ಪ್ರಚಲಿತ

ಬ್ರೇಕಿಂಗ್: “ತ್ರಿ” ರಾಜ್ಯದಲ್ಲಿ ಕಮಲ ಅರಳಿಸಿದ ಯೋಗಿ!! ಕೇಸರಿ ಗೆಲುವಿನ ಹಿಂದಿರುವ ಹಿಂದೂ ಫೈರ್ ಬ್ರಾಂಡ್‍ನ ಮ್ಯಾಜಿಕ್ ಏನು ಗೊತ್ತಾ..? ಸ್ಟಾರ್ ಆಗುತ್ತಿದ್ದಾರೆ ಸಂತ!!

ನಮೋ ನಮೋ ನಮೋ… ಎತ್ತ ನೋಡಿದರೂ ನಮೋ ನಮಃ… ಭಾರತೀಯ ಜನತಾ ಪಕ್ಷದ ಅಬ್ಬರ ಈಗ ರಾಷ್ಟ್ರದೆಲ್ಲೆಡೆ ಕಮಾಲ್ ಮಾಡುತ್ತಿದೆ. ಇರುವ 29 ರಾಜ್ಯಗಳಲ್ಲಿ ಈಗಾಗಲೇ 21 ರಾಜ್ಯಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿಯನ್ನು ಹಿಡಿದಿರುವ ಭಾರತೀಯ ಜನತಾ ಪಕ್ಷ ಭಾರತದ ಇತಿಹಾಸದಲ್ಲೇ ಹೊಸ ಕ್ರಾಂತಿಗೆ ನಾಂದಿಯಾಗಿದೆ. 60 ವರ್ಷಗಳ ಕಾಲ ದೇಶವನ್ನಾಳಿ ಭಾರತವನ್ನು ಹೀನಾಯ ಸ್ಥಿತಿಗೆ ತಲುಪಿಸಿದ ಕಾಂಗ್ರೆಸ್ ಪಕ್ಷ ಇಂದು ಹೇಳ ಹೆಸರಿಲ್ಲದೆ ಮಾಯವಾಗಿದೆ. 2014ರಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾವಾಗ ಕೇವಲ 7 ಸ್ಥಾನಗಳನ್ನು ಹೊಂದಿದ್ದ ಭಾರತೀಯ ಜನತಾ ಪಕ್ಷ ಈಗ ಬರೋಬ್ಬರಿ 21 ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಮುಕ್ತ ಭಾರತಕ್ಕೆ ಕೊನೇ ಹಂತದ ಬೇಟೆಗೆ ಹೊರಟಿದೆ.

3 ರಾಜ್ಯದಲ್ಲೂ ಕಮಾಲ್ ಮಾಡಿದ ಕಮಲ…

ತ್ರಿಪುರ, ಮೇಘಲಯಾ, ಹಾಗೂ ನಾಗಾಲ್ಯಾಂಡ್‍ಗೆ ನಡೆದ 3 ರಾಜ್ಯಗಳ ವಿಧಾನ ಸಭಾ ಚುನಾವಣೆಯ ಫಲಿತಾಂಶ ಇಂದು ಬಹಿರಂಗಗೊಂಡಿದ್ದು, ಮತದಾರನ ಮನದಾಳವು ಹೊರಬಿದ್ದಿದೆ. “ನಾವು 2014ರಿಂದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ನೋಡುತ್ತಿದ್ದೇವೆ. ನಮಗೆ ಮೋದಿಯವರ ಆಡಳಿತ ಬೇಕೇ ವಿನಹ ರಾಷ್ಟ್ರವನ್ನು ಪಾತಾಳಕ್ಕೆ ತಳ್ಳಿದ ಕಾಂಗ್ರೆಸ್ ಹಾಗೂ ಎಡಪಕ್ಷಗಳ ಆಡಳಿತ ಬೇಡ ಎಂಬ ಸ್ಪಷ್ಟ ಸಂದೇಶವನ್ನು ಈ ಮೂರೂ ರಾಜ್ಯಗಳ ಮತದಾರರು ಸಾರಿದ್ದಾರೆ. ಇತಿಹಾಸದಲ್ಲಿ ಒಂದೇ ಒಂದು ಸ್ಥಾನವನ್ನೂ ಪಡೆಯದ ಭಾರತೀಯ ಜನತಾ ಪಕ್ಷ ಈ ಬಾರಿ ಇಡೀ ರಾಜ್ಯಗಳನ್ನೇ ಗೆದ್ದಿದೆ ಎಂದರೆ ಇದು ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ಆಡಳಿತ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚಾಣಾಕ್ಷ ನೀತಿಯಲ್ಲದೆ ಮತ್ತೇನೂ ಅಲ್ಲ.

