ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತಿದ್ದಂತೆ ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಯೋಧರಗನ್ನುಗಳಿಗೆ ಭರ್ಜರಿ ಕೆಲಸ ಸಿಕ್ಕಿದೆ. ಪಿಡಿಪಿ ಸರ್ಕಾರಕ್ಕೆ ಭಾರತೀಯ ಜನತಾ ಪಕ್ಷ ನೀಡಿದ್ದ ಬೆಂಬಲವನ್ನು ವಾಪಾಸು ಪಡೆಯುತ್ತಿದ್ದಂತೆ ಗಡಿಯಲ್ಲಿ ಉಂಟಾಗಿದ್ದ ಉಗ್ರರ ಧಮ ಕಾರ್ಯ ಇದೀಗ ಮತ್ತಷ್ಟು ಉಗ್ರ ಸ್ವರೂಪವನ್ನು ಪಡೆದುಕೊಂಡಿದೆ.
ಕಾಶ್ಮೀರಕ್ಕೆ ನುಗ್ಗಿದ ನಾಲ್ವರು ಐಸಿಸ್ ಕ್ರಿಮಿಗಳು ಮಟ್ಯಾಶ್…
ಇಂದು ಭಾರತದ ಗಡಿಯೊಳಗೆ 4 ಮಂದಿ ಐಸಿಸ್ ಉಗ್ರರು ಒಳನುಸುಳಲು ಯತ್ನಿಸಿದ್ದಾರೆ. ಈ ಬಾರಿ ಐಸಿಸ್ ಉಗ್ರರು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಮಾಡಿಯೇ ಸಿದ್ಧ ಎಂದು ಪ್ರಯತ್ನಿಸಿದ್ದರು. ಹೀಗಾಗಿ ಇಂದು ಕಾಶ್ಮೀರದ ಗಡಿಯ ಮೂಲಕ ಐಸಿಸ್ನ ನಾಲ್ವರು ಉಗ್ರರು ಒಳನುಸುಳಲು ಯತ್ನಿಸಿದ್ದಾರೆ.
ಆದರೆ ಭಾರತೀಯ ಯೋಧರು ಐಸಿಸ್ ಉಗ್ರರ ಈ ಪ್ರಯತ್ನಕ್ಕೆ ಅಂತ್ಯ ಹಾಡಿದ್ದಾರೆ. ಇಂದು ಗಡಿಯೊಳಗೆ ನುಸುಳಿದ 4 ಮಂದಿ ಐಸಿಸ್ ಉಗ್ರರನ್ನು ಭೇಟೆಯಾಡುವ ಮೂಲಕ ಇನ್ನು ಮುಂದೆ ನಿಮ್ಮ ಆಟ ನಡೆಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಜಮ್ಮು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಇಂದು ಬಿಎಸ್ಎಫ್ ಯೋಧರು ಹಾಗೂ ಐಸಿಸ್ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ನಿರಂತರವಾಗಿ ದಾಳಿ ನಡೆಸಿದ್ದ ಐಸಿಸ್ ಉಗ್ರರನ್ನು ಭಾರತೀಯ ಯೋಧರು ತಮ್ಮ ಗುಂಡಿನ ರುಚಿ ತೋರಿಸಿದ್ದಾರೆ. ಗಡಿಯೊಳಗೆ ನುಸುಳಿ ಭಾರತೀಯ ಯೋಧರ ಮೇಲೆ ಫೈರಿಂಗ್ ಮಾಡಿದ 4 ಮಂದಿ ಐಸಿಸ್ ಉಗ್ರರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ.
ಅತ್ತ ರಾಷ್ಟ್ರೀಯ ಭದ್ರತಾ ಪಡೆಗಳನ್ನು ಜಮ್ಮು ಕಾಶ್ಮೀರಕ್ಕೆ ಕಳಿಸಿದ್ದ ನಂತರ ಉಗ್ರರಿಗೆ ನಡುಕ ಉಂಟಾಗಿತ್ತು. ಅದರ ನಡುವೆಯೇ ಗಡಿಯಲ್ಲಿ ತಮ್ಮ ಕಪಟ ಬುದ್ದಿಯನ್ನು ತೋರಿಸಿದ ಐಸಿಸ್ ಉಗ್ರರಿಗೆ ಗುಂಡಿನ ರುಚಿಯನ್ನು ಭಾರತೀಯ ಸೈನಿಕರು ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ.
-ಸುನಿಲ್ ಪಣಪಿಲ