ಪ್ರಚಲಿತ

ಬಿಗ್ ಶಾಕ್!! ಸಿಎಂ ಹಾಗೂ ಮೂವರು ಸಚಿವರ ವಿರುದ್ಧ ಕೇಸ್ ದಾಖಲು!! ಬಂಧನದ ಭೀತಿಯಲ್ಲಿ ನಾಡ ದೊರೆಗಳು!!

ರಾಜ್ಯ ಬಿಜೆಪಿಯು ಶ್ರೀ ಯಡಿಯೂರಪ್ಪನವರ ನೇತ್ರತ್ವದಲ್ಲಿ ರಾಜ್ಯಾದ್ಯಂತ ‘ಪರಿವರ್ತನಾ ಯಾತ್ರೆ’ ನಡೆಸಿ ಯಶಸ್ವಿಯಾಗಿದೆ.. ಇದನ್ನು ನೋಡಿ ಜೆಡಿಎಸ್ ಪಕ್ಷ ಇಂತಹದ್ದೇ ವಿಕಾಸ ಪರ್ವ ಆರಂಭಿಸುತ್ತಾರೆ… ಕಾಂಗ್ರೆಸ್‍ನವರ ಸಮಾವೇಶ ಯಾತ್ರೆ ಆರಂಭಿಸುತ್ತಾರೆ… ಬಿಜೆಪಿಯವರು ರಾಜ್ಯದ ಉದ್ಧಾರವನ್ನು ಮಾಡುವಲ್ಲಿ ಶ್ರಮಿಸಿದರು!! ಅದಕ್ಕೆ ಬೇಕಾದ ಎಲ್ಲಾ ಖರ್ಚನ್ನು ಸ್ವತಃ ತನ್ನ ಪಕ್ಷದಿಂದಲೇ ಭರಿಸುತ್ತದೆ.. ಇಲ್ಲಿಯವರೆಗೆ ನಡೆಸಿದ ಪರಿವರ್ತನಾ ಯಾತ್ರೆಗೆ ಬಿಜೆಪಿ ಯಾವುದೇ ಒಂದು ಪೈಸೆ ಸರಕಾರದ ಹಣವನ್ನು ಉಪಯೋಗಿಸಿರುವುದಿಲ್ಲ!!

ಆದರೆ ಕಾಂಗ್ರೆಸ್ ತಾನು ಎಲ್ಲಿ ಸಮಾವೇಶ ಮಾಡುತ್ತದೋ ಅಲ್ಲಿ ಎಲ್ಲಾ ತನಗಿಷ್ಟ ಬಂದಂತೆ ಸರಕಾರದ ಹಣವನ್ನು ಖರ್ಚು ಮಾಡುತ್ತಾರೆ ಈ ರೀತಿಯಾಗಿ ತನಗಿಷ್ಟ ಬಂದಂತೆ ಸರಕಾರಿ ಹಣವನ್ನು ವೆಚ್ಚ ಮಾಡಿ ಸರಕಾರಿ ಕಾರ್ಯಕ್ರಮದಲ್ಲಿ ತಮ್ಮ ಪಕ್ಷದ ಪ್ರಚಾರವನ್ನು ಮಾಡಿದ ಸಿಎಂ ಮತ್ತು ಮೂವರು ಸಚಿವರಿಗೆ ಈಗ ಮತ್ತೊಂದು ತಲೆ ನೋವಾಗಿ ಪರಿಣಮಿಸಿದೆ…

ಈ ಕಾಂಗ್ರೆಸ್‍ನವರಿಗೆ ಈ ಬಾರಿ ಏನು ಗ್ರಹಚಾರ ಕಾದಿದೆ ಎಂದು ತಿಳಿಯುತ್ತಿಲ್ಲ.. ಒಂದು ದಿನವನ್ನೂ ಬಿಡದೆ ಕಾಂಗ್ರೆಸ್‍ನ ಅವಾಂತರಗಳು ಹಗರಣಗಳು ಬಯಲಾಗುತ್ತನೇ ಇದೆ…. ಸರಕಾರಿ ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಪ್ರಚಾರವನ್ನು ಮಾಡಿದ್ದಕ್ಕೆ ಕಾಂಗ್ರೆಸ್ ವಿರುದ್ಧ ದೂರು ದಾಖಲಾಗಿದೆ!!

