ಪ್ರಚಲಿತ

ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯಿರಿ! ಕನ್ನಡದಲ್ಲಿ ಭಾಷಣ ಆರಂಭಿಸಿದ ಯೋಗಿ ಆದಿತ್ಯನಾಥ್!!

ಹಿಂದುತ್ವದ ಫೈರ್ ಬ್ರಾಂಡ್. ತನ್ನ ಉಗ್ರ ಭಾಷಣಗಳಿಂದಲೇ ಹೆಸರುವಾಸಿಯಾಗಿರುವ ಯೋಗಿ ಆದಿತ್ಯನಾಥ್ ಅದೇ ಚಾರ್ಮ್‍ನಿಂದಲೇ 5 ಬಾರಿ ಸಂಸದರಾಗಿ ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಬೆಂಕಿ ಚೆಂಡು ಎಂದೇ ಪ್ರಖ್ಯಾತರಾಗಿರುವ ಇವರು ಹಿಂದುತ್ವದ ವಿಚಾರಕ್ಕೆ ಬರೋವಾಗ ರಾಜಿಯೇ ಮಾಡಿಕೊಳ್ಳೋದಿಲ್ಲ. ಇಂತಹ ಮಹಾನ್ ವ್ಯಕ್ತಿ ಇಂದು ಕರ್ನಾಟಕದ ಹುಬ್ಬಳ್ಳಿಯಲ್ಲಿ ಅಬ್ಬರಿಸಿದ್ದಾರೆ.

ಹೌದು. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯಲ್ಲಿ ಉತ್ತರ ಪ್ರದೇಶದ
ಮುಖ್ಯಮಂತ್ರಿ, ಹಿಂದೂ ಹೃದಯ ಸಾಮ್ರಾಟ್ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದಾರೆ. ಯೋಗಿ ಬರುತ್ತಾರೆಂದೇ ಸಾವಿರಾರು ಕಾರ್ಯಕರ್ತರು ಈ ರ್ಯಾಲಿಯಲ್ಲಿ ಭಾಗವಹಿದ್ದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಯೋಗಿ…

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರಿವರ್ತನಾ ಯಾತ್ರೆಯಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ್ದಾರೆ. ಕರ್ನಾಟಕದ ಜನತೆ ನನ್ನನ್ನು ಆದರದಿಂದ ಸ್ವಾಗತಿಸಿದ್ದೀರಿ. ಉತ್ತರ ಕರ್ನಾಟಕದ ಜನತೆಗೆ ನನ್ನ ಆದರದ ಧನ್ಯವಾದಗಳು ಎಂದು ಕನ್ನಡದಲ್ಲೇ ಹೇಳಿದರು.

ರಾಮಭಕ್ತ ಹನುಮ ಜನಿಸಿದ ಪುಣ್ಯ ಭೂಮಿ ಕರ್ನಾಟಕ…

ಈ ವೇಳೆ ಕರ್ನಾಟಕವನ್ನು ಹಾಡಿ ಹೊಗಳಿದ ಯೋಗಿ ಆದಿತ್ಯನಾಥ್, “ಇದು ಅಂತಿಂತ ನೆಲ ಅಲ್ಲ. ರಾಮಭಕ್ತ ಹನಮಂತ ಜನಿಸಿದ ಪುಣ್ಯ ನೆಲ. ಈ ನೆಲಕ್ಕೆ ನಾನು ಬಂದಿರೋದು ನಿಜವಾಗಿಯೂ ನನ್ನ ಅಧೃಷ್ಟ. ನನಗೆ ಸಿದ್ದರೂಢಾ ಸ್ವಾಮೀಜೀಗಳ ದರ್ಶನವೂ ಇಲ್ಲಿ ಆಯಿತು. ಅವರ ದರ್ಶನವೇ ನನ್ನ ಜೀವನದ ಪುಣ್ಯ” ಎಂದು ಹೇಳಿದ್ದಾರೆ.

ಹಿಂದೂ ವಿರೋಧಿ ಕಾಂಗ್ರೆಸ್‍ನ್ನು ಕಿತ್ತೊಗೆಯಿರಿ…

ರಾಜ್ಯದಲ್ಲಿ ಹಿಂದೂ ವಿರೋಧಿ ಕೃತ್ಯಗಳು ಮುಗಿಲು ಮುಟ್ಟಿದೆ. ಹಿಂಸೆ ಅತ್ಯಾಚಾರಗಳು ಎಲ್ಲೆಲ್ಲೂ ನಡೆಯುತ್ತಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರ ಕೊಲೆಗಳು ರಾಜಾರೋಷವಾಗಿ ನಡೆಯುತ್ತಿದೆ. ಇದನ್ನು ತಡೆಯುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಾಲು ಸಾಲು ಗೋಹತ್ಯೆಗಳು ನಿರಂತರವಾಗಿ ನಡೆಯುತ್ತಿದ್ದು ಇದರ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬದಲಾಗಿ ಹಿಂದೂ ಕಾರ್ಯಕರ್ತರ ಮೇಲೆಯೇ ಸಾಲು ಸಾಲು ಕೇಸುಗಳನ್ನು ಜಡಿಯಲಾಗುತ್ತಿದೆ.