ಫಲಿಸಿತೇ ಯೋಗಿಯ ಸಮಾವೇಶದ ತಂತ್ರ..?

3 ರಾಜ್ಯಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಜಯಭೇರಿ ಭಾರಿಸುತ್ತಿದ್ದಂತೆಯೇ ಗೆಲುವಿನ ಕಾರಣಗಳ ಬಗ್ಗೆಯೂ ಭಾರೀ ಚರ್ಚೆಗಳಾಗುತ್ತಿವೆ. ಇದರಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿರುವು ಉತ್ತರ ಪ್ರದೇಶದ ಮುಖ್ಯಮಂತ್ರಿ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಅವರ ಬಗ್ಗೆ. ಹಿಂದೂ ಸಮಾಜದ ಫೈರ್ ಬ್ರಾಂಡ್ ಎಂದೇ ಹೆಸರುವಾಸಿಯಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗ ದೇಶದೆಲ್ಲೆಡೆ ಭಾರೀ ಹೆಸರುವಾಸಿಯಾಗಿರುವ ರಾಜಕಾರಣಿ. ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಹೊರತುಪಡಿಸಿದರೆ ಕಮಲ ಪಾಳಯದಲ್ಲಿ ಇರುವ ಸ್ಟಾರ್ ಪ್ರಚಾರಕರು ಯೋಗಿ ಆದಿತ್ಯನಾಥ್.

ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆಂದರೆ ಲಕ್ಷಾಂತರವಾಗಿ ಸೇರುವ ಜನ ನಂತರ ಸೇರೋದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ. ತಾನು ಓರ್ವ ಸನ್ಯಾಸಿಯಾಗಿ, ಹಿಂದೂ ಧರ್ಮದ ಕೆಲಸವನ್ನು ಮಾಡಲು ರಾಜಕೀಯವನ್ನು ಆಯ್ಕೆ ಮಾಡಿಕೊಂಡಿರುವ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ 5 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಈಗ ಮುಖ್ಯಮಂತ್ರಿಯಾಗಿದ್ದಾರೆ.

ತನ್ನ ಹಿಂದುತ್ವದ ಪ್ರಖರ ಮಾತಿನಿಂದಲೇ ಭಾರೀ ಹೆಸರುವಾಸಿಯಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗ ದೇಶದೆಲ್ಲೆಡೆ ಪ್ರಸಿದ್ಧಿ ಪಡೆದಿರುವ ರಾಜಕಾರಣಿ. ಯೋಗಿ ಆದಿತ್ಯನಾಥ್ ಬರುತ್ತಾರೆಂದರೆ ಇಡಿಯ ಹಿಂದೂ ಸಮಾಜವೇ ಒಮ್ಮೆ ಪುಟಿದೇಳುತ್ತೆ. ಅಪ್ಪಟ ಸಂತನಾಗಿರುವ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಅವರನ್ನು ಕಂಡರೆ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಅದೇನೋ ನವೋತ್ಸಾಹ.