ಸರ್ಕಾರಿ ದುಡ್ಡಲ್ಲಿ ಸಮಾವೇಶ ಮಾಡಿದ ಕಾಂಗ್ರೆಸ್ ವಿರುದ್ಧ ಕೇಸ್!!

ಸರಕಾರದ ಹೆಸರಲ್ಲಿ ನಡೆಯುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ಸರಕಾರ ತನ್ನ ಪಕ್ಷದ ಪ್ರಚಾರ ಕಾರ್ಯ ಮಾಡಿದ್ದು ಇದೀಗ ಅವರ ವಿರುದ್ಧ ಈಗಾಗಲೇ ಸಾಕ್ಷಿ ಸಮೇತ ದೂರು ದಾಖಲಾಗಿದೆ!! ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಂತಹ ಸರ್ಕಾರಿ ಉದ್ಘಾಟನಾ ಕಾರ್ಯಕ್ರಮ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪಕ್ಷದ ಪ್ರಚಾರ ಮಾಡಿದ್ದು ಸರ್ಕಾರದ ಹಣದಲ್ಲಿ ರಾಜಕೀಯ ಕಾರ್ಯಕ್ರಮ ನಡೆಸಿದ್ದಾರೆ ಎಂಬ ಆರೋಪದಡಿ ಕಾಂಗ್ರೆಸ್ ವಿರುದ್ಧ ದೂರು ದಾಖಲಾಗಿದೆ…!!

ಸಿಎಂ ಸೇರಿ ನಾಲ್ವರು ಸಚಿವರ ವಿರುದ್ಧ ದೂರು!!

ಈ ರೀತಿಯಗಿ ಸರಕಾರಿ ಉದ್ಧಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಇವರು ತನ್ನ ಪಕ್ಷದ ಬಗ್ಗೆ ಪ್ರಚಾರ ಮಾಡಲು ಬಳಸಿದ್ದಾರೆ.. ಇದಕ್ಕಾಗಿ ಸಿ.ಎಂ ಸಿದ್ದರಾಮಯ್ಯ, ಡಿ.ಕೆ ಶಿವ ಕುಮಾರ್, ರಮಾನಾಥ ರೈ ಹಾಗೂ ಯು.ಟಿ ಖಾದರ್ ವಿರುದ್ಧ ದೂರು ದಾಖಲಾಗಿದೆ..!! ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಿದ್ದು ಇದು ಸರ್ಕಾರಿ ಬಸ್ ನಿಲ್ಧಾಣ ಉದ್ಘಾಟನಾ ಕಾರ್ಯಕ್ರಮವಾಗಿದೆ..!!

ಆದರೆ ಇದನ್ನು ದುರುಪಯೋಗ ಪಡಿಸಿಕೊಂಡ ಸಿದ್ದರಾಮಯ್ಯ ಸರಕಾರ ಉದ್ಘಾಟನ ಕಾರ್ಯಕ್ರಮ ಮಾಡಿದ್ದಲ್ಲದೆ ಈ ಕಾಂಗ್ರೆಸ್ ಪಕ್ಷದ ಪ್ರಚಾರವನ್ನು ಮಾಡಿವ ಉದ್ಧೇಶಕ್ಕಾಗಿ ಬಳಸಿಕೊಂಡಿದೆ ಎಂಬುವುದನ್ನು ಸಾಕ್ಷಿ ಸಮೇತ ಸಿಎಂ ಹಾಗೂ ಮೂವರು ಸಚಿವರ ವಿರುದ್ಧ ಶಶಿಧರ್ ಶೆಟ್ಟಿ ಕ್ರಿಮಿನಲ್ ಕೇಸ್ ದಾಖಲಿಸಲು ಅನುಮತಿ ಕೋರಿ ದೂರು ದಾಖಲಿಸಿದ್ದಾರೆ.. ಕ್ರಿಮಿನಲ್ ಕೇಸ್ ಏನಾದರೂ ದಾಖಲಾದರೆ ಮುಂದೆ ಸಿಎಂ ಸಿದ್ದರಾಮಯ್ಯ, ಇಂಧನ ಸಚಿವ ಡಿಕೆ ಶಿವಕುಮಾರ್, ರಮನಾಥ ರೈ ಹಾಗೂ ಯು.ಟಿ ಖಾದರ್ ಮುಂದೆ ಬಂಧನವಾಗುವ ಸಾಧ್ಯತೆ ಹೆಚ್ಚಾಗಿದೆ!!

