ಹಾಯ್ ಮಹಿಳಾ ಸಂಘಟನೆಗಳ ಮುಖಂಡರೇ,
ಇತ್ತೀಚೆಗೆ ನಿಮ್ಮ ಮುಖವನ್ನು ಕಾಣದೆ ತುಂಬಾ ದಿನವಾಯ್ತು. ಎಲ್ಲಿದ್ದೀರಿ? ಹೇಗಿದ್ದೀರಿ? ಈ ಮುಂಚೆ ಆ ಹೋರಾಟ ಈ ಹೋರಾಟ ಅಂತ ಸದಾ ಬ್ಯುಸಿ ಆಗಿದ್ದ ನಿಮ್ಮನ್ನು ನೋಡದೆ ತುಂಬಾ ದಿನವಾಯಿತು. ಈ ಮಾತು ಯಾಕೆ ಕೇಳುತ್ತಿದ್ದೇನೆಂದ್ರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಗೋಹತ್ಯೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ನಂದಿನಿ ಎಂಬವರ ಮೇಲೆ ಗೋಭಕ್ಷಕ ಮುಸಲ್ಮಾನರು ಮನಬಂದಂತೆ ಹಲ್ಲೆ ನಡೆಸಿದ್ದರು. ಆದರೆ ಒಬ್ಬಳು ಹೆಣ್ಣುಮಗಳ ಮೇಲೆ ಅನ್ಯಾಯ ನಡೆದಾಗ ನೀವು ಖಂಡಿತಾ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಿತ್ತು. ಆದರೆ ಪ್ರತಿಭಟನೆ ನಡೆಸದೆ ಎಲ್ಲಿ ಹಾಳಾಗಿ ಹೋಗಿದ್ದೀರಿ ಎಂದು ಕೇಳಲೆಂದೇ ಈ ಪತ್ರ ಬರೆಯುತ್ತಿದ್ದೇನೆ..
ಸೀನಿಯರ್ ಟೆಕ್ಕಿ ನಂದಿನಿ ಎಂಬವರು ಅಕ್ರಮವಾಗಿ ನಡೆಯುತ್ತಿದ್ದ ಗೋ ಹತ್ಯೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಗೋಹತ್ಯೆ ನಡೆಯುತ್ತಿದ್ದ ಸ್ಥಳವನ್ನು ಇಬ್ಬರು ಪೇದೆಗಳೊಂದಿಗೆ ತೆರಳುತ್ತಿದ್ದಾಗ ನಂದಿನಿ ಮೇಲೆ ನೂರಕ್ಕೂ ಹೆಚ್ಚು ಮಂದಿ ಮುಸಲ್ಮಾನರು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ನಂದಿನಿಯ ಮೇಲೆ ಇಷ್ಟೆಲ್ಲಾ ಅನ್ಯಾಯ ನಡೆದಿದ್ದರೂ ಒಂಟಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಮುಸಲ್ಮಾನರ ವಿರುದ್ಧ ಕಠಿಣ ಶಿಕ್ಷೆಯಾಗಬೇಕೆಂದು ನೀವು ಯಾಕೆ ಪ್ರತಿಭಟನೆ ನಡೆಸಲಿಲ್ಲ? ಪುರ್ಸೊತ್ತು ಇರಲಿಲ್ಲವೇ ಅಥವಾ ಹಲ್ಲೆಗೊಳಗಾದವರು ಬುರ್ಖಾ ಧರಿಸಿಲ್ಲ ಎಂಬ ಕಾರಣಕ್ಕೆ ಪ್ರತಿಭಟನೆ ನಡೆಸಲಿಲ್ಲವೇ?
