ಪ್ರಚಲಿತ

ಒಬ್ಬ ಮುಸಲ್ಮಾನನಾಗಿಯೇ ಹೇಳುತ್ತಿದ್ದೇನೆ! ಹಿಂದುಗಳು ಸಹಿಷ್ಣುಗಳಾಗಿರದಿದ್ದರೆ, ನಮಗೆ ಭಾರತದಲ್ಲಿ ಒಂದಗುಲ ಭೂಮಿಯೂ ಸಿಗುತ್ತಿರಲಿಲ್ಲ. ಯಾಕೆ ಗೊತ್ತೇ?!

ಶಾಂತವಾಗಿ, ಸದಾ ಸಂತುಷ್ಟವಾಗಿ ಎಲ್ಲರನ್ನು ಪ್ರೀತಿಸುತ್ತ ಸಹಿಷ್ಣುವಾಗಿದ್ದ ಭಾರತದ ಮೇಲೆ ಘಜ್ನಿ, ಘೋರಿಯರು ದಾಳಿ ಮಾಡಿದರು. ಉದ್ದೇಶ ಲೂಟಿಗೈಯ್ಯುವುದೇ ಆಗಿತ್ತು. ಆದರೆ ಅವರು ಅಷ್ಟಕ್ಕೆ ತೃಪ್ತರಾಗದೆ ಮಹಿಳೆಯರ ಮೇಲೆ ಹೀನಾತಿತವಾಗಿ ಅತ್ಯಾಚಾರ ನಡೆಸಿದರು. ಮಂದಿರ, ಮೂರ್ತಿಗಳನ್ನು ಒಡೆದು ನಾಶಗೈದರು. ಹಿಂದೂ ಧರ್ಮದೆಡೆಗಿನ ತಮ್ಮ ಅಸಹಿಷ್ಣುತೆಯನ್ನು ಚೆನ್ನಾಗಿಯೇ ಪ್ರದರ್ಶಿಸಿದರು. ನಳಂದಾದಂತಹ ಜಗತ್ಪ್ರಸಿದ್ಧ ವಿಶ್ವವಿದ್ಯಾಲಯಕ್ಕೆ ಬೆಂಕಿ ಹಚ್ಚಿ, ಸಾಹಿತ್ಯವನ್ನು ನಾಶ ಮಾಡಿದರು, ಬೌದ್ಧಿಕ ಸಂಪತ್ತನ್ನು ಸೂರೆಗೈದರು.

ಹಿಂದುವಾಗಿ ಹುಟ್ಟಿದ್ದಕ್ಕೆ ತೆರಿಗೆ ಕಟ್ಟಿ ಬದುಕಬೇಕೆಂಬ ವಾತಾವರಣವನ್ನು ಸೃಷ್ಟಿ ಮಾಡಿದರು. ಇಂತಹ ಹೀನಾತೀತ ಘಟನೆಗಳು ಹಿಂದುಗಳಿಗೆ ನೆನಪಾದರೆ ಅವರ ರಕ್ತ ಕೊತಕೊತನೆ ಕುದಿಯುತ್ತದೆ. ಆದರೆ ಮರುಕ್ಷಣವೇ ಅವರು ಶಾಂತರಾಗಿ ಬಿಡುತ್ತಾರೆ. ಯಾಕೆ ಗೊತ್ತಾ? ಹಿಂದಿನವರು ಮಾಡಿದ ತಪ್ಪಿಗೆ, ಇಂದಿನವರು ಹೊಣೆಯಾಗಲ್ಲವೆಂದು ತಮಗೆ ತಾವೇ ಸಮಾಧಾನ ಹೇಳಿಕೊಂಡು ಶಾಂತರಾಗುತ್ತಾರೆ. ಏಕೆಂದರೆ ಅವರು ಸಹಿಷ್ಣುಗಳು.

