ಪ್ರಚಲಿತ

ಗಂಜಿ ಹುಟ್ಟಿಸಿಕೊಳ್ಳುವ ಭರದಲ್ಲಿ ನಾಲಿಗೆ ಹಿಡಿತ ಕಳೆದುಕೊಂಡ ‘ಭಯಂಕರ ನಟ’

ಪ್ರಧಾನಿ ಮೋದಿ ಅವರು ಏನೇ ಮಾಡಲಿ, ಅದನ್ನು ವಿರೋಧಿಸಿ, ಅವರ ಬಗ್ಗೆ ಅವಹೇಳನ ಮಾಡಿ ತಾವು ಪ್ರಚಾರ ಗಿಟ್ಟಿಸಿಕೊಳ್ಳುವವರು, ತಮ್ಮ ಹೊಟ್ಟೆ ತುಂಬಿ ಸಿ ಕೊಲ್ಲುವ ಗಂಜಿ ಗಿರಾಕಿಗಳಿಗೆ ಭಾರತದಲ್ಲೇನೂ ಕಡಿಮೆ ಇಲ್ಲ. ಇಂತಹ ಎಡಬಿಡಂಗಿಗಳ‌ ಸಾಲಿನಲ್ಲಿ ಭಯಂಕರ ನಟ ‘ಪ್ರಕಾಶ್ ರಾಜ್’ ಕೂಡಾ ಒಬ್ಬರು.

ಪ್ರಧಾನಿ ಮೋದಿ ಅವರ ಪ್ರತಿಯೊಂದು ಕೆಲಸವನ್ನೂ ವ್ಯಂಗ್ಯವಾಡುತ್ತಾ, ಟೀಕಿಸುತ್ತಾ ಇರುವ ಈ ವ್ಯಕ್ತಿಗೆ ಸಾಕಷ್ಟು ಬಾರಿ ಸಾರ್ವಜನಿಕರೇ ತಕ್ಕ ಉತ್ತರ ನೀಡುವ ಮೂಲಕ ಮುಖಭಂಗ ‌ಮಾಡಿದ್ದಾರೆ. ಆದರೂ ಈ ಮನುಷ್ಯನಿಗೆ ಕಿಂಚಿತ್ ಬುದ್ಧಿ ಬಂದಿಲ್ಲ. ಮಾತ್ರವಲ್ಲದೆ ಮೂರೂ ಬಿಟ್ಟವನಾಗಿ ನಾಚಿಕೆ, ಮಾನ ಮರ್ಯಾದೆ ಇಲ್ಲದೆ ಹೋದರೂ ಊರಿಗೆ ದೊಡ್ಡವನು ಎಂಬಂತೆ ಫೋಸ್ ನೀಡುವ ಕೆಲಸವನ್ನು ಈ ಪ್ರಕಾಶ್ ರಾಜ್ ಮಾಡುತ್ತಲೇ ಇರುತ್ತಾರೆ. ಸಾರ್ವಜನಿಕ ವಲಯದಲ್ಲಿ ಇವರಿಗೆ ಸ್ವಲ್ಪವೇ ಸ್ವಲ್ಪ ಬೆಲೆಯೂ ಇಲ್ಲ. ಇವರನ್ನು ಜನರು ಕಾಲ ಕಸದ ಹಾಗೆ ನೋಡುತ್ತಾರೆ. ಜನರು ಇನ್ನೇನು ಇವರನ್ನು ಮರೆತೇ ಬಿಡುತ್ತಾರೆ ಎಂಬುದು ಅರಿವಾದ ತಕ್ಷಣ ಈ ವ್ಯಕ್ತಿ ಪ್ರಚಾರ ಗಿಟ್ಟಿಸಲು ಪ್ರಧಾನಿ ಮೋದಿ ಅವರ ವಿರುದ್ಧ ಬಾಯಿಗೆ ಬಂದ ಹಾಗೆ ಒದರುವುದಕ್ಕೆ ಆರಂಭಿಸುತ್ತಾರೆ ಎನ್ನುವುದು ಹಾಸ್ಯಾಸ್ಪದ.