ಇಂದು ತ್ರಿಪುರಾ ಹಾಗೂ ನಾಗಾಲ್ಯಾಂಡ್‍ನಲ್ಲಿಯೂ ಭಾರತೀಯ ಜನತಾ ಪಕ್ಷ ದಿಗ್ವಿಜಯ ದಾಖಲಿಸಲು ಕಾರಣ ಇದೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಂದರೆ ತಪ್ಪಾಗಲಾರದು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೇ ನೆಚ್ಚಿಕೊಂಡಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರು ಈ ರಾಜ್ಯಗಳಿಗೂ ಯೋಗಿಯವರನ್ನೇ ಸ್ಟಾರ್ ಪ್ರಚಾರಕರನ್ನಾಗಿ ನೇಮಿಸಿಕೊಂಡಿದ್ದಾರೆ. ಅಂತೆಯೇ ಸತತ 7ಕ್ಕೂ ಅಧಿಕ ಬಾರಿ ಆ ರಾಜ್ಯಗಳಲ್ಲಿ ಯೋಗಿ ಆದಿತ್ಯನಾಥ್ ಸಮಾವೇಶಗಳನ್ನು ನಡೆಸಿ ಅಬ್ಬರದ ಭಾಷಣದ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಬಲ ತುಂಬಿದ್ದಾರೆ.

ಈಶಾನ್ಯ ರಾಜ್ಯಗಳೆಂದರೆ ಕೇಳಬೇಕೇ.. ಅದೊಂದು ನಾಸ್ತಿಕರ ರಾಜ್ಯಗಳು. ಮಿಜೋರಾಮ್, ನಾಗಲ್ಯಾಂಡ್, ತ್ರಿಪುರ ಸೇರಿದಂತೆ ಆ ಭಾಗದ ರಾಜ್ಯಗಳು ಕ್ರೈಸ್ತ ಸಮುದಾಯದ ಆಮಿಷಕ್ಕೆ ಒಳಗಾಗಿ ಇಡೀ ರಾಜ್ಯಗಳೇ ಕಾಂಗ್ರೆಸ್ ಹಾಗೂ ನಾಸ್ತಿಕರ ಬೀಡಿನಲ್ಲಿ ಬೇಯುತ್ತಿತ್ತು. ಭಾರತದಲ್ಲಿದ್ದರೂ ಭಾರತದ ಸಂಸ್ಕøತಿಯನ್ನು ಪಾಲಿಸದೆ ಮಿಷನರಿಗಳ ಅಂಕುಶಕ್ಕೆ ಬಲಿಯಾಗಿದ್ದ ಈ ರಾಜ್ಯಗಳಿಗೆ ಪಕ್ಕಾ ಆಸ್ತಿಕ ರಾಜಕಾರಣಿ, ದೇಶ ಕಂಡ ಮಹಾ ಸಂತ, ಹಿಂದುತ್ವದ ಫೈರ್ ಬ್ರಾಂಡ್ ಆಗಿದ್ದರೂ ಆ ನಾಸ್ತಿಕರ ನಾಡಿನಲ್ಲಿ ತನ್ನ ವಾಕ್ಚಾತುರ್ಯವನ್ನು ಪ್ರದರ್ಶಿಸಿದ್ದರು.

ಮತಾಂತರ ಮಾಡಿ ಹಿಂದೂಗಳನ್ನು ಬೆದರಿಸುತ್ತಿದ್ದ ಈ ರಾಜ್ಯದಲ್ಲೇ ಇಂತಹ ಜಯಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾರಣರಾಗಿದ್ದಾರೆ ಎಂದರೆ ಆ ರಾಜ್ಯದ ಜನತೆ ಏನನ್ನು ಬಯಸಿದ್ದರು ಎನ್ನುವುದು ಗೊತ್ತಾಗಿದೆ. ಈವರೆಗೂ ಎಡಪಕ್ಷಗಳ ಹಾಗೂ ಕಾಂಗ್ರೆಸ್ ಪಕ್ಷದ ಅಟ್ಟಹಾಸದ ಬೇಗೆಯಿಂದ ಬೇಯುತ್ತಿದ್ದ ಜನತೆ ಇಂದು ಬದಲಾವಣೆಯನ್ನು ಬಯಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ಆಡಳಿತವನ್ನು ಮೆಚ್ಚಿದ್ದಾರೆ.