ಟಿಪ್ಪು ಪೂಜೆ ಬಿಡಿ-ಹನುಮ ಪೂಜೆ ಮಾಡಿ…

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದ್ರೋಹಿ ಟಿಪ್ಪುವಿನ ಪೂಜೆ ಮಾಡುತ್ತಿದೆ. ದೇಶವೇ ದೇಶಪ್ರೇಮಿಗಳ ದಿನಾಚರಣೆಯನ್ನು ಆಚರಿಸುತ್ತಿದ್ದರೆ ಈ ರಾಜ್ಯದ ಮುಖ್ಯಮಂತ್ರಿಗಳು ಮಾತ್ರ ಟಿಪ್ಪು ಜಪದಲ್ಲೇ ಮುಳುಗಿ ಹೋಗಿದ್ದಾರೆ. ಟಿಪ್ಪು ಒಬ್ಬ ಮತಾಂಧ. ಟಿಪ್ಪುವಿನ ಮೇಲೆ ಲಕ್ಷಾಂತರ ಹಿಂದೂಗಳ ಸಿಟ್ಟಿದೆ. ಹೀಗಿರುವಾಗ ಅದೇಗೆ ಮುಖ್ಯಮಂತ್ರಿಗಳು ಆತನ ಜಯಂತಿಯನ್ನು ಆಚರಿಸಿದರೋ ಗೊತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರ ಭಾಷಣ ಕೇಳಿ ನನಗೆ ಆಶ್ಚರ್ಯವಾಗಿತ್ತು ಎಂದು ಖಾರವಾಗಿಯೇ ಹೇಳಿದ್ದಾರೆ. ಈ ನೆಲದಲ್ಲಿ ಹನುಮ ಜನಿಸಿದ್ದಾನೆ. ಹನುಮನ ಜಯಂತಿಯನ್ನು ನೀವು ಎಂದಾದರೂ ಆಚರಿಸಿದ್ದೀರಾ..? ಮೊದಲು ಟಿಪ್ಪು ಜಯಂತಿಯನ್ನು ಬಿಟ್ಟು ಈ ನೆಲಕ್ಕೆ ಕೀರ್ತಿ ತಂದ ಹನುಮನ ಜಯಂತಿಯನ್ನು ಮಾಡಿ ಎಂದು ಆಗ್ರಹಿಸಿದರು.

ಸಾಲ ಮನ್ನಾ ಮಾಡದ ರಾಜ್ಯ ಸರ್ಕಾರ…

ಈ ರಾಜ್ಯ ಕಾಂಗ್ರೆಸ್ ಸರ್ಕಾರ ಸಾಲ ಮನ್ನಾ ಮಾಡಿದ್ದೇವೆ ಎಂದು ಬೊಗಳೆ ಬಿಡುತ್ತಿದ್ದಾರೆ. ಅಸಲಿಗೆ ಇಲ್ಲಿನ ಕಾಗ್ರೆಸ್ ಸರ್ಕಾರ ಸಾಲ ಮನ್ನಾ ಮಾಡೇ ಇಲ್ಲ. ಅದನ್ನು ಯಾರಾದರೂ ಸಾಲ ಮನ್ನಾ ಅಂತಾ ಹೇಳುತ್ತಾರಾ. ನಮ್ಮ ಉತ್ತರ ಪ್ರದೇಶಕ್ಕೆ ಬನ್ನಿ. ನಾವು ಅಧಿಕಾರಕ್ಕೆ ಬಂದ ತಕ್ಷಣ ರಾಜ್ಯದ ಎಲ್ಲಾ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿದ್ದೇವೆ. ಈಗ ಹೇಳಿ ರಾಜ್ಯಕ್ಕೆ ಹಿಂದೂ ವಿರೋಧಿ, ರೈತವಿರೋಧಿ ಕಾಂಗ್ರೆಸ್ ಸರ್ಕಾರ ಬೇಕೋ ಅಥವಾ ಭಾರತೀಯ ಜನತಾ ಪಕ್ಷ ಬೇಕೋ ಎಂದು ಗುಡುಗಿದರು.