ಪ್ರಧಾನಿ ಮೋದಿ ಅವರು ದ್ವಾರಕೆಯ ಸಮುದ್ರದಾಳಕ್ಕೆ ಹೋಗಿ ಮುಳುಗಿ ಹೋದ ಕೃಷ್ಣನ ರಾಜಧಾನಿ ದ್ವಾರಕೆಗೆ ಪೂಜೆ ಸಲ್ಲಿಸಿ, ನವಿಲು ಗರಿ ಸಮರ್ಪಿಸಿ ಬಂದಿದ್ದಾರೆ. ದೇವರ ವಿಷಯದಲ್ಲಿ ಪ್ರಧಾನಿ ಮೋದಿ ಅವರ ನಂಬಿಕೆಯ ವಿರುದ್ಧ ಹೇಳಿಕೆ ನೀಡಿ, ಇದನ್ನು ಚುನಾವಣೆಯ ಹಿನ್ನಲೆಯಲ್ಲಿಯೇ ಮಾಡುತ್ತಿದ್ದಾರೆ ಎಂದು ಬಿಂಬಿಸುವ ಪ್ರಯತ್ನವನ್ನು ಈ ಭಯಂಕರ ನಟ ಮಾಡಿದ್ದಾರೆ. ಆ ಮೂಲಕ ತಮ್ಮ ಗಂಜಿ ಹುಟ್ಟಿಸಿಕೊಳ್ಳುವ ಕೆಲಸಕ್ಕೆ ಈ ವ್ಯಕ್ತಿ ಮುಂದಾಗಿದ್ದಾರೆ.

ಹಿಂದೆ ದೇಶಕ್ಕಾಗಿ ಉಪವಾಸ ಮಾಡುವ ನಾಯಕರಿದ್ದರು. ಈಗ ದೇವರ ಹೆಸರು ಹೇಳಿ ಉಪವಾಸ ಮಾಡುವ ನಾಯಕರಿದ್ದಾರೆ ಎಂದು ಪ್ರಧಾನಿ ಮೋದಿ ಅವರ ಭಕ್ತಿಯನ್ನು ವ್ಯಂಗ್ಯವಾಡಿದ್ದಾರೆ. ಜೊತೆಗೆ ಎಲ್ಲಾ ಧರ್ಮದ ಅಂಧ ಭಕ್ತರದ್ದೇ ನನಗೆ ಸಮಸ್ಯೆ. ಅವರೆಲ್ಲಾ ನೀವು ಯಾವ ಪಾರ್ಟಿ ಎಂದು ನನ್ನನ್ನು ಕೇಳುತ್ತಾರೆ. ನಾನು ಕಲಾವಿದನಾಗಿ ಮಾತನಾಡಬೇಕು. ನಾನು ಜನರ ಶ್ರೀಮಂತಿಕೆ ಗಳಿಸಿ ದೇ ದೇ ನೆ ಎಂದೆಲ್ಲಾ ಪುಂಗಿ ಬಿಟ್ಟು ಕೊನೆಗೆ ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಿದ್ದಾರೆ.

ದೇಹಕ್ಕಾದ ಗಾಯ ವಾಸಿಯಾಗುತ್ತದೆ. ದೇಶಕ್ಕಾದ ಗಾಯ ವಾಸಿಯಾಗದು. ನಮ್ಮ ದೇಶದಲ್ಲೊಬ್ಬ ನಾಯಕನಿದ್ದಾನೆ. ಈತ ಜನರನ್ನು ಮಂಗ ಮಾಡುತ್ತಾನೆ. 2019 ರಲ್ಲಿ ಗುಹೆ ಸೇರಿದ. ಈಗ ಕ್ಯಾಮೆರಾ ಹಿಡಿದು ನೀರೊಳಕ್ಕೆ ಸೇರಿದ. ಮುಂದಿನ ಚುನಾವಣೆಗೆ ಚಂದ್ರನ ಮೇಲಿರುತ್ತಾನೆ. ದಿನಕ್ಕೆ ಐದು ಬಟ್ಟೆ ಬದಲಾಯಿಸುತ್ತಾನೆ. ಕರ್ಕಶ ಲೌಡ್ ಸ್ಪೀಕರ್ ಆತ ಎಂದು ಪ್ರಧಾನಿ ಮೋದಿ ಅವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ ಪ್ರಕಾಶ್ ರಾಜ್ ಎಂಬ ನಾಲಾಯಕ್ಕು ನಟ.

