ಪ್ರಚಲಿತ

ಬ್ರೇಕಿಂಗ್! ಶ್ರೀ ರಾಮುಲು, ಬಿಎಸ್‍ವೈ ರಾಜೀನಾಮೆ..! ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂಸದರು..!

ಬಳ್ಳಾರಿ ಸಂಸದ ಶ್ರೀ ರಾಮುಲು ಸೇರಿದಂತೆ ಮೂವರು ಸಂಸದರು ಇಂದು ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ನಡೆದಿದ್ದ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮೂವರು ಸಂಸದರು ಸ್ಪರ್ಧಿಸಿದ್ದರಿಂದ ಅವರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಶಿವಮೊಗ್ಗ ಸಂಸದರಾಗಿದ್ದ ಸದ್ಯ ಮುಖ್ಯಮಂತ್ರಿಯಾಗಿರುವ ಬಿಎಸ್ ಯಡಿಯೂರಪ್ಪನವರು ವಿಧಾನ ಸಭಾ ಚುನಾವಣೆಯಲ್ಲಿ  ಶಿವಮೊಗ್ಗದ ಶಿಕಾರಿ ಪುರ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರಿಂದ ಅವರು ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Yeddyurappa and Sriramulu resign from the Lok Sabha

ಇನ್ನು ಬಳ್ಳಾರಿ ಸಂಸದ ಶ್ರೀ ರಾಮುಲು ಅವರು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದಿಂದ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಬಾದಾಮಿಯಲ್ಲಿ ಸ್ಪರ್ಧಿಸಿದ್ದರು. ಇದರಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ಭಾರೀ ದಿಗ್ವಿಜಯ ಸಾಧಿಸಿದ್ದರು. ಹೀಗಾಗಿ ಅವರು ತಮ್ಮ ಬಳ್ಳಾರಿ ಲೋಕ ಸಭಾ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.

ರಾಜ್ಯದಲ್ಲಿ ನಡೆದಿದ್ದ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಸಂಸದರಾದ ಬಿಎಸ್ ಯಡಿಯೂರಪ್ಪ ಹಾಗೂ ಬಳ್ಳಾರಿ ಸಂಸದ ಬಿ.ಶ್ರೀ ರಾಮುಲು ಅವರಿಗೆ ಟಿಕೆಟ್ ನೀಡಲಾಗಿತ್ತು. ಆರಂಭದಿಂದಲೂ ಈ ಬಾರಿಯ ವಿಧಾನ ಸಭೆಯ ಚುನಾವಣೆಯಲ್ಲಿ ಸಂಸದ ಸ್ಥಾನವನ್ನು ಪ್ರತಿನಿದಿಸಿರುವ ಯಾರಿಗೂ ಟಿಕೆಟ್ ನೀಡೋದಿಲ್ಲ ಎಂದು ಭಾರತೀಯ ಜನತಾ ಪಕ್ಷದ ಹೈಕಮಾಂಡ್ ಹೇಳಿತ್ತು. ಆದರೆ ಬದಲಾದ ವಿದ್ಯಮಾನಗಳಲ್ಲಿ ಹೈದರಬಾದ್ ಕರ್ನಾಟಕ ಸಹಿತ ಉತ್ತರ ಕರ್ನಾಟಕದ ಪ್ರಾಬಲ್ಯವುಳ್ಳ ಶ್ರೀ ರಾಮುಲು ಅವರಿಗೆ ಟಿಕೆಟ್ ನೀಡಿತ್ತು.

ಅಂತೆಯೇ ಭಾರತೀಯ ಜನತಾ ಪಕ್ಷದಿಂದ ಬಿಎಸ್ ಯಡಿಯೂರಪ್ಪನವರಿಗೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಕಾರಣ ಅವರಿಗೂ ವಿಧಾನ ಸಭಾ ಟಿಕೆಟ್ ಒಲಿದು ಬಂದಿತ್ತು. ಹೀಗಾಗಿ ಅವರೂ ಇದೀಗ ಶಾಸಕನಾಗಿ ಆಯ್ಕೆಯಾಗಿದ್ದರಿಂದ ಇದೀಗ ತನ್ನ ಸಂಸದ ಸ್ಥಾನಕ್ಕ ರಾಜೀನಾಮೆಯನ್ನು ನೀಡಿದ್ದಾರೆ.

source: oneindia

 

-ಏಕಲವ್ಯ

Tags

Related Articles

Close