ಪ್ರಧಾನಿ ನರೇಂದ್ರ ಮೋದಿಯಯವರು ಏನಾದರೂ ಪ್ಲಾನ್ ಮಾಡಿದ್ದಾರೆ ಎಂದರೆ ಅದರಲ್ಲಿ ಏನೋ ಭಾರತದ ಭವಿಷ್ಯ ಅಡಗಿದೆ ಎಂದರ್ಥ!! ಅಥವಾ ವಿದೇಶ ಪ್ರವಾಸ ಮಾಡುತ್ತಿದ್ದಾರೆ ಎಂದರೆ ಅಲ್ಲಿ ಏನಾದರೂ ಭಾರತಕ್ಕೆ ಪ್ರಯೋಜನವಾಗುತ್ತದೆ ಎನ್ನುವ ಉದ್ಧೇಶವನ್ನಿಟ್ಟುಕೊಂಡು ವಿದೇಶ ಪ್ರವಾಸವನ್ನು ಮಾಡುತ್ತಾರೆ.!! ಆದರೆ ಕೆಲವರು ಅದನ್ನೇ ಅಸ್ತ್ರವಾಗಿಟ್ಟುಕೊಂಡು ಮೋದಿ ಟೈಮ್ಪಾಸ್ ಮಾಡೋದಕ್ಕೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ ಹಾಗೆ ಹೀಗೆ ಅನ್ನೋ ರೀತಿ ಆಗಾಗ ತಗಾದೆಯನ್ನು ಎತ್ತುತ್ತಾರೆ!! ಆದರೆ ಒಮ್ಮೆ ಮೋದಿಜೀಯ ವಿದೇಶ ಪ್ರವಾಸದ ಪ್ರಯೋಜನವನ್ನು ನೋಡಿದಲ್ಲಿ ವಿರೋಧ ಪಕ್ಷವೂ ಒಂದು ಬಾರಿ ಮೂಗಿನ ಮೇಲೆ ಕೈ ಇಡುವುದಂತೂ ಪಕ್ಕ!!
ದೋಕಲಂ ವಿಚಾರದಲ್ಲಿ ಭಾರತದ ಜೊತೆಗೆ ಕಾಲ್ಕೆರೆದು ಯುದ್ಧಕ್ಕೆ ಬಂದು, ಕೊನೆಗೆ ಯುದ್ಧ ಮಾಡಿದ್ರೆ ಮಣ್ಣು ಮುಕ್ಕುತ್ತೇವೆ ಎಂದು ಕಾಲಿಗೆ ಬುದ್ಧಿ ಹೇಳಿ ಓಡಿ ಹೋಗಿದ್ದ ಚೀನಾದ ಬುದ್ಧಿ ನೆಟ್ಟಗಾದಂತೆ ಕಂಡುಬರುತ್ತಿಲ್ಲ. ಪದೇ ಪದೇ ತಗಾದೆಯನ್ನು ಎತ್ತುತ್ತನೇ ಇದೆ!! ಅಂದು ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ನೆಹರೂವಿನ ಹೇಡಿತನವನ್ನು ಕಂಡ ಚೀನೀಯರು ಭಾರತವನ್ನು ಯಾವ ರೀತಿಯಾದರೂ ಬಗ್ಗು ಬಡಿಯಬಹುದು ಎಂಬುವುದನ್ನು ಮನಗಂಡಿದ್ದರು… ಆದರೆ ಇಂದು ಮೋದಿ ಯುಗ ಮೋದಿ ಹೆಸರು ಕೇಳಿದರೆ ಸಾಕು… ಚೀನೀಯರು ಏನು ಇಡೀ ವಿಶ್ವವೇ ಗಢಗಢ ನಡುತ್ತದೆ.. ಮೋದಿಜೀಯ ಒಂದೊಂದು ನಿರ್ಧಾರ ಕೂಡ ಇಡೀ ವಿಶ್ವವನ್ನೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ!!ಅದೆಷ್ಟೋ ಮುಸ್ಲಿಮ್ ರಾಷ್ಟಗಳು ಭಾರತವನ್ನು ಕಂಡರೆ ಉರಿಯುತ್ತಿತ್ತು!! ಆದರೆ ಯಾವಾಗ ಮೋದಿಜೀಯವರು ಅಧಿಕಾರದ ಚುಕ್ಕಾಣಿ ಹಿಡಿದರೋ ಇಡೀ ವಿಶ್ವವೇ ಇವರಿಗೆ ತಲೆಬಾಗಿದೆ ಅಂತಾ ಹೇಳಬಹುದು!! ಆದರೆ ಚೀನಾದ ಬುದ್ಧಿ ಮಾತ್ರ ನೆಟ್ಟಗಾಗುವಂತೆ ಕಾಣುತ್ತಿಲ್ಲ!! ಈ ಬಾರಿ ಶತ್ರು ರಾಷ್ಟ್ರ ಚೀನಾಕ್ಕೆ ಮೋದಿ ಭಯ ಹುಟ್ಟಿಸಿದ್ದು ಹೇಗೆ ಗೊತ್ತಾ?