ವಂದೇ ಭಾರತ್ ರೈಲಿಗೆ ಈತ ಬಾವುಟ ತೋರಿಸಿದಷ್ಟು ಸ್ಟೇಷನ್ ಮಾಸ್ಟರ್ ಸಹ ತೋರಿಸಿರಲಿಕ್ಕಿಲ್ಲ. ಬಿಜೆಪಿ, ಆರ್‌ಎಸ್‌ಎಸ್ ನಂತಹ ಕಿಡ್ನಾಪಿಂಗ್ ಟೀಮ್ ದೇಶದಲ್ಲಿ ಬೇರಿಲ್ಲ. ಮಾತೆತ್ತಿದರೆ ರಾಮ ಮಂದಿರ, ಹಿಂದೂ ಧರ್ಮ, ಮಸೀದಿ ಎನ್ನುತ್ತಾರೆ. ಎಷ್ಟು ಅಗೆಯುತ್ತೀರಾ. ಮುಂದೆ ಹರಪ್ಪಾ, ಮೊಹೆಂಜೋದಾರೋ ಗೊ ಹೋಗುತ್ತೀರಾ? ಹಿಂದೂ ರಾಷ್ಟ್ರ ಮಾಡಲು ಮಂಗ ಗಳು ತಿರುಗುತ್ತಾ ಇವೆ ಎಂಬುದಾಗಿ ಪ್ರಕಾಶ್ ನಾಲಿಗೆ ಹರಿಬಿಟ್ಟಿದ್ದಾನೆ. ಹಾಗೆಯೇ ಮೋದಿ ಏನು ಕಿಸಿದು ಗುಡ್ಡೆ ಹಾಕಿದ್ದಾನೆ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಕಾಶ್ ರಾಜ್ ಅವರೇ, ಈ ದೇಶದ ಪ್ರಧಾನಿಗೆ ಕನಿಷ್ಟ ಗೌರವವನ್ನೂ ಕೊಡಬೇಕೆಂಬ ಕಾಮನ್ ಸೆನ್ಸ್ ಇಲ್ಲದ ನಿಮ್ಮ ಮಾತುಗಳಿಗೆ ಜನರು ನಕ್ಕಾರೆ ಹೊರತು, ಕಿವಿಯಾಗಲಾರರು. ಜನರ ಕಣ್ಣಿಗೆ ನೀವೊಬ್ಬ ಜೋಕರ್ ಅಷ್ಟೇ. ಯಾವುದೇ ಕೆಲಸ ಇಲ್ಲದ ನೀವು, ದೇಶದ ಅಭಿವೃದ್ಧಿ ಕಂಡು, ದೇಶದ ಗತ ವೈಭವ ಮತ್ತೆ ಪ್ರದರ್ಶನವಾಗುವುದು ಕಂಡು ಹೊಟ್ಟೆ ಕಿಚ್ಚು ಪಡುತ್ತಿದ್ದೀರಿ. ನ್ಯಾಯ ಮಾರ್ಗದಲ್ಲಿ ಅನ್ನ ಹುಟ್ಟಿಸಿಕೊಳ್ಳಲು ಬಾರದ ನೀವು, ಗಂಜಿ ಗಿರಾಕಿಯಾಗಿ ನಾಲಿಗೆ ಉದ್ದ ಮಾಡುತ್ತಿದ್ದೀರಿ. ನಿಮ್ಮ ಯೋಗ್ಯತೆ ಭಾರತ ವಿರೋಧಿಗಳನ್ನು ಬೆಂಬಲಿಸುವುದು ಅಷ್ಟೇ.

ನಿಮ್ಮ ನಾಲಾಯಕ್ಕು ಬುದ್ಧಿಗೆ ಜನರು ಈಗಾಗಲೇ ಹಲವು ಬಾರಿ ಕ್ಯಾಕರಿಸಿ ಥೂ ಎಂದು ಉಗಿದಿದ್ದಾರೆ. ಆದರೂ ನಿಮ್ಮ ಬುದ್ಧಿ ಸರಿಯಾಗಿಲ್ಲ ಎಂದರೆ ನಿಮ್ಮ ಮಾನಸಿಕತೆಯ ಬಗ್ಗೆ ನೀವೇ ಆಲೋಚಿಸಿ. ಇನ್ನಾದರೂ ಸರಿಯಾಗಿ. ಇಲ್ಲದೇ ಹೋದಲ್ಲಿ ಜನರೇ ನಿಮಗೆ ತಕ್ಕ ಶಾಸ್ತಿ ಮಾಡುವ ಕಾಲ ದೂರವಿಲ್ಲ.

ನಾಲಿಗೆ ಇದೆ ಎಂದು ಮಾತನಾಡುವ ಮುನ್ನ ಆಲೋಚಿಸಿ.

Tags

Related Articles

Close