ಸ್ವಾತಂತ್ರ್ಯಾ ನಂತರ ನಮ್ಮ ಪಠ್ಯದಲ್ಲಿ(Syllabus) ಶಿವಾಜಿ ಮಹಾರಾಜರ, ರಾಣಾ ಪ್ರತಾಪ ಸಿಂಹರ ಕಥೆಗಳನ್ನು ಸೇರಿಸಿದರೆ, ನಮಗೆ ನೋವಾಗುತ್ತದೆಂದು, ಅವರ ಕಥೆಗಳನ್ನು ನಮ್ಮ ಪಠ್ಯದಲ್ಲಿ ಸೇರಿಸಲಿಲ್ಲ. ಆಗಲೂ ಹಿಂದುಗಳು ಸುಮ್ಮನಿದ್ದರು. ಯಾಕೆ ಗೊತ್ತಾ? ಹಿಂದುಗಳು ಸಹಿಷ್ಣುಗಳು.

ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಸಾವರ್ಕರರು ದೇಶ ವಿಭಜನೆಯ ಸಂದರ್ಭದಲ್ಲಿ ಹಿಂದುಗಳ ಪರವಾಗಿ ನಿಂತರೆಂಬ ಒಂದೇ ಒಂದು ಕಾರಣಕ್ಕೆ ಅವರನ್ನು ನಿರ್ಲಕ್ಷಿಸಿ, ನಮ್ಮ ಪಠ್ಯದಲ್ಲಿ ಅವರ ಕಥೆಯನ್ನು ಸೇರಿಸಲಿಲ್ಲ. ಆಗಲೂ ಹಿಂದುಗಳು ಸುಮ್ಮನಿದ್ದರು. ಯಾಕೆ ಗೊತ್ತಾ? ಅವರು ಸಹಿಷ್ಣುಗಳು. ಆದರೆ ವಿಪರ್ಯಾಸವೆಂದರೆ ಅದೇ ವಿಭಜನೆಯ ಸಂದರ್ಭದಲ್ಲಿ ಮುಸಲ್ಮಾನರ ಪರವಾಗಿ ನಿಂತವರನ್ನು ಸೆಕ್ಯಲರ್ ಗಳೆಂದು ಖ್ಯಾತಿ ಪಡೆಸಿದರು. ಆಗಲೂ ಹಿಂದುಗಳು ಸುಮ್ಮನಿದ್ದರು ಯಾಕೆ ಗೊತ್ತಾ? ಹಿಂದುಗಳು ಸಹಿಷ್ಣುಗಳು.

ಹಿಂದುಗಳು ವರ್ಷಕ್ಕೊಂದು ಮೆರವಣಿಗೆ ಮಾಡಿ ವಿಜೃಂಭಣೆಯಿಂದ ಆಚರಿಸುವ ಹಬ್ಬ ಗಣೇಶ ಚತುರ್ಥಿ. ಅದು ಸ್ವಾತಂತ್ರ್ಯೋತ್ಸವದ ಕಾಲದಲ್ಲಿ ಶುರು ಮಾಡಿದ್ದು. ತಮ್ಮೂರಿನಲ್ಲಿ ತಾವು ಗಣೇಶನನ್ನು ಕೂರಿಸಿಕೊಂಡು ಮೆರವಣಿಗೆ ಹೊರಟರೆ, ನಮ್ಮ ಮುಸಲ್ಮಾನರು ತಕರಾರು ತೆಗೆದರು. ಮಸೀದಿಯ ಎದುರಿಗೆ ಗಣೇಶನ ಮೆರವಣಿಗೆ ಮಾಡಬೇಡಿ ಅಂತ ಕ್ಯಾತೆ ತೆಗೆದೆವರು ನಾವೇ. ಕಲ್ಲೆಸೆದು, ಮೂರ್ತಿಯನ್ನು ಭಂಜಿಸಿದರು ನಾವೆ. ದಿನಕ್ಕೆ ನಾಲ್ಕಾರು ಬಾರಿ ಅಜಾನ್ ಕೂಗುವಾಗ ಹಿಂದುಗಳು ಯಾವತ್ತಾದರೂ ಕಲ್ಲೆಸೆದಿದ್ದಾರಾ? ಇಲ್ಲ. ಯಾಕೆ ಗೊತ್ತಾ? ಅವರು ಸಹಿಷ್ಣುಗಳು.