ಸೈಶೆಲ್ನಲ್ಲಿ ಸೇನಾ ನೆಲೆ ನಿರ್ಮಾಣ:
ಚೀನಾಕ್ಕೆ ಪೆಟ್ಟುಕೊಡಲು, ಚೀನಾಕ್ಕೆ ಬುದ್ಧಿ ಕಲಿಸುವ ಉದ್ದೇಶದಿಂದ ಹಿಂದೂ ಮಹಾಸಾಗರದಲ್ಲಿರುವ ಸೈಶೆಲ್ ಎನ್ನುವ ಸಣ್ಣ ದೀಪದಲ್ಲಿ ಭಾರತೀಯ ಸೇನಾ ನೆಲೆಯನ್ನು ನಿರ್ಮಿಸಿದ್ದಾರೆ. ಇದರಿಂದ ಚೀನಾಕ್ಕೆ ಎಚ್ಚರಿಕೆ ಕೊಟ್ಟಂತಾಗಿದೆ.!! ಹೀಗಾಗಿ ಚೀನಾ ತನ್ನ ಬಾಲವನ್ನು ಅಡಿಗೆ ಹಾಕಿ ಕುಳಿತಂತೆ ಕಾಣುತ್ತದೆ!!
ಮಾರಿಷ್ನಲ್ಲಿ ಸೈನ್ಯ ನೆಲೆ
ಚೀನಾವನ್ನು ಮಕಾಡೆ ಮಲಗಿಸುವ ಉದ್ದೇಶದಿಂದ ಮೋದಿಯವರು ಮಾರಿಷಸ್’ನಲ್ಲಿ ಭಾರತದ ಸೈನ್ಯ ನೆಲೆಯನ್ನು ನಿರ್ಮಿಸಿದ್ದಾರೆ.
ಇರಾನ್ನಲ್ಲಿ ಬಂದರು ನಿರ್ಮಾಣ:
ಪಾಕಿಸ್ತಾನದ ಸಹಾಯವಿಲ್ಲದೆ ಇರಾನಿನಲ್ಲಿ ಬಂದರು ನಿರ್ಮಿಸಿ ಪಾಕಿಸ್ತಾನ ಮತ್ತು ಚೀನಾ ಎರಡೂ ದೇಶಗಳಿಗೂ ಎಚ್ಚರಿಕೆ ಕೊಟ್ಟಿದ್ದಾರೆ. ಪಾಕಿಸ್ತಾನದ ಸಹಾಯವಿಲ್ಲದೇ ಇರಾನಿನಲ್ಲಿ ಬಂದರು ನಿರ್ಮಿಸಿರುವುದರಿಂದ ವಾಣಿಜ್ಯ ವ್ಯವಹಾರಕ್ಕೆ ತುಂಬಾ ಅನುಕೂಲವಾಗಿದೆ.