ಯೋಗಿಯೇ ಯಾಕೆ ಫೇಮಸ್..?

ಇಂದು ದೇಶದ 19 ರಾಜ್ಯಗಳಲ್ಲಿ 21 ರಾಜ್ಯ ಭಾರತೀಯ ಜನತಾ ಪಕ್ಷದ ತೆಕ್ಕೆಯಲ್ಲಿದೆ. 21 ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ರಾಜ್ಯವನ್ನು ಆಳುತ್ತಿದ್ದಾರೆ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೇ ಫುಲ್ ಫೇಮಸ್ ಆಗಿದ್ದಾರೆ. ಅದಕ್ಕೆ ಕಾರಣಗಳೂ ಹಲವಾರು ಇವೆ. ಅವರು ಅಪ್ಪಟ ಹಿಂದೂ ರಾಜಕಾರಣಿ. ಯಾವುದೇ ಕಾರಣಕ್ಕೂ ತನ್ನ ಹಿಂದೂ ಪದ್ದತಿಯಲ್ಲಿ ಅವರು ರಾಜಿ ಮಾಡಿಕೊಳ್ಳುವುದೇ ಇಲ್ಲ. ಕೇವಲ ಒಂದು ಕಾವಿಯನ್ನು ಉಟ್ಟು ದೇಶದ ಅತಿದೊಡ್ಡ ರಾಜ್ಯವನ್ನು ಆಳುತ್ತಿರುವ ಯೋಗಿ ಆದಿತ್ಯನಾಥರು ಅಧಿಕಾರಕ್ಕೆ ಬಂದ ನಂತರ ತಮ್ಮ ರಾಜ್ಯದಲ್ಲಿ ಭಾರೀ ಬದಲಾವಣೆಯನ್ನೇ ತಂದಿದ್ದಾರೆ.

ಉಗ್ರರ ಹಾಗೂ ಗೂಂಡಾಗಳ ತಾಣವಾಗಿದ್ದ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆದ ನಂತರ ಭಾರೀ ಬದಲಾವಣೆಗಳೇ ಆಗಿ ಹೋಗಿದೆ. ಬರೋಬ್ಬರಿ ಸಾವಿರಕ್ಕೂ ಅಧಿಕ ಗೂಂಡಾಗಳು ಇಂದು ಎನ್ ಕೌಂಟರ್ ಮೂಲಕ ಯಮನ ಪಾದವನ್ನು ಸೇರಿಕೊಂಡಿದ್ದಾರೆ. 3 ಸಾವಿರಕ್ಕೂ ಅಧಿಕ ಗೂಂಡಾಗಳು ಎನ್ ಕೌಂಟರ್‍ಗೆ ಬೆದರಿ ನಮಗೆ ಜಾಮೀನೇ ಬೇಡವೆಂದು ಜೈಲಿನಲ್ಲೇ ಉಳಿದುಕೊಂಡಿದ್ದಾರೆ. ಮತ್ತೆ ಕೆಲವು ಗೂಂಡಾಗಳು ನಾವು ಹೊಸ ಜೀವನವನ್ನು ಆರಂಭಿಸುತ್ತೇವೆ ಎಂದು ಯೋಗಿ ಆದಿತ್ಯನಾಥ್ ಬಳಿ ಭಿಕ್ಷೆ ಬೇಡಿ ಹೊಟೇಲ್ ಹಾಗೂ ಗೂಡಂಗಡಿಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಈ ಮೂಲಕ ಉತ್ತರ ಪ್ರದೇಶ ಇಂದು ಸಂಪೂರ್ಣ ಗೂಂಡಾಗಳಿಂದ ಮುಕ್ತಿ ಹೊಂದಿದೆ.