ಒಂದು ವೇಳೆ ನಂದಿನಿಯ ಬದಲು ಬುರ್ಕದ ಹೆಂಗಸಿಗೆ ಹಿಂದೂಗಳು ಹೊಡಿದಿದ್ದರೆ ನಿಮ್ಮ ಪ್ರತಿಭಟನೆ ಮುಗಿಲುಮುಟ್ಟಿರುತ್ತಿತ್ತು. ಯಾಕೆ ನೀವು ಹಿಂದೂ ಮಹಿಳೆಯರ ಮೇಲೆ ಹಲ್ಲ ನಡೆದರೆ ಪ್ರತಿಭಟನೆ ನಡೆಸೋದಿಲ್ವಾ? ಅನೇಕ ಮಂದಿ ಮಹಿಳೆಯರು ಹೈನುಗಾರಿಕೆ ನಡೆಸುತ್ತಿದ್ದಾರೆ. ಇಂಥವರ ಹಟ್ಟಿಗೆ ನುಗ್ಗಿ ಹಸುಗಳನ್ನು ಕದಿಯುವ ಮಾಂಸಭಕ್ಷಕರನ್ನು ಬಂಧಿಸಿ ಮಹಿಳೆಯರಿಗೆ ಪರಿಹಾರ ಒದಗಿಸುವಂತೆ ಯಾಕೆ ಪ್ರತಿಭಟನೆ ನಡೆಸುವುದಿಲ್ಲ? ಕಲ್ಲು ಬೀಳುತ್ತದೆಂಬ ಭಯವೇ ಅಥವಾ ದಿಲ್ ಇಲ್ವಾ?
ಶೋಷಣೆ, ಮಹಿಳಾ ಸಬಲೀಕರಣ, ವರದಕ್ಷಿಣೆ ಮುಂತಾದ ವಿಚಾರಗಳಲ್ಲಿ ಪ್ರತಿಭಟನೆ ನಡೆಸುತ್ತಾ ಕಾಲ ಕಳೆಯುವ ಮಹಿಳಾ ಸಂಘಟನೆಗಳು ಹಿಂದೂ ಯುವತಿಯರ ಮೇಲೆ ಮತಾಂಧ ಮುಸ್ಲಿಮರು ಅತ್ಯಾಚಾರ ನಡೆಸಿದರೆ ನೀವು ಪ್ರತಿಭಟನೆ ನಡೆಸುವುದೇ ಇಲ್ಲ. ಈ ರಾಜ್ಯದಲ್ಲಿ ಎಷ್ಟೊಂದು ಮಹಿಳಾ ಸಂಘಟನೆಗಳಿವೆ ನಿಮಗೆ ಖಂಡಿತಾ ನಾಚಿಗೆಯಾಗಬೇಕಿತ್ತು. ಆದರೆ ನೀವು ಯಾವುದಕ್ಕೆ ಪ್ರತಿಭಟನೆ ನಡೆಸಬೇಕಿತ್ತೋ ಅದಕ್ಕೆಲ್ಲಾ ಪ್ರತಿಭಟನೆ ನಡೆಸದೆ ಜಾಣ ಕುರುಡುತನ ಮೆರೆಯುತ್ತಿದ್ದೀರಿ ನಿಮ್ಮನ್ನು ನೋಡಿದಾಗ ಅಯ್ಯೋ ಎನಿಸುತ್ತದೆ.
ಇಂದು ಅದೆಷ್ಟೋ ಸ್ತ್ರೀಶಕ್ತಿ ಗುಂಪುಗಳಿವೆ, ಸ್ತ್ರೀಪರ ಸಂಘಟನೆಗಳಿವೆ. ಮಹಿಳಾ ಹಕ್ಕು ಎಂದು ಯಾವಾಗಲೂ ಹೋರಾಟದಲ್ಲಿ ಕಾಲಕಳೆಯುವ ನಿಮಗೆ ನಂದಿನಿ ಮೇಲೆ ದೌರ್ಜನ್ಯ ನಡೆದರೆ ಒಂದೇ ಒಂದು ಮಹಿಳಾ ಸಂಘಟನೆಗಳಿಗೆ ಪ್ರತಿಭಟನೆ ನಡೆಸಿ ನ್ಯಾಯ ಒದಗಿಸಬೇಕೆಂಬ ಮನಸ್ಸು ಯಾಕೆ ಮೂಡಲಿಲ್ಲ? ಥೂ ನಿಮ್ಮ ಜನ್ಮಕಿಷ್ಟು…
ಪ್ರತಿಭಟನೆ ನಡೆಸಲು ನಿಮಗೆ ಹಣ ಕೊಡಬೇಕೇ? ಹಣ ಕೊಟ್ಟರೆ ಮಾತ್ರ ಪ್ರತಿಭಟನೆ ನಡೆಸುತ್ತೀರಾ? ಯಾಕೆಂದರೆ ನಂದಿನಿ ವಿಷಯದಲ್ಲಿ ನಿಮ್ಮ ಬಾಯಿಗೆ ಬೀಗ
ಜಡಿದಿರುವುದನ್ನು ನೋಡಿದಾಗ ನೀವು ಪ್ರತಿಭಟನೆಗೂ ಫೀಸ್ ಪಡೆಯುತ್ತಿರಬಹುದೆಂಬ ಅನುಮಾನ ವ್ಯಕ್ತವಾಗುತ್ತಿದೆ.