ಸೇನಾ ನೆಲೆ ಸ್ಥಾಪನೆಗೆ ಓಮನ್ ಗ್ರೀನ್ ಸಿಗ್ನಲ್!!
ಮೊನ್ನೆ ಮೊನ್ನೆ ಮೋದಿಯವರು ಅಬುದಾಬಿ, ಪ್ಯಾಲೇಸ್ತೀನ್ ಮತ್ತು ಓಮನ್ ಪ್ರವಾಸ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಆಗ ಓಮನ್ ಭೇಟಿಯ ವೇಳೆಯಲ್ಲಿ ಅಲ್ಲಿ ಭಾರತದ ಸೇನಾ ನೆಲೆಯನ್ನು ನಿರ್ಮಿಸಲು ಓಮನ್ ಒಪ್ಪಿಗೆ ನೀಡಿದೆ. ಮೋದಿಯವರ ಪ್ರವಾಸದ ಕುರಿತು ಮಾತನಾಡುವವರೇ ನೋಡಿಲ್ಲಿ ಯ ಆವ ಕಾರಣಕ್ಕಾಗಿ ಮೋದೀಜೀ ವಿದೇಶ ಪ್ರವಾಸವನ್ನು ಮಾಡುತ್ತಾರೆ ಎಂದು!!
ಶ್ರೀಲಂಕಾದಲ್ಲಿ ಟ್ರಿನ್ಕಮಾಲಿ ಬಂದರು ನಿರ್ಮಾಣ!!
ಮನಮೋಹನ್ ಸಿಂಗರ ಆಢಳಿತಾವಧಿಯಲ್ಲಿ ಚೀನಾ ಶ್ರೀಲಂಕಾವನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ತಕ್ಷಣ ಮಾಡಿದ್ದೇನು ಗೊತ್ತಾ? ಭಾರತದ ಗಡಿಭಾಗದಲ್ಲಿರುವ ಮತ್ತು ಭಾರತದ ಅಕ್ಕ ಪಕ್ಕದ ರಾಷ್ಟ್ರಗಳ ಜೊತೆ ಸಂಭಂದವನ್ನು ಗಟ್ಟಿ ಮಾಡಿಕೊಳ್ಳಲು ಶ್ರಮಿಸಿದ್ದರು. ಅದರ ಪರಿಣಾಮವೇ “ಶ್ರೀಲಂಕಾದಲ್ಲಿ ಟ್ರಿನ್ಕಮಾಲಿ ಬಂದರು” ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದೆ.
ಬಾಂಗ್ಲಾ ದೇಶದ ಜೊತೆ ಭಾರತ ಸಂಬಂಧ ಗಟ್ಟಿಗೊಳಿಸಿದ ಮೋದಿ!!
ಮೊದಲು ಚೀನಾ ಬಾಂಗ್ಲಾದೇಶವನ್ನು ತನ್ನೆಡೆ ಸೆಳೆದುಕೊಂಡಿತ್ತು. ಹಾಗೂ ಚೀನಾ ಬಾಂಗ್ಲಾ ದೇಶದಲ್ಲಿ ಬಂದರು ನಿರ್ಮಾಣ ಮಾಡುವ ತಯಾರಿಯಲ್ಲಿತ್ತು. ಇದರಿಂದ ಭಾರತಕ್ಕೆ ಪೆಟ್ಟು ಕೊಡುಲು ನಿರ್ಧರಿಸಿತ್ತು. ಆದರೆ ಮೋದಿಯವರು ಬಾಂಗ್ಲಾದೇಶದ ಜೊತೆಗೆ ಸಂಭಂದವನ್ನು ಎಷ್ಟು ವೃದ್ಧಿಸಿದ್ದಾರೆಂದರೆ, ಬಾಂಗ್ಲಾದೇಶ ಚೀನಾದ ಜೊತೆ ಮಾಡಿಕೊಂಡಿದ್ದ ಬಂದರಿನ ಒಪ್ಪಂದವನ್ನು ಮುರಿದುಕೊಂಡಿತು. ಹಾಗೂ ಅದೇ ಬಂದರು ನಿರ್ಮಾಣ ಮಾಡಲು ಭಾರತದೊಡನೆ ಒಪ್ಪಂದ ಮಾಡಿಕೊಂಡಿದೆ.
