ಪ್ರಚಲಿತ

ಹಿಂದೂ ಹೃದಯ ಸಾಮ್ರಾಟನಿಗೆ ಅವಮಾನ: ಜೆ ಎನ್ ಯು ಬದಲಾಗೋದ್ಯಾವಾಗ?

ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ಜಯಂತಿಯನ್ನು ದೇಶದೆಲ್ಲೆಡೆ ಹೈಂದವೀ ಶಕ್ತಿಗಳು ವಿಜೃಂಭಣೆಯಿಂದ ಆಚರಣೆ ಮಾಡಿದ್ದಾರೆ. ಈ ಸಂಭ್ರಮದ ನಡುವೆಯೂ ದೇಶ ವಿರೋಧಿ ಕೃತ್ಯಗಳಿಂದಲೇ ಕುಖ್ಯಾತಿ ಪಡೆದಿರುವ ಜೆಎನ್‌ಯು ನಲ್ಲಿ ಶಿವಾಜಿ ಮಹಾರಾಜರಿಗೆ ಎಡಪಂಥೀಯ ಕೆಲ ವಿಕೃತ ಮನಸ್ಸುಗಳು ಅಪಮಾನ ಎಸಗಿದ ಘಟನೆ ವರದಿಯಾಗಿದೆ.

ಎಡಪಂಥೀಯರು ಶಿವಾಜಿ ಮಹಾರಾಜರ ಜನ್ಮದಿನದಂದು ಅವರ ಭಾವ ಚಿತ್ರವನ್ನು ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದಾರೆ ‌ಎಂದು ಎಬಿವಿಪಿ ಸದಸ್ಯರು ಆರೋಪಿಸಿದ್ದು, ಈ ಕಾರಣದಿಂದ ದೆಹಲಿಯ ಜೆ ಎನ್ ಯು ಆವರಣದಲ್ಲಿ ನಿನ್ನೆ ಸಂಜೆ ಘರ್ಷಣೆ ನಡೆದಿರುವುದಾಗಿ ವರದಿಯಾಗಿದೆ. ಧ್ವಂಸವಾದ ಶಿವಾಜಿ ಮಹಾರಾಜರ ಚಿತ್ರವನ್ನು ಸಹ ಎಬಿವಿಪಿ ಹಂಚಿಕೊಂಡಿದ್ದು, ಮಾವೋವಾದಿಗಳಿಂದ ಈ ಕುಕೃತ್ಯ ನಡೆದಿರುವುದಾಗಿ ಆರೋಪಿಸಿದ್ದಾರೆ.

ಎಡಚರರ ಗುಂಪು ಛತ್ರಪತಿ ಶಿವಾಜಿ ಮಹಾರಾಜರ ಹಾರವನ್ನು ಕಿತ್ತೆಸೆದು, ಈ ಧ್ವಂಸ ಕಾರ್ಯ ನಡೆಸಿದ್ದಾರೆ. ಆ ಮೂಲಕ ಹಿಂದೂ ಹೃದಯ ಸಾಮ್ರಾಟನಿಗೆ ಅವಮಾನ ಎಸಗಿದ್ದಾಗಿ ಎಬಿವಿಪಿ ತಿಳಿಸಿದೆ.

ಈ ಹಿಂದೆಯೂ ಜೆ ಎನ್ ಯು ನ ಹಲವು ವಿದ್ಯಾರ್ಥಿಗಳು, ಬೋಧಕ ವರ್ಗದ ಕೆಲವು ಮಂದಿ ದೇಶ ವಿರೋಧಿ ಹೇಳಿಕೆಗಳನ್ನು ನೀಡುವುದು, ದೇಶ ವಿರೋಧಿ ಕೃತ್ಯಗಳನ್ನು ನಡೆಸುವುದು, ಅಂತಹವರಿಗೆ ಬೆಂಬಲ ನೀಡುವುದರ ಮೂಲಕವೇ ಪರಿಚಿತವಾಗಿತ್ತು‌. ಇದೀಗ ಶಿವಾಜಿ ಮಹಾರಾಜರಿಗೂ ಅಪಮಾನಿಸುವ ಮೂಲಕ ಇದೊಂದು ದೇಶ ವಿರೋಧಿಗಳನ್ನು ಸಾಗುತ್ತಿರುವ ಸಂಸ್ಥೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.

Tags

Related Articles

Close