/how-subramanian-swamy-became-a-headache-for-the-indira-gandhi-regime-during-the-emergency/

-ಶಾರ್ವರಿ

Tags

Related Articles

Close