ಪ್ರಚಲಿತ

ಪ್ರಮೋದ್ ಮುತಾಲಿಕ್ ಹುಚ್ಚುನಾಯಿ ಎಂದ ಗೌರಿಪುತ್ರ! ಆರ್.ಎಸ್.ಎಸ್. ಕಾರ್ಯಕರ್ತರು ಕೇಸರಿ ಉಗ್ರರು ಹಾಗೂ ನಕ್ಸಲರಂತೆ!

ಈ ಹಿಂದೂ ವಿರೋಧಿ ನಾಲಾಯಕ್ ದ್ರೋಹಿಗಳಿಗೆ ಅದ್ಯಾವ ಭಾಷೆಯಲ್ಲಿ ಉತ್ತರಿಸಬೇಕೋ ಅರ್ಥವಾಗುತ್ತಿಲ್ಲ. ಬಲಪಂಥೀಯ ಚಿಂತನೆಯುಳ್ಳ ನಾಯಕರು ಕೊಂಚ ಯಡವಟ್ಟು ಮಾಡಿದರೂ ಬೊಬ್ಬಿಡುವ ಈ ಗಂಜಿ ಗಿರಾಕಿಗಳು ಇದೀಗ ಕೆಳಮಟ್ಟದ ಭಾಷೆಗಳನ್ನು ಉಪಯೋಗಿಸುವ ಮೂಲಕ ತಮ್ಮ ಮಾನವನ್ನು ತಾವೇ ಹರಾಜಿಗೆ ಹಾಕಿಕೊಂಡಿವೆ.

ಪ್ರಮೋದ್ ಮುತಾಲಿಕ್ ಹುಚ್ಚುನಾಯಿಯಂತೆ..!

ಅಂದೊಬ್ಬಳು ಇದ್ದಳು. ಆಕೆಯ ಹೆಸರು ಗೌರಿ ಎಂದು. ಆಕೆ ಹಿಂದೂ ಧರ್ಮಕ್ಕೆ ಬಾಯಿಗೆ ಬಂದ ಹಾಗೆ ನಿಂದಿಸಿದರೂ ಈ ರಾಜ್ಯದಲ್ಲಿ ಆಕೆಯನ್ನು ಕೇಳೋರು ಯಾರೂ ಇರಲಿಲ್ಲ. ಇದೀಗ ಆಕೆಯ ಹತ್ಯೆಯಾಗಿದೆ. ಆದರೆ ಈ ಹತ್ಯೆಯನ್ನು ಇದೀಗ ಹಿಂದೂ ಸಂಘಟನೆಗಳ ಮೇಲೆ ಕಟ್ಟುವಂತಹಾ ಕೃತ್ಯ ಈ ದೇಶದಲ್ಲಿ ನಡೆಯುತ್ತಿದೆ. ಸಾಲು ಸಾಲು ಮುಸ್ಲಿಂ ಉಗ್ರರ ಏಟಿಗೆ ಬಲಿಯಾಗುತ್ತಿರುವ ಅಮಾಯಕ ಹಿಂದೂಗಳ ಪರಿಸ್ಥಿತಿ ಈ ದೇಶದ್ರೋಹಿ ಬೀದಿ ಬೊಗಳುದಾಸರಿಗೆ ಕಾಣುತ್ತಿಲ್ಲ. ಆದರೆ ಯಾರೋ ಮಾಡಿದ್ದ ಹತ್ಯೆಯನ್ನು ಹಿಂದೂ ಸಂಘಟನೆಗಳ ಮೇಲೆ ಕಟ್ಟುವಾಗ ಗಂಟಲು ಹರಿಯುವಂತೆ ಬೊಬ್ಬಿಡಲು ಈ ನಾಯಕರು ಸರತಿ ಸಾಲಿನಂತೆ ಬಂದು ಬಿಡುತ್ತಾರೆ.

ಇದೀಗ ಶ್ರೀರಾಮ ಸೇನೆಯ ಮುಖ್ಯಸ್ಥ ಶ್ರೀ ಪ್ರಮೋದ್ ಮುತಾಲಿಕ್ ಇವರ ವಿರುದ್ಧ ಕೆಲ ಎಡಬಿಡಂಗಿಗಳು ತಮ್ಮ ಬಾಲವನ್ನು ಬಿಚ್ಚಿದ್ದಾರೆ. ಗೌರಿ ಲಂಕೇಶ್ ಹತ್ಯೆಯ ಹೋರಾಟ ಸಮಿತಿಯ ಮುಖಂಡ ಬಸವರಾಜ್ ಸೂಳಿಬಾವಿ ಎಂಬಾತ ಮುತಾಲಿಕ್ ವಿರುದ್ಧ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾನೆ. “ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಓರ್ವ ಧಾರ್ಮಿಕ ಅಂಧತ್ವ ತುಂಬಿಕೊಂಡಿರುವ ಮತೀಯ ಹುಚ್ಚುನಾಯಿ” ಎಂದು ಹಿಂದು ಸಂಘಟನೆಯ ಮುಖಂಡ ಮುತಾಲಿಕ್ ವಿರುದ್ಧ ವಾಚಾಮಗೋಚರವಾಗಿ ನಿಂದಿಸಿದ್ದಾನೆ.

