ಪ್ರಚಲಿತ

ಮುಸ್ಲಿಂ ಸಚಿವನಿಗೆ ದಿಗ್ಭಂಧನ ಹಾಕಿದ ಮುಸ್ಲಿಮರು..! ಕಾಂಗ್ರೆಸ್ ಗೆ ಬಿತ್ತು ಮತ್ತೊಂದು ಹೊಡೆತ.!

ಅವಮಾನಕ್ಕೊಳಗಾದರೂ ಮತ್ತೆ ಮತ್ತೆ ಜನರ ಬಳಿ ತೆರಳಿ , ಛೀಮಾರಿ ಹಾಕಿಕೊಳ್ಳುವ ಏಕೈಕ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ. ಯಾಕೆಂದರೆ ಅಧಿಕಾರ ಹಿಡಿದು ಐದು ವರ್ಷಗಳ ಕಾಲ ಜನರಿಗೆ ಪಂಗನಾಮ‌ ಹಾಕಿ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಸೆಳೆಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆ ಈ ಕಾಂಗ್ರೆಸಿಗರು. ಕಾಂಗ್ರೆಸ್ ಗೆ ಈಗಾಗಲೇ ಹೊಡೆತಗಳ ಮೇಲೆ ಹೊಡೆತ ಬೀಳುತ್ತಿದ್ದು , ಸ್ವತಃ ಕಾರ್ಯಕರ್ತರೇ ಸಚಿವರುಗಳಿಗೆ ಘೇರಾವ್ ಹಾಕುತ್ತಿದ್ದಾರೆ.!

ಇನ್ನೇನು ತಿಂಗಳೊಳಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕಾಗಿ ನಾಟಕ‌ ಆರಂಭಿಸಿರುವ ಕಾಂಗ್ರೆಸ್ ನಾಯಕರು ಗಲ್ಲಿಗಲ್ಲಿಗೆ ತೆರಳಿ ಪ್ರಚಾರ ಆರಂಭಿಸಿದ್ದಾರೆ. ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ತಮ್ಮ ಪಕ್ಷದ ಮುಖಂಡರಿಗೆ ಧಿಕ್ಕಾರ ಕೂಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.!

ಮುಸ್ಲಿಂ ಶಾಸಕನಿಗೆ ಮುಸ್ಲೀಮರಿಂದಲೇ ಛೀಮಾರಿ..!

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಉಳ್ಳಾಲದ ಕಾಂಗ್ರೆಸ್ ಶಾಸಕ , ರಾಜ್ಯ ಆಹಾರ ಸಚಿವರಾದ ಯು ಟಿ ಖಾದರ್ ಅವರು ಮುಸ್ಲಿಂ ಸಂಘಟನೆಯಾದ ಎಸ್ ಕೆ ಎಸ್ ಎಸ್ ಎಫ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದರು. ಉಳ್ಳಾಲದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಆಗಮಿಸಿದ ಯು ಟಿ ಖಾದರ್ ಗೆ ಅಲ್ಲಿ ಸೇರಿದ್ದ ಮುಸ್ಲಿಂ ಜನರು ಛೀಮಾರಿ ಹಾಕಿ, ಶಾಸಕರ ವಿರುದ್ಧ ಘೋಷಣೆ ಕೂಗಿ ಕಾರ್ಯಕ್ರಮದಿಂದ ಹೊರನಡೆಯುವಂತೆ ಹೇಳಿದ್ದಾರೆ.

 

ಉಳ್ಳಾಲದಲ್ಲಿ ಬಿಜೆಪಿಯ ಪ್ರಾಬಲ್ಯ ಅತೀ ಕಡಿಮೆ , ಯಾಕೆಂದರೆ ಮುಸ್ಲೀಮರೇ ಹೆಚ್ಚಾಗಿ ಇರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶಿಸುತ್ತಲೇ ಬಂದಿದೆ. ಆದರೆ ಇತ್ತೀಚೆಗೆ ಇಲ್ಲಿ ನಡೆದ ಕೆಲ ಘಟನೆಗಳು ಈ ಬಾರಿ ಕಾಂಗ್ರೆಸ್ ಗೆ ಭಾರೀ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ. ಕಳೆದ ಬಾರಿ ಮುಸ್ಲಿಂ ಯುವಕನ ಕೊಲೆ ಯಿಂದ ಇಲ್ಲಿ ಯು ಟಿ ಖಾದರ್ ವಿರುದ್ಧ ಮುಸ್ಲಿಮರು ಪ್ರತಿಭಟಿಸಿದ್ದರು. ಕ್ಷೇತ್ರದ ಶಾಸಕರಾಗಿ , ರಾಜ್ಯ ಸರ್ಕಾರದ ಸಚಿವರಾಗಿದ್ದೂ ಕೂಡ ತಮ್ಮ ಕ್ಷೇತ್ರದಲ್ಲೇ ಮುಜುಗರಕ್ಕೊಳಗಾಗುತ್ತಿದ್ದು , ಅಪಾಯದ ಮುನ್ಸೂಚನೆ ದೊರಕಿದಂತಾಗಿದೆ.

ಮುಸ್ಲಿಂ ಸಮಸ್ತ ಸಮ್ಮೇಳನಕ್ಕೆ ಬಂದಿದ್ದ ಸಚಿವ ಖಾದರ್ ಗೆ ಸೇರಿದ್ದ ಜನರು , ನೀವೇಕೆ ಬಂದಿದ್ದೀರಿ? ಇನ್ಯಾವ ನಾಟಕ ಮಾಡಲಿದ್ದೀರಿ? ಎಂದು ಜೋರಾಗಿ ಕಿರುಚಿದ್ದಾರೆ.‌ ಇದರಿಂದ ಕಾರ್ಯಕ್ರಮ‌ ಆಯೋಜಕರೂ ಕಂಗಾಲಾಗಿದ್ದು , ಯು ಟಿ ಖಾದರ್ ಅವರಿಗೆ ತೀವ್ರ ಮುಜುಗರವಾಗಿದೆ.

ಈ‌ ಸಮ್ಮೇಳನದಲ್ಲಿ ಸಾವಿರಾರು ಮುಸ್ಲಿಂ ಕಾರ್ಯಕರ್ತರು ಪಾಲ್ಗೊಂಡಿದ್ದು , ಖಾದರ್ ಚುನಾವಣೆಗೂ ಉಪಯೋಗವಾಗಬಹುದು ಎಂಬ ಆಲೋಚನೆ ಇಟ್ಟುಕೊಂಡಿದ್ದರು. ಆದರೆ ಸೇರಿದ್ದ ಕಾರ್ಯಕರ್ತರು ಸಚಿವರ ವಿರುದ್ಧವಾಗಿ ನಡೆದುಕೊಂಡಿದ್ದರಿಂದ ಸಚಿವರಿಗೆ ಸೋಲಿನ ಭೀಇ ಮತ್ತಷ್ಟು ಹೆಚ್ಚಾಗತೊಡಗಿದೆ.!

source: public tv

–ಅರ್ಜುನ್

 

Tags

Related Articles

Close