ಭಾರತ-ಪಾಕಿಸ್ತಾನದ ಕ್ರಿಕೆಟ್ ಪಂದ್ಯ ನಡೆದು, ಪಾಕಿಸ್ತಾನ ಗೆದ್ದಾಗ ಒಂದಷ್ಟು ಜನ ಮುಸಲ್ಮಾನರು ಪಟಾಕಿ ಹಚ್ಚಿ ಸಂಭ್ರಮಿಸುತ್ತಾರೆ. ಆಗಲೂ ಹಿಂದುಗಳು ಸ್ಥಿಮಿತ ಕಳೆದುಕೊಳ್ಳಲಿಲ್ಲ. ಒಂದಷ್ಟು ಜನ ನಮ್ಮ ಮುಸಲ್ಮಾನ ಯುವಕರು ಸೇರಿಕೊಂಡು, ಸಂಘಟನೆ ಮಾಡಿಕೊಂಡು ಎಲ್ಲಿ ಅಂದರಲ್ಲಿ ಪಾಕಿಸ್ತಾನದ ಧ್ವಜವನ್ನು ಹಿಡಿದು ಓಡಾಡಿದಾಗ, ಹಿಂದುಗಳಿಗೆ ಸ್ವಲ್ಪ ಕಿರಿಕಿರಿ ಆದರೂ ಕೂಡಾ ಇವತ್ತೋ ನಾಳೆಯೋ ಸರಿಹೋಗಬಹುದೆಂದು ಅವರು ಸಮ್ಮನಾದರು. ಯಾಕೆ ಗೊತ್ತಾ? ಅವರು ಸಹಿಷ್ಣುಗಳು.

ದೇಶಕ್ಕೆ ಸೈನಿಕನಿಗಿಂತಲೂ ಮುಖ್ಯ ಬೇರೊಂದಿಲ್ಲ. ಆದರೆ ಒಂದಷ್ಟು ಜನ ಮತಾಂಧ ಮುಸಲ್ಮಾನರು ಅಮರ್ ಜವಾನ್ ಶಿಲ್ಪವನ್ನು ಒದ್ದು ಕೆಡವಿಬಿಟ್ಟರು. ಅದು ನೆನಪಾದರೆ ಹಿಂದುಗಳ ಹೊಟ್ಟೆ ಉರಿಯುತ್ತದೆ ಅಷ್ಟೇ ಅಲ್ಲ ನನ್ನಂತ ದೇಶಭಕ್ತ ಮುಸಲ್ಮಾನನ ಹೊಟ್ಟೆಯೂ ಉರಿಯುತ್ತದೆ. ಅಂತಹುದನ್ನು ಮಾಡಿದ ದೇಶದ್ರೋಹಿಗಳನ್ನು ಸಂಹಾರ ಮಾಡಿ, ತಾಯಿ ಭಾರತಿಗೆ ಅಭಿಷೇಕ ಮಾಡಬೇಕೆನ್ನುವಷ್ಟು ಕೋಪ ಬರುತ್ತದೆ. ಅಮರ್ ಜವಾನ್ ಶಿಲ್ಪವನ್ನು ಕೆಡವಿದಾಗಲೂ ಹಿಂದುಗಳು ತಮಗೆ ತಾವೇ ಸಮಾಧಾನ ಹೇಳಿಕೊಂಡರು. ಎಲ್ಲಾ ಕಡೆಯೂ ಒಂದಷ್ಟು ಜನ ಕೆಟ್ಟವರಿರುತ್ತಾರೆಂದು ಸಮಾಧಾನ ಹೇಳಿಕೊಂಡು ಸುಮ್ಮನಾದರು. ಯಾಕೆ ಗೊತ್ತಾ? ಅವರು ಸಹಿಷ್ಣುಗಳು.

ಬಾಟ್ಲಾ ಎನ್ ಕೌಂಟರ್ ನಲ್ಲಿ ಪೋಲಿಸರು ಉಗ್ರರನ್ನು ಕೊಂದಾಗ, ಅನೇಕರು ನಮ್ಮವರೆ ಅಂದರೆ ಮುಸಲ್ಮಾನರೆ ಉಗ್ರರ ಬೆಂಬಲಕ್ಕೆ ನಿಂತರು. ಪೋಲಿಸರು ವಿರುದ್ಧ, ಸೈನಿಕರ ವಿರುದ್ಧ ಬೊಗಳಿದರು. ದೇಶಕ್ಕೆ ದೇಶವನ್ನೇ ದೂಷಿಸಿದರು. ಆಗಲೂ ಹಿಂದುಗಳು ಸುಮ್ಮನಿದ್ದರು. ಯಾಕೆ ಗೊತ್ತಾ? ಅವರು ಸಹಿಷ್ಣುಗಳು.