ಮಂಗಳೂರಿನಲ್ಲಿ ಪಬ್ ದಾಳಿ ನಡೆದಾಗ ನೀವು ಎಷ್ಟು ಬೊಬ್ಬೆ ಹೊಡೆದಿದ್ದಿರಿ? ಅಲ್ಲಿ ಹಣದ ಮದದಲ್ಲಿ ತೇಲುತ್ತಿದ್ದ ಮಹಿಳೆಯರು ಕುಡಿದು, ತುಂಡು ಬಟ್ಟೆ ಉಟ್ಟು
ಅರೆಬೆತ್ತಲೆ ನರ್ತನ ನಡೆಸಿದಾಗ ಶ್ರೀರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಿದಾಗ ಆಕಾಶ ಪಾತಾಳ ಬಿರಿಯುವಂತೆ ಪ್ರತಿಭಟನೆ ನಡೆಸಿದ್ದ ಮಹಿಳಾ
ಸಂಘಟನೆಗಳು ಈಗ ಎಲ್ಲಿ ಹಾಳಾಗಿ ಹೋಗಿದೆ?
ಮಂಗಳೂರಿನ ಹೋಂಸ್ಟೇನಲ್ಲಿ ಬರ್ತ್ಡೇ ಪಾರ್ಟಿ ಆಚರಿಸುತ್ತಿದ್ದವರ ಮೇಲೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿದಾಗ ಮಹಿಳೆಯ ಮೇಲೆ ಹಲ್ಲೆ ನಡೆಯಿತು ಎಂದು ನೀವು ಕಿರುಚಿ ಕಿರುಚಿ ಪ್ರತಿಭಟನೆ ನಡೆಸಿದ್ದೀರಿ. ಆದರೆ ನಂದಿನಿ ವಿಷಯದಲ್ಲಿ ಮಾತ್ರ ಯಾಕೆ ಈ ದಿವ್ಯ ಮೌನ?