ಅಂಡಮಾನ್ ನಿಕೋಬಾರ್ನಲ್ಲಿ ರಕ್ಷನಾ ನೆಲೆ ನಿರ್ಮಾಣದ ತಯಾರಿ!!
ಚೀನಾವನ್ನು ಒಳಗಿಂದೊಳಗೆ ಬೆವರಿಸಲು ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಮೂಲ ಸೌಕರ್ಯಗಳನ್ನು ಅತೀ ವೇಗದಲ್ಲಿ ನಿರ್ಮಿಸಿ ಭಾರತದ ಅತೀ ದೊಡ್ಡ ರಕ್ಷಣಾ ನೆಲೆ ನಿರ್ಮಾಣದ ತಯಾರಿ ನಡೆದಿದೆ.
ಬೃಹತ್ ಹೆದ್ದಾರಿ ನಿರ್ಮಾಣ
ನಮ್ಮ ಸುತ್ತಲಿನ ರಾಷ್ಟ್ರಗಳನ್ನು ಚೀನಾ ತನ್ನೆಡಗೆ ಸೆಳೆದುಕೊಂಡಿತ್ತು. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ತಕ್ಷಣ ಮಾಡಿದ ಮೊದಲ ಕೆಲಸವೆಂದರೆ ನಮ್ಮ ಸುತ್ತಲಿನ ರಾಷ್ಟ್ರಗಳನ್ನು ನಮ್ಮೆಡೆ ಸೆಳೆದುಕೊಳ್ಳುವ ಕೆಲಸ. ಅದರಂತೆ ಅದು ಯಶಸ್ವಿಯೂ ಆಗಿದೆ. ಹೀಗಾಗಿ ಈಗ ಭಾರತದೊಂದಿಗೆ ಬಾಂಗ್ಲಾದೇಶ, ಬೂತಾನ್, ನೇಪಾಳ ಸಂಪರ್ಕಿಸುವ ಬೃಹತ್ ಹೆದ್ದಾರಿ ನಿರ್ಮಾಣವಾಗುತ್ತಿದೆ. ಅದರಂತೆ ಮಯನ್ಮಾರ್ ಮತ್ತು ಥೈಲ್ಯಾಂಡ್ ದೇಶಗಳೊಡನೆ ಅಸ್ಸಾಂ ಮುಖಾಂತರ ಸಂಪರ್ಕ ಸಾಧಿಸುವ ಪ್ರಯತ್ನ ನಡೆದಿದೆ.
ವಿಯೆಟ್ನಾಂನಲ್ಲಿ ಸೇನಾ ನೆಲೆ ಸ್ಥಾಪನೆ!!
ಚೀನಾದ ಮೇಲೆ ಹದ್ದಿನ ಕಣ್ಣಿಡಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಅದೇನೆಂದರೆ ಚೀನಾದ ಮೇಲೆ ನಿಗಾ ಇಡಲು ವಿಯೆಟ್ನಾಂ ನಲ್ಲಿ ಸೇನಾ ನೆಲೆ ಸ್ಥಾಪಿಸಲಾಗಿದೆ.