ಕೆಲ ಮುಸಲ್ಮಾನರು ಸಂಸತ್ತಿನ ಮೇಲೆ ದಾಳಿ ಮಾಡಿ ಅನೇಕ ಅಮಾಯಕ ಜನರ ಸಾವಿಗೆ ಕಾರಣನಾದ ಪಾಪಿ ಅಫ್ಜಲ್ ನ ಪರ ನಿಂತು, ಸರ್ಕಾರದ ನಿಯ್ಯತ್ತನ್ನೇ ಪ್ರಶ್ನಿಸಿದರು. ಆಗಲೂ ಹಿಂದುಗಳು ಸುಮ್ಮನಿದ್ದರು. ಯಾಕೆ ಗೊತ್ತಾ? ಅವರು ಸಹಿಷ್ಣುಗಳು.

ಕೆಲ ಮುಸಲ್ಮಾನರು ಉಗ್ರ ಯಾಕೂಬ್ ಮೆನನ್ ನ ಪರ ನಿಂತು ಅವನಿಗೆ ಗಲ್ಲು ಶಿಕ್ಷೆಯಾಗಬಾರದೆಂದು, ಸಹಿ ಸಂಗ್ರಹ ಅಭಿಯಾನ ನಡೆಸಿದರು. ಆ ಉಗ್ರನನ್ನು ಗಲ್ಲಿಗೇರಿಸಿದಾಗ, ಅವನ ಅಂತ್ಯ ಸಂಸ್ಕಾರಕ್ಕೆ ಸಮಾರು 10,000 ಜನ ಮುಸಲ್ಮಾನರು ಸೇರಿಬಿಟ್ಟರು. ಮತ್ತೆ ಸರ್ಕಾರವನ್ನು ದೂಷಿಸಿದರು. ಅದೇ ಮುಂಬೈನಲ್ಲಿ, ಕಾಶ್ಮೀರದಲ್ಲಿ ಭಯೋತ್ಪಾಕರ ದಾಳಿಗೆ ಅಮಾಯಕರು ಬಲಿಯಾದಾಗ, ಭಯೋತ್ಪಾದಕರಿಗೆ ಧರ್ಮವಿಲ್ಲವೆಂದು ಬೊಗಳೆ ಬಿಟ್ಟೆವು. ಆಗಲೂ ಹಿಂದುಗಳು ಸುಮ್ಮನಿದ್ದರು. ಯಾಕೆ ಗೊತ್ತಾ? ಅವರು ಸಹಿಷ್ಣುಗಳು.