ಮಹಿಳಾ ಸಂಘಟನೆಗಳಷ್ಟೇ ಅಲ್ಲ, ಇಂದು ಅನೇಕ ಸಂಘಟನೆಗಳೇ ಮೌನವಾಗಿದೆ. ಒಂದು ವೇಳೆ ಇದೇ ರೀತಿಯ ಹಲ್ಲೆ ಬುರ್ಖಾ ಧರಿಸಿದ್ದ ಮಹಿಖೆಯ ಮೇಲೆ ಹಲ್ಲೆ ನಡೆಸಿದ್ದರೆ ಏನಾಗಿರುತ್ತಿತ್ತು? ಮಹಿಳಾ ಆಯೋಗದ ಮುಖಂಡೆಯರು ಎಂದೋ ಬೀದಿಗಿಳಿಯುತ್ತಿದ್ದಿರಿ ಅಲ್ವೇ? ಉಪವಾಸದ ನಾಟಕವಾಡಿ ಗೊಳೋ ಅಂತ ಅಳುತ್ತಿದ್ದಿರಿ. ಪಾದಯಾತ್ರೆ ನಡೆಸಿ ಭಾಷಣ ಹೊಡೆಯುತ್ತಿದ್ದಿರಿ ಅಲ್ವೇ? ನಂದಿನಿ ಮೇಲೆ ಇಷ್ಟೆಲ್ಲಾ ಹಲ್ಲೆ ನಡೆಸಿದ್ದರೂ, ವಿಚಾರವಾದಿಗಳ ಬಾಯಿ ಬಂದ್, ಮುಸ್ಲಿಂ ನಟರಿಗೆ ಅಸಹಿಷ್ಣುತೆ ಭಯವೂ ಕಾಡಿಲ್ಲ, ಕಾಂಗ್ರೆಸಿಗರ ಪಾದಯಾತ್ರೆಯೂ ಕಾಣುತ್ತಿಲ್ಲ. ಮೊಸಲೆ ಕಣ್ಣೀರು ಹಾಕುವ ದೇವೇಗೌಡ್ರಿಗೆ ಪುರ್ಸೊತ್ತೇ ಇಲ್ಲ, ಸೋನಿಯಾ ಹಾಗೂ ರಾಹುಲ್ಗೆ ಅದೊಂದು ವಿಷ್ಯವೇ ಅಲ್ಲ.
ಯಾವುದಕ್ಕೆ ಪ್ರತಿಭಟನೆ ನಡೆಸಬೇಕಿತ್ತೋ ಅದಕ್ಕೆ ಪ್ರತಿಭಟನೆ ನಡೆಸಲು ತಾಖತ್ ಇಲ್ಲದ ಮಹಿಳಾ ಸಂಘಟನೆಗಳ ಮುಖಂಡೆಯರೇ ನಿಮಗೆ ನಿಜವಾಗ್ಲೂ ಮಾನ, ಮರ್ಯಾದೆ, ನೈತಿಕತೆ ಇದ್ದರೆ ನಂದಿನಿ ವಿಷ್ಯದಲ್ಲಿ ಪ್ರತಿಭಟನೆ ನಡೆಸಿ. ಯಾಕೆ ನಿಮಗೆ ತಾಖತ್ ಇಲ್ಲವೇ? ಹೋ ಹಲ್ಲೆ ನಡೆಸಿದವರು ಮುಸ್ಲಿಮರಲ್ವಾ ಎಂಬ ಅನುಕಂಪದಿಂದ ನಿಮ್ಮ ಬಾಯಿ ಬಂದಾಗಿದೆಯಾ? ಥೂ ನಿಮ್ಮ ಜನ್ಮಕ್ಕಿಷ್ಟು… ಇಂಥಾ ಸಂಘಟನೆಗಳು ಇದ್ದರೆಷ್ಟು ಬಿಟ್ಟರೆಷ್ಟು?
ನೀವೂ ಒಂದು ಹುಡುಗಿಯರಲ್ವಾ? ನೂರಾರು ಮಂದಿ ಹಲ್ಲೆ ನಡೆಸಿದರೂ ಇನ್ನೂ ಕೂಡಾ ಬಾಯಿಗೆ ಬೀಗ ಜಡಿಸಿಕೊಂಡು ಕೂತಿದ್ದೀರಲ್ವಾ? ಹಾಗಾದರೆ ನಿಮ್ಮ
ಪ್ರತಿಭಟನೆಗೆ ಯಾವ ಮಾನದಂಡ ಇದೆ? ಸ್ಯಾನಿಟರಿ, ನ್ಯಾಪಿನ್ಗಳ ಮೇಲೆ ಜಿಎಸ್ಟಿ ಹಾಕಲಾಗಿದೆ ಎಂದು ಪ್ರತಿಭಟನೆ ನಡೆಸಿದವರಿಗೆ ನಂದಿನಿ ಹಲ್ಲೆ ಒಂದು
ವಿಷ್ಯವಲ್ವೇ? ಕೆಲಸಕ್ಕೆ ಬಾರದ ಅನೇಕ ವಿಷ್ಯಗಳನ್ನು ತೆಗೆದುಕೊಂಡು ಪ್ರತಿಭಟನೆ ನಡೆಸುವ ಈ ಮಹಿಳಾ ಸಂಘಟನೆಗಳು ನಿಜವಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಯಾಕೆ ಮಾತಾಡುವುದಿಲ್ವಾ?