ಇವಿಷ್ಟು ಮಾತ್ರವಲ್ಲದೆ ತಾವು ಮುಖ್ಯಮಂತ್ರಿಯಾದ ನಂತರ ಉತ್ತರ ಪ್ರದೇಶದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಹಿಂದೂ ಹಾಗೂ ಇತರೆ ಧರ್ಮಗಳ ನಡುವೆ ಯಾವುದೇ ಬೇಧವನ್ನೇ ಮಾಡದೆ ದಕ್ಷ ಆಡಳಿತವನ್ನೇ ನಡೆಸುತ್ತಿದ್ದಾರೆ. ಗೋವುಗಳಿಗೆ ವಿಶೇಷ ಸ್ಥಾನಮಾನ ನೀಡುತ್ತಿರುವ ಯೋಗಿಯವರು ತಮ್ಮ ಬಜೆಟ್‍ನಲ್ಲಿಯೂ ಗೋಶಾಲೆ ಹಾಗೂ ಇತರೆ ಯೋಜನೆಗಳನ್ನು ಗೋವಿಗೋಸ್ಕರ ಜಾರಿಗೆ ತಂದಿದ್ದಾರೆ. ಈ ಮೂಲಕ ತಾನೊಬ್ಬ ಹಿಂದೂ ಭಕ್ತ ಎಂಬುವುದು ತಾನು ಮುಖ್ಯಮಂತ್ರಿಯಾದ ನಂತರವೂ ಮರೆಯದೆ ಅಧಿಕಾರವನ್ನು ನಡೆಸುತ್ತಿದ್ದಾರೆ.

ಇವಿಷ್ಟು ಕಾರಣಗಳೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸ್ಟಾರ್ ಪ್ರಚಾರಕರಾಗಲು ಕಾರಣವಾಗಿದೆ. ಯೋಗಿ ಸಮಾವೇಶ ನಡೆಸಿ ಭಾಷಣ ಮಾಡಿದ 7 ಕಡೆಗಳಲ್ಲೂ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲೂ ಭಾರತೀಯ ಜನತಾ ಪಕ್ಷ ಭರ್ಜರಿ ಜಯಭೇರಿಯನ್ನೇ ಭಾರಿಸಿದೆ. ಈ ಮೂಲಕ ತ್ರಿಪುರ ಸಹಿತ 3 ರಾಜ್ಯಗಳಲ್ಲಿ ಶೂನ್ಯದಲ್ಲಿದ್ದ ಭಾರತೀಯ ಜನತಾ ಪಕ್ಷ ಇಂದು ಅಧಿಕಾರದ ಗದ್ದುಗೆಗೆ ಏರುವಂತೆ ಮಾಡಿದೆ.

ಇದೀಗ ಕರ್ನಾಟಕದಲ್ಲೂ ಯೋಗಿ ಆದಿತ್ಯನಾಥ್ ಭಾರೀ ಪ್ರಚಾರವನ್ನೇ ನಡೆಸುತ್ತಿರುವುದು ಇಲ್ಲಿಯೂ ಕಮಲ ಅರಳುವುದು ನಿಶ್ಚಿತ ಎಂದೂ ಹೇಳಲಾಗುತ್ತಿದೆ. ಒಟ್ಟಾರೆ ಪ್ರಧಾನಿ ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ಚಾಣಾಕ್ಯ ಅಮಿತ್ ಶಾ ಅವರ ಜೋಡಿಯನ್ನೇ ಎದುರಿಸಲಾಗದ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಇಂದು ಮತ್ತೋರ್ವ ಹಿಂದೂ ಶಕ್ತಿಯನ್ನು ಎದುರಿಸುವ ತಲೆನೋವನ್ನು ಅನುಭವಿಸುತ್ತಿರುವುದಂತೂ ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close