ದೇಶದ್ರೋಹಿ, ಮತಾಂಧ ಓವೈಸಿ ಹೈದಾರಾಬಾದಿನಲ್ಲಿ ನಿಂತು ಭಾಷಣ ಮಾಡುತ್ತಾ ಹೇಳ್ತಾನೆ. 15 ನಿಮಿಷ ಪೋಲಿಸರು ಸುಮ್ಮನಿದ್ದರೆ, ನೂರು ಕೋಟಿ ಹಿಂದುಗಳನ್ನು ಇಲ್ಲವಾಗಿಸುತ್ತೇನೆಂದು ಹೇಳ್ತಾನೆ. ಆಗಲೂ ಹಿಂದುಗಳು ಸುಮ್ಮನಿದ್ದರು. ಘಜ್ನಿ, ಘೋರಿಯಂತವರನ್ನೇ ಎದುರಿಸಿದ ಹಿಂದುಗಳಿಗೆ ಓವೈಸಿ ಯಾವ ಲೆಕ್ಕ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಂಡರು. ಯಾಕೆ ಗೊತ್ತಾ? ಅವರು ಸಹಿಷ್ಣುಗಳು.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ(POK) ಬಿಡಿ, ಶ್ರೀನಗರದಲ್ಲಿ ಭಾರತದ ಧ್ವಜ ಹಾರಿಸಿ ನೋಡೋಣ ಎಂಬ ಸವಾಲು ಹಾಕಿದಾಗಲೂ ಹಿಂದುಗಳು ಸುಮ್ಮನಾದ್ದರು. ಹಿಂದೆ ಗಿಲಾನಿ, ಮಹಮ್ಮದ್ ಜಿನ್ನಾ ಕೂಡಾ ಇವನ ರೀತಿಯೇ ಇದ್ದರು. ಹೋಗಲಿಬಿಡಿ ಈ ಫಾರುಕ್ ಅಬ್ದುಲ್ ಅವರಿಗೆ ಹುಟ್ಟಿರಬೇಕು. ಹಾಗಾಗಿ ದೇಶದ್ರೋಹಿಗಳ ರೀತಿಯಲ್ಲಿ ಮಾತನಾಡುತ್ತಿದ್ದಾನೆಂದು ಹಿಂದುಗಳು ಸುಮ್ಮನಾದರು. ಯಾಕೆ ಗೊತ್ತಾ? ಅವರು ಸಹಿಷ್ಣುಗಳು.

ಭಾರತದ ಯಾವೊಬ್ಬ ಮುಸ್ಲಿಮನೂ ಐಸಿಸ್ ನ್ನು ವಿರುದ್ಧ ಪ್ರತಿಭಟಿಸಿಲ್ಲ! ಆದರೆ ಕೋಟ್ಯಾಂತರ ಹಿಂದುಗಳೇ RSSನ್ನು ವಿರೋಧಿಸುತ್ತಾರೆ! ಆದರೂ ಹಿಂದುಗಳು ಅಸಹಿಷ್ಣುಗಳಾ?

ಯಾವೊಬ್ಬ ಮುಸ್ಲಿಮನೂ ಹಿಂದುಗಳಿಗೋಸ್ಕರ ದೀಪಾವಳಿ ಅಥವಾ ಹೋಳಿ ಆಯೋಜಿಸುವುದಿಲ್ಲ! ಅದರೆ ಮುಸ್ಲಿಮರಿಗಾಗಿ ಹಿಂದುಗಳು ಇಫ್ತಾರ್ ಕೂಟವನ್ನು ಏರ್ಪಡಿಸುತ್ತಾರೆ! ಆದರೂ ಹಿಂದುಗಳು ಅಸಹಿಷ್ಣುಗಳಾ?

ಕಾಶ್ಮೀರದಲ್ಲಿ ಭಾರತದ ಭಾವುಟವನ್ನು ಮುಸ್ಲಿಮರು ಸುಡುತ್ತಾರೆ ಆದರೆ ಪಾಕಿಸ್ತಾನದ ಭಾವುಟ ಸುಡುವ ಯಾವೊಬ್ಬ ಮುಸ್ಲಿಮನು ಭಾರತದಲ್ಲಿ ಕಾಣಸಿಗುವುದಿಲ್ಲ! ಆದರೂ ಹಿಂದುಗಳು ಸುಮ್ಮನಿರುತ್ತಾರೆ. ಇಷ್ಟಾದರೂ ಹಿಂದುಗಳು ಅಸಹಿಷ್ಣುಗಳಾ?

ಹಿಂದುಗಳು ಮಸೀದಿ,ದರ್ಗಾಗಳಿಗೆ ಹೋದರೆ ಮುಸ್ಲಿಮರ ಟೋಪಿ ಧರಿಸುತ್ತಾರೆ ! ಆದರೆ ಯಾವ ಮುಸ್ಲಿಮನೂ ಹಿಂದೂ ದೇವಾಲಯಗಳಿಗೆ ಹೋದರೆ ತಿಲಕ ಇಡುವುದಿಲ್ಲ! ಆದರೂ ಹಿಂದುಗಳು ಅಸಹಿಷ್ಣುಗಳಾ?

ಇಸ್ಲಾಂ ಧರ್ಮ ಹುಟ್ಟಿ ಕೇವಲ 1500 ವರ್ಷಗಳಾದವು. ಕ್ರಿಶ್ಚಿಯನ್ ಮತ ಹುಟ್ಟಿ ಕೇವಲ 2012 ವರ್ಷಗಳಾದವು. ಇವೆಲ್ಲಾ ಸ್ಥಾಪನೆಯಾಗುವುದಕ್ಕಿಂತ ಸಹಸ್ರಾರು ವರ್ಷಗಳ ಮುಂಚೆಯೇ ಭಾರತವಿತ್ತು. ಭಾರತದಲ್ಲಿ ನಾಗರೀಕತೆ ಇತ್ತು. ವೇದಗಳಿದ್ದವು. ಆದರೂ ಹಿಂದುಗಳು ಎಲ್ಲಾ ಧರ್ಮಗಳನ್ನು ಒಪ್ಪಿಕೊಳ್ಳುತ್ತಾರೆ. ಯಾಕೆ ಗೊತ್ತಾ? ಹಿಂದುಗಳು ಸಹಿಷ್ಣುಗಳು.

30(A) ಗೆ ಸಂಬಂದಿಸಿದಂತೆ ವಿದ್ಯಾಲಯಗಳಲ್ಲಿ ಭಗವದ್ಗೀತೆ,ರಾಮಾಯಣದ ಬಗ್ಗೆ ಹೇಳುವದನ್ನ,ಕಲಿಸುವದನ್ನ ನಿರ್ಬಂದಿಸಲಾಗಿದೆ. ಹಿಂದೂಸ್ತಾನದಲ್ಲಿ ಹಿಂದುಗಳ ಪವಿತ್ರ ಗ್ರಂಥಗಳನ್ನು ನಿಷೇಧಿಸಿದರೂ ಹಿಂದುಗಳು ಶಾಂತರಾಗಿಯೇ ಇದ್ದಾರೆ. ಅದರೂ ಹಿಂದುಗಳು ಅಸಹಿಷ್ಣುಗಳಾ?

ಮುಸ್ಲಿಂ ಮದರಸಾಗಳಲ್ಲಿ, ಕ್ರಿಶ್ಚಿಯನ್ ಕಾನ್ವೆಂಟುಗಳಲ್ಲಿ ಕುರಾನ್ ಮತ್ತು ಬೈಬಲ್ ಗಳನ್ನು ಬೋದಿಸಬಹುದಾಗಿದೆ.! ಇದನ್ನೆಲ್ಲಾ ಹಿಂದುಗಳು ಯಾವತ್ತಿಗೂ ವಿರೋಧಿಸಲೇ ಇಲ್ಲ. ಆದರೂ ಹಿಂದುಗಳು ಅಸಹಿಷ್ಣುಗಳಾ?

ಹಿಂದೂ ಮಂದಿರ ಮತ್ತು ತೀರ್ಥಸ್ಥಾನಗಳಿಗೆ ಬಂದಂತಹ ದೇಣಿಗೆಯ ಮೇಲೆ ಸರಕಾರಕ್ಕೆ 70% ಅಧಿಕಾರವಿದೆ. ಮಸೀದಿ ಮತ್ತು ಚರ್ಚುಗಳಿಗೆ ಬಂದ ದೇಣಿಗೆ ಅವರವರಿಗೆ ಪೂರ್ಣ ಅಧಿಕಾರ! ! ಅದರ ಜೊತೆ ಮತ್ತಷ್ಟು ಸರಕಾರದ ಅನುದಾನ ಬೇರೆ !! ಇದನ್ನೆಲ್ಲಾ ಹಿಂದುಗಳು ಯಾವತ್ತಿಗೂ ವಿರೋಧಿಸಿಲ್ಲ. ಆದರೂ ಹಿಂದುಗಳು ಅಸಹಿಷ್ಣುಗಳಾ?

ಬಾಬಾ ಅಮರನಾಥ ಯಾತ್ರಿಕರ ಮೇಲೆ ಸರಕಾರಕ್ಕೆ ತೆರಿಗೆ ಕಟ್ಟಬೇಕು. ಅದೇ ಹಜ್ ಯಾತ್ರಿಕರಿಗೆ ಸರಕಾರಿ ಸಬ್ಸಿಡಿ.. ವ್ಹಾ ..ಹೇಗಿದೆ ನೋಡಿ ಹಿಂದುಸ್ಥಾನದ ಹಿಂದುಗಳ ಪರಿಸ್ಥಿತಿ.
ಇಷ್ಟೆಲ್ಲಾ ಅದರೂ ಹಿಂದುಗಳು ಅಸಹಿಷ್ಣುಗಳಾ?

ಹಿಂದುಗಳಿಗೆ ಕೆಲ ಅಡ್ನಾಡಿಗಳು ಜಾತ್ಯಾತೀತತೆಯ ಬಗ್ಗೆ ಪಾಠ ಹೇಳಲು ಬರುತ್ತವೆ. ಅಸಲಿಗೆ ಹಿಂದುಗಳಿಗೆ ಜಾತ್ಯಾತೀತತ ಪಾಠದ ಇಲ್ಲ. ಯಾಕಂದ್ರೆ ಹಿಂದೂಗಳಷ್ಟು ಜಾತ್ಯಾತೀತರು ಯಾರೂ ಇಲ್ಲ. ಆದರೂ ಕೆಲ ಅಡ್ನಾಡಿಗಳು ಬೊಬ್ಬೆ ಹೊಡೆಯುತ್ತಾರೆ. ಯಾಕಂದ್ರೆ ಬೊಬ್ಬೆ ಹೊಡೆಯುವುದರಿಂದ ಅವರಿಗೆ ಎಂಜಲು ಕಾಸು ಸಿಗುತ್ತದೆ.

ಹಿಂದುಗಳಿಗಿಂತಲೂ ಸಹಿಷ್ಣು ಬೇರೊಬ್ಬ ಇಲ್ಲ. ಜಗತ್ತಿನ ಇತಿಹಾಸವನ್ನು ತೆಗೆದು ನೋಡಿ. ಕ್ರಿಶ್ಚಿಯನ್ನರು ಒಂದು ಕೈಯಲ್ಲಿ ಬೈಬಲ್ ಇನ್ನೊಂದು ಕೈಯಲ್ಲಿ ಖಡ್ಗ ಹಿಡಿದು ಇತಿಹಾಸವನ್ನು ರಕ್ತದಿಂದ ತೋಯಿಸಿದ್ದಾರೆ. ಇನ್ನು ಇಸ್ಲಾಂ ಬಗ್ಗೆ ಮತನಾಡುವುದಾದರೆ ಸಧ್ಯದ ಜಗತ್ತಿನ ಪರಿಸ್ಥಿತಿಯನ್ನೊಮ್ಮೆ ಅವಲೋಕನ ಮಾಡಿ ಆಗ ಗೊತ್ತಾಗುತ್ತದೆ.

ಅಸಲಿಗೆ ನಾವೆಲ್ಲ ಅಂದರೆ ಮುಸಲ್ಮಾನರೆಲ್ಲಾ ಹಿಂದುಗಳಿಗೆ ಋಣಿಯಾಗಿರಬೇಕು. ಅವರಷ್ಟು ಸಹಿಷ್ಣುಗಳು ಬೇರೆಲ್ಲೂ ಇಲ್ಲ. ದೇಶಭಕ್ತನಾಗಿ ಭಾರತವನ್ನು ನೋಡಿ, ಮತಾಂಧತೆಯ ದೃಷ್ಟಿಯಲ್ಲಿ ಭಾರತವನ್ನು ನೋಡುವುದಾದರೆ ಅವರೆಲ್ಲಾ ದೇಶದ್ರೋಹಿ ಮುಸಲ್ಮಾನರೆಂದೇ ಪರಿಗಣಿಸಬಹುದು.

ಜಗತ್ತಿನಲ್ಲಿ ಅಸಹಿಷ್ಣುತೆ ಅನ್ನೋದೇನಾದರೂ ಇದ್ರೆ ಅದು ಮುಸಲ್ಮಾನರಿಂದಲೇ ಹೊರತು, ಹಿಂದುಗಳಿಂದಲ್ಲ.
-ಅಶ್ರಫ್ ಅಬ್ಬಾಸ್

Tags

Related Articles

Close