ವರದಕ್ಷಿಣೆ, ವೇಶ್ಯಾವಾಟಿಕೆ, ಸ್ತ್ರೀ ಭ್ರೂಣಹತ್ಯೆ, ಮರ್ಯಾದಾ ಹತ್ಯೆ, ಅತ್ಯಾಚಾರ, ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ವಿಧವಾ ಪದ್ಧತಿ, ಜಾತಿ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ವೇತನ ತಾರತಮ್ಯ, ದೇವದಾಸಿ ಪದ್ಧತಿ ಮೊದಲಾದ ದೌರ್ಜನ್ಯವನ್ನು ಮಹಿಳೆಯರು ಅನುಭವಿಸುತ್ತಿದ್ದಾರೆ. ಅದೇ ರೀತಿ ನಂದಿನಿ ಎಂಬ ಒಂಟಿಮಹಿಳೆ ಮೇಲೆ ಆಕೆ ಮಹಿಳೆಯೆಂದೂ ನೋಡದೆ ಹಲ್ಲೆ ನಡೆಸಲಾಗಿದೆ. ಆದರೆ ಮಹಿಳಾ ಸಂಘಟನೆಗಳಿಗೆ ಇದೊಂದು ವಿಷ್ಯವೇ ಅಲ್ಲ.
ಮಹಿಳಾ ಸಂಘಟನೆಗಳ ಮುಖಂಡರೇ ನೀವಿಂದು ರಾಜಕೀಯ ಪಕ್ಷಕ್ಕಿಂತಲೂ ಕಡೆಯಾಗಿದ್ದೀರಿ. ನಿಮಗೆ ನಂದಿನಿ ವಿಷಯದಲ್ಲಿ ಪ್ರತಿಭಟನೆ ನಡೆಸುವ ತಾಖತ್ ಇಲ್ಲ ಅಲ್ಲವೇ? ಮಹಿಳೆಯರ ಮೇಲೆ ಹಲ್ಲೆ ನಡೆಸಿದಾಗ ಇದುವರೆಗೂ ಬಾಯಿಮುಚ್ಚಿ ಕುಳಿತಿದ್ದೀರಲ್ವಾ? ನಿಮಗೆ ನಾಚಿಕೆ, ಮಾನ ಮರ್ಯಾದೆ ಇಲ್ವಾ? ನಿಮ್ಮನ್ನು ಮಹಿಳೆಯರು ಎನ್ನುವುದಕ್ಕೆ ನನಗೆ ನಾಚಿಕೆ ಆಗುತ್ತಿದೆ.
ನಿಮ್ಮ ಹಣೆಬರಹ ಏನೆಂದು ಜಸ್ಟ್ ನಂದಿನಿ ವಿಷಯದಲ್ಲಿ ತಿಳಿದೆ. ನಿಮಗೆ ಖಂಡಿತಾ ನಿಮಗೆ ಪತ್ರಬರೆಯಬೇಕೆಂದು ಮನಸ್ಸಿರಲಿಲ್ಲ. ಆದರೆ ನಿಮ್ಮ ದಿವ್ಯ ಮೌನವನ್ನು ಕಂಡು ಕೋಪ ತಾಳಲಾರದೆ ಪತ್ರ ಬರೆದೆ. ಕೊನೆಗೂ ನಿಮ್ಮ ಬಂಡವಾಳವನ್ನು ಬಯಲು ಮಾಡಿದ್ದೀರಿ. ಮುಂದೆಂದಿಗೂ ನಿಮಗೆ ಪತ್ರ ಬರೆಯೋಲ್ಲ…
ಗುಡ್ಬೈ…!!
ಇಂತೀ,
ಜಿ.ಎಂ. ಚಂದ್ರಿಕಾ, ಬೆಂಗಳೂರು