ಸರಕಾರದ ಹಣದಲ್ಲಿ ನಡೆಸುವ ಕಾಂಗ್ರೆಸ್ ಸಮಾವೇಶಕ್ಕೆ ಕಾಂಗ್ರೆಸ್‍ನವರು ಯಾವ ರೀತಿ ಆಮಿಷವೊಡ್ಡಿ ಬೇಕಾದರೂ ಜನ ಸೇರಿಸಲು ತಯಾರಿರುತ್ತಾರೆ… ಮುಖ್ಯಮಂತ್ರಿಗಳ ಸಮಾವೇಶಕ್ಕೆ ಜನಸೇರಿಸುವ ಭರದಲ್ಲಿ ಈ ಕಾಂಗ್ರೆಸಿಗರು ಯಾವ ರೀತಿಯ ನಾಟಕಕ್ಕೆ ತಯಾರಾಗಿದ್ದಾರೆ ಎಂದರೆ ಜನರನ್ನು ಸೆಳೆಯುವ ಉದ್ದೇಶದಿಂದ “ಹಕ್ಕುಪತ್ರ ವಿತರಣೆ” ಎಂದು ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ಮೋಸಗೊಳಿಸಿದ್ದರು… ಸಿದ್ದರಾಮಯ್ಯನವರ ಆಡಳಿತದಲ್ಲಿ ರಾಜ್ಯ ಯಾವ ಮಟ್ಟಕ್ಕೆ ಇಳಿದಿದೆ ಎಂಬೂದು ಪ್ರತಿಯೊಬ್ಬ ಪ್ರಜೆಗೂ ಗೊತ್ತಿರುವ ವಿಚಾರ. ಪಕ್ಷದ ಕಾರ್ಯಕ್ರಮವನ್ನು ಸರಕಾರಿ ದುಡ್ಡಿನಿಂದ ಮಾಡುವ ಕಾಂಗ್ರೆಸ್ ತನ್ನ ಸಮಾವೇಶಕ್ಕೆ ಜನರನ್ನು ಸೆಳೆಯಲು ಹಣದ ಜೊತೆಗೆ ಬೆಳ್ಳಿ ನಾಣ್ಯಗಳನ್ನು ಗಿಫ್ಟ್ ಕೊಡುತ್ತೇವೆ ಎಂದು ಜನ ಸೇರಿಸುತ್ತಾರೆ!!. ಸಿದ್ದರಾಮಯ್ಯನವರ ಭ್ರಷ್ಟ ಆಡಳಿತವನ್ನು ಕಂಡ ರಾಜ್ಯದ ಜನತೆ ರಾಜ್ಯ ಸರಕಾರಕ್ಕೆ ಛೀಮಾರಿ ಹಾಕುತ್ತಿದೆ.

“ಎಲ್ಲಾ ಬಿಟ್ಟವನು ಊರಿಗೆ ದೊಡ್ಡವನು” ಎಂಬ ಮಾತಿದೆ. ಅದೇ ರೀತಿ ಈ ಸಿದ್ದರಾಮಯ್ಯನವರು ಹೋದಲ್ಲೆಲ್ಲಾ ಬೊಗಳೆ ಬಿಡುತ್ತಾ ಬಂದಿರುವುದು ರಾಜ್ಯದ ಜನತೆಯ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದ ಕಾಂಗ್ರೆಸ್ ನ ‘ಸಾಧನಾ ಸಮಾವೇಶಕ್ಕೆ’ ಜನಸೇರಿಸುವುದಕ್ಕಾಗಿ ಒಂದು ಬೆಳ್ಳಿಯ ನಾಣ್ಯದ ಜೊತೆಗೆ 300 ರೂಪಾಯಿಗಳನ್ನು ನೀಡಿದ್ದರು..ಇದೆಲ್ಲಾ ಯರ ದುಡ್ಡು? ಸರಕಾರದ ದುಡ್ಡಿನಲ್ಲಿ ತನ್ನ ಪಕ್ಷದ ಪ್ರಚಾರಕ್ಕಾಗಿ ಇದ್ದ ಬದ್ದ ಉಡುಗೊರೆಗಳನ್ನು ಕೊಡುವ ಮೂಕ ಸರಕಾರದ ಬೊಕ್ಕಸವನ್ನು ಖಾಲಿ ಮಾಡಿದ್ದಾರೆ ಈ ಸಿದ್ದರಾಮಯ್ಯ ಸರಕಾರ!!