ಯೋಗಿ ಆದಿತ್ಯನಾಥ್‍ರ ಮಾತಿಗೆ ನೆರೆದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಜಯಘೋಷ ಮುಗಿಲ ಎತ್ತರಕ್ಕೆ ಹಾರಿಹೋಗಿತ್ತು. ದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗಿದೆ. ಹಾಗೆನೇ ರಾಜ್ಯದಿಂದಲೂ ಕಾಂಗ್ರೆಸ್‍ನ್ನು ಕಿತ್ತೊಗೆಯಿರಿ ಎಂದು ಹೇಳಿದರು. ಒಟ್ಟಿನಲ್ಲಿ ಯೋಗಿ ಆದಿತ್ಯನಾಥರ ಹುಬ್ಬಳ್ಳಿ ಭೇಟಿಯಿಂದ ಕರ್ನಾಟಕವೇ ಹಿಂತಿರುಗಿ ನೋಡಿದ್ದಂತು ಸುಳ್ಳಲ್ಲ.

ಸಿದ್ಧರಾಮಯ್ಯ ಸರಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಯೋಗಿ, ಹಿಂದೂಗಳ ಹತ್ಯೆಯಧ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ! ಅಲ್ಲದೆ, ಕರ್ನಾಟಕಕ್ಕೆ ಭೇಟಿ ಕೊಡುವ ಮುನ್ನ ಕರ್ನಾಟಕ ರಾಜ್ಯ ಸರಕಾರದ ಕರ್ಮಕಾಂಡಗಳ ಕುರಿತು ಚೆನ್ನಾಗಿಯೇ ಅರಿತಿರುವ ಯೋಗಿ, ರಾಜ್ಯ ಕಾಂಗ್ರೆಸ್ ನ ವಿಫಲ ಆಡಳಿತ ನೀತಿ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಅದಲ್ಲದೇ, ರೈತರ ಸಾಲಮನ್ನಾದ ಕುರಿತು ಮಾತನಾಡಿದ ಯೋಗಿ ಆದಿತ್ಯನಾಥ್, ರೈತರ ಸಾಲಮನ್ನಾ ಮಾಡಿರುವುದೆಲ್ಪ ಸುಳ್ಳು, ಕರ್ನಾಟಕ
ಕಾಂಗ್ರೆಸ್ ರೈತರ ಕನಸುಗಳನ್ನು ನುಚ್ಚು ನೂರಾಗಿಸಿದೆ ಎಂದು ಕಿಡಿ ಕಾರಿದರು.

ಉತ್ತರ ಪ್ರದೇಶದಲ್ಲೀಗ ಹಿಂದವೀ ಸಾಮ್ರಾಜ್ಯ! ಯೋಗಿ ಬಂದ ಮೇಲೆ ಪ್ರಜೆಗಳೂ ಯೋಗಿಯಂತೆಯೇ ಸತ್ಯನಿಷ್ಟರಾಗಿದ್ದಾರೆಂಬುದು ಸ್ವತಃ ಯುಪಿಯವರ ಅಂಬೋಣ! ರೈತರಿಂದ ಹಿಡಿದು, ಪ್ರತಿಯೊಬ್ಬ ಪ್ರಜೆಗೂ ತನ್ನ ರಾಜ್ಯದಲ್ಲಿ ಸುಖವಾಗಿ, ನ್ಯಾಯವಾಗಿ ಬದುಕಲು ಅವಕಾಶ ಮಾಡಿಕೊಟ್ಟಿರುವ ಯೋಗಿ ನಿಜಕ್ಕೂ ಉತ್ತರ ಪ್ರದೇಶ ಕಂಡ ಅದ್ಭುತ ಮುಖ್ಯಮಂತ್ರಿಯೇ!

ಮುಂಚೆಯಿಂದಲೂ ಸಹ, ಕರ್ನಾಟಕ ರಾಜ್ಯ ಕಾಂಗ್ರೆಸ್ ನ ಬಗೆಗೆ ಅಸಮಾಧಾನ ಹೊಂದಿರುವ ಯೋಗಿ, ಟಿಪ್ಪು ಜಯಂತಿಯನ್ನು ಕರ್ನಾಟಕ ಕಾಂಗ್ರೆಸ್ ಆಚರಿಸಿದ ಮೇಲಂತೂ ಕೆಂಡಾಮಂಡಲವಾಗಿದ್ದಾರೆ! ಹನುಮ ಮೆಟ್ಟಿದ ನಾಡಿನಲ್ಲಿ ಏನಿದು ಅನಾಚಾರ ಎಂಬ ಅಚ್ಚರಿಯನ್ನು ತೋರ್ಪಡಿಸಿದ ಯೋಗಿ, ರಾಜ್ಯ ಕಾಂಗ್ರೆಸ್ ನ ಮುಸಲ್ಮಾನ ಮತ ಬ್ಯಾಂಕುಗಳ ಅಜೆಂಡಾವನ್ನು ಬಯಲು ಮಾಡಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close