ಇದಕ್ಕೆಲ್ಲಾ ಮೋದಿಜೀ ಜೊತೆ ಕೈಜೊಡಿಸಿರುವುದು ಭಾರತದ ಮಿತ್ರರಾಷ್ಟ್ರಗಳು!! ಅದರಲ್ಲಿ ಮುಖ್ಯವಾಗಿ ಇದಕ್ಕೆಲ್ಲಾ ಸಹಾಯ ಮಾಡಿರುವುದು ಫ್ರಾನ್ಸ್!! ಚೀನಾದ ಸೊಕ್ಕು ಮುರಿಯಲು ನಾವೂ ತಯಾರಾಗಿದೇವೆ ಎಂದು ಭಾರತದ ಮಿತ್ರ ರಾಷ್ಟ್ರಗಳೆಲ್ಲಾ ತಯಾರಾಗಿ ನಿಂತಿದೆ!! ಇವುಗಳಲ್ಲದೆ ಮೋದಿಯವರ ನೇತೃತ್ವದ ಸರ್ಕಾರ ಫ್ರಾನ್ಸ್ ನ ಜೊತೆಗೂಡಿ ಚೀನಾದ ಸೊಕ್ಕು ಮುರಿಯಲು ತಯಾರಿ ನಡೆಸಿವೆ. ಮೋದಿಯವರು ಇಂತಹ ರಣತಂತ್ರ ರೂಪಿಸಿ ಚೀನಾವನ್ನು ಮಖಾಡೆ ಮಲಗಿಸುವ ತಯಾರಿ ನಡೆಸಿದ್ದಾರೆ.
ಮೋದಿಯವರು ಫ್ರಾನ್ಸ್ ನ ಜೊತೆಗೂಡಿ ಚೀನಾಕ್ಕೆ ಸೆಡ್ಡು ಹೊಡೆಯಲು ತಯಾರಿ ನಡೆಸಿದ್ದಾರೆ!! ಪ್ರಮುಖವಾಗಿ ಫ್ರಾನ್ಸ್ ಯಾತಕ್ಕಾಗಿ ಈ ಬಾರಿ ಚೀನಾದ ಜೊತೆ ಕುಪಿತಗೊಂಡಿದೆ ಎಂದರೆ ಚೀನಾ ಫ್ರಾನ್ಸ್ ಗೆ ಘಾಸಿ ಮಾಡಿದೆ. ಇದರಿಂದ ಫ್ರಾನ್ಸ್ ಸಿಡಿದೆದ್ದು ಭಾರತದೊಂದಿಗೆ ಕೈಜೋಡಿಸಲು ನಿರ್ಧರಿಸಿದೆ.!! ಸುಯೆಜ್ ಜಲಸಂಧಿಯಿಂದ ಮಲಾಕ್ಕಾ ಜಲಸಂಧಿಯವರೆಗೆ ಚೀನಾ ತನ್ನ ಹಿಡಿತ ಸಾಧಿಸಿ ಪೂರ್ವ ಆಫ್ರಿಕಾದ ಡಿಜಿಬೌಟಿಯಲ್ಲಿ ನೌಕಾ ನೆಲೆಯನ್ನು ಸ್ಥಾಪಿಸಿದೆ. ಹಾಗಾಗಿ ಆ ರಾಷ್ಟ್ರದ ಮೇಲೆ ಹಿಡಿತ ಹೊಂದಿದ್ದ ಫ್ರಾನ್ಸ್ ಇದರಿಂದ ಬೇಸರಗೊಂಡು ಚೀನಾಗೆ ಸೆಡ್ಡು ಹೊಡೆಯಲು ಭಾರತದೊಂದಿಗೆ ಕೈಜೋಡಿಸಿದೆ.. ಚೀನಾ ಮತ್ತು ಪಾಕಿಸ್ತಾನದೊಂದಿಗೆ ಹೀಗೆ ಎಲ್ಲಾ ರಾಷ್ಟ್ರಗಳು ತಿರುಗಿ ಬಿದ್ದರೆ ಪಾಕ್ ಚೀನಾ ನಿರ್ನಾಮವಾಗುವುದು ಖಂಡಿತ!! ಮೋದಿಜೀಯ ಚೀನಾದ ಸೊಕ್ಕು ಅಡಗಿಸುವ ಈ ನಿರ್ಧಾರ ನಿಜವಾಗಿಯೂ ಗ್ರೇಟ್!!
ಪವಿತ್ರ