ಸಿದ್ದರಾಮಯ್ಯನವರ ಈ ಆಡಳಿತದಿಂದ ಬೇಸತ್ತು ಅದೆಷ್ಟೋ ಅಧಿಕಾರಿಗಳು ಈ ಸರಕಾರದಿಂದ ದೂರ ಸರಿಯುತ್ತಿದ್ದಾರೆ ಕೂಡಾ….ಆದರೂ ತಮ್ಮ ಸರಕಾರದ ಭ್ರಷ್ಟ ಅಧಿಕಾರಿಗಳ ಪರ ಬ್ಯಾಟಿಂಗ್ ಮಾಡಿಕೊಂಡು ಬಂದಿರುವ ಸಿದ್ದರಾಮಯ್ಯನವರು ಇಡೀ ರಾಜ್ಯದ ಅಶಾಂತಿಗೆ ಕಾರಣರಾದವರು. ಹೋದಲ್ಲೆಲ್ಲಾ ನಿದ್ದೆ ಮಾಡುವ ಅಭ್ಯಾಸ ಹೊಂದಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ಅವಮಾನ ಮಾಡುತ್ತಿರುವುದು ಖೇದಕರ…! ಯಾಕೆಂದರೆ ರಾಜ್ಯದ ಅಭಿವೃದ್ಧಿಗೆ ಸಿದ್ದರಾಮಯ್ಯನವರ ಪಾಲು ಶೂನ್ಯ.

ಕೇವಲ ‘ಭಾಗ್ಯ’ ದ ಹೆಸರಿನಲ್ಲಿ ತಮ್ಮ ಬೊಕ್ಕಸ ತುಂಬಿಸಿಕೊಳ್ಳುತ್ತಿರುವುದರಿಂದಲೇ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಹೊಂದುತ್ತಿಲ್ಲ. ಕೇಂದ್ರ ನೀಡಿದ 95% ದುಡ್ಡಿಗೆ 5% ರಾಜ್ಯ ಸರ್ಕಾರದ ವತಿಯಿಂದ ನೀಡಿ ,ಎಲ್ಲವನ್ನೂ ನಾವೇ ಕೊಟ್ಟಿದ್ದೇವೆ ಎಂದು ರಾಜ್ಯದುದ್ದಕ್ಕೂ ಸಾರಿಕೊಂಡು ಬರುತ್ತಿರುವ ಸಿದ್ದರಾಮಯ್ಯನವರು ರಾಜ್ಯದ ಅಭಿವೃದ್ಧಿಯಲ್ಲಿ ತನ್ನ ಹಾಗೂ ತನ್ನ ಪಕ್ಷದ ಪಾಲು ಏನೂ ಇಲ್ಲ ಎಂಬುದನ್ನು ಮರೆತಂತಿದೆ.

ಸಿದ್ದರಾಮಯ್ಯನವರ ಸಮಾವೇಶಕ್ಕೆ ಜನ ಸೇರುವುದಿಲ್ಲ ಎಂದು ಮೊದಲೇ ಅರಿತಿರುವ ಕಾಂಗ್ರೆಸ್ ಅಧಿಕಾರಿಗಳು ಈ ರೀತಿಯಾಗಿ ಸರಕಾರದ ಹಣದಿಂದ ಸೀರೆ, ಬೆಳ್ಳಿನಾಣ್ಯ ಹೀಗೆ ಬೇಕಾದ ರಿತಿಯಲ್ಲಿ ಸರಕಾರದ ಹಣವನ್ನು ದುಂದುವೆಚ್ಚ ಮಾಡಿದ್ದಲ್ಲದೆ ಸರಕಾರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷದ ಪ್ರಚರ ಕಾರ್ಯಕ್ರಮವನ್ನು ಮಾಡುತ್ತಾರಲ್ಲವೇ ಅದಕ್ಕೆ ತಕ್ಕ ಶಾಸ್ತಿ ಈ ಬಾರಿ ಆಗಿದೆ ಬಿಡಿ!! ಹಾಗಾಗಿ ಸಿಎಂ ಸಿದ್ದು ಸೇರಿ ಮೂವರೂ ಸಚಿವರು ಯಾವಾಗ ಬಂಧನವಗುತ್ತೇವೆ ಎಂದು ಭಯದಿಂದ ಮುದುಡಿ ಕುಳಿತುಕೊಂಡ ಹಾಗಿದೆ!!

ಪವಿತ್ರ

Tags

Related Articles

Close