ಗದಗದಲ್ಲಿ ವಿಚಾರವಾದಿಗಳ ಹತ್ಯೆಯ ಹೋರಾಟ ಸಮಿತಿಗಳ ಸುದ್ಧಿಗೋಷ್ಟಿ ನಡೆದಿತ್ತು. ಈ ಸಂದರ್ಭದಲ್ಲಿ ಗಭೌರಿ ಹತ್ಯೆಯ ಹೋರಾಟ ಸಮಿತಿಯ ಮುಖಂಡ ಈ ರೀತಿ ಹೇಳಿ ತನ್ನ ತೀಟೆಯನ್ನು ತೀರಿಸಿಕೊಂಡಿದ್ದಾನೆ. ತನ್ನ ಮಾತು ಮುಂದುವರೆಸಿದ ಈತ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯನ್ನೂ ಮನಬಂದಂತೆ ನಿಂದಿಸಿದ್ದಾನೆ.

Related image

“ಪ್ರಮೋದ್ ಮುತಾಲಿಕ್‍ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಶ್ರೀರಾಮ ಸೇನೆ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳನ್ನು ವಿಚಾರಣೆಗೆ ಒಳಪಡಿಸಬೇಕು. ದೇಶದಲ್ಲಿ ಕೇಸರೀ ಭಯೋತ್ಪಾದನೆ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಭಯೋತ್ಪಾದನೆಯನ್ನು ಒಪ್ಪಿಕೊಂಡು ಅಧಿಕೃತವಾಗಿ ಘೋಷಿಸಬೇಕು. ನಕ್ಸಲ್ ನಿಗ್ರಹ ಮಾದರಿಯಲ್ಲಿ ಕೇಸರಿ ಭಯೋತ್ಪಾದನಾ ನಿಗ್ರಹ ಪಡೆ ರಚನೆ ಮಾಡಬೇಕು” ಎಂದು ಈತ ಬೊಗಳಿದ್ದಾನೆ.

ಅನಂತ್ ಕುಮಾರ್ ಹೆಗಡೆ ಹೇಳಿದರೆ ಮಾತ್ರ ವಿವಾದ..?

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಶಾಸಕ ಶ್ರೀರಾಮುಲು, ಶಾಸಕ ಯತ್ನಾಳ್ ಸಹಿತ ಬಲಪಂಥೀಯ ಚಿಂತನೆಯನ್ನು ಹೊಂದಿದವರು ಏನಾದರು ಮಾತನಾಡಿದರೆ ಅದನ್ನು ವಿವಾದ ಎಂದು ಎಂದು ಗಂಟೆಗಟ್ಟಲೆ ಬೊಬ್ಬೆ ಹೊಡಿಯುವ ಪ್ರಚಾರ ಪ್ರಿಯ ಸೋಕಾಲ್ಡ್ ಬುದ್ಧಿಜೀವಿಗಳು ಇದೀಗ ಈ ಬೊಗಳೆದಾಸನ ಮಾತಿಗೆ ಮೌನ ವಹಿಸಿದ್ದಾರೆ. ರಾಜ್ಯದಲ್ಲಿ ಭಾರತ್ ಮಾತಾಕೀ ಜೈ ಎಂದು ಘೋಷಣೆಯನ್ನು ಹಾಕಿ ವಂದೇ ಮಾತರಂ ಎನ್ನುವ ದೇಶಪ್ರೇಮಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರನ್ನು ಕೇಸರೀ ಭಯೋತ್ಪಾದಕರು ಎನ್ನುವ ಈತ ಇಸ್ಲಾಂ ಉಗ್ರರ ಬಗ್ಗೆ ಚಕಾರವೆತ್ತುವುದಿಲ್ಲ. ಯಾಕೆಂದರೆ ಹಿಂದೂ ಸಂಘಟನೆಗಳ ಬಗ್ಗೆ ಬೊಗಳಿದರೆ ಏನೂ ಆಗೋದಿಲ್ಲ ಹಾಗೂ ಇಸ್ಲಾಂ ಬಗ್ಗೆ ಮಾತನಾಡಿದರೆ ಗನ್ ಹಣೆಯ ಮೇಲಿರುತ್ತೆ ಎನ್ನುವ ಭಯ.

Image result for ananth kumar hegde

ಅದೆಷ್ಟೋ ಕಾಲದಿಂದ ಇಂತಹಾ ಅದೆಷ್ಟೋ ಕ್ರಿಮಿಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಅಲುಗಾಡಿಸಲೂ ಸಾಧ್ಯವಾಗಿಲ್ಲ. ಗೌರಿ ಹಂತಕರನ್ನು ಬಂಧಿಸುವಲ್ಲಿ ವಿಫಲವಾದ ಸರ್ಕಾರದ ವಿರುದ್ಧ ಈ ಪ್ರಚಾರ ಪ್ರಿಯ ಸೂಳಿಬಾವಿ ಒಂದು ಮಾತನ್ನೂ ಆಡಿಲ್ಲ. ಆದರೆ ಇದೀಗ ಕೇಸರಿ ಭಯೋತ್ಪಾದನೆ ಎನ್ನುತ್ತಿದ್ದಾನೆ. ದೇಶದ ಸೈನಿಕರ ಮೇಲೆ ಇಲ್ಲದ ಪ್ರೀತಿ ಲದ್ದಿಜೀವಿಗಳ ಮೇಲೆ. ದೇಶ ಇನ್ಯಾವಾಗ ಸುದಾರಿಸುತ್ತೇ ದೇವನೇ ಬಲ್ಲ.

source: https://kannada.news18.com/news/state/basavaraj-soolibavi-speaks-against-pramod-mutalik-55071.html

  • ಏಕಲವ್ಯ

 

Tags

Related Articles

Close