ಪ್ರಚಲಿತ

ಪಾಕ್ ನೆಲದಲ್ಲಿ ಅಪರಿಚಿತರ ಗುಂಡೇಟಿಗೆ ಮತ್ತೋರ್ವ ಉಗ್ರ ಸಾವು

ಅದ್ಯಾರೋ ಅಪರಿಚಿತ ಭಾರತ ಪ್ರೇಮಿ ದೇಶಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ವಿದೇಶಿ ನೆಲದಲ್ಲಿ ಹತ್ಯೆ ಮಾಡಿ, ಮಾರಣ ಹೋಮ ಮಾಡುತ್ತಿದ್ದಾರೆ. ಭಾರತಕ್ಕೆ ಉಪಕಾರಿಯಾಗುವಂತಹ ಟೆರರಿಸ್ಟ್ ಕಿಲ್ಲರ್ ಯಾರು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಆದರೆ ಈ ಅಪರಿಚಿತ ಕಿಲ್ಲರ್‌ಗಳು ಮಾತ್ರ ಭಾರತದ ವಿರುದ್ಧ ನಲವತ್ತು ಮಾಡಿ, ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ ಸೇರಿರುವವರನ್ನು ಹುಡುಕಿ ಹುಡುಕಿ ನಿರ್ಜೀವ ಮಾಡುವ ಕಾಯಕದಲ್ಲಿ ತಲ್ಲೀನರಾಗಿದ್ದಾರೆ.

ಕೆಲ ದಿನಗಳ ಹಿಂದೆ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರನನ್ನು ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನದ ನೆಲದಲ್ಲಿ ಅಪರಿಚಿತರು ಕೊಂದು ಹಾಕಿದ್ದರು. ಈಗಾಗಲೇ ಭಾರತಕ್ಕೆ ಬೇಕಾದ ಹಲವಾರು ಉಗ್ರರನ್ನು ಸದ್ದಿಲ್ಲದೆ ಹತ್ಯೆ ಮಾಡಿ, ಸುದ್ದಿಯಾಗಿದ್ದ ಅಪರಿಚಿತರು ಈಗ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಆ ಮೂಲಕ ಉಗ್ರ ರನ್ನು ಪೋಷಿಸಿ, ಭಾರತದ ವಿರುದ್ಧ ಕೆಲಸ ಮಾಡಲು ತಯಾರಿ ಮಾಡುತ್ತಿರುವ ಪಾಕಿಸ್ತಾನಕ್ಕೆ ಮತ್ತೆ ಚಮಕ್ ನೀಡಿದ್ದಾರೆ.

ಭಾರತಕ್ಕೆ ಬೇಕಾಗಿದ್ದ ಬಹು ಮುಖ್ಯ ಉಗ್ರರಲ್ಲಿ ಒಬ್ಬನಾದ, ಜೈಶ್ -ಇ- ಮೊಹಮ್ಮದ್ ಸಂಘಟನೆಗೆ ಸೇರಿದ, ಈ ಸಂಘಟನೆಯ‌ ಸ್ಥಾಪಕ ಅಜರ್ ಮಸೂದ್ ನ ಬಲಗೈ ಬಂಟ ಮೌಲಾನಾ ರಹೀಂ ಉಲ್ಲಾ ತಾರಿಕ್ ಈಗ ಅಪರಿಚಿತ ಗುಂಡಿಗೆ ಪರಲೋಕ ಸೇರಿರುವುದಾಗಿದೆ.

ಈ ಹತ್ಯೆಯೂ ಸೇರಿದಂತೆ ಒಟ್ಟು ಇಪ್ಪತ್ತು ಮಂದಿ ಭಾರತಕ್ಕೆ ಬೇಕಾದ ಉಗ್ರರನ್ನು ಅಪರಿಚಿತರು ಹತ್ಯೆ ಮಾಡಿದಂತಾಗಿದೆ.

ಹತ್ಯೆಯಾದ ತಾರಿಕ್ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ, ಆತ ರಾತ್ರಿ ಮಸೀದಿಗೆ ತೆರಳುವ ಸಮಯದಲ್ಲಿ ಅಪರಿಚಿತರು ಗುಂಡಿನ ದಾಳಿ ನಡೆಸಿ, ಆತನನ್ನು ಮಟ್ಯಾಶ್ ಮಾಡಿದ್ದಾರೆ. ಈ ಹತ್ಯೆಯನ್ನು ಉದ್ದೇಶಿತ ಹತ್ಯೆ ಎಂದು ಪೊಲೀಸರು ಹೇಳಿದ್ದಾರೆ. ಸತ್ತ ಉಗ್ರ ನಿಂದ ಮೊಬೈಲ್ ಮತ್ತು ಇನ್ನಿತರ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Tags

